ಕಡುಬು ಸ್ಪೆಷಲ್‌


Team Udayavani, Jul 19, 2019, 5:00 AM IST

Arasina-ele-2

ಬಾಳೆಎಲೆ, ಹಲಸಿನ ಎಲೆ, ಅರಸಿನ ಎಲೆ, ತೆಗದ ಎಲೆ ಇತ್ಯಾದಿ ಎಲೆಗಳಲ್ಲಿ ವಿವಿಧ ಕಡುಬುಗಳನ್ನು ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಇವುಗಳಲ್ಲಿ ಬೇಯಿಸಿದ ಕಡುಬುಗಳು ರುಚಿಕರ ಹಾಗೂ ವಿಶೇಷ ಪರಿಮಳಯುಕ್ತವಾಗಿರುತ್ತದೆ. ಅಲ್ಲದೆ ಹಬೆಯಲ್ಲಿ ಬೇಯಿಸಿ ತಿಂದರೆ ಆರೋಗ್ಯದಾಯಕ.

ಅಕ್ಕಿಹಿಟ್ಟಿನ ಚಾಪೆ ಕಡುಬು
ಬೇಕಾಗುವ ಸಾಮಗ್ರಿ: ಕುಚ್ಚಿಗೆ ಅಕ್ಕಿ- 2 ಕಪ್‌, ತೆಂಗಿನಕಾಯಿ ತುರಿ- 2 ಕಪ್‌, ರುಚಿಗೆ ಉಪ್ಪು , ಬಾಳೆ ಎಲೆ 3.
ತಯಾರಿಸುವ ವಿಧಾನ: ಬಾಳೆ ಎಲೆಯನ್ನು ಬಾಡಿಸಿ ಇಡಿ. ಅಕ್ಕಿಯನ್ನು 5-6 ಗಂಟೆ ನೀರಲ್ಲಿ ನೆನೆಸಿಡಿ. ಅಕ್ಕಿ ತೊಳೆದು ಒಂದು ಕಪ್‌ ತೆಂಗಿನ ತುರಿ, ಉಪ್ಪು ಸೇರಿಸಿ ನಯವಾಗಿ ರುಬ್ಬಿಡಿ. ಬಾಡಿಸಿಟ್ಟ ಎಲೆಯ ಮೇಲೆ ರುಬ್ಬಿದ ಅಕ್ಕಿಹಿಟ್ಟು ಹರಡಿ ಸ್ವಲ್ಪ ತೆಂಗಿನ ತುರಿ ಹಾಕಿ ಚಾಪೆ ಮಡಚಿದಂತೆ ಸುರುಳಿ ಸುತ್ತಿಡಿ. ಹಬೆ ಪಾತ್ರೆಯಲ್ಲಿ ನೀರು ಕುದಿದ ನಂತರ ಮಡಚಿಟ್ಟ ಅಕ್ಕಿ ಹಿಟ್ಟಿನ ಚಾಪೆ ಇಟ್ಟು ಇಪ್ಪತ್ತು ನಿಮಿಷ ಬೇಯಿಸಿರಿ. ತಣಿದ ನಂತರ ಎಲೆಯಿಂದ ಬಿಡಿಸಿ ಎಣ್ಣೆ/ತುಪ್ಪ ಹಾಕಿ ಸವಿಯಬಹುದು.

ಹಲಸಿನ ಎಲೆಯ ದೊನ್ನೆಯಲ್ಲಿ ಹುರುಳಿ ಕಡುಬು
ಬೇಕಾಗುವ ಸಾಮಗ್ರಿ: ಹುರುಳಿ ಕಾಳು- ಒಂದೂವರೆ ಕಪ್‌, ಅಕ್ಕಿತರಿ- 1/2 ಕಪ್‌, ಉದ್ದಿನಬೇಳೆ- 1 ಕಪ್‌, ರುಚಿಗೆ ಉಪ್ಪು , ಹಲಸಿನ ಎಲೆಯ ದೊನ್ನೆಗಳು.
ತಯಾರಿಸುವ ವಿಧಾನ: ಕೊಟ್ಟೆ ಮಾಡುವ ಹಿಂದಿನ ದಿನ ಉದ್ದಿನಬೇಳೆ, ಹುರುಳಿ ಕಾಳನ್ನು ಬೇರೆಯಾಗಿ ನೆನೆಸಿಡಿ. ರಾತ್ರಿ ಉದ್ದಿನ ಬೇಳೆ ರುಬ್ಬಿ ಪಾತ್ರೆಗೆ ಹಾಕಿಡಿ. ಮರುದಿನ ಹುರುಳಿಕಾಳು ತೊಳೆದು ನಯವಾಗಿ ರುಬ್ಬಿ ಉದ್ದಿನ ಹಿಟ್ಟಿಗೆ ಹಾಕಿ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಅಕ್ಕಿ ತರಿಯನ್ನು ಸೇರಿಸಿ ಮತ್ತೆ ಚೆನ್ನಾಗಿ ಬೆರೆಸಿ ಹಲಸಿನ ದೊನ್ನೆಯಲ್ಲಿ ಹಾಕಿ. ಹಬೆ ಪಾತ್ರೆಗೆ ಕುದಿ ಬಂದ ಕೂಡಲೆ ಹಲಸಿನ ದೊನ್ನೆ ಇಟ್ಟು 20 ನಿಮಿಷ ಬೇಯಿಸಿ ಮುಚ್ಚಳ ತೆಗೆಯಿರಿ.ತರಕಾರಿ ಸಾಂಬಾರ್‌ ಇಲ್ಲವೆ, ಕಾಯಿ ಚಟ್ನಿಯೊಂದಿಗೆ ಸವಿದರೆ ಬಲು ರುಚಿ.

ಅರಸಿನ ಎಲೆಯಲ್ಲಿ ಕಡುಬು (ಸಿಹಿ ಕಡುಬು)
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 1 ಕಪ್‌, ತೆಂಗಿನಕಾಯಿ ತುರಿ- ಒಂದೂವರೆ ಕಪ್‌, ಬೆಲ್ಲ- 1 ಕಪ್‌, ಚಿಟಿಕೆ ಉಪ್ಪು , ಅರಸಿನ ಎಲೆಗಳು 8-10.
ತಯಾರಿಸುವ ವಿಧಾನ: ಅಕ್ಕಿಯನ್ನು 2 ಗಂಟೆ ನೆನೆಸಿಡಿ. ಬಾಣಲೆಯಲ್ಲಿ ಸ್ವಲ್ಪ ನೀರು ಹಾಕಿ ಬೆಲ್ಲ ಹಾಕಿ ಪಾಕ ಮಾಡಿ ತೆಂಗಿನ ತುರಿ ಹಾಕಿ ಚೂರ್ಣ ಮಾಡಿಡಿ. ನೆನೆಸಿದ ಅಕ್ಕಿಗೆ ಸ್ವಲ್ಪ ಬೆಲ್ಲ, ಉಪ್ಪು, ತೆಂಗಿನತುರಿ 1/4 ಕಪ್‌ ಹಾಕಿ ನಯವಾಗಿ ರುಬ್ಬಿ. ಅರಸಿನ ಎಲೆ ತೊಳೆದು ಒರೆಸಿ ಅದರ ಮೇಲೆ ಅಕ್ಕಿ ಇಟ್ಟು ಹರಡಿ ಚೂರ್ಣ ಉದ್ದಕ್ಕೆ ಹರಡಿ. ಹಬೆ ಪಾತ್ರೆಯಲ್ಲಿ ನೀರು ಕುದಿದ ನಂತರ ಅರಸಿನ ಎಲೆ ಮಡಚಿ ಸುತ್ತಲೂ ಇಟ್ಟು ಮುಚ್ಚಳ ಮುಚ್ಚಿ 20 ನಿಮಿಷ ಬೇಯಿಸಿ. ತುಪ್ಪ ಹಾಕಿ ಸವಿದರೆ ಆರೋಗ್ಯಕ್ಕೆ ಉತ್ತಮ.

ಬಾಳೆ ಎಲೆಯಲ್ಲಿ ಖಾರ ಕಡುಬು
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 1 ಕಪ್‌, ತೊಗರಿಬೇಳೆ- 1/4 ಕಪ್‌, ತೆಂಗಿನತುರಿ- ಒಂದೂವರೆ ಕಪ್‌, ಒಣ ಮೆಣಸಿನಕಾಯಿ 8-10, ರುಚಿಗೆ ಉಪ್ಪು , ಇಂಗಿನ ನೀರು- 1 ಚಮಚ, ಕೊತ್ತಂಬರಿ- 1 ಚಮಚ, ಸ್ವಲ್ಪ ಬೆಲ್ಲ , ಹುಣಸೆಹಣ್ಣು, ಬಾಳೆಎಲೆ- 2.
ತಯಾರಿಸುವ ವಿಧಾನ: ಅಕ್ಕಿ, ತೊಗರಿಬೇಳೆ ಎರಡು ಗಂಟೆ ನೆನೆಸಿಡಿ. ತೊಳೆದು ತೆಂಗಿನ ತುರಿ, ಒಣ ಮೆಣಸಿನಕಾಯಿ, ಬೆಲ್ಲ, ಹುಣಸೆಹಣ್ಣು , ಕೊತ್ತಂಬರಿ ಹಾಕಿ ತರಿ ತರಿಯಾಗಿ ರುಬ್ಬಿ ಉಪ್ಪಿನ ಹುಡಿ, ಇಂಗಿನ ನೀರು ಹಾಕಿ ಬೆರೆಸಿರಿ. ಹಬೆ ಪಾತ್ರೆಯ ನೀರಿಗೆ ಕುದಿ ಬಂದ ಮೇಲೆ ಬಾಳೆಎಲೆ ಬಾಡಿಸಿಟ್ಟು ಅದರಲ್ಲಿ ಖಾರ ಕಡುಬಿನ ಹಿಟ್ಟು ಸುರಿದು 30 ನಿಮಿಷ ಬೇಯಿಸಿ ಮುಚ್ಚಳ ತೆಗೆದಿಡಿ. ಎಣ್ಣೆ ಹಾಕಿ ಬಿಸಿಬಿಸಿ ಸವಿಯಬಹುದು. ತಣ್ಣಗಾದರೂ ರುಚಿಯಾಗಿರುವುದು. ಊಟಕ್ಕೂ, ಕಾಫಿ ಜೊತೆಗೂ ಸವಿಯಬಹುದು.

-ಎಸ್‌. ಜಯಶ್ರೀ ಶೆಣೈ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.