ಮಗಳು ಹಾಕಿದ ಮರೆಯಲಾಗದ ಆಟೋಗ್ರಾಫ್


Team Udayavani, Mar 4, 2020, 6:43 AM IST

autograph

ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಇದ್ದಿದ್ದರಿಂದ ನಿದ್ರೆ, ಸುಸ್ತು ಎಲ್ಲಾ ಅಡಿಯಿಡುತ್ತಿತ್ತು. ಆದ್ರೂ ನನ್ನ ಬಂಗಾರಿ ಹಾಂ, ಹೂಂ ಎನ್ನುತ್ತಲೇ ಅಮ್ಮನ ಮೇಕಪ್‌ಗೆ ಶರಣಾಗಿ ಗೊಂಬೆಯಂತೆ ರೆಡಿಯಾದಳು. ದಿನನಿತ್ಯದ ಪರಿಪಾಠಕ್ಕಿಂತ ಇವತ್ತೇನೋ ಸಂಭ್ರಮಯೆನ್ನುವ ಖುಷಿ ಅವಳಿಗೆ.

ಅಂದು ಮಗಳ ಸ್ಕೂಲಿನ ವಾರ್ಷಿಕೋತ್ಸವವಿತ್ತು. ಬೆಳಗ್ಗೆಯಿಂದಲೇ ಒಂಥರಾ ಟೆನ್‌ಶನ್‌, ಇನ್ನೊಂದು ಕಡೆ ಖುಷಿ… ಯಾಕಂದ್ರೆ, ಆಗಷ್ಟೇ ಶಾಲೆಗೆ ಹೋಗುವ ಖಾತೆ ತೆರೆದಿದ್ದ, ಎಲ್ ಕೆಜಿ ಓದುತ್ತಿದ್ದ ಪುಟ್ಟ ಮಗಳು ಮೊದಲ ಬಾರಿಗೆ ಸ್ಟೇಜ್‌ ಹತ್ತುವ ಸಂಭ್ರಮ ಅವತ್ತು ನಡೆಯಲಿತ್ತು.

ಸ್ಕೂಲಲ್ಲಿ, ಮನೆಯಲ್ಲಿ ಚೆನ್ನಾಗೇ ಡ್ಯಾನ್ಸ್‌ ಮಾಡುವ ಮಗಳು ಇವತ್ತು ಅಳುತ್ತಾ ರಂಪ ಮಾಡಿದರೆ? “ಅಮ್ಮಾ, ನಾನ್‌ ಸ್ಟೇಜ್‌ಗೆ ಹೋಗಲ್ಲಾ ಡ್ಯಾನ್ಸ್ ಮಾಡಲ್ಲ’ ಅಂತ ರಚ್ಚೆ ಹಿಡಿದರೆ? ಮುಗೀತು ಕಥೆ!ಅಮ್ಮ ಮತ್ತು ಟೀಚರ್‌ ಇಬ್ಬರೂ ಪ್ರೋಗ್ರಾಂ ಎಂಬ ಪರೀಕ್ಷೆಯಲ್ಲಿ ಫೇಲ್‌… ಹೀಗೆ ಪ್ರಶ್ನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದರೆ, ಮಗಳು ಬೇರೆ ಅವತ್ತು ಬೇಗ ಎದ್ದು “ಎಷ್ಟೊತ್ತಿಗೆ ಡ್ಯಾನ್ಸ್? ಈಗ್ಲೆ ಮೇಕಪ್‌ ಮಾಡಿ ರೆಡಿ ಮಾಡು. ಸ್ಕೂಲ್‌ಗೆ ಹೋಗೋಣ ಲೇಟ್‌ ಆಯ್ತು’ ಅಂತ ತಲೆ ತಿನ್ನುತ್ತಿದ್ದಳು.

ಹೇಳಿ ಕೇಳಿ ಮಕ್ಕಳ ಮೂಡ್‌ ಒಂದೇ ರೀತಿ ಇರಲ್ಲ. ಅದರಲ್ಲೂ ನಮ್ಮ ಚಿನ್ನಾರಿಗೋ, ಸ್ಕೂಲಲ್ಲಿ ಅಮ್ಮನ ಮುಖ ಕಂಡ ಕೂಡಲೇ ಅಳು, ನಗು, ಹಠ ಒಟ್ಟೊಟ್ಟಿಗೇ ಬರುತ್ತದೆ. ಆಗ ಈ ಸ್ಕೂಲ್‌, ಓದು-ಬರಹ, ಡ್ಯಾನ್ಸ್, ಆಟ-ತುಂಟಾಟ ಯಾವುದೂ ಬೇಡ. ಅಮ್ಮನ ಸೆರಗೊಂದೇ ಸಾಕು ಬಚ್ಚಿಟ್ಟುಕೊಳ್ಳಲು, ಹಾಗೆಯೇ ಮಡಿಲಿಗೇರಲು. ಹಾಗಾಗಿಯೇ ಅವಳಿಗೆ ಟೀಚರ್‌ ಕೊಟ್ಟ ನಿಕ್‌ ನೇಮ್‌ “ಪಲ್ಲಕ್ಕಿ’. ನಾನ್‌ ಏನಾದರೂ ಶಾಲೆ ಕಡೆಗೆ ಹೋದರೆ ಅವಳದ್ದು ಒಂದೇ ಹಠ; ಅಮ್ಮಾ ಎತ್ಕೊ.

ಇವತ್ತು ಹಾಗೇ ಮಾಡಿಬಿಟ್ಟರೆ? ದೇವರೇ, ಹಾಗಾಗದಿರಲಪ್ಪ. ನನ್ನ ಮಗಳು ಚೆನ್ನಾಗಿ ಡ್ಯಾನ್ಸ್‌ ಮಾಡಲಪ್ಪ ಅಂತ ಮನದಲ್ಲಿ ಕೈ ಮುಗಿದದ್ದೇ ಮುಗಿದದ್ದು. ಬಹುಶಃ ಚಿಕ್ಕವಳಿ¨ªಾಗ ನಾನು ಸ್ಟೇಜ್‌ ಹತ್ತುವಾಗಲೂ ಇಷ್ಟೊಂದು ತಳಮಳ, ಚಡಪಡಿಕೆ ಪಟ್ಟಿರಲಿಲ್ಲವೇನೋ. ಗಡಿಬಿಡಿ -ಗಲಿಬಿಲಿಗಳ ಜೊತೆಗೇ ನಮ್ಮನೆ ರಾಜಕುಮಾರಿಗೆ ಒಂದಿಷ್ಟು ಉಪದೇಶದ ಟಿಪ್ಸ್ ಬೇರೆ ಕೊಟ್ಟೆ. ಮೇಲಿಂದ ಚಾಕಲೇಟ್‌, ಐಸ್‌ಕ್ರೀಮ್‌ಗಳ ಲಂಚದ ಆಸೇನೂ ಇಟ್ಟೆ! ಅವಳಿಗೋ ಎಲ್ಲವೂ ಹೊಸತು. ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಇದ್ದಿದ್ದರಿಂದ ನಿದ್ರೆ, ಸುಸ್ತು ಎಲ್ಲಾ ಅಡಿಯಿಡುತ್ತಿತ್ತು. ಆದ್ರೂ ನನ್ನ ಬಂಗಾರಿ ಹಾಂ, ಹೂಂ ಎನ್ನುತ್ತಲೇ ಅಮ್ಮನ ಮೇಕಪ್‌ಗೆ ಶರಣಾಗಿ ಗೊಂಬೆಯಂತೆ ರೆಡಿಯಾದಳು. ದಿನನಿತ್ಯದ ಪರಿಪಾಠಕ್ಕಿಂತ ಇವತ್ತೇನೋ ಸಂಭ್ರಮಯೆನ್ನುವ ಖುಷಿ ಅವಳಿಗೆ. ಮುದ್ದು ಮುದ್ದಾಗಿ ಮಾತಾಡುತ್ತಾ ಉತ್ಸಾಹದಿಂದಲೇ ಸ್ಕೂಲ್‌ಗೆ ಹೊರಟಳು .

ಶಾಲೆಯ ವಾರ್ಷಿಕೋತ್ಸವ ಅಂದ ಮೇಲೆ ಕೇಳಬೇಕೆ? ಸ್ವಾಗತ,ಅಧ್ಯಕ್ಷರ ಭಾಷಣ, ಅತಿಥಿಗಳ ಮಾತು, ಬಹುಮಾನ ವಿತರಣೆ, ವಂದನಾರ್ಪಣೆಗಳ ಸಂಭ್ರಮವೆಲ್ಲವೂ ಮುಗಿಯುವ ವೇಳೆಗೆ ನಮ್ಮ ಪುಟಾಣಿ ನಿದ್ರಾದೇವಿಯ ತೆಕ್ಕೆಯಲ್ಲಿದ್ದಳು. ಈಗೇನಪ್ಪಾ ಮಾಡೋದು, ಹೇಗೆ ಎಬ್ಬಿಸುವುದೆನ್ನುವ ಗೊಂದಲದಲ್ಲಿದ್ದಾಗ, ನಾಲ್ಕೈದು ಪ್ರೋಗ್ರಾಂ ಆದ ಮೇಲೆ ನಮ್ಮ ಮಕ್ಕಳ ಕಾರ್ಯಕ್ರಮ. ಅಷ್ಟರೊಳಗೆ ಎಬ್ಬಿಸೋಣ ಎಂದು ಟೀಚರ್‌ ಧೈರ್ಯ ಹೇಳಿದರು. ಕೊನೆಗೂ, ಇಬ್ಬರೂ ಸೇರಿ ಮಗಳನ್ನು ಡ್ಯಾನ್ಸ್ ಮಾಡುವ ಮೂಡಿಗೆ ತರುವಲ್ಲಿ ಸಫ‌ಲರಾದೆವು. ಕಣ್ಣುಜ್ಜುತ್ತಲೇ ಎದ್ದ ಮಗಳು, “ಈಗ ನನ್ನ ಡ್ಯಾನ್ಸಾ ಅಮ್ಮ?… ಎಂದು ಕೇಳಿ, ಉತ್ತರ ಪಡೆದುಕೊಂಡು ಜಿಂಕೆ ಮರಿ ಥರ ಜಿಗಿಯುತ್ತಾ, ದೊಡ್ಡ ಸ್ಟೇಜ್‌ ಮೇಲೆ ಮೊದಲ ಸಾಲಿನಲ್ಲಿ ನಗುನಗುತ್ತಾ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದಳು. ಆಗ, ನನ್ನ ಕಣ್ಣಂಚು ಜಿನುಗಿತ್ತು. ಬೆಳಗಿನಿಂದ ಕಾಡುತ್ತಿದ್ದ ತಳಮಳಕ್ಕೆ ತೃಪ್ತಿಯ ವಿರಾಮ ಸಿಕ್ಕಿತ್ತು.

ಮೊನ್ನೆ ಮೊನ್ನೆ ಮಡಿಲಿಗೆ ಬಂದ ಮಗಳು, ಇವತ್ತು ಇಷ್ಟೊಂದು ಜನರ ನಡುವೆ ಸಂಕೋಚ-ಭಯ ಬದಿಗೊತ್ತಿ ನಕ್ಕು ನಲಿದಾಗ, “ನಿಮ್ಮ ಮಗಳು ತುಂಬಾ ಚೆನ್ನಾಗಿ ಡ್ಯಾನ್ಸ್‌ ಮಾಡಿದಾಳು’ ಅಂತ ಎಲ್ಲರೂ ಹೊಗಳಿದಾಗ, ಮಗಳು ಕೊಟ್ಟ “ಅಮ್ಮನ ಪಟ್ಟ’ ಸಾರ್ಥಕವಾಗಿತ್ತು. ಅಮ್ಮನೆನ್ನುವ ಕಿರಿಟಕ್ಕೆ ಮಗಳು ನೀಡಿದ ಹೆಮ್ಮೆಯ ಗರಿ ಹೊತ್ತು ಬೀಗುವಾಗ ಮಾತು ಮೌನವಾಗಿತ್ತು. ಮನಸ್ಸು ತುಂಬಿ ಬಂದಿತ್ತು. ಮಕ್ಕಳು ನೀಡುವ ಇಂಥ ಪುಟ್ಟ ಪುಟ್ಟ ಕ್ಷಣಗಳ ದೊಡ್ಡ ಸಂತಸ ಅಮ್ಮಂದಿರ ಬಾಳಪುಟದಲ್ಲಿ ಮರೆಯಲಾಗದ ಆಟೋಗ್ರಾಫ್ ಇದ್ದಂತೆ.

-ಸುಮಾ ಸತೀಶ್‌

ಟಾಪ್ ನ್ಯೂಸ್

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.