ಬೇಸಿಗೆಗೆ ಹಿತ ನೀಡುವ  ವೈವಿಧ್ಯಮಯ ಮಜ್ಜಿಗೆ


Team Udayavani, Mar 16, 2018, 7:30 AM IST

a-16.jpg

ಹೊರಗೆ ಬಿಸಿಲಿನ ತಾಪ ಏರುತ್ತಿದ್ದಂತೆ,  ದೇಹ ತಂಪಾಗಿರುವ ಏನನ್ನಾದರೂ  ಬಯಸುತ್ತಿರುವಾಗ, ಮಜ್ಜಿಗೆಯು ಬಹಳ ಸಲಭವಾಗಿ ತಯಾರಿಸಬಹುದಾದ ಪಾನೀಯ. ಅತಿಸಾರ, ಅರುಚಿ, ಆಮಶಂಕೆ, ಅಜೀರ್ಣ, ಮೂಲವ್ಯಾಧಿ, ವಾಂತಿ, ಭೇದಿ, ಮೂತ್ರಕಟ್ಟು, ಉರಿಮೂತ್ರ, ಕಾಮಾಲೆ ಇತ್ಯಾದಿ ಹಲವಾರು ಸಮಸ್ಯೆಗಳಿಗೆ ಮಜ್ಜಿಗೆಯು ಅಮೃತಕ್ಕೆ ಸಮನಾದ ಪಾನ. ಇಂಗು, ಹಸಿಶುಂಠಿ, ದಾಳಿಂಬೆ, ಮೆಂತ್ಯ, ಓಂಕಾಳುಗಳನ್ನು ಬಳಸಿ ತಯಾರಿಸುವ ಮಜ್ಜಿಗೆಗಳು ಅಧರಕ್ಕೆ ರುಚಿಮಾತ್ರವಲ್ಲ ಉದರಕ್ಕೂ ಹಿತನೀಡಿ ಆರೋಗ್ಯಕ್ಕೆ ಬಹಳ ಉತ್ತಮ. ಇಲ್ಲಿವೆ ಕೆಲವು ರೆಸಿಪಿ.

ಮಜ್ಜಿಗೆಯ ಜೊತೆ ಪುದಿನ 
ಬೇಕಾಗುವ ಸಾಮಗ್ರಿ: ಪುದಿನ ಎಲೆಗಳು- ಇಪ್ಪತ್ತು, ಹಸಿಮೆಣಸು- ಎರಡು, ಶುಂಠಿ- ಅರ್ಧ ಇಂಚು, ಮಜ್ಜಿ ಗೆ- ಮೂರು ಲೋಟ, ತೆಂಗಿನ ತುರಿ- ಎಂಟು ಚಮಚ, ಉಪ್ಪು ರುಚಿಗೆ, ಇಂಗು- ಕಾಲು ಚಮಚ.

ತಯಾರಿಸುವ ವಿಧಾನ: ಪುದಿನ ಎಲೆಗಳಿಗೆ ತೆಂಗಿನ ತುರಿ, ಹಸಿಮೆಣಸು, ಶುಂಠಿ, ಇಂಗು ಮತ್ತು ಉಪ್ಪು$ ಸೇರಿಸಿ ನುಣ್ಣಗೆ ರುಬ್ಬಿ ಮಜ್ಜಿಗೆಗೆ ಸೇರಿಸಿ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ. ಅತಿಯಾದ ಬಾಯಾರಿಕೆ, ಅಜೀರ್ಣವಾದಾಗ ಈ ಮಜ್ಜಿಗೆಯ ಸೇವನೆ ಬಹಳ ಹಿತನೀಡುವುದು.

ಕಲಗಚ್ಚಿನ ಮಜ್ಜಿಗೆ 
ಬೇಕಾಗುವ ಸಾಮಗ್ರಿ:
ಅಕ್ಕಿ ಮೂರನೇ ಸಲ ತೊಳೆದ ನೀರು, ಜೀರಿಗೆ ಪುಡಿ- ಎರಡು ಚಮಚ, ಲಿಂಬೆಹಣ್ಣು – ಅರ್ಧ, ಮಜ್ಜಿಗೆ- ಒಂದು ಲೋಟ, ಇಂಗು- ಕಾಲು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಕಲಗಚ್ಚಿಗೆ ಜೀರಿಗೆಪುಡಿ, ಉಪ್ಪು, ಲಿಂಬೆರಸ, ಇಂಗು ಸೇರಿಸಿ ಕರಗಿಸಿ. ನಂತರ ಮಜ್ಜಿಗೆ ಸೇರಿಸಿ ಮಿಶ್ರಮಾಡಿ. ಹೊಟ್ಟೆ ಉರಿ, ಎಸಿಡಿಟಿ ತೊಂದರೆಯವರಿಗೆ ಇದರ ಸೇವನೆ ಬಹಳ ಹಿತ.

ಸಾಂಬಾರು ಸೊಪ್ಪಿನ ಮಜ್ಜಿಗೆ
 ಬೇಕಾಗುವ ಸಾಮಗ್ರಿ:
ಸಣ್ಣಗೆ ಹಚ್ಚಿದ ಸಾಂಬಾರು ಸೊಪ್ಪು$- ನಾಲ್ಕು ಚಮಚ, ಹೆಚ್ಚಿದ ಈರುಳ್ಳಿ- ನಾಲ್ಕು ಚಮಚ, ಹಸಿಮೆಣಸು- ಒಂದು, ಮಜ್ಜಿಗೆ – ಎರಡು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಮಜ್ಜಿಗೆಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ. ನಂತರ ಇದಕ್ಕೆ ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಇಂಗಿನ ಜೊತೆ ನೀಡಿ. ಅಜೀರ್ಣ, ಅರುಚಿ, ಹೊಟ್ಟೆ ಉಬ್ಬರವಾದಾಗ ಈ ಮಜ್ಜಿಗೆಯ ಸೇವನೆ ಹಿತ.

ಮಜ್ಜಿಗೆ ಜೊತೆ ಬಸಳೆ
ಬೇಕಾಗುವ ಸಾಮಗ್ರಿ:
ಬಸಳೆ ಎಲೆಗಳು- ಆರು, ಕಾಯಿತುರಿ- ಆರು ಚಮಚ, ಕಾಳುಮೆಣಸು- ನಾಲ್ಕು. ಜೀರಿಗೆ- ಒಂದು ಚಮಚ, ಮಜ್ಜಿಗೆ- ಎರಡು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಹೆಚ್ಚಿದ ಬಸಳೆ ಸೊಪ್ಪನ್ನು ಸಣ್ಣ ಉರಿಯಲ್ಲಿ ಬಾಡಿಸಿ. ನಂತರ ಇದಕ್ಕೆ ಜೀರಿಗೆ, ಕಾಳುಮೆಣಸು, ಕಾಯಿತುರಿ, ಉಪ್ಪು ಸೇರಿಸಿ ರುಬ್ಬಿ ಮಜ್ಜಿ ಗೆಗೆ ಸೇರಿಸಿ. ಕೊತ್ತಂಬರಿ ಸೊಪ್ಪು$ಸೇರಿಸಿ ಇಂಗಿನ ಒಗ್ಗರಣೆ ನೀಡಿ ಸರ್ವ್‌ ಮಾಡಬಹುದು.

         ಇದೇರೀತಿ ಓಂಕಾಳು, ಹಸಿಮೆಣಸು, ಶುಂಠಿಯನ್ನು ಸ್ವಲ್ಪ ಕಾಯಿತುರಿಯ ಜೊತೆ ಸೇರಿಸಿ ರುಬ್ಬಿ ಮಜ್ಜಿಗೆಗೆ ಸೇರಿಸಿ ಸರ್ವ್‌ ಮಾಡಬಹುದು. ಜೀರ್ಣಕ್ರಿಯೆಗೆ ಇದು ಉತ್ತಮ.

       ಕೊತ್ತಂಬರಿಸೊಪ್ಪು, ಉಪ್ಪು, ಇಂಗು, ಶುಂಠಿ, ಹಸಿಮೆಣಸು ಅಥವಾ  ಇಂಗು, ಹಸಿಮೆಣಸು, ಶುಂಠಿ ಸೇರಿಸಿ ರುಬ್ಬಿ ಲಿಂಬೆರಸ ಸೇರಿಸಿದ ಮಜ್ಜಿಗೆಗೆ ಸೇರಿಸಿ ಸಾಸಿವೆ ಕರಿಬೇವಿನ ಒಗ್ಗರಣೆ ನೀಡಿಯೂ ಮಜ್ಜಿಗೆ ತಯಾರಿಸಬಹದು.                                                 
ಗೀತಸದಾ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.