ಪಾದಗಳು ಪದ್ಮಗಳಾಗಲಿ…


Team Udayavani, Apr 21, 2017, 3:45 AM IST

Simply-Beautiful.jpg

ಸುಂದರ ಪಾದದ ಒಡತಿಯಾಗಲು ಎಲ್ಲರಿಗೂ ಇಷ್ಟ. ಪ್ರತಿ ಹೆಣ್ಣೂ ತನ್ನ ಪಾದದ ಕುರಿತು ಹೆಚ್ಚು ಆಸ್ಥೆ ವಹಿಸುತ್ತಾಳೆ. ಒಡೆದ ಹಿಮ್ಮಡಿ, ಉಗುರಿನ ಸಂದುಗಳಲ್ಲಿ ಸೇರಿರುವ ಮಣ್ಣು ಪಾದದ ಸೌಂದರ್ಯವನ್ನು ಕೆಡಿಸಿಬಿಡುತ್ತದೆ. ದೇಹದ ಇಡೀ ಭಾರವನ್ನು ಹೊರುವ ಪಾದದ ಮೇಲೆ ಒಂದಿಷ್ಟು ಅಕ್ಕರೆ ತೋರಿಸಿದರೆ, ಅದು ಸ್ವತ್ಛವಾಗುತ್ತದೆ. ಹಾಗಾಗಿ, ಹೆಂಗಳೆಯರು ಒಮ್ಮೆಯಾದರೂ ಪೆಡಿಕ್ಯೂರ್‌ ಮಾಡಿಸಿಕೊಳ್ಳುವುದು ಉತ್ತಮ. ಪಾರ್ಲರ್‌ಗೆ ಹೋಗುವುದಕ್ಕೆ ಆಗದಿದ್ರೂ ಮನೆಯಲ್ಲೇ ಆಲಿವ್‌ ಅಥವಾ ಕೊಬ್ಬರಿ ಎಣ್ಣೆಯಿಂದ ಹದವಾಗಿ ಮಸಾಜ್‌ ಮಾಡಿಕೊಂಡು ಪಾದದ ಸಂರಕ್ಷಣೆ ಮಾಡಿಕೊಳ್ಳುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು.

ಯಾರಿಗೆ ಯಾವ ಪೆಡಿಕ್ಯೂರ್‌?
.ಫ‌ೂಟ್‌ ಲಾಜಿಕ್‌ ಪೆಡಿಕ್ಯೂರ್‌ ಅನ್ನು ಸಾಮಾನ್ಯವಾಗಿ ಮಧುಮೇಹಿಗಳು ಮಾಡಿಸಿಕೊಳ್ತಾರೆ. ಮಧುಮೇಹಿಗಳು ಹೆಚ್ಚು ಮಸಾಜ್‌ ಇರುವ ಪೆಡಿಕ್ಯೂರ್‌ ಬಳಸದೇ ಇರುವುದು ಒಳ್ಳೆಯದು.
.ಚಾಕೋಲೇಟ್‌ ಪೆಡಿಕ್ಯೂರ್‌ ಅನ್ನು ಒಣಚರ್ಮ ಇರುವ ಮಹಿಳೆಯರು ಮಾಡಿಸಿಕೊಂಡರೆ ಉತ್ತಮ.
.ಗ್ರೀನ್‌ ಟೀ ಪೆಡಿಕ್ಯೂರ್‌ ಎಣ್ಣೆ ಚರ್ಮದವರಿಗೆ ಸೂಕ್ತ.
.ತುಂಬಾ ಒಣಚರ್ಮ ಇರುವವರಿಗೆ ಪ್ಯಾರಫಿನ್‌ ಒಳ್ಳೆಯದು. ಇದು ಹೆಚ್ಚು ತೇವಾಂಶವನ್ನು ನೀಡುತ್ತದೆ.
.ಈಗ ಫಿಶ್‌ ಪೆಡಿಕ್ಯೂರ್‌ನದ್ದೇ ಟ್ರೆಂಡು. ಮೀನುಗಳಿರುವ ನೀರಿನ ತೊಟ್ಟಿಯಲ್ಲಿ ಕಾಲುಗಳನ್ನಿಟ್ಟರೆ 15 ನಿಮಿಷದಲ್ಲಿ ಬಿರುಕು ಪಾದಗಳನ್ನು ನುಣುಪಾಗಿಸುತ್ತವೆ. ನೀರಿನಲ್ಲಿ ನೆನೆದ ಪಾದದ ಮೇಲ್ಭಾಗವನ್ನು ಮೀನುಗಳು ಕಚ್ಚಿ ತಿನ್ನುತ್ತವೆ. ಮೀನಿನ ಎಂಜಲಿನಲ್ಲಿ ಆ್ಯಂಟಿಸೆಪ್ಟಿಕ್‌ ಗುಣ ಇರುವುದರಿಂದ ಫಿಶ್‌ ಪೆಡಿಕ್ಯೂರ್‌ನಿಂದ ಕಾಲಿನ ಹುಣ್ಣನ್ನು ವಾಸಿ ಮಾಡಲು ಸಾಧ್ಯವಿದೆ. ಮೀನುಗಳು ಒರಟು ಚರ್ಮವನ್ನು ತಿನ್ನುವಾಗ ಕಾಲಿಗೆ ಉತ್ತಮ ಮಸಾಜ್‌ ಸಿಗುತ್ತದೆ.

ಪೆಡಿಕ್ಯೂರ್‌ನ ಉಪಯೋಗ
.ನಿಯಮಿತವಾಗಿ ಪೆಡಿಕ್ಯೂರ್‌ ಮಾಡಿಸಿಕೊಳ್ಳುವುದರಿಂದ ಪಾದದ ಚರ್ಮದ ಒರಟುತನ ದೂರವಾಗಿ, ನುಣುಪಾಗುತ್ತದೆ.
.ಹಿಮ್ಮಡಿ ಒಡೆತ, ಉಗುರು ಸುತ್ತುವಿನಂಥ ಸಮಸ್ಯೆಗಳಿಗೆ ಮುಕ್ತಿ.
.ಹೈಹೀಲ್ಡ್‌ ಚಪ್ಪಲಿಯನ್ನು ಹೆಚ್ಚು ಬಳಸುವವರ ಪಾದ ಒಂದು ರೀತಿ ಗಡುಸಾಗಿರುತ್ತದೆ. ಪೆಡಿಕ್ಯೂರ್‌ ಇದನ್ನು ದೂರಮಾಡುತ್ತದೆ.
.ಪೆಡಿಕ್ಯೂರ್‌ ರಕ್ತ ಸಂಚಲನಕ್ಕೆ ಒಳ್ಳೆಯದು.

ಪಾದದ ರಕ್ಷಣೆ ಹೇಗೆ?
.ಲೋಳೆಸರವನ್ನು ಆಗಾಗ್ಗೆ ಕಾಲಿನ ಹಿಮ್ಮಡಿ, ಮೇಲ್ಭಾಗಕ್ಕೆ ಹಚ್ಚಿ ಮಸಾಜ್‌ ಮಾಡಿಕೊಳ್ಳಿ.
.ತೇವಾಂಶವನ್ನು ಕಾಪಾಡುವ ಕ್ರೀಮ್‌ ಹಚ್ಚುವ ಅಭ್ಯಾಸ ರೂಢಿಸಿಕೊಳ್ಳಿ.
.ಕಾಲುಗಳ ಸ್ವತ್ಛತೆಯ ಬಗ್ಗೆ ಗಮನಹರಿಸಿ.
.ಬಿರುಕು ಪಾದವಿದ್ದರೆ ಕಾಲುಚೀಲ ಧರಿಸಿ. ಇದರಿಂದ ಧೂಳಿಗೆ ಪಾದ ತೆರೆದುಕೊಳ್ಳುವುದನ್ನು ತಪ್ಪಿಸಬಹುದು.
.ಆಲಿವ್‌ ಆಯಿಲ್‌ ಬಿಸಿಮಾಡಿಕೊಂಡು ಪಾದಗಳಿಗೆ ಲೇಪಿಸಿ.
.ಬೇಸಿಗೆಯ ಸಮಯದಲ್ಲಿ ಎಸ್‌ಪಿಎಫ್ 30ಕ್ಕೂ ಅಧಿಕವಿರುವ ಸನ್‌ಸ್ಕ್ರೀನ್‌ ಕ್ರೀಮ್‌ ಬಳಸಬೇಕು.
.ಪಾದ ಮೃದುವಾಗಲು ರಾತ್ರಿಯ ವೇಳೆಯಲ್ಲಿ ಕೊಬ್ಬರಿ ಎಣ್ಣೆ ಬಿಸಿಮಾಡಿಕೊಂಡು ಪಾದದ ಸುತ್ತಲೂ ಹದವಾಗಿ ಮಸಾಜ್‌ ಮಾಡಿ.

ಟಾಪ್ ನ್ಯೂಸ್

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.