ಕಂಗನಾಗೆ ಪದ್ಮ ಪ್ರಶಸ್ತಿ
Team Udayavani, Jan 31, 2020, 4:21 AM IST
ಬಾಲಿವುಡ್ ಅಂಗಳಲದಲ್ಲಿ ಸಿನಿಮಾಗಳ ಜೊತೆಗೆ ಬೇರೆ ಬೇರೆ ವಿಷಯಗಳಿಗೂ ಆಗಾಗ್ಗೆ ಸುದ್ದಿಯಾಗುವ ನಟಿಮಣಿಯರಲ್ಲಿ ಕಂಗನಾ ರಣಾವತ್ ಕೂಡ ಒಬ್ಬರು. ತನಗೆ ಅನಿಸಿದ್ದನ್ನು ಹಿಂದೆ-ಮುಂದೆ ನೋಡದೆ ನೇರವಾಗಿ ಹೇಳುವ ಸ್ವಭಾವ ಬೆಳೆಸಿಕೊಂಡಿರುವ ಕಂಗನಾ ಅನೇಕ ಬಾರಿ ತಮ್ಮ ಹೇಳಿಕೆಗಳಿಂದಲೇ ಅನೇಕರ ಕೆಂಗಣ್ಣಿಗೆ, ವಿವಾದಕ್ಕೆ ಗುರಿಯಾಗಿರುವುದಿದೆ. ಇತ್ತೀಚಿನ ವರ್ಷಗಳಲ್ಲಿ ತೆರೆಮುಂದೆ ಮತ್ತು ತೆರೆಹಿಂದೆ ಬೋಲ್ಡ್ ನಟಿ ಎಂದೇ ಬಾಲಿವುಡ್ನಲ್ಲಿ ಕರೆಸಿಕೊಳ್ಳುತ್ತಿರುವ ಕಂಗನಾ ರಣಾವತ್ಗೆ 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಸುಮಾರು ಒಂದೂವರೆ ದಶಕದಿಂದ ಬಾಲಿವುಡ್ನಲ್ಲಿ ಸಕ್ರಿಯವಾಗಿರುವ, ವಿವಿಧ ಪಾತ್ರಗಳ ಮೂಲಕ ಮನೋಜ್ಞ ಅಭಿನಯ ನೀಡಿರುವ ಕಂಗನಾ ಅವರ ಚಿತ್ರಬದುಕಿನ ಸಾಧನೆಯನ್ನು ಗುರುತಿಸಿ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಬಾರಿಯ ಸಾಧಕರಿಗೆ ಪ್ರಶಸ್ತಿ ಪುರಸ್ಕರಿಸಿ, ಸನ್ಮಾನಿಸಿದರು. ಇನ್ನು ಪದ್ಮಶ್ರೀ ಪ್ರಶಸ್ತಿ ಪಡೆದ ಬಗ್ಗೆ ಮಾತನಾಡಿರುವ ನಟಿ ಕಂಗನಾ ರಣಾವತ್, “”ನನಗೆ ಸಿನಿಮಾ, ಅಭಿನಯ ಬಿಟ್ಟು ಬೇರೇನೂ ಗೊತ್ತಿಲ್ಲ. ನನಗೆ ಗೊತ್ತಿರುವುದನ್ನೇ ಯಾವಾಗಲೂ ಉತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತೇನೆ. ಸಿನಿಮಾರಂಗಕ್ಕೆ ಬಂದ ಇಷ್ಟು ವರ್ಷಗಳಲ್ಲಿ ಅನೇಕ ಏಳು-ಬೀಳುಗಳನ್ನು, ಸೋಲು-ಸವಾಲುಗಳನ್ನು ಎದುರಿಸಿದ್ದೇನೆ. ಅವೆಲ್ಲವೂ ನನ್ನನ್ನು ಇಲ್ಲಿ ಇನ್ನಷ್ಟು ಗಟ್ಟಿಯಾಗಿ ನಿಲ್ಲುವಂತೆ ಮಾಡಿವೆ. ನಾನು ನನ್ನ ಕೆಲಸದಲ್ಲಿ ನಂಬಿಕೆಯಿಟ್ಟಿದ್ದೇನೆ. ಅದನ್ನು ಬಿಟ್ಟು ಇಲ್ಲಿ ಬೇರೇನೂ ಯೋಚನೆ, ನಿರೀಕ್ಷೆ ಮಾಡಿಲ್ಲ. ಹೀಗಿರುವಾಗ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ನನ್ನನ್ನು ಹುಡುಕಿಕೊಂಡು ಬಂದಿರುವುದು ನಿಜಕ್ಕೂ ನನಗೆ ಅಚ್ಚರಿಯ ವಿಷಯ. ಪದ್ಮಶ್ರೀ ಅಂಥ ಪ್ರತಿಷ್ಠಿತ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿರುವುದಕ್ಕೆ ಭಾರತ ಸರ್ಕಾರಕ್ಕೆ, ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಕೃತಜ್ಞಳಾಗಿದ್ದೇನೆ. ಈ ಪ್ರಶಸ್ತಿಯನ್ನು ನಾನು ಕನಸು ಕಾಣುವ ಧೈರ್ಯವಂತ ಪ್ರತಿಯೊಬ್ಬ ಮಹಿಳೆಯರಿಗೆ, ಪ್ರತಿಯೊಬ್ಬ ಮಗಳು, ತಾಯಿ ಮತ್ತು ದೇಶದ ಭವಿಷ್ಯವನ್ನು ರೂಪಿಸುವ ಮಹಿಳೆಯರಿಗೆ ಅರ್ಪಿಸುತ್ತೇನೆ” ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ಅವರೊಂದಿಗೆ ಈ ಬಾರಿ ಬಾಲಿವುಡ್ನ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್, ನಿರ್ಮಾಪಕಿ ಏಕ್ತ ಕಪೂರ್ ಮತ್ತು ಗಾಯಕ ಅದ್ನಾನ್ ಸಾಮಿ ಕೂಡ ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ¨ªಾರೆ. ಒಟ್ಟಾರೆ ಈ ಬಾರಿ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಕಂಗನಾ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಂಥದ್ದೊಂದು ಪ್ರಶಸ್ತಿಗೆ ಭಾಜನರಾದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸದ್ಯ ಪದ್ಮಶ್ರೀ ಪ್ರಶಸ್ತಿ ಕಂಗನಾಗೆ ಮತ್ತಷ್ಟು ಜೋಶ್ ತಂದುಕೊಟ್ಟಂತಿದ್ದು, ಈ ವರ್ಷದಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುವ ಸುಳಿವನ್ನು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ