ಆ್ಯಪಲ್‌ ಸಿಡರ್‌ ವಿನೆಗರ್‌ ಉಪಯೋಗ

ಸಿಂಪಲ್‌ ಟಿಪ್ಸ್‌

Team Udayavani, Sep 18, 2019, 5:00 AM IST

e-16

ಎಸಿವಿ ಎಂದು ಜನಪ್ರಿಯವಾಗಿರುವ ಆ್ಯಪಲ್‌ ಸಿಡರ್‌ ವಿನೆಗರ್‌ ಬಗ್ಗೆ ಯಾರಿಗೆ ಗೊತ್ತಿಲ್ಲ? ಫಿಟ್‌ನೆಸ್‌ ಕಾಳಜಿ ಇರುವ ಎಲ್ಲರಿಗೂ ಇದು ಚಿರಪರಿಚಿತ. ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ, ಬೆಚ್ಚಗಿನ ನೀರಿಗೆ ವಿನೆಗರ್‌ ಹಾಕಿ ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ಎಂದು ಎಲ್ಲರೂ ಬಲ್ಲರು. ಹಾಗೆಯೇ, ಸೌಂದರ್ಯವರ್ಧನೆಯಲ್ಲೂ ಎಸಿವಿ ಮಹತ್ತರವಾದ ಪಾತ್ರ ವಹಿಸುತ್ತದೆ ಎಂಬುದು ನಿಮಗೆ ಗೊತ್ತೇ?

-ಆಪಲ್‌ ಸಿಡರ್‌ ವಿನೆಗರ್‌ ತ್ವಚೆಯಲ್ಲಿನ ಪಿಎಚ್‌ ಬ್ಯಾಲೆನ್ಸ್‌ ಅನ್ನು ಸಮತೋಲನದಲ್ಲಿಡಲು ಉಪಯುಕ್ತ. ಹಾಗಾಗಿ ಇದನ್ನು ಟೋನರ್‌ನಂತೆ ಬಳಸಬಹುದು.
-ಒಂದು ಚಮಚ ಎಸಿವಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಹತ್ತಿಯಿಂದ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಳ್ಳಿ. ಇದು ಉತ್ತಮ ಟೋನರ್‌ ಆಗಿದ್ದು ತ್ವಚೆಯ ಹೊರಪದರವನ್ನು ಧೂಳು, ಕಲ್ಮಷಗಳಿಂದ ರಕ್ಷಿಸುತ್ತದೆ.
– ಸನ್‌ಬರ್ನ್, ಸನ್‌ಟ್ಯಾನ್‌ ನಿವಾರಣೆಯಲ್ಲಿಯೂ ಆಪಲ್‌ ಸಿಡರ್‌ ವಿನೆಗರ್‌ ಸಹಕಾರಿ. ದಿನವೂ ಸ್ನಾನದ ನೀರಿಗೆ 2 ಚಮಚ ಆಪಲ್‌ ಸಿಡರ್‌ ವಿನೆಗರ್‌ ಸೇರಿಸಿದರೆ ಸನ್‌ ಬರ್ನ್ ದೂರವಾಗುತ್ತದೆ.
-ಮೊಡವೆ ಕಲೆ, ಪಿಗ್‌ಮೆಂಟೇಷನ್‌ಗಳನ್ನು ಕೂಡ ಇದು ನಿವಾರಿಸುತ್ತದೆ. ಮುಲ್ತಾನಿ ಮಿಟ್ಟಿಯೊಂದಿಗೆ 2 ಚಮಚ ಎಸಿವಿ ಸೇರಿಸಿ ಫೇಸ್‌ಪ್ಯಾಕ್‌ ಹಾಕಿಕೊಳ್ಳಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ ಕಲೆಗಳು ಮಾಯವಾಗುತ್ತವೆ.
– ಸೌತೆಕಾಯಿಯ ರಸಕ್ಕೆ 1 ಚಮಚ ಆಪಲ್‌ ಸಿಡರ್‌ ವಿನೆಗರ್‌ ಸೇರಿಸಿ ಮುಖಕ್ಕೆ ಹಚ್ಚಿ, ಕಾಲು ಗಂಟೆಯ ನಂತರ ತೊಳೆದರೆ ಚರ್ಮದ ಸುಕ್ಕು, ನೆರಿಗೆಗಳು ಹೋಗುತ್ತವೆ.
– ತಲೆಗೆ ಸ್ನಾನ ಮಾಡಿದ ನಂತರ ಒಂದು ಬೌಲ್‌ ನೀರಿಗೆ, 3 ಚಮಚ ಎಸಿವಿ ಸೇರಿಸಿ ಕೂದಲನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ತಲೆಹೊಟ್ಟು, ಕೂದಲು ಉದುರುವ ಸಮಸ್ಯೆ, ಕೂದಲು ತುಂಡಾಗುವುದು ನಿವಾರಣೆಯಾಗುತ್ತದೆ.

– ಶ್ರುತಿ ಕೆ.ಎಸ್‌.

ಟಾಪ್ ನ್ಯೂಸ್

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.