ಈ ದಿನ ಶಾಲೆಗೆ ರಜೆ…

ಮಕ್ಕಳಿಗೆ ಮೋಜು, ಅಮ್ಮನಿಗೆ ಗೋಳು

Team Udayavani, Sep 18, 2019, 6:00 AM IST

e-14

ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ ಕಷ್ಟ ಅರ್ಥ ಆಗುತ್ತಾ… ಎಂದು ನಕ್ಕಳು.

ಪ್ರಿಸ್ಕೂಲ್‌ ಓದುವ ಮಗರಾಯನಿಗೆ ಮೊಹರಂ, ಓಣಂ ಎಂದು ಶಾಲೆಗೆ ಎರಡು ದಿನ ರಜೆ. ಅಯ್ಯೋ, ಮೊದಲೇ ಗೊತ್ತಿದ್ದರೆ ಗೌರಿ- ಗಣೇಶ ಹಬ್ಬಕ್ಕೆಂದು ಊರಿಗೆ ಹೋದವಳು ಇನ್ನೂ ಎರಡು ದಿನ ಅಲ್ಲಿಯೇ ಉಳಿದುಕೊಳ್ಳಬಹುದಿತ್ತು ಅಂತ ಕೈ ಕೈ ಹಿಸುಕಿಕೊಂಡೆ. ದಿನಾಲೂ ತಕರಾರಿಲ್ಲದೆ ಶಾಲೆಗೆ ಹೋಗುವ ಮಗ, ಮಧ್ಯಾಹ್ನ ಮನೆಗೆ ಬಂದ ಕೂಡಲೇ ಮಲಗುವ ಅಭ್ಯಾಸ ಮಾಡಿಕೊಂಡಿದ್ದಾನೆ. ನಿದ್ದೆ ಮುಗಿಸಿ ಎದ್ದರೆ ಅವನು ಹಿಡಿಯಲಾಗದ ಪಾದರಸ! ಒಂದು ಕ್ಷಣವೂ ಕೂರಲು ಬಿಡದಂತೆ, “ಅಮ್ಮಾ, ಹೊರಗೆ ಹೋಗುವಾ, ಅಮ್ಮಾ, ಆ ಆಟ ಆಡುವಾ, ಇದು ಮಾಡುವ ಬಾ…ಅಂತ ಪೀಡಿಸಿ, ಹೊರಗೆ ಎಳೆದೊಯ್ಯುತ್ತಾನೆ. ವಾಪಸ್‌ ಬಂದಮೇಲೆ ಕೈಕಾಲು ತೊಳೆದು, ದೇವರಿಗೆ ಪ್ರಾರ್ಥನೆ ಮಾಡಿ, ಹೋಮ್‌ವರ್ಕ್‌ ಮಾಡಲು ಕೂರುತ್ತಾನೆ. ಹೋಮ್‌ವರ್ಕ್‌ ಏನಾದ್ರೂ ಬೇಗ ಮುಗಿಯಿತೆಂದರೆ ನನ್ನ ಕಥೆ ಮುಗಿಯಿತು ಅಂತ ಅರ್ಥ! ಕಥೆ ಪುಸ್ತಕಗಳನ್ನು ಹಿಡಿದು ಆ ಕಥೆ ಹೇಳಮ್ಮ, ಇದು ಹೇಳಮ್ಮ ಎಂದು ಕೆಲವೊಮ್ಮೆ ಹೇಳಿದ್ದೇ ಕಥೆಯನ್ನು ನಾಲ್ಕಾರು ಸಲ ಹೇಳಿಸುತ್ತಾನೆ.

ಅವನೊಂದಿಗೆ ಇದ್ದರೆ ನನಗೆ ಮನೆಕೆಲಸವೂ ಸಾಗದು, ಕೆಲಸ ಮಾಡಲು ಮನಸ್ಸೂ ಬಾರದು. ಇನ್ನು ರಜೆಯೆಂದರೆ ಕೇಳಬೇಕೆ? ಬೆಳಗ್ಗಿನಿಂದ ಸಂಜೆಯ ತನಕ, ಮನೆಯವರು ಕಛೇರಿಯಿಂದ ವಾಪಸ್‌ ಬರುವವರೆಗೂ ಅವನನ್ನು ಸುಧಾರಿಸುವಷ್ಟರಲ್ಲಿ ಸಾಕು ಬೇಕಾಗಿರುತ್ತದೆ. ಮಗನಿಗೆ ರಜೆ ಇರುವ ದಿನ ಬೆಳಗ್ಗೆ ಎಂದಿಗಿಂತ ಬೇಗ ಎದ್ದು ಅಡುಗೆ, ಮನೆಕೆಲಸವನ್ನೆಲ್ಲ ಮುಗಿಸಿಬಿಡುತ್ತೇನೆ. ಯಾಕಂದ್ರೆ, ಎದ್ದ ಮೇಲೆ ಅವನು ಯಾವುದನ್ನೂ ಮಾಡಲು ಬಿಡುವುದಿಲ್ಲವಲ್ಲ!

ಮನೆಯವರನ್ನು ಕಚೇರಿಗೆ ಕಳುಹಿಸಿದಮೇಲೆ ನಾವಿಬ್ಬರೂ ಮನೆಯೊಳಗೆ ಹೊಸದೊಂದು ಪ್ರಪಂಚ ಸೃಷ್ಟಿಸಿಕೊಳ್ಳುತ್ತೇವೆ. ಅವನಿಗೆ ಕಥೆ ಬೇಕಿದ್ದರೆ ಕಥೆ, ಬಣ್ಣ ಹಚ್ಚೋಣ ಅಂದರೆ ಬಣ್ಣ, ಆಟ ಅಂದರೆ ಆಟ… ಎಲ್ಲವಕ್ಕೂ ನಾನು ರೆಡಿಯಾಗಿರಬೇಕು. ಆಗಲ್ಲ ಅನ್ನುವ ಆಯ್ಕೆಯೇ ಇಲ್ಲ. ಬಣ್ಣದ ಕ್ರೆಯಾನ್ಸ್‌, ಪೆನ್ಸಿಲ್‌, ವಾಟರ್‌ ಕಲರ್‌ ಹೀಗೆ ಏನು ಸಿಗುತ್ತದೋ, ಅದನ್ನು ಹಿಡಿದು ನಾವಿಬ್ಬರೂ ತರಕಾರಿ, ಎಲೆ, ಹಣ್ಣುಗಳ ಚಿತ್ರಕ್ಕೆ ಬಣ್ಣ ಬಳಿಯಲು ಶುರು ಮಾಡುತ್ತೇವೆ. ಅವನ ಪ್ರಕಾರ ಎಲೆಗೆ ಹಸಿರು ಬಣ್ಣವೇ ಆಗಬೇಕಿಲ್ಲ, ಕಪ್ಪು, ಕೆಂಪು, ನೀಲಿ ಯಾವುದಾದರೂ ಸರಿಯೇ! ಸ್ವಲ್ಪ ಹೊತ್ತಲ್ಲಿ ಬಣ್ಣದಾಟ ಬೋರು ಬಂದು, ಮತ್ಯಾವುದೋ ಚಟುವಟಿಕೆಯತ್ತ ಹೊರಳುತ್ತಾನೆ.

ರಜೆಯಲ್ಲವೇ ಎಂದು ತಿನ್ನಲು, ಸ್ನಾನ ಮಾಡಲು ಉದಾಸೀನವೋ, ಅಮ್ಮನ ಸಹನೆ ಪರೀಕ್ಷಿಸೋಣ ಎಂದೋ ಗೊತ್ತಿಲ್ಲ; ಆವತ್ತು ಎಲ್ಲ ಕೆಲಸವೂ ಮಂದಗತಿಯಲ್ಲಿಯೇ ಸಾಗುವುದು. ಅಷ್ಟರಲ್ಲಿ ಹೊರಗೆ ಯಾರಾದರೂ ಆಡುವ ಶಬ್ದ ಕೇಳಿದರೆ ಸಾಕು, “ಹೊರಗೆ ಹೋಗೋಣವಮ್ಮಾ’ ಎಂದು ಒಂದೇ ಹಠ. ಸರಿಯೆಂದು ಹೊರಗೆ ಆಡಲು ಹೋದರೆ, ದೊಡ್ಡ ಮಕ್ಕಳೊಂದಿಗೆ ಅವರಂತೆಯೇ ಚೆಂಡು, ಕ್ರಿಕೆಟ್‌ ಆಡುವ ಆಸೆ ಇವನಿಗೆ. “ಚೆಂಡು ತಗಲುತ್ತದೆ. ನೀನು ಆಟಕ್ಕೆ ಬೇಡ’ ಅಂತ ಇವನೊಂದಿಗೆ ಆಡವಾಡಲು ಹಿಂದೆಮುಂದೆ ನೋಡುತ್ತಾರೆ. ಆಟವಾಡುವಾಗ ಬಿದ್ದು ಪೆಟ್ಟಾದಾಗ ನಾನು ನೋಡದಿದ್ದರೆ ತಾನಾಗಿಯೇ ಎದ್ದು ಮಣ್ಣು ಜಾಡಿಸಿಕೊಳ್ಳುವವನು, ನಾನು ನೋಡುತ್ತಿದ್ದರೆ ಅತ್ತೂ ಕರೆದು ರಂಪ ಮಾಡಿಬಿಡುತ್ತಾನೆ.

ಆಟದ ನಡುವಲ್ಲಿ ಸಮಯದ ಪರಿವೆಯಿಲ್ಲ. ಹಸಿವೆಯಂತೂ ಲೆಕ್ಕಕ್ಕೇ ಇಲ್ಲ. ರಜೆಯ ದಿನ ಮಧ್ಯಾಹ್ನದ ನಿದ್ದೆಗೂ ರಜಾ. ಬಿಸಿಲಲ್ಲಿ ಹೊರಗೆ ಆಡುವುದು ಬೇಡ ಅಂದರೆ, ಆ ಹಾಡು ಹಾಕಿ ಕೊಡು, ಈ ಕಾರ್ಟೂನ್‌ ತೋರಿಸು ಅಂತ ಟಿ.ವಿ. ಮುಂದೆ ಪ್ರತಿಷ್ಠಾಪನೆಗೊಳ್ಳುತ್ತಾನೆ. ಟಿ.ವಿ. ಬೋರಾದಾಗ, ಕ್ರಾಫ್ಟ್ನ ಹೆಸರಲ್ಲಿ ಮನೆ ತುಂಬಾ ರಾಶಿ ಕಸ ಮಾಡುತ್ತಾನೆ.

ಹೀಗೆ ಎರಡು ದಿನ ರಜೆ ಕಳೆಯುವಷ್ಟರಲ್ಲಿ ಅವನ ಹಿಂದೆ ಓಡಾಡಿ ನನಗೆ ಸುಸ್ತಾಗಿಬಿಟ್ಟಿತ್ತು. ಪ್ರಿಸ್ಕೂಲ್‌ ನಡೆಸುವ ಗೆಳತಿ, “ಏನೇ ಎರಡು ದಿನ ರಜೆಯೆಂದರೆ ಹಾಗೆ ಆಕಾಶ ಮೈಮೇಲೆ ಬಿದ್ದವಳಂತೆ ಆಡ್ತೀಯಲ್ಲೇ! ನಾವು ವಾರಪೂರ್ತಿ ನೋಡಿಕೊಳ್ತೀವಿ’ ಅಂತ ನಗುತ್ತಾಳೆ. ಅವಳು ಹೇಳುವುದೇನೋ ಸರಿ. ಆದರೆ, ಶಾಲೆಯಲ್ಲಿ ಟೀಚರ್‌ ಅಂತ ಗೌರವಿಸಿ, ಹಠ ಮಾಡದೆ ಸುಮ್ಮನಿರುವ ಕಂದಮ್ಮಗಳು ಅಮ್ಮನೊಡನೆ ಅಷ್ಟೇ ಶಿಸ್ತಿನಿಂದ ಎಲ್ಲಿರುತ್ತಾರೆ? ಮಕ್ಕಳ ರಜೆ, ಅಮ್ಮಂದಿರಿಗೆ ಸಜೆ ಅನ್ನಿಸುವುದು ಅದೇ ಕಾರಣಕ್ಕೆ!

-ಸಾವಿತ್ರಿ ಶ್ಯಾನಭಾಗ್‌

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.