ಗೋಡೆಗೆ ಅಲಂಕಾರ ಮಾಡಿ ಕೋಣೆಯ ಅಂದ ಹೆಚ್ಚಿಸಿ !


Team Udayavani, Nov 29, 2019, 5:30 AM IST

dd-17

ತಮ್ಮ ಮನೆ ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಬಯಕೆಯಾಗಿರುತ್ತದೆ. ಮನೆಯ ಒಳಾಂಗಣವನ್ನು ಪೀಠೊಪಕರಣ, ಕಿಟಕಿ ಪರದೆಗಳು, ಟೀವಿ, ಸ್ಟಾಂಡ್‌, ಆಲಂಕಾರಿಕ ವಸ್ತುಗಳಿಂದ ಮನೆಯನ್ನು ಸಿಂಗರಿಸುತ್ತಾರೆ. ಹೀಗೆಲ್ಲ ಸಿಂಗರಿಸಿ ಗೋಡೆ ಮಾತ್ರ ಖಾಲಿ ಬಿಟ್ಟರೆ ಹೇಗೆ? ಈ ಎಲ್ಲ ಆಲಂಕಾರಿಕ ವಸ್ತುಗಳ ಜೊತೆಗೇ ಗೋಡೆಗಳು ಕೊಂಚ ಕಲಾತ್ಮಕವಾಗಿರುವುದೂ ಮುಖ್ಯ. ಹಿಂದಿನ ಕಾಲದ ಮನೆಗಳಲ್ಲಿ ಗೋಡೆಗಳ ಅಗಲಕ್ಕೂ ದೇವರ ಫೋಟೊಗಳು ಮತ್ತು ಕ್ಯಾಲೆಂಡರ್‌ಗಳನ್ನು ತೂಗು ಹಾಕುತ್ತಿದ್ದರು. ಈಗಿನ ಮನೆಗಳಲ್ಲಿ ದೇವರಕೋಣೆ ಪ್ರತ್ಯೇಕವಾಗಿರುತ್ತದೆ. ಹೀಗಾಗಿ, ಮನೆಯ ಎಲ್ಲ ಗೋಡೆಗಳ ಮೇಲೆ ದೇವರ ಫೋಟೊಗಳನ್ನು ಹಾಕುವ ಅಗತ್ಯವಿಲ್ಲ.

ಈಗಿನ ಕಾಲದ ಮನೆಯ ಗೋಡೆಗಳಿಗೆ ಕೊಂಚ ಕ್ರಿಯಾತ್ಮಕವಾಗಿ ಆಲೋಚಿಸಿ ಸರಳವಾದ ವಸ್ತು ಅಥವಾ ಕಲೆಯನ್ನು ಸೇರಿಸಿದರೆ ಆ ಕೋಣೆಯ ಅಂದ ಇನ್ನಷ್ಟು ಹೆಚ್ಚುತ್ತದೆ. ಅಲಂಕರಿಸಿದ ಸೃಜನಾತ್ಮಕ ಗೋಡೆಗಳು ಮನಸ್ಸನ್ನು ಇನ್ನಷ್ಟು ಮುದಗೊಳಿಸುತ್ತವೆ.

ನಿಮ್ಮ ಸವಿ ನೆನಪುಗಳನ್ನು ದಾಖಲಿಸಿ
ನಿಮ್ಮ ಜೀವನದ ಸುಂದರ ನೆನಪುಗಳನ್ನು, ಚಿತ್ರಪಟಗಳನ್ನು ಪ್ರಖರ ಬಣ್ಣದ ಅಂಚಿನ ಚೌಕಟ್ಟಿನಲ್ಲಿರಿಸಿ ಕಲಾತ್ಮಕವಾಗಿ ಗೋಡೆಗಳನ್ನು ಅಲಂಕರಿಸಿ. ಒಂದರ ಪಕ್ಕ ಇನ್ನೊಂದು ಸಾಲಾಗಿ ಫೋಟೊ ಪ್ರೇಮ್‌ಗಳನ್ನು ಜೋಡಿಸುವ ಕಾಲ ಸರಿದು ಹೋಗಿದೆ. ಈಗ ಪಕ್ಕದ ಚೌಕಟ್ಟು ಕೊಂಚವೇ ಕೆಳಗೆ ಬರುವಂತೆ, ಅದರ ನಂತರದ್ದು ಇನ್ನೂ ಕೊಂಚ ಕೆಳಗೆ ಬರುವಂತೆ ಜೋಡಿಸಿ. ಚಿಕ್ಕ ಚಿತ್ರದಿಂದ ದೊಡ್ಡ ಗಾತ್ರದವರೆಗೆ ಮೆಟ್ಟಲಿನಾಕಾರದಲ್ಲಿ ಜೋಡಿಸುವುದು ಕಲಾತ್ಮಕತೆಯ ಸಂಕೇತವಾಗಿದೆ.

ಪೆಯಿಂಟಿಂಗ್‌ ಮಾಡಿ
ಬಿಳಿ ಬಣ್ಣದ ಮೇಲೆ ನಿಮಗೆ ಇಷ್ಟವಾದ ಬಣ್ಣವನ್ನು ಸುಂದರವಾಗಿ ಬಿಡಿಸಿ.ವಿವಿಧ ಬಣ್ಣಗಳನ್ನು ಬಳಸಿ ಕಲೆಗೊಂದು ರೂಪ ನೀಡಿ. ಒಂದು ವೇಳೆ ನಿಮ್ಮಲ್ಲಿ ಆ ಕಲಾವಿದನಿಲ್ಲದಿದ್ದಲ್ಲಿ ಒಂದೇ ಬಣ್ಣದ ವೃತ್ತಾಕಾರ, ಚೌಕಾಕಾರಗಳನ್ನು ಬಿಡಿಸಿ. ಪ್ರತಿ ಆಕೃತಿಗೂ ಪ್ರಖರವಾದ ಬೇರೆ ಬೇರೆ ಬಣ್ಣಗಳನ್ನು ಬಳಸುವ ಮೂಲಕ ವೈವಿಧ್ಯವನ್ನು ಪಡೆಯಬಹುದು. ಈಗ ಗೋಡೆಗೆ ಹಚ್ಚುವ ಸಿದ್ಧರೂಪದ ಅಲಂಕಾರದ ಚಿತ್ರಗಳು ಸಿಗುತ್ತವೆ. ಸೂಕ್ತವಾದವುಗಳನ್ನು ಖರೀದಿಸಿ ಮನೆಯ ಅಂದವನ್ನು ಹೆಚ್ಚಿಸಬಹುದು.

ಗೋಡೆಯಲ್ಲಿಗಾಢ ಬಣ್ಣದ ಪರದೆ ಮತ್ತು ರತ್ನಗಂಬಳಿ
ಗಾಢ ಬಣ್ಣದ ಕಿಟಕಿ ಮತ್ತು ಬಾಗಿಲ ಪರದೆಗಳೇ ಸೂಕ್ತ. ನೆಲಕ್ಕೆ ನೇರಳೆ, ಕಾಫಿ ಅಥವಾ ಕಂದು ಬಣ್ಣದ ರತ್ನಗಂಬಳಿ ಸೂಕ್ತವಾದರೆ ಇದೇ ಬಣ್ಣದ ಕಿಟಕಿ ಪರದೆಯೂ ಉತ್ತಮವಾದ ಮೆರುಗು ನೀಡುತ್ತದೆ. ಆದರೆ, ಪೀಠೊಪಕರಣಗಳು ಮತ್ತು ಮೇಜಿನ ಮೇಲಿನ ಬಟ್ಟೆ ಬಿಳಿಬಣ್ಣದ್ದಿರಲಿ. ಇದು ಹಿಂಭಾಗದ ಗಾಢವರ್ಣದ ಪರದೆ ಹಿಂಭಾಗದಲ್ಲಿ ಎದ್ದು ಕಾಣುತ್ತದೆ.

ಪುಸ್ತಕದ ಕಪಾಟೊಂದು ಇರಲಿ
ಪುಸ್ತಕಗಳನ್ನು ಸುಂದರವಾಗಿ ಜೋಡಿಸಲು ಪುಸ್ತಕದ ಕಪಾಟೊಂದನ್ನು ಗೋಡೆಯ ಮಧ್ಯೆ ಇರಿಸಿ. ಒಂದೋ ದೊಡ್ಡ ಅಥವಾ ಗೋಡೆಗೇ ಅಳವಡಿಸಬಲ್ಲ ಚಿಕ್ಕಚಿಕ್ಕ ಮೂರು ಅಥವಾ ನಾಲ್ಕು ಕಪಾಟುಗಳನ್ನೂ ಮಾಡಿ. ಆದರೆ, ಇವು ಗಾಢವರ್ಣದಲ್ಲಿದ್ದು ಬಿಳಿ ಬಣ್ಣದ ಹಿನ್ನಲೆಯಲ್ಲಿ ಕಾಣುವಂತಿರಬೇಕು. ಈ ಪುಸ್ತಕ ಕಪಾಟನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ವಿಭಿನ್ನವಾದ ಆಕಾರದಲ್ಲಿ ನಿರ್ಮಿಸಬಹುದು. ಕೇವಲ ಪುಸ್ತಕಗಳನ್ನು ಮಾತ್ರ ಇಡದೇ ಆಲಂಕಾರಿಕ ವಸ್ತುಗಳನ್ನಿಡಲು ಸಾಧ್ಯವಾಗುವಂತಹ ಕಪಾಟನ್ನು ಮಾಡಿ. ಇದು ಇನ್ನಷ್ಟು ಸುಂದರವಾಗಿ ಕಾಣುತ್ತದೆ.

ಆಲಂಕಾರಿಕ ವಸ್ತುಗಳನ್ನು ಇರಿಸಿ
ಬಿಳಿ ಬಣ್ಣದ ಗೋಡೆಯ ಹಿನ್ನಲೆಯಲ್ಲಿ ಎದ್ದು ಕಾಣುವಂತಿರುವ ಕಲಾತ್ಮಕ ಮತ್ತು ಆಲಂಕಾರಿಕ ವಸ್ತುಗಳನ್ನು ಸ್ಥಾಪಿಸಿ ಮನೆಯ ಸುಂದರತೆಯನ್ನು ಹೆಚ್ಚಿಸಿ. ಒಂದು ವೇಳೆ ನಿಮ್ಮ ಮನೆಯ ಸೋಫಾಸೆಟ್‌ ಬಿಳಿ ಬಣ್ಣದಲ್ಲಿದ್ದರೆ ಅದರಲ್ಲಿರುವ ದಿಂಬುಗಳು ಗಾಢವರ್ಣದಲ್ಲಿರಲಿ. ಇದರ ಮೇಲೆ ಸಾಕಷ್ಟು ಬೆಳಕು ಬೀಳುವಂತಿರಲಿ. ಇಲ್ಲದಿದ್ದರೆ ಒಂದು ಹೆಚ್ಚುವರಿ ಬಲ್ಬ್ ಅಥವಾ ಟ್ಯೂಬ್‌ಲೈಟ್‌ಗಳನ್ನು ಹಾಕಿ ಬೆಳಕು ಸಾಕಷ್ಟಿರುವಂತೆ ನೋಡಿಕೊಳ್ಳಿ.

ಸುಲಭಾ ಆರ್‌. ಭಟ್‌

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.