ಛತ್ರಿ ಚಿತ್ತಾರ


Team Udayavani, Oct 9, 2019, 4:07 AM IST

chatri-chitt

ಮಳೆಗಾಲ ಮುಗಿದೇ ಹೋಯ್ತು. ಮತ್ತೇಕೆ ಛತ್ರಿಯ ಮಾತು ಅಂತ ಕೇಳ್ತಿದ್ದೀರಾ? ಬೇಸಿಗೆಯ ಈ ದಿನಗಳಲ್ಲಿ ಟ್ರೆಂಡ್‌ ಆಗುತ್ತಿರುವ ಕೊಡೆಗಳ ಬಗ್ಗೆ ಇಲ್ಲಿ ವಿವರಣೆಯಿದೆ. ಮೇಲ್ಭಾಗ ಕಪ್ಪು/ ಬೇರೆ ಬಣ್ಣದಲ್ಲಿದ್ದು ಒಳ ಭಾಗದಲ್ಲಿ ಚಿತ್ತಾರಗಳನ್ನು ಹೊಂದಿದ ವರ್ಣಮಯ ಛತ್ರಿಗಳು ಈಗಿನ ಸ್ಟೈಲ್‌…

ಮಳೆ ಬರಲಿ, ಬಿಸಿಲೇ ಇರಲಿ, ಜೊತೆಗೊಂದು ಕೊಡೆ ಇದ್ದರೆ ಬಹಳ ಸೇಫ್. ಪ್ರತಿದಿನ ಹೊರಗೆ ಓಡಾಡುವ ಬಹುತೇಕರು ಈ ಮಾತನ್ನು ಮರೆಯದೇ ಪಾಲಿಸುತ್ತಾರೆ. ವರ್ಷಪೂರ್ತಿ ನಮ್ಮ ಜೊತೆಗಿರುವ ಈ ವಸ್ತು ಸ್ಟೈಲಿಶ್‌ ಆಗಿ, ವರ್ಣಮಯವಾಗಿ ಇದ್ದರೆ ಚೆಂದ ತಾನೇ? ಹಾಗಾಗಿಯೇ, ವಿಭಿನ್ನ ಬಗೆಯ ಛತ್ರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು.

ಛತ್ರಿಯೊಳಗೆ ಚಿತ್ತಾರ: ಹತ್ತಾರು ವರ್ಷಗಳ ಹಿಂದೆ, ಛತ್ರಿ ಅಂದರೆ ಅದು ಕಪ್ಪು ಬಣ್ಣದ, ದೊಡ್ಡ ಆಕಾರದ, ಗಟ್ಟಿ ಹಿಡಿಕೆಯ ಬಟ್ಟೆಯ ಚಿತ್ರವಷ್ಟೇ ನೆನಪಿಗೆ ಬರುತ್ತಿತ್ತು. ಮಳೆಗಾಲದಲ್ಲಿ, ಎಲ್ಲೆಲ್ಲೂ ಕಪ್ಪು ಛತ್ರಿಗಳೇ ಕಾಣುತ್ತಿದ್ದವು. ಹಾಗಾಗಿ ಕಳೆದುಹೋಗುವ ಅಪಾಯವೂ ಜಾಸ್ತಿ ಇರುತ್ತಿತ್ತು. ತಮ್ಮ ಛತ್ರಿಯನ್ನು ಕಾಪಾಡಲು ಕೆಲವರು, ಒಳಭಾಗದಲ್ಲಿ ಪೇಂಟ್‌ನಲ್ಲಿ ಸಣ್ಣದಾಗಿ ಹೆಸರು ಬರೆಯುತ್ತಿದ್ದರು ಅಥವಾ ಗುರುತು ಮಾಡುತ್ತಿದ್ದರು. ಆದರೆ, ಅದೇ ಈಗ ಫ್ಯಾಷನ್‌ ಟ್ರೆಂಡ್‌ ಆಗಿದೆ. ಛತ್ರಿಯ ಮೇಲಿರಬೇಕಿದ್ದ ಚಿತ್ತಾರಗಳನ್ನು ಒಳಭಾಗದಲ್ಲಿ ಮೂಡಿಸಿ, ಕೊಡೆಗೊಂದು ಹೊಸ ಲುಕ್‌ ಕೊಡುವುದು ಈಗಿನ ಟ್ರೆಂಡ್‌.

ಬೋರಿಂಗ್‌ ಅಲ್ಲ: ಛತ್ರಿಯ ಮೇಲಿನ ಬಟ್ಟೆ ಕಪ್ಪು, ಕೆಂಪು, ಕಂದು, ಹಸಿರು, ನೀಲಿ, ಬಿಳಿ ಅಥವಾ ಇನ್ಯಾವುದೋ ಬಣ್ಣವಿರುತ್ತದೆ. ಒಳಭಾಗದಲ್ಲಿ ಹಲವು ಬಣ್ಣಗಳನ್ನೊಳಗೊಂಡ ಚಿತ್ರಕಲೆ, ಸಣ್ಣಪುಟ್ಟ ಚಿತ್ತಾರ, ಚಿಹ್ನೆ, ಹೂವು, ಎಲೆ, ಚಿಟ್ಟೆ, ಹೃದಯಾಕಾರ, ನೀರಿನ ಗುಳ್ಳೆ, ಮೋಡ, ಚಂದ್ರ, ಸೂರ್ಯ, ತಾರೆಗಳ ಚಿತ್ರಗಳನ್ನು ಮೂಡಿಸಲಾಗುತ್ತದೆ.

ನೀವೇ ಕಲಾವಿದರಾಗಿ: ಈ ಛತ್ರಿಗಳನ್ನು ಆನ್‌ಲೈನ್‌ ಅಥವಾ ಅಂಗಡಿಗಳಲ್ಲಿ ಖರೀದಿಸಬಹುದು ಅಥವಾ ಸಾಮಾನ್ಯ ಛತ್ರಿಯೊಳಗೆ ನೀವೇ, ನಿಮಗೆ ಬೇಕಾದಂತೆ ಚಿತ್ತಾರಗಳನ್ನು ಮೂಡಿಸಬಹುದು. ಪ್ಲಾಸ್ಟಿಕ್‌ನಿಂದ ಮಾಡಲಾದ ಪಾರದರ್ಶಕ ಛತ್ರಿಗಳ ಒಳಗೆ ಲೇಸ್‌ ವರ್ಕ್‌ನ ಚಿತ್ತಾರವಿರುವ ಕೊಡೆಗಳು ಕೂಡಾ ಮಾರುಕಟ್ಟೆಗಳಲ್ಲಿ ಲಭ್ಯವಿವೆ. ಈ ರೀತಿ ಲೇಸ್‌, ಬಣ್ಣಬಣ್ಣದ ಬಟ್ಟೆ, ಉಣ್ಣೆ, ವೆಲ್ವೆಟ್‌ (ಮಖ್ಮಲ್), ಮಸ್ಲಿನ್‌ ಬಟ್ಟೆ (ತೆಳುಹತ್ತಿ ಬಟ್ಟೆ), ಕ್ರೋಶ ಹಾಗೂ ಸ್ಯಾಟಿನ್‌ ಬಟ್ಟೆ ಉಳ್ಳ ಪಾರದರ್ಶಕ ಛತ್ರಿಗಳ ಒಳಭಾಗದಲ್ಲೂ ಭಿನ್ನ ಭಿನ್ನ ಚಿತ್ತಾರಗಳನ್ನು ಮೂಡಿಸಬಹುದು. ಜನಜಂಗುಳಿಯ ನಡುವೆಯೂ ಎದ್ದು ಕಾಣುವಂಥ ಛತ್ರಿಗಳಿವು.

ಡ್ರೆಸ್‌ಗೆ ಮ್ಯಾಚ್‌ ಮಾಡಬಹುದು: ಪ್ಲಾಸ್ಟಿಕ್‌ನ ಪದರ ಇರುವ ಕಾರಣ, ಕೆಳಗಿರುವ ಬಟ್ಟೆ ಒದ್ದೆ ಆಗುವುದಿಲ್ಲ. ಉಟ್ಟ ಉಡುಪಿಗೆ ಮ್ಯಾಚ್‌ ಆಗುವಂತೆ, ವಾಶೆಬಲ್‌ ಪೇಂಟ್‌ (ತೊಳೆದರೆ ಹೋಗುವಂಥ ಬಣ್ಣ) ಬಳಸಿ ಪಾರದರ್ಶಕ ಛತ್ರಿಗಳ ಒಳಭಾಗದಲ್ಲಿ ಚಿತ್ತಾರ ಮೂಡಿಸಬಹುದು. ಒಳಭಾಗದಲ್ಲಿ ನಿಮಗೆ ಇಷ್ಟವಾದ ಬಣ್ಣದಿಂದ ಕೇವಲ ಬಾರ್ಡರ್‌ ಅನ್ನು ಬಿಡಿಸಿದರೂ, ಟ್ರೆಂಡಿಯಾಗಿ ಕಾಣುತ್ತದೆ. 3 ಫೋಲ್ಡ್/ 4 ಫೋಲ್ಡ್‌ ಛತ್ರಿ, ರಾಜಸ್ಥಾನಿ ಕೊಡೆ ಮತ್ತು ಚೈನೀಸ್‌ ಛತ್ರಿಗಳಲ್ಲೂ ಮೇಲೆ ಹೇಳಿದ ಆಯ್ಕೆಗಳಿವೆ. ಚೈನೀಸ್‌ ಛತ್ರಿ ಮುಖ ವನ್ನು ಮುಚ್ಚದ ಕಾರಣ, ಬಿಡಿಸಿದಾಗ ಒಳಭಾಗದ ಚಿತ್ರ ಎಲ್ಲರ ಕಣ್ಣಿಗೆ ಬೀಳುವುದು ಖಚಿತ.

ಏನೆಲ್ಲಾ ಬಂದಿವೆ!: ಮಳೆ-ಬಿಸಿಲಿಗೆ ಯಾವುದೋ ಒಂದು ಛತ್ರಿಯಿದ್ದರೆ ಸಾಕು ಅನ್ನುವ ಕಾಲ ಇದಲ್ಲ. ಹಾಗಾಗಿ, ಛತ್ರಿಗಳ ಮೇಲೆ ನಡೆಯುತ್ತಿರುವ ಪ್ರಯೋಗಗಳೂ ಒಂದೆರಡಲ್ಲ. ಒಳಭಾಗದಲ್ಲಿ ಚಿತ್ತಾರ, ಅಪ್‌ಸೆçಡ್‌ ಡೌನ್‌ ಛತ್ರಿಗಳು, ಗೊಮ್ಮಟದಂತೆ ಇಡೀ ಮೈಯನ್ನು ರಕ್ಷಿಸುವ ಬಬಲ್‌ ಅಂಬ್ರೆಲಾ, ಕತ್ತಲೆಯಲ್ಲಿಯೂ ಸುಲಭವಾಗಿ ಕಾಣಿಸುವಂಥ ಎಲ್‌ಇಡಿ ಬಲ್ಬ್ಗಳನ್ನು ಹೊಂದಿರುವ ಛತ್ರಿಗಳು… ಅಬ್ಬಬ್ಟಾ, ಎಷ್ಟೊಂದು ಆಯ್ಕೆಗಳಿವೆ!

ಬೇಸಿಗೆ ಕೊಡೆ: ಮಳೆಗಾಲದಲ್ಲಿ ರಕ್ಷಣೆಗೆಂದು ಹಿಡಿಯುವ ಛತ್ರಿಯನ್ನು ಫ್ಯಾಷನ್‌ ಆ್ಯಕ್ಸೆಸರಿ ಅಂತ ಹೇಳಲಾಗದಿದ್ದರೂ, ಬೇಸಿಗೆಯಲ್ಲಿ ಬಳಸುವ ಛತ್ರಿಗಳನ್ನು ಫ್ಯಾಷನ್‌ನ ದೃಷ್ಟಿಯಲ್ಲಿ ನೋಡಲೇಬೇಕು. ಯಾಕೆಂದ್ರೆ, ಸ್ಟೈಲಿಶ್‌ ಆಗಿ ಡ್ರೆಸ್‌ ಮಾಡಿಕೊಂಡಿರುವಾಗ, ಕೈಯಲ್ಲಿ ಕಪ್ಪು ಬಣ್ಣದ 3 ಫೋಲ್ಡ್‌ ಛತ್ರಿ ಇದ್ದರೆ ಹೇಗೆ ಕಾಣುತ್ತದೆ ಯೋಚಿಸಿ? ಆದರೆ, ಹೆಚ್ಚು ಚಿತ್ತಾರಗಳಿರುವ, ಬಣ್ಣಬಣ್ಣದ ಛತ್ರಿಗಳು ಕೂಡಾ ಎಲ್ಲ ದಿರಿಸಿಗೂ ಒಪ್ಪುವುದಿಲ್ಲ.

ಹಾಗಾಗಿ, ಒಳಭಾಗದಲ್ಲಿ ಚಿತ್ತಾರವಿರುವ ಕೊಡೆಗಳೇ ಎಲ್ಲ ದೃಷ್ಟಿಯಿಂದಲೂ ಉತ್ತಮ ಅನ್ನಬಹುದು. ನ್ಯೂಟ್ರಲ್‌ ಕಲರ್‌ಗಳಾದ ಬೂದು, ಕಂದು, ಕಪ್ಪು, ಬಿಳಿ, ಗಾಢ ನೀಲಿ ಬಣ್ಣದ ಕೊಡೆಗಳ ಒಳಗೆ ಚಂದದ ಚಿತ್ತಾರವಿದ್ದರೆ, ಎಲ್ಲ ಬಣ್ಣದ ಡ್ರೆಸ್‌ ಜೊತೆಗೂ ಆರಾಮಾಗಿ ಕೊಂಡೊಯ್ಯ ಬಹುದು. ಅದರಲ್ಲೂ, ಒಳಗಡೆ ಹೂವು, ಗೊಂಬೆ, ಪೋಲ್ಕಾ ಡಾಟ್ಸ್‌ನಂಥ ಚಿತ್ತಾರಗಳು ಮಕ್ಕಳಿಗೆ ಹೆಚ್ಚು ಸೂಕ್ತವಾದರೆ, ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಹಾಗೂ ಕಣ್ಣಿಗೆ ಹಿತವೆನಿಸುವ ಚಿತ್ತಾರಗಳ ಛತ್ರಿಗಳು ಪ್ರೌಢರಿಗೆ ಹೊಂದುತ್ತವೆ.

* ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.