ಮುಂಜಾವದಂಥ ಮಂಜರಿ!


Team Udayavani, Jan 26, 2018, 1:53 PM IST

26-47.jpg

ದೇಶಸೇವೆ ಮಾಡುವ ಸೈನಿಕರಿಗೂ ಸಿನೆಮಾರಂಗಕ್ಕೂ ನೇರವಾದ ನಂಟು ಇಲ್ಲದಿರಬಹುದು. ಆದರೆ ಹಲವು ಸೈನಿಕರ ಮಕ್ಕಳು ಸಿನೆಮಾ ರಂಗಕ್ಕೆ ಬಂದು ಮಿಂಚುತ್ತಿದ್ದಾರೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಮಂಜರಿ ಫ‌ಡ್ನಿಸ್‌. ಹಾಗೆಂದು ಮಂಜರಿ ಬಾಲಿವುಡ್‌ಗೆ ಹೊಸಬಳೇನೂ ಅಲ್ಲ. ಅವಳು ಬಣ್ಣಹಚ್ಚ ತೊಡಗಿ ಆಗಲೇ ಹತ್ತು ವರ್ಷವಾಗಿದೆ. ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳ, ಕನ್ನಡ, ಬಂಗಾಲಿ ಎಂದು ಎಲ್ಲ ಪ್ರಮುಖ ಚಿತ್ರರಂಗಗಳಿಗೆ ಒಂದು ಸುತ್ತು ಬಂದು ಇದೀಗ ಪ್ರಾರಂಭಿಸಿದಲ್ಲಿಗೆ ಅಂದರೆ ಬಾಲಿವುಡ್‌ಗೆ ವಾಪಸಾಗಿದ್ದಾಳೆ. 

ಬಾಲಿವುಡ್‌ನ‌ಲ್ಲಿ ಪ್ರೊಫೆಶನಲ್‌ ನೆಟ್‌ವರ್ಕ್‌ ಎಂಬುದೊಂದಿದೆ. ಅಂದರೆ, ಚಿತ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಯಾರ ಜತೆಗೆ ಸಂಪರ್ಕ ಇಟ್ಟುಕೊಳ್ಳಬೇಕು, ಹೇಗೆ ಸದಾ ಸುದ್ದಿಯಲ್ಲಿರಬೇಕು, ಸಿನೆಮಾ ಪಾರ್ಟಿಗಳಲ್ಲಿ ಹೇಗೆ ಮಿಂಚುವುದು ಇತ್ಯಾದಿ ವಿಚಾರಗಳನ್ನು ವೃತ್ತಿಪರವಾಗಿ ಮಾಡುವುದು. ಈ ಪ್ರೊಫೆಶನಲ್‌ ನೆಟ್‌ವರ್ಕ್‌ ಇಲ್ಲದಿದ್ದರೆ ಎಷ್ಟೇ ಪ್ರತಿಭೆ, ಗ್ಲಾಮರ್‌ ಇದ್ದರೂ ಮಿಂಚುವುದು ಸುಲಭವಲ್ಲ. ಈ ಪ್ರೊಫೆಶನಲ್‌ ನೆಟ್‌ವರ್ಕ್‌ ಇಲ್ಲದಿರುವುದೇ ತಾನು ಹಿಂದುಳಿಯಲು ಕಾರಣ ಎನ್ನುವುದು ಮಂಜರಿಯ ಅಭಿಮತ. ಎಳೆಯ ಪ್ರಾಯದಲ್ಲೇ ನಟಿಸಲು ತೊಡಗಿದ್ದರೂ ಸ್ವತಃ ಮಾರ್ಕೆಟಿಂಗ್‌ ಮಾಡಿಕೊಳ್ಳಲು ಗೊತ್ತಿಲ್ಲದಿರುವುದರಿಂದ ಮಂಜರಿಗೆ ಚಿತ್ರರಂಗದಲ್ಲಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗಿಲ್ಲವಂತೆ. ಹಾಗೆಂದು, ಅವಳಿಗೆ ಈ ಕುರಿತು ಬೇಸರವೇನೂ ಇಲ್ಲ. ಪಾತ್ರಗಳಿಗಾಗಿ ನಿರ್ದೇಶಕರ ಬಳಿಗೆ ಹೋಗಿ ಗೋಗರೆಯುವುದು, ಅವರಿವರ ಹೆಸರು ಹೇಳಿಕೊಂಡು ಹೋಗುವುದೆಲ್ಲ ಮಂಜರಿ ಸ್ವಭಾವಕ್ಕೆ ಆಗುವುದಿಲ್ಲ. ಹೀಗಾಗಿ, ಸಿಕ್ಕಿದ ಅವಕಾಶಗಳಲ್ಲೇ ಅವಳು ತೃಪ್ತಳು. 

ಹೊಸಬರನ್ನು ನಡೆಸಿಕೊಳ್ಳುವ ಮಟ್ಟಿಗೆ ಬಾಲಿವುಡ್‌ಗಿಂತ ತಮಿಳು ಮತ್ತು ತೆಲುಗು ಚಿತ್ರರಂಗ ಎಷ್ಟೋ ವಾಸಿ ಎನ್ನುವುದು ಮಂಜರಿಯ ಅನುಭವದ ಮಾತು. ಭಾಷೆ ತಿಳಿದಿರದಿದ್ದರೂ ತೆಲುಗು ಮತ್ತು ತಮಿಳಿನಲ್ಲಿ ಬೆನ್ನುಬೆನ್ನಿಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸಿದ್ದಾರೆ. ತಮಿಳಿನಲ್ಲಿ ಒಂದು ಹಾಡನ್ನೂ ಹಾಡಿಸಿದ್ದಾರೆ. ಆದರೆ ಬಾಲಿವುಡ್‌ನ‌ಲ್ಲಿ ಇಷ್ಟು ವರ್ಷಗಳಾದರೂ ಹೇಳಿಕೊಳ್ಳುವಂತಹ ಒಂದು ಪಾತ್ರ ಸಿಕ್ಕಿಲ್ಲ ಎಂಬ ಕೊರಗು ಮಂಜರಿಗಿದೆ. ರೋಕ್‌ ಸಕೊ ತೋ ರೋಕ್‌ ಲೋ ಮಂಜರಿ ನಟಿಸಿದ ಮೊದಲ ಹಿಂದಿ ಚಿತ್ರ. ಆದರೆ ಅವಳು ಗಮನ ಸೆಳೆದದ್ದು ಜಾನೆ ತು… ಜಾನೆ ನ ಚಿತ್ರದಲ್ಲಿ. ಅನಂತರ ಮುಂಬಯಿ ಸಾಲ್ಸಾ, ಐ ಆ್ಯಮ್‌ 24, ಝೊಕ್ಕೊಮೋನ್‌, ಗ್ರ್ಯಾಂಡ ಮಸ್ತಿ, ವಾರ್ನಿಂಗ್‌, ಕಿಸ್‌ ಕಿಸ್ಕೊ ಪ್ಯಾರ್‌ ಕರೂಂ, ವಾಹ್‌ ತಾಜ್‌, ಜೀನಾ ಇಸಿ ಕಾ ನಾಮ್‌ ಹೈ ಮತ್ತಿತರ ಚಿತ್ರಗಳಲ್ಲಿ ನಟಿಸಿದರೂ ಹೇಳಿಕೊಳ್ಳುವಂತಹ ಪ್ರಯೋಜನವೇನೂ ಆಗಿಲ್ಲ. ಇದೀಗ  ನಿರ್ದೋಷ್‌ ಎನ್ನುವ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಈ ಚಿತ್ರ ಗೆದ್ದರೆ ಮಂಜರಿ ಎಂಬ ನಟಿ ಬಾಲಿವುಡ್‌ನ‌ಲ್ಲಿ ಇನ್ನಷ್ಟು ವರ್ಷ ಬದುಕಿಯಾಳು. 

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.