ಮೇಕಪ್‌ ಮಿಸ್ಟೇಕ್ಸ್‌


Team Udayavani, Jun 1, 2018, 6:00 AM IST

z-22.jpg

ವಿಶೇಷ ಸಂದರ್ಭಗಳಲ್ಲಿ ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಮಹಿಳೆಯರು ಹೆಚ್ಚಿನ ಕಾಳಜಿ ಯಿಂದ ಮೇಕಪ್‌ ಧರಿಸಿಕೊಂಡು ಹೋಗುತ್ತಾರೆ. ಮಹಿಳೆಯರಿಗೆ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಬೆಟ್ಟದಷ್ಟಿರುತ್ತದೆ.ಅದಕ್ಕಾಗಿಅವರು ಎಲ್ಲಾ ಪ್ರಯತ್ನ ಮಾಡಿ ಇತರರಗಿಂತ ಸುಂದರವಾಗಿ ಕಾಣಲು ಕಸರತ್ತು ಮಾಡುತ್ತಾರೆ. ಕೆಲವರು ಮೇಕಪ್‌ ಮಾಡದೆಯೇ ಅಂದವಾಗಿ ಕಾಣುತ್ತಾರೆ. ಇನ್ನು ಕೆಲವರನ್ನು ಮೇಕಪ್‌ ಅಂದಗೊಳಿಸುತ್ತದೆ.

ಪ್ರಕೃತಿದತ್ತವಾದ ಅಂದವು ಒಬ್ಬರ ವ್ಯಕಿತ್ವವನ್ನು ಪ್ರತಿಬಿಂಬಿಸುತ್ತದೆ. ಆದರೂ ಬಹಳ ಜನರಿಗೆ ಮೇಕಪ್‌ ಮಾಡುವುದರಿಂದ ತಮ್ಮ ಅಂದವು ಹೆಚ್ಚುತ್ತದೆ ಎನ್ನುವ ಭಾವನೆ. ಹಾಗಾಗಿ ಸಣ್ಣ ಸಣ್ಣ ಸಮಾರಂಭಗಳಿಗೂ ಭರ್ಜರಿಯಾಗಿ ಮೇಕಪ್‌ ಮಾಡಿಕೊಂಡು ಹೋಗುವುದು ಸರ್ವೇಸಾಮಾನ್ಯ.

ಮೊದಲ ಸಲ ಮೇಕಪ್‌ ಮಾಡುವಾಗ ಅದು ಕುತೂಹಲವೆಂದೆನಿಸುತ್ತದೆ. ನಂತರ ಅದು ಅನಗತ್ಯ ಎಂದು ಕಾಣುವ ಸಾಧ್ಯತೆಯಿದೆ. ಮತ್ತೆ ಕೆಲವು ಸಲ ಮೇಕಪ್‌ ಹಾಸ್ಯಾಸ್ಪದವೂ ಆಗಬಹುದು. ತಮ್ಮ ಸೌಂದರ್ಯದ ಬಗ್ಗೆ ಅತ್ಯಂತ ಜಾಗೃತವಿರುವ ಮಹಿಳೆಯರು ಸರಿಯಾದ ರೀತಿಯಲ್ಲಿ ಮೇಕಪ್‌ ಬಳಸಿದರೆ ಸುಂದರವಾಗಿ ಕಾಣಿಸುತ್ತಾರೆ.

ಗಾಢವಾದ ಫೌಂಡೇಶನ್‌ ಬಳಸುವುದು
ಗಾಢವಾದ ಫೌಂಡೇಶನ್‌ ಬಳಸುವುದರಿಂದ ಮುಖದಲ್ಲಿನ ನೋಟ ಸರಿಯಾಗಿ ಕಾಣದೇ ಇರಬಹುದು. ಹೀಗಾಗಿ ಸ್ವಲ್ಪ$ ಪ್ರಮಾಣದಲ್ಲಿ ತೆಗೆದುಕೊಂಡು ನಯವಾಗಿ ಮುಖದ ಮೇಲೆ ಹಚ್ಚುವುದರಿಂದ ಸುಂದರವಾಗಿ ಮತ್ತು ಪರಿಪೂರ್ಣವಾಗಿ ಕಾಣಬಹುದು. ಸ್ಪಂಜನ್ನು ತೆಗೆದುಕೊಂಡು ಕೆಳಮುಖವಾಗಿ ನಿಧಾನವಾಗಿ ಒರೆಸಿಕೊಳ್ಳುವ ಮೂಲಕ ಜಾಸ್ತಿಯಾದ ಫೌಂಡೇಶನ್‌ ಪ್ರಮಾಣವನ್ನು ಕಡಿಮೆಗೊಳಿಸಬಹುದು.

ಜಾಸ್ತಿ ಐಶಾಡೋಗಳನ್ನು ಹಚ್ಚುವುದು
ಜಾಸ್ತಿ ಬಣ್ಣ ಹಚ್ಚುವುದರಿಂದ ನಗೆಪಾಟಲಿಗೆ ಗುರಿಯಾಗಬೇಕಾದಿತು. ಐ ಶಾಡೋಗಳನ್ನು ಹರಡಲು ಕೈ ಬೆರಳುಗಳನ್ನು ಬಳಸಬಾರದು ಬದಲಾಗಿ ಬ್ರಷ್‌ ಬಳಸಬೇಕು. ಬ್ರಷ್‌ ಬಳಸುವುದರಿಂದ ಮುಖಕ್ಕೆ ಪರಿಪೂರ್ಣವಾದ ನೋಟ ಬರುತ್ತದೆ. ಬಣ್ಣವನ್ನು ಹರಡುವಾಗ ಒಂದೇ ಜಾಗದಲ್ಲಿ ನಿಲ್ಲದಂತೆ ಎಲ್ಲಾಕಡೆ ಸರಿ ಸಮಾನವಾಗಿ ಹರಡುವಂತೆ ಮತ್ತು ಮುಖದ ಮೇಲೆ ಪಸರಿಸದಂತೆ ನೋಡಿಕೊಳ್ಳಿ.

ಅಪೂರ್ಣ ಲಿಪ್‌ಸ್ಟಿಕ್‌ ಬಳಕೆ
ತುಟಿಗೆ ಬಳಸುವ ಲಿಪ್‌ಸ್ಟಿಕ್‌ ಬಣ್ಣದ ಆಯ್ಕೆ ಮತ್ತು ಇದರ ತಪ್ಪಾದ ಬಳಕೆಯಿಂದ ಮೇಕಪ್‌ ಗಬ್ಬೆದ್ದು ಹೋಗುತ್ತದೆ. ನಿಮ್ಮ ಮುಖಕ್ಕೆ ಒಪ್ಪುವ ಲಿಪ್‌ಸ್ಟಿrಕ್‌ ಬಣ್ಣವನ್ನು ಅರಿತು ಬಳಸಿದರೆ ಒಳಿತು.ಅತಿಯಾದ ಗಾಢ ಬಣ್ಣಗಳನ್ನು ಬಳಸದೆ ಇರುವುದು ಉತ್ತಮ.

ಐ-ಲೈನರ್‌ ಬಳಕೆ
ಕಣ್ಣರೆಪ್ಪೆಗಳನ್ನು ಹೇಗಿದೆಯೋ ಹಾಗೆ ಬಿಟ್ಟು ಅವುಗಳಿಗೆ ಮೇಕಪ್‌ ಬಳಸದೆ ಇರುವುದು ಒಳ್ಳೆಯದು. ಆದರೂ ಮಹಿಳೆಯರು ಕಣ್ಣ ರೆಪ್ಪೆಗಳಿಗೆ ತೆಳುವಾದ ಐಶಾಡೊ ಹಚ್ಚಿ ಅದು ಗಾಢವಾಗಿ ತೋರುವಲ್ಲಿ ಹೆಚ್ಚಿನ ಒಲವು ತೋರಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಬಳಸಬೇಡಿ. ಸರಿಯಾದ ರೀತಿಯಲ್ಲಿ ಮಸ್ಕಾರವನ್ನು ಬಳಸಿ. ಜಾಸ್ತಿ ಪ್ರಮಾಣದಲ್ಲಿ ಕಣ್ಣಿಗೆ ಅಲಂಕಾರ ಮಾಡಿದಲ್ಲಿ ಮುಖದ ಸ್ವರೂಪವೇ ವಿಕಾರವಾಗಿ ಕಾಣಬಹುದು.ಆದುದರಿಂದ ಮೇಕಪ್‌ ಮಾಡುವಾಗ ಅದರಲ್ಲಾಗುವ ತಪ್ಪುಗಳನ್ನು ಪರಿಗಣಿಸಿ ಅತೀ ಜಾಗರೂಕತೆಯಿಂದ ಮೇಕಪ್‌ ಮಾಡಿ ಸುಂದರವಾಗಿ ಕಾಣಿಸಬಹುದು.

ಸುಲಭಾ ಆರ್‌. ಭಟ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.