ಬಂಗಾಲಿ ಸೀರೆಗಳು


Team Udayavani, Oct 22, 2020, 1:05 PM IST

ಬಂಗಾಲಿ ಸೀರೆಗಳು

ಭಾರತದ ಪ್ರತಿಯೊಂದು ರಾಜ್ಯದಲ್ಲಿರುವ ಪ್ರಾದೇಶಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ವಿಶೇಷತೆಗೆ ಇನ್ನೊಂದು ಉದಾಹರಣೆ ಎಂದರೆ ಪಶ್ಚಿಮಬಂಗಾಲ.

ಪಶ್ಚಿಮ ಬಂಗಾಲದ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಹತ್ತಿ ಅಥವಾ ರೇಶ್ಮೆಯಿಂದ ಮಾಡಿರುವ ಸೀರೆ. ಕಲ್ಕತ್ತಾ ಕಾಟನ್‌ ಸೀರೆಗಳೆಂದೇ ಪ್ರಸಿದ್ಧವಾಗಿರುವ ಕೆಂಪು ಮಿಶ್ರಿತ ಕಂದು ಬಣ್ಣದ ಅಂಚು ಮತ್ತು ಬಿಳಿಯ ಬಣ್ಣದ ಸಮಾವೇಶ ಹೊಂದಿರುವ ಸರಳ ಉಡುಗೆ ಉಡಲೂ ಸುಲಭ ಹಾಗೂ ಆರಾಮದಾಯಕ.

ಸಾಮಾನ್ಯವಾಗಿ ದುರ್ಗಾಪೂಜೆ ಅಂದರೆ ನವರಾತ್ರಿಯ ಸಂದರ್ಭಗಳಲ್ಲಿ ಎಲ್ಲೆಲ್ಲೂ ಕಂಡುಬರುವ ಕೆಂಪುಮಿಶ್ರಿತ ಬಿಳಿಬಣ್ಣದ ಬಂಗಾಲಿ ಸೀರೆಗಳು ಬಲು ಜನಪ್ರಿಯ. ಈ ಸೀರೆಯ ಬಣ್ಣದ ಆಯ್ಕೆಯಲ್ಲಿಯೂ ಸ್ತ್ರೀತ್ವದ ಮಹತ್ವವನ್ನು ಸಾರುವ ಸಂದೇಶವಿದೆ. ಬಿಳಿಯ ಬಣ್ಣವು ಪವಿತ್ರತೆಯ ಸಂಕೇತವಾದರೆ, ಕೆಂಪು ಬಣ್ಣವು ಸೆಣತ್ವದ ಶಕ್ತಿಸ್ವರೂಪ ಸೂಚಿಸುವಂಥದ್ದಾಗಿದೆ.

ಈ ಸೀರೆ ಆರು ಯಾರ್ಡ್‌ ಉದ್ದ ಹೊಂದಿದ್ದು, ನಿತ್ಯಬಳಕೆಗೆ ಹತ್ತಿಯ ಬಂಗಾಲಿ ಸೀರೆಗಳು ಜನಪ್ರಿಯವಾದರೆ, ವಿಶೇಷ ಸಮಾರಂಭಗಳಲ್ಲಿ ಉಡಲು ಬಂಗಾಲಿ ರೇಶ್ಮೆ ಸೀರೆಗಳು ಬಳಕೆಯಾಗುತ್ತವೆ.

ಬಂಗಾಲಿ ರೇಶ್ಮೆ ಸೀರೆಗಳು ಎಷ್ಟೊಂದು ವೈಭವೋಪೇತವೆಂದರೆ ಮೋತಿ, ವಿಶೇಷ ಬಂಗಾಳಿ ಶೈಲಿಯ ವಿನ್ಯಾಸ, ಜತೆಗೆ ಸಿರಿವಂತ ಕಲಾವಂತಿಕೆಯೊಂದಿಗೆ ಆಕರ್ಷಕವಾಗಿವೆ. ಕೆಲವು ಬಂಗಾಳಿ ಸಾಂಪ್ರದಾಯಿಕ ಸೀರೆಗಳ ಕುರಿತಾಗಿ ಅರಿಯೋಣ.

ಢಕಾಯಿ ಜಮದಾನಿ ಸೀರೆ
ಇದು ಪ್ರಾಚೀನ ಕಾಲದಲ್ಲಿ ಢಾಕಾ ಪ್ರದೇಶದಿಂದ ಮೂಲ ಸ್ವರೂಪವನ್ನು ಪಡೆದಿದ್ದು, ತದನಂತರ ಪಶ್ಚಿಮ ಬಂಗಾಳದ ನೇಯ್ಗೆಕಾರರ ಕೈಗಳಲ್ಲಿ ವಿನೂತನ ಶೈಲಿಯನ್ನು, ಪ್ರಾದೇಶಿಕ ವಿಶೇಷತೆಯನ್ನು ಪಡೆದುಕೊಂಡಿತು.

ಈ ಸೀರೆಯ ವೈಶಿಷ್ಟತೆ ಅಡಗಿರುವುದು “ಪನ್ನಾ ಹಜಾರ್‌’ ಎಂದು ಕರೆಯಲಾಗುವ ವಿಶೇಷ ಆಕರ್ಷಕ ವಿನ್ಯಾಸದಲ್ಲಿ. ಈ ಸೀರೆಯ ತಯಾರಿಗೆ ಸಮಯವೂ ಬಹಳ ಕಾಲ ಬೇಕಾಗಿದೆ. ಆದರೆ, ಅಷ್ಟೇ ಕಾಲಾತೀತ. ಕಲಾವಂತಿಕೆಯ ಮೆರುಗಿನಿಂದ ಬಹುಕಾಲ ಬಾಳಿಕೆ ಹೊಂದಿರುವ ಹಾಗೂ ಬೇಡಿಕೆ ಹೊಂದಿರುವ ಸೀರೆ ಇದಾಗಿದೆ.

ಬಂಗಾರದ ಹಾಗೂ ಬೆಳ್ಳಿಯ ನೂಲುಗಳಿಂದ, ಆಕರ್ಷಕ ಹೂವಿನ ವಿನ್ಯಾಸಗಳಿಂದ ಈ ಸೀರೆಯನ್ನು ನೇಯಲಾಗುತ್ತದೆ. ಜಮದಾನಿ ಶೈಲಿಯ ಸೀರೆಯೇ ಎಂದು ಹೆಸರು ಪಡೆದಿರುವ ಈ ಪಶ್ಚಿಮ ಬಂಗಾಳದ ಸೀರೆ ಭಾರತದ ಎಲ್ಲೆಡೆಯೂ ಬೇಡಿಕೆ ಹೊಂದಿರುವುದರ ಜೊತೆಗೆ ವಿಶ್ವದ ಹಲವು ಭಾಗಗಳಿಗೂ ರಫ್ತಾಗುತ್ತದೆ.

ಬಲೂಚರಿ ಸೀರೆ
ಮುರ್ಶಿ ದಾಬಾದ್‌ ಎಂಬ ಜಿಲ್ಲೆಯ ಸಣ್ಣ ಪ್ರದೇಶದಲ್ಲಿ ಆರಂಭವಾದ ಈ ಸೀರೆಯ ಮಹತ್ವವೆಂದರೆ ವಿಶೇಷ ಹಾಗೂ ಲಘುವಾದ ರೇಶೆ¾ಯ ಬಟ್ಟೆಗೆ ಚಿನ್ನದ ಜರಿಯ ಚಾರಿತ್ರಿಕ ವಿನ್ಯಾಸಗಳಿಂದ ಅಲಂಕರಿಸಲಾಗುತ್ತದೆ. ಅಂತೆಯೇ ಪೌರಾಣಿಕ ಮಹಣ್ತೀದ ಕಸೂತಿ ವಿನ್ಯಾಸಗಳಿಂದ, ವೈಭವೋಪೇತವಾಗಿ ಕಾಣುವ ಈ ಸೀರೆ ಬಂಗಾಲದ ದುಬಾರಿ ಬಗೆಯ ಸೀರೆಗಳಲ್ಲಿ ಒಂದು.

ಟಂಟ್‌ ಸೀರೆ
ಮಗ್ಗದ ಈ ಸೀರೆಗಳು ಹತ್ತಿಯಿಂದ ತಯಾರಾಗಿದ್ದು, ಕೊರಿಯಲ್‌ ಮತ್ತು ಗಡದ್‌ ಬಗೆಯ ಬಂಗಾಲಿ ಹತ್ತಿ ಸೀರೆಗಳಂತೆ ಜನಸಾಮಾನ್ಯರ ನಿತ್ಯದ ಉಡುಗೆ-ತೊಡುಗೆಯಾಗಿ ಈ ಸೀರೆ ಜನಪ್ರಿಯ. ತುಂಬಾ ಲಘುವಾಗಿರುವ ಈ ಸೀರೆ ಪಶ್ಚಿಮ ಬಂಗಾಲದ ಅಧಿಕ ಉಷ್ಣತೆಯ ಹವಾಮಾನಕ್ಕೆ ಉಡಲು ಆರಾಮದಾಯಕವಾಗಿರುವ ಸೀರೆ.

ಮಸ್ಲಿನ್‌ ಹತ್ತಿ ಸೀರೆಗಳು
ಹತ್ತಿಯ ಬಟ್ಟೆಯೊಂದಿಗೆ ಮಸ್ಲಿನ್‌ ಬಟ್ಟೆಯ ಲಘುತ್ವ ಹಾಗೂ ಹೊಳಪು ಹೊಂದಿದ್ದು, ಈ ಸೀರೆ ಆಕರ್ಷಕವಾಗಿದೆ. ಇದರ ತಯಾರಿ ಗಾಢವಲ್ಲದ ಬಣ್ಣಗಳಿಂದ ಕೂಡಿದೆ. ಈ ಸೀರೆ ಜನಸಾಮಾನ್ಯರ ಕೈಗೆಟುಕುವ ಸೀರೆಯೂ ಹೌದು. ವಿಶೇಷ ಸಮಾರಂಭಗಳಿಗಾಗಿ ಅಧಿಕ ಬೆಲೆ ಬಾಳುವ ದುಬಾರಿ ಮಸ್ಲಿನ್‌ ಹತ್ತಿ ಸೀರೆಗಳೂ ಇವೆ.

ಕಾಂತಾ ಸಿಲ್ಕ್ ಸೀರೆ
ಕೈಮಗ್ಗದ ಈ ಸೀರೆಗಳು ಶಾಂತಿನಿಕೇತನ ಭಾಗದ ಬಂಗಾಲಿ ಸೀರೆಗಳು. ಬಗೆ ಬಗೆಯ ವಿನ್ಯಾಸಗಳಿಂದ ವೈಶಿಷ್ಟಪೂರ್ಣವಾಗಿವೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.