ಲಿಪ್‌ಸ್ಟಿಕ್‌… ಅಹನಾ


Team Udayavani, Nov 17, 2017, 6:46 PM IST

17-14.jpg

ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ ಎಂಬ ವಿವಾದಾತ್ಮಕ ಚಿತ್ರದಿಂದ ಬೆಳಕಿಗೆ ಬಂದ ಪ್ರತಿಭೆ ಅಹನಾ ಕುಮ್ರ. ಈಕೆ ಉಳಿದವರಂತೆ ಆಕಸ್ಮಿಕವಾಗಿ ನಟಿಯಾದವಳಲ್ಲ. ಬಾಲ್ಯದಲ್ಲಿಯೇ ನಟಿಯಾಗಬೇಕೆಂಬ ಹಂಬಲ ಇಟ್ಟುಕೊಂಡು ಈ ದಿಸೆಯಲ್ಲೇ ಮುಂದುವರಿದು ಹಂಬಲವನ್ನು ಈಡೇರಿಸಿಕೊಂಡವಳು. 

ನಟನೆ ಎನ್ನುವುದು ಅವಳಿಗೆ ಸಹಜವಾಗಿ ಒಲಿದು ಬಂದಿದೆ. ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ ಎರಡನೆಯ ಚಿತ್ರವಾಗಿದ್ದರೂ ಯಾವುದೇ ಅನುಭವಿ ನಟಿಗೂ ಕಡಿಮೆಯಿಲ್ಲದಂತೆ ಈ ಜಟಿಲ ಪಾತ್ರದಲ್ಲಿ ಸೈ ಎನಿಸಿಕೊಂಡಾಕೆ ಅಹನಾ. ತಂದೆ ಎನ್‌ಆರ್‌ಐ, ತಾಯಿ ಸಿಐಡಿ ಅಧಿಕಾರಿ. ಈ ವಿಶಿಷ್ಟ ಕೌಟುಂಬಿಕ ಹಿನ್ನೆಲೆಯಿಂದ ಬಂದ ಅಹನಾ 13ರ ಹರೆಯದಲ್ಲೇ ನಟಿಯಾಗಬೇಕೆಂಬ ಕನಸನ್ನು ನನಸು ಮಾಡುವ ಸಲುವಾಗಿ ಮುಂಬಯಿಯ ರೈಲೇರಿದಳು. 

ಆರಂಭದ ದಿನಗಳಲ್ಲಿ ಕಲಾವಿದರನ್ನು ರೂಪಿಸುವ ಪೃಥ್ವಿ ಥಿಯೇಟರ್‌ನ ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಲೇ ಮಾಗುತ್ತ ಬಂದ ಅಹನಾ, ಅನಂತರ ವಿಸ್ಲಿಂಗ್‌ ವಿಂಡ್‌ ತರಬೇತಿ ಕೇಂದ್ರ ಸೇರಿ ಸಿನೆಮಾ ಅಭಿನಯದ ವಿವಿಧ ಆಯಾಮಗಳನ್ನು ಕಲಿತುಕೊಂಡಳು. ಹೀಗೆ ಶ್ರಮಪಟ್ಟು ನಟಿಯಾದ ಅಹನಾಳನ್ನು ಮೊದಲು ಕೂಗಿ ಕರೆದದ್ದು ಮಾಡೆಲಿಂಗ್‌ ಜಗತ್ತು. ಮೋಡೆಲಿಂಗ್‌ನಲ್ಲಿ ಸಾಕಷ್ಟು ಯಶಸ್ವಿಯಾದ ಬಳಿಕ ಕಿರುತೆರೆಗೆ ಜಿಗಿದಳು. ಮೇರುನಟ ಅಮಿತಾಭ್‌ ಬಚ್ಚನ್‌ ಜತೆಗೆ ನಟಿಸುವ ಸುವರ್ಣಾ ವಕಾಶವನ್ನು ಕಿರುತೆರೆ ಅವಳಿಗೆ ಒದಗಿಸಿಕೊಟ್ಟಿತು. ಯುದ್ಧ್  ಎಂಬ ಟಿವಿ ಸರಣಿಯಲ್ಲಿ ಅಮಿತಾಭ್‌ ಮಗಳಾಗಿ ಅಭಿನಯಿಸಿದಾಗ ನಟಿಯಾಗಿರುವುದು ಸಾರ್ಥಕ ಎಂಬ ಧನ್ಯತೆ ಉಂಟಾಯಿತಂತೆ.

ಟಿವಿ ಸರಣಿ, ರಿಯಾಲಿಟಿ ಶೋ, ನಿರೂಪಕಿ, ಕಿರುಚಿತ್ರ ಎಂದೆಲ್ಲ ಫ‌ುಲ್‌ ಬ್ಯುಸಿಯಾಗಿದ್ದ ಅಹನಾ ಕುಡ್ಲ ಕೆಫೆ ಎಂಬ ತುಳು ಚಿತ್ರದಲ್ಲಿ ನಟಿಸಿರುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಸೋನಾ ಸ್ಪಾ  ಅಹನಾ ನಟಿಸಿದ ಮೊದಲ ಸಿನೆಮಾ. 2013ರಲ್ಲಿ ಬಿಡುಗಡೆಯಾದ ಇದು ಹೆಚ್ಚೇನೂ ಸದ್ದು ಮಾಡದೆ ಸರಿದು ಹೋದ ಕಾರಣ ಅಹನಾ ಗಮನ ಸೆಳೆಯಲಿಲ್ಲ. ಆದರೆ, ಈ ವರ್ಷ ಭಾರೀ ವಿವಾದದ ಬಳಿಕ ಬಿಡುಗಡೆಯಾದ ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ ಅವಳಿಗೆ ತೀರಾ ಅಗತ್ಯವಾಗಿದ್ದ ದೊಡ್ಡ ಮಟ್ಟದ ಬ್ರೇಕ್‌ ನೀಡಿದೆ. ಕೊಂಕಣಾ ಸೇನ್‌ ಶರ್ಮ, ರತ್ನಾ ಪಾಠಕ್‌ ಶಾ ಮುಂತಾದ ದಿಗ್ಗಜ ನಟಿಯರಿಗೆ ಸರಿಸಮಾನವಾಗಿ ನಟಿಸಿರುವ ಅಹನಾಳ ಪ್ರತಿಭೆಯನ್ನು ಬಾಲಿವುಡ್‌ ಈಕ ಕಣ್ಣರಳಿಸಿ ನೋಡುತ್ತಿದೆ. 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.