ತೊಂಡೆಕಾಯಿ ವೈವಿಧ್ಯ


Team Udayavani, Nov 16, 2018, 6:00 AM IST

26.jpg

ತೊಂಡೆಕಾಯಿ ಸುಲಭವಾಗಿ ಪಚನಗೊಳ್ಳುವ ತರಕಾರಿ. ಈ ತರಕಾರಿಯ ನಿತ್ಯ ಸೇವನೆಯಿಂದ ಮೆದುಳು ಮತ್ತು ಹೃದಯಗಳು ಶಕ್ತಿಯುತವಾಗುತ್ತದೆ. 

ತೊಂಡೆಕಾಯಿ ಮಸಾಲೆ ಪಲ್ಯ 
ಬೇಕಾಗುವ ಸಾಮಗ್ರಿ:
1 ಕಪ್‌ ತೊಂಡೆಕಾಯಿ, 1/2 ಕಪ್‌ ತೆಂಗಿನತುರಿ, 2-3 ಒಣಮೆಣಸು, 1/2 ಚಮಚ ಕೊತ್ತಂಬರಿ, 1/2 ಚಮಚ ಉದ್ದಿನಬೇಳೆ, 1 ಲವಂಗ, ಸಣ್ಣ ತುಂಡು ಚಕ್ಕೆ, 3-4 ಟೇಬಲ್‌ ಚಮಚ ಎಣ್ಣೆ , 1 ಚಮಚ ಹುಳಿರಸ, 2 ಚಮಚ ಬೆಲ್ಲ, 2 ಬೀಜ ಬೆಳ್ಳುಳ್ಳಿ, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ತೊಂಡೆಕಾಯಿಯನ್ನು ತೊಳೆದು, 4 ಸೀಳು ಮಾಡಿ ಹೆಚ್ಚಿಡಿ. ತೊಂಡೆಕಾಯಿ ಇಡಿಯಾಗಿರಲಿ. ಬದನೆಕಾಯಿ ಎಣ್ಣೆಗಾಯಿ ಪಲ್ಯಕ್ಕೆ ಸೀಳು ಮಾಡಿದಂತೆ ಮಾಡಬೇಕು. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಕೊತ್ತಂಬರಿ, ಉದ್ದಿನಬೇಳೆ, ಲವಂಗ, ಚಕ್ಕೆ, ಒಣಮೆಣಸು ಸೇರಿಸಿ ಹುರಿಯಿರಿ. ನಂತರ ತೆಂಗಿನತುರಿ, ಹುರಿದ ಮಸಾಲೆ, ಉಪ್ಪು , ಹುಳಿ, ಬೆಲ್ಲ ಸೇರಿಸಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿ. ಈ ಮಸಾಲೆಯನ್ನು ಚೂರಿಯ ಸಹಾಯದಿಂದ ಹೆಚ್ಚಿದ ತೊಂಡೆಕಾಯಿಗೆ ತುಂಬಿಸಿ. ಈ ರೀತಿ ಎಲ್ಲ ತೊಂಡೆಕಾಯಿಗಳನ್ನು ತುಂಬಿಸಿ ತಟ್ಟೆಯಲ್ಲಿಡಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಬೆಳ್ಳುಳ್ಳಿ , ಒಣಮೆಣಸು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆ ಸಿಡಿದಾಗ, ತುಂಬಿಸಿಟ್ಟ ತೊಂಡೆಕಾಯಿಯನ್ನು ಹಾಕಿ ಮುಚ್ಚಿಡಿ. ನೀರು ಹಾಕಬಾರದು. 10 ನಿಮಿಷ ಕಳೆದು ಮೆಲ್ಲನೆ ಸೌಟು ಹಾಕಿ ತಿರುಗಿಸಿ. ಚೆನ್ನಾಗಿ ಬೆಂದ ಮೇಲೆ ಎಣ್ಣೆ ಬಾಣಲೆಯಲ್ಲಿ ಜಿನುಗುವಾಗ ಇಳಿಸಿರಿ. ಚಪಾತಿಯೊಂದಿಗೂ, ಅನ್ನಕ್ಕೂ ರುಚಿಯಾಗಿರುತ್ತದೆ.  

ತೊಂಡೆ ಹಸಿ ತಂಬುಳಿ 
ಬೇಕಾಗುವ ಸಾಮಗ್ರಿ:
10-12 ತೊಂಡೆ, 2 ಕಪ್‌ ತೆಂಗಿನತುರಿ, 2-3 ಹಸಿಮೆಣಸು, 3 ಕಪ್‌ ಸಿಹಿ ಮಜ್ಜಿಗೆ, 1/2 ಚಮಚ ಸಾಸಿವೆ, ಸ್ವಲ್ಪ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು , 1 ಚಮಚ ಎಣ್ಣೆ.

ತಯಾರಿಸುವ ವಿಧಾನ: ತೊಂಡೆಕಾಯಿ ತೊಳೆದು, ಸ್ವಲ್ಪ ನೀರು ಹಾಕಿ ಬೇಯಿಸಿ. ತೆಂಗಿನತುರಿ, ಹಸಿಮೆಣಸು, ಬೆಂದ ತೊಂಡೆ ಸೇರಿಸಿ ನಯವಾಗಿ ರುಬ್ಬಿ. ನಂತರ ಸಿಹಿ ಮಜ್ಜಿಗೆ ಸೇರಿಸಿ. ಉಪ್ಪು ಹಾಕಿ ಚೆನ್ನಾಗಿ ಕಲಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಲು ರುಚಿಯಾಗಿರುತ್ತದೆ.

ತೊಂಡೆಕಾಯಿ ದೋಸೆ 
ಬೇಕಾಗುವ ಸಾಮಗ್ರಿ:
1 ಕಪ್‌ ಬೆಳ್ತಿಗೆ ಅಕ್ಕಿ, 1/4 ಕಪ್‌ ಉದ್ದಿನಬೇಳೆ, 7-8 ತೊಂಡೆಕಾಯಿ, ಉಪ್ಪು ರುಚಿಗೆ ತಕ್ಕಷ್ಟು , 1/4 ಚಮಚ ಮೆಂತೆ.

ತಯಾರಿಸುವ ವಿಧಾನ: ಅಕ್ಕಿ, ಉದ್ದಿನಬೇಳೆ, ಮೆಂತೆ 5-6 ಗಂಟೆ ನೆನೆಸಿ. ನಂತರ ತೊಳೆದು ತೊಂಡೆಕಾಯಿ ತುಂಡು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಮಾರನೆ ದಿನ ತವಾ ಒಲೆಯ ಮೇಲಿಟ್ಟು ಎಣ್ಣೆ ಪಸೆ ಮಾಡಿ ದೋಸೆ ಹೊಯ್ಯಿರಿ. ಚಟ್ನಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ. ಹಣ್ಣಾದ ತೊಂಡೆಯಲ್ಲಿಯೂ ದೋಸೆ ಮಾಡಬಹುದು. 

ತೊಂಡೆಕಾಯಿ ಮಜ್ಜಿಗೆ ಹುಳಿ 
ಬೇಕಾಗುವ ಸಾಮಗ್ರಿ:
1 ಕಪ್‌ ಉದ್ದಕ್ಕೆ ತುಂಡು ಮಾಡಿದ ತೊಂಡೆಕಾಯಿ, 2 ಕಪ್‌ ಹಸಿ ತೆಂಗಿನ ತುರಿ, 1/2 ಚಮಚ ಕೆಂಪುಮೆಣಸಿನ ಪುಡಿ, 1 ಹಸಿಮೆಣಸು, 1 ಕಪ್‌ ಸಿಹಿ ಮಜ್ಜಿಗೆ, 1/2 ಕಪ್‌ ಹುಳಿ ಮಜ್ಜಿಗೆ, ಉಪ್ಪು ರುಚಿಗೆ ತಕ್ಕಷ್ಟು , 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪು ಮೆಣಸು.

ತಯಾರಿಸುವ ವಿಧಾನ: ತೊಂಡೆಕಾಯಿಯನ್ನು ತೊಳೆದು, ಉದ್ದಕ್ಕೆ ತುಂಡು ಮಾಡಿ ಸ್ವಲ್ಪ ನೀರು, ಉಪ್ಪು , ಕೆಂಪುಮೆಣಸಿನ ಪುಡಿ, ಸಿಗಿದ ಹಸಿಮೆಣಸು ಸೇರಿಸಿ ಪಾತ್ರೆಯಲ್ಲಿಟ್ಟು ಒಲೆಯ ಮೇಲಿಟ್ಟು ಬೇಯಿಸಿ. ತೆಂಗಿನತುರಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೆಂದ ತೊಂಡೆಕಾಯಿಗೆ ಸೇರಿಸಿ. ಸಿಹಿ ಮಜ್ಜಿಗೆ, ಹುಳಿ ಮಜ್ಜಿಗೆ ಸೇರಿಸಿ ನಂತರ ಸಾಕಷ್ಟು ನೀರು ಸೇರಿಸಿ 1 ಕುದಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು ಸೇರಿಸಿ ಒಗ್ಗರಣೆ ಕೊಡಿ. ಈ ಮಜ್ಜಿಗೆ ಹುಳಿ ಸಾಂಬಾರಿಗಿಂತ ದಪ್ಪವಿರಬೇಕು. ಅನ್ನ, ಗಂಜಿಯೊಂದಿಗೆ ತಿನ್ನಲು ಸ್ವಾದಿಷ್ಟವಾಗಿರುತ್ತದೆ. 

ತೊಂಡೆಕಾಯಿ ಹುಳಿ ಮೆಣಸಿನ ಕೊದಿಲು 
ಬೇಕಾಗುವ ಸಾಮಗ್ರಿ:
1 ಕಪ್‌ ಜಜ್ಜಿದ ತೊಂಡೆಕಾಯಿ, 1 ಚಮಚ ಹುಳಿ, 2-3 ಕೆಂಪು ಮೆಣಸು, 1/4 ಚಮಚ ಕೆಂಪುಮೆಣಸಿನ ಪುಡಿ, ಚಿಟಿಕೆ ಅರಸಿನ, 2 ಕಪ್‌ ತೆಂಗಿನತುರಿ, ಉಪ್ಪು ರುಚಿಗೆ ತಕ್ಕಷ್ಟು , 1/2 ಚಮಚ ಸಾಸಿವೆ, 1 ಚಮಚ ಎಣ್ಣೆ.

ತಯಾರಿಸುವ ವಿಧಾನ: ತೊಂಡೆಕಾಯಿಯನ್ನು ತೊಳೆದು, ಕಲ್ಲಿನಿಂದ ಜಜ್ಜಿ, ಸ್ವಲ್ಪ ನೀರು, ಉಪ್ಪು ಸೇರಿಸಿ ಮೆಣಸಿನ ಪುಡಿ ಸೇರಿಸಿ ಪಾತ್ರೆಯಲ್ಲಿಟ್ಟು ಬೇಯಿಸಿ. ತೆಂಗಿನತುರಿ, ಅರಸಿನ, ಕೆಂಪು ಮೆಣಸು, ಸ್ವಲ್ಪ ಹುಳಿ, ನೀರು ಸೇರಿಸಿ ರುಬ್ಬಿ ಬೆಂದ ತರಕಾರಿಗೆ ಸೇರಿಸಿ ಕುದಿಸಿ. ಸಾಸಿವೆ, ಕರಿಬೇವು, ಸಣ್ಣ ತುಂಡು ಕೆಂಪು ಮೆಣಸು ಎಣ್ಣೆಯಲ್ಲಿ ಸೇರಿಸಿ ಒಗ್ಗರಣೆ ಕೊಡಿ. ಅನ್ನ, ಚಪಾತಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.
    
ಸರಸ್ವತಿ ಎಸ್‌. ಭಟ್‌

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.