ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?


Team Udayavani, Oct 21, 2020, 8:08 PM IST

avalu-tdy-2

ಸಾಂದರ್ಭಿಕ ಚಿತ್ರ

ಪ್ರಗ್ನೆನ್ಸಿಗೂ ಮೊದಲು ನನ್ನ ತೂಕಕಡಿಮೆಯಿತ್ತು. ಹೆರಿಗೆಯ ನಂತರ ಏರಿಕೆಯಾಗಿದ್ದು ಎಷ್ಟೇ ಪ್ರಯತ್ನಿಸಿದರೂ ಮೊದಲಿನ ತೂಕಕ್ಕೆ ಬರಲೇ ಇಲ್ಲ ಅಂದಳು ಅವಳು. ನೀನು ಸ್ವಲ್ಪನಾದರೂ ಹತ್ತಿರಕ್ಕೆ ತಂದಿದ್ದೀಯ, ಆದರೆ ನನ್ನದು ಮೊದಲು ಮತ್ತು ಈಗಿನತೂಕಕ್ಕೆ ಭಾರೀವ್ಯತ್ಯಾಸವಿದೆ ಅಂದಳು ಇವಳು. ನಾನು ಡಯಟ್‌ ಮೊರೆಹೋದರೂ ಏನೂಪ್ರಯೋಜನವಿಲ್ಲ ಎಂದಳುಮತ್ತೂಬ್ಬಳು. ಇದು ಇವರುಗಳ ಕಥೆಯಷ್ಟೇ ಅಲ್ಲ, ಬಹುತೇಕ ಹೆಣ್ಣುಮಕ್ಕಳ ಕೊರಗು, ಸದಾ ಫಿಟ್ನೆಸ್‌ ಮಂತ್ರ.

ನನಗಾಗಿದ್ದು ಸಿಸೇರಿಯನ್‌ ಡೆಲಿವರಿ. ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುವ ದಿನ, ಅಮ್ಮ ನೆಲದ ಮೇಲೆ ಬ್ಯಾಗ್‌ ಇಟ್ಟು ಕೊಂಡು ಬಟ್ಟೆಗಳನ್ನೆಲ್ಲ ತುಂಬಿಸುತ್ತಿದ್ದಳು.ಕೂರಲೂ, ನಿಲ್ಲಲೂ, ನಡೆಯಲೂ ಕಷ್ಟಪಡುತ್ತಿದ್ದ ನಾನು ಅವಳ ಬಳಿ ಹೇಳಿಯೇಬಿಟ್ಟಿದ್ದೆ: ನಿನ್ನ ನೋಡಿದಾಗ ಆಸೆಯಾಗುತ್ತಿದೆ, ನಾನ್ಯಾವಾಗ ಮೊದಲಿನಂತೆ ಆರಾಮ ಆಗುವುದು- ಎಂದು.

ಕೆಲವೊಂದು ಪೇರೆಂಟಿಂಗ್‌ವೆಬ್‌ಸೈಟ್‌, ಅಪ್ಲಿಕೇಶನ್‌ಗಳಲ್ಲಿ ಹೆಣ್ಣುಮಕ್ಕಳು ಡೆಲಿವರಿಯ ನಂತರ ತೂಕ ಇಳಿಸಿಕೊಳ್ಳುವುದು ಹೇಗೆ? ಡೆಲಿವರಿ ಆದ ಎಷ್ಟನೇ ದಿನದಿಂದ ವ್ಯಾಯಾಮ ಮಾಡಬಹುದು? ತೂಕ ಇಳಿಸಲು ಯಾವ ಆಹಾರ ಸೇವಿಸಿದರೆ ಉತ್ತಮ? ಎಂಬಿತ್ಯಾದಿ ಪ್ರಶ್ನೆಕೇಳಿರುತ್ತಾರೆ. ಎಲ್ಲದಕ್ಕೂ ಉತ್ತರ ಸಮಯ! ಇದು ಎಲ್ಲರಿಗೂ ತಿಳಿದಿದೆ. ಆದರೂ ಅನಾವಶ್ಯಕ ಹೆದರಿಕೆ. ಮ್ಯಾರಥಾನ್‌, ಟ್ರೆಕ್ಕಿಂಗ್‌, ಹೈಕಿಂಗ್‌ ಎಂದೆಲ್ಲ ಓಡಾಡುವ ಹೆಣ್ಣುಮಕ್ಕಳು, ಡೆಲಿವರಿ ಆದಮೇಲೆ ಬರುವ ಸಣ್ಣದಾದ ಬೆನ್ನು ನೋವಿಗೂ ಬೇಸರಿಸುತ್ತಾರೆ. ಹೇಗಿದ್ದವಳು ಹೇಗಾಗಿಬಿಟ್ಟೆ ಎಂದು ಕೊರಗುತ್ತಾರೆ.

ಆದರೆ, ಇಂಥದೊಂದು ದೈಹಿಕ ಬದಲಾವಣೆ ಆಗಿದ್ದು ಒಂದು ಜೀವವನ್ನು ಭೂಮಿಗೆ ಪರಿಚಯಿಸಿದ ಮೇಲೆ ಎಂಬುದನ್ನು ಮರೆಯಬಾರದು. ಹಾಗೆ ನೋಡಿದರೆ ಇಂದಿನ ಹೆಣ್ಣು ಮಕ್ಕಳಿಗೆ ಫಿಟ್ನೆಸ್‌ ಟ್ರೆಂಡ್‌ ಜಾಸ್ತಿಯಾಗಿ, ಹಲವು ಬಾರಿ ಅದೇ ಒಂದು ಚಿಂತೆಯಾಗಿ ಪರಿಣಮಿಸುತ್ತದೆ. ದೇಹ ಪೂರ್ತಿಯಾಗಿ ಚೇತರಿಸಿಕೊಳ್ಳುವ ತನಕ ಯಾವುದೇ ರೀತಿಯ ಅಡ್ಡಪರಿಣಾಮ ಬೀರುವ ವ್ಯಾಯಾಮಗಳನ್ನುಮಾಡದಿರುವುದೇ ಒಳಿತು.ಹೀಗೆ ಮಾಡದೇ ಹೋದರೆ,ಒಂದು ನೋವಿಗೆ ಹತ್ತು ನೋವುಗಳು ಜೊತೆಯಾದೀತು. ಬಾಣಂತಿಯಾಗಿದ್ದಾಗ ಬಾಣಂತಿ ಪಥ್ಯವಿರಲಿ, ಒಂಬತ್ತು ತಿಂಗಳು

ಜೀವವೊಂದನ್ನು ಹೊತ್ತಿದ್ದ ದೇಹಕ್ಕೆ ರೆಸ್ಟ್ ಬೇಕು. ಎದೆ ಹಾಲುಣಿಸುವ ತಾಯಂದಿರಿಗೆ ಹಸಿವು ಜಾಸ್ತಿ.ಮೊದಲ ಕೆಲವು ತಿಂಗಳುಗಳು, ಜಾಸ್ತಿ ತಿಂದರೆ ಎಲ್ಲಿ ದಪ್ಪ ಆಗುವೆನೋ ಎಂದು ಆಲೋಚಿಸದೆ, ಮಗು ಹಾಗೂ ತನ್ನ ಆರೋಗ್ಯದ ದೃಷ್ಟಿಯಿಂದ ತಾಯಿಯಾದವಳು ಹೆಚ್ಚು ಆಹಾರ ಸೇವಿಸಬೇಕು. ಕನಿಷ್ಠ 3 ತಿಂಗಳಾದರೂ ರೆಸ್ಟ್ ಅತ್ಯಗತ್ಯ. ಇದು 6 ತಿಂಗಳವರೆಗೆ ಮುಂದುವರಿದರೂ ಅಡ್ಡಿಯಿಲ್ಲ. ತದನಂತರ ಮೊದಲಿನಂತಾಗಲು ಚೈತನ್ಯ ಬರುವುದು. ಹಲವರಿಗೆ ಅವೆಷ್ಟು ಕ್ರೀಮ್‌ ಅಥವಾ ಆಯಿಲ್‌ ಹಚ್ಚಿದರೂ ಬರುವ ಸ್ಟ್ರೆಚ್‌ ಮಾರರ್ಕ್ಸ್, ತಲೆಕೂದಲು ಹೆಚ್ಚೆಚ್ಚು ಉದುರುವುದು, ಇನ್ನೂ ಏನೇನೋ ದೈಹಿಕ ಬದಲಾವಣೆಗಳು. ಇವು ಯಾವುದಕ್ಕೂ ಅಸಹ್ಯ ಪಡದೆ, ಏನೇ ಆದರೂ ನಮ್ಮ ದೇಹವನ್ನು ಇಷ್ಟಪಡುವ, ಪ್ರೀತಿಸುವ ನಿಲುವು ಎಲ್ಲಾ ಹೆಣ್ಣುಮಕ್ಕಳದ್ದಾಗಬೇಕು.

 

-ಸುಪ್ರೀತಾ ವೆಂಕಟ್

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.