ಮೇಖಲಾ ಚಾದರ್‌


Team Udayavani, Jun 23, 2019, 6:33 AM IST

Mahila-2

ನಮ್ಮ ಭರತಭೂಮಿ ಎಷ್ಟು ವೈವಿಧ್ಯಪೂರ್ಣವೋ, ಅಷ್ಟೇ ವೈವಿಧ್ಯಮಯ ಹಾಗೂ ವೈಶಿಷ್ಟ್ಯ ಪೂರ್ಣ- ಭಾರತೀಯ ಮಹಿಳೆಯರ ಉಡುಗೆ-ತೊಡುಗೆ ಆಭೂಷಣ ಧಾರಣೆಯ ಸಂಪ್ರದಾಯ.

ಆಧುನಿಕ ವಸ್ತ್ರವಿನ್ಯಾಸ ಹಾಗೂ ಆಭರಣಾದಿಗಳ ಭರಾಟೆಯ ರಭಸದಲ್ಲಿ ಕೊಚ್ಚಿ ಹೋಗದೇ, ಇನ್ನೂ ಭಾರತಾಂಬೆಯ ಮಡಿಲಲ್ಲಿ, ಮಹಿಳೆಯರು ಸಾಂಪ್ರದಾಯಿಕ ಉಡುಗೆತೊಡುಗೆ ಆಭೂಷಣ ತೊಟ್ಟು ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದೇ ಈ ಭರತಭೂಮಿಯ ಮಣ್ಣಿನ ಮಹಿಮೆ!

ಇದೇ ಭಾರತಾಂಬೆಯ ಮಕ್ಕಳ ಗರಿಮೆ!ಹೌದು! ಆಧುನಿಕ ಯುಗದಲ್ಲೂ ನಮ್ಮ ದೇಶದ ಪ್ರಾಚೀನ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳ ದ್ಯೋತಕವಾಗಿರುವ ಪ್ರಾದೇಶಿಕ ವೈವಿಧ್ಯತೆ, ವೈಶಿಷ್ಟéತೆಗಳಿಂದ ಮಹತ್ವಪೂರ್ಣವಾಗಿರುವ ಮಹಿಳೆಯರ ಉಡುಗೆತೊಡುಗೆ ಆಭೂಷಣಗಳನ್ನು ಅರಿಯೋಣ. ಅರಿತಂತೆ, ಅಳವಡಿಸಿಕೊಂಡಂತೆ ನಮ್ಮ ಮಹಿಳೆಯರ ಸಾಂಪ್ರದಾಯಿಕತೆಯ ಸೊಗಡು ಇನ್ನಷ್ಟು ಸೌರಭಬೀರಿ, ಈ ದೇಶದ ಮಣ್ಣಿನಲ್ಲಿ ಮತ್ತಷ್ಟು ಗಾಢವಾಗಿ ಬೇರೂರಲಿ. ಜೊತೆಗೆ, ಎಲ್ಲೆಡೆಯೂ ಪಸರಿಸಲಿ ಎಂಬುದೊಂದು ಹಾರೈಕೆ.

ಅಸ್ಸಾಮ್‌ ಮಹಿಳೆಯ ವಸ್ತ್ರ ಸೊಗಸು
ಅಸ್ಸಾಮೀಯ ಮಹಿಳೆಯರ ವಸ್ತ್ರವಿನ್ಯಾಸ, ಸಂಸ್ಕೃತಿಗಳನ್ನು ಗಮನಿಸಿದರೆ, ಅದರಲ್ಲಿ ಭಾರತ, ಬರ್ಮಾ, ಮಂಗೋಲಿಯನ್‌ ಹಾಗೂ ಆರ್ಯರ ಪ್ರಭಾವ ಮಿಳಿತವಾಗಿರುವುದು ಕಾಣಸಿಗುತ್ತದೆ.

ಬಣ್ಣ ಬಣ್ಣದ ಅದರಲ್ಲೂ ಚಿನ್ನದ ಹೊಂಬಣ್ಣದ ರೇಶಿಮೆಯ ಉಡುಗೆ “ಮುಗಾ’ ಅಸ್ಸಾಂನ ಮಹಿಳೆಯರ ಸಾಂಪ್ರದಾಯಿಕ ತೊಡುಗೆ. ಇದಕ್ಕೆ “ಮೇಖಲಾ ಚಾದರ್‌’ ಎಂಬ ಹೆಸರೂ ಇದೆ. ಇದರಲ್ಲೂ ವಿಶಿಷ್ಟ ಅಸ್ಸಾಮೀ ಛಾಪು ಬೀರುವ ವಸ್ತ್ರವಿನ್ಯಾಸವೆಂದರೆ “ಪಾಟ್‌’ ಹಾಗೂ “ಏರಿ’.

ಏರಿ ಬಗೆಯ ವಸ್ತ್ರವನ್ನು ಚಳಿಗಾಲದಲ್ಲಿ ಶಾಲ್‌ ರೀತಿಯ ಹೊದಿಕೆಯಾಗಿ ಬಳಸಲು “ಏರಿಚಾದರ್‌’ ಎಂದು ಕರೆಯುತ್ತಾರೆ. “ಪಾಟ್‌’ ಬಳಕೆಯಾಗುವುದೇ “ಮೇಖಲಾ ಚಾದರ್‌’ ತಯಾರಿಗೆ.

ಅಸ್ಸಾಂ ಬುಡಕಟ್ಟು ಜನಾಂಗದವರ ಪಾರಂಪರಿಕ ವೈಶಿಷ್ಟéತೆ ಅನೂಹ್ಯ ಹಾಗೂ ಅಸದೃಶ. ಹಾಂ! ಭಾರತೀಯ ಮಹಿಳೆಯರ ಪಾರಂಪರಿಕ ಉಡುಗೆತೊಡುಗೆಗಳು ಅದರಲ್ಲೂ ಮುಖ್ಯವಾಗಿ ಭಾರತೀಯ ವಿವಿಧ ಬುಡಕಟ್ಟು ಜನಾಂಗಗಳ ವಸ್ತ್ರಾಭರಣಗಳು- ಜಗತ್ತಲ್ಲೇ ವಿಖ್ಯಾತ. ಎಲ್ಲೆಲ್ಲೂ ಏಕತಾನತೆ ಯಿಲ್ಲ. ಆದರೆ, ವಿಶಿಷ್ಟತೆ ಇದೆ. ಪ್ರಾತಿನಿಧಿಕ ವಸ್ತ್ರವೀಚಿ ಎನ್ನಬಹುದು!

ಅಸ್ಸಾಮೀ ಮಹಿಳೆಯರ, ದಿಮಸ್ತಾ ಬುಡಕಟ್ಟು ಜನಾಂಗದವರ ಬಣ್ಣ ಬಣ್ಣದ ದಿರಿಸಿಗೆ “ರಿಗು’ ಎನ್ನುತ್ತಾರೆ. ಮೇಖಲಾ ಚಾದರ್‌ನಂತೆ ಸೊಂಟದಿಂದ ಪಾದದವರೆಗೆ ಉದ್ದವಾಗಿ ಧರಿಸುವ ಈ “ರಿಗು’ ವಸ್ತ್ರಕ್ಕೆ , ಹ್ಯಾಂಡ್‌ಲೂಮ್‌ ಬಗೆಯ, ಅಥವಾ ರೇಶಿಮೆಯ ಅಥವಾ ಹತ್ತಿಯ ಬಟ್ಟೆಯ ಮೇಲು ಹೊದಿಕೆ “ಬಾತೋರ್‌ಮಯಿ’ ಸಾಥ್‌ ನೀಡುತ್ತದೆ.

ಬೋಡೋ ಮಹಿಳೆ
ಅಸ್ಸಾಮಿನ ಬೋಡೋ ಬುಡಕಟ್ಟು ಜನಾಂಗದ ಮಹಿಳೆಯರ ಉಡುಗೆಯ ಹೆಸರು “ದೊಖೋನಾ’. ಎದೆಯ ಭಾಗದಿಂದ ಪಾದಗಳವರೆಗೆ ಉದ್ದವಾಗಿ ಆವರಿಸಿರುವ ಈ ವಸ್ತ್ರವು ಗಾಢ ಬಣ್ಣಗಳಿಂದ ಕೂಡಿದ್ದು , ವಿಶಿಷ್ಟ ಕುಸುರಿ, ಕಲಾತ್ಮಕತೆಯನ್ನು ಹೊಂದಿರುತ್ತದೆ. ಇದರ ಮೇಲೆ ಹೊದ್ದುಕೊಳ್ಳುವ ಚಾದರ್‌ನಂತಹ ವಸ್ತ್ರವೂ ಕಲಾತ್ಮಕವಾಗಿರುತ್ತದೆ. ಮದುಮಗಳಿಗೆ “ಅಗೊರ್‌’ ಎಂದು ಕರೆಯುವ ವಿಶೇಷ ಚಾದರ್‌ ಅಥವಾ ಮೇಲು ಹೊದಿಕೆ ತೊಡಿಸಲಾಗುತ್ತದೆ.

ರಭಾ ಜನಾಂಗದ ಮಹಿಳೆ
“ಕಾಮ್‌ಕೊನ್‌ಟೊಂಗ್‌’ ಎಂದು ಕರೆಯಲಾಗುವ ಪಟ್ಟಿಗಳನ್ನು ಹೊಂದಿರುವ ಸ್ಕರ್ಟ್‌ನಂತಹ ಅಸ್ಸಾಮೀ ಬಟ್ಟೆ ಧರಿಸುತ್ತಾರೆ. ಇದರ ಮೇಲೆ ಸಮುದ್ರ ಶಂಖಗಳ ಅಥವಾ ವಿವಿಧ ಮಣಿಗಳ ಮುತ್ತು ಹರಳುಗಳಿಂದ ಅಲಂಕೃತವಾದ ಬೆಲ್ಟ್ (ಸೊಂಟಪಟ್ಟಿ) ಧರಿಸುವುದು ವೈಶಿಷ್ಟé.

ಮಿಶಿಂಗ್‌ ಜನಾಂಗದ ಮಹಿಳೆ
ಮಿಶಿಂಗ್‌ ಜನಾಂಗದ ಅಸ್ಸಾಮಿ ಮಹಿಳೆಯರು ಚಾದರ್‌ನಂತಹ ದಿರಿಸವನ್ನೇ ಬಳಸುತ್ತಾರೆ. ಆದರೆ ಈ ಜನಾಂಗದ ಮಹಿಳೆಯರ ಬಟ್ಟೆಯು ಕಪ್ಪು ಬಣ್ಣದಿಂದ ಕೂಡಿರುವ ಮೇಖಲಾಚಾದರ್‌ ಆಗಿದ್ದು, ಇದಕ್ಕೆ “ಯಕನ್‌ ಏಜ್‌ಗಸರ್‌’ ಎಂದು ಕರೆಯಲಾಗುತ್ತದೆ.

ದಿಯೋರಿ ಜನಾಂಗದ ಅಸ್ಸಾಮೀ ಮಹಿಳೆಯರು ಸ್ಕರ್ಟ್‌ನಂತಹ ಉದ್ದದ ದಿರಿಸು ಧರಿಸುತ್ತಾರೆ. ಇದಕ್ಕೆ “ಉಜದೂಬಾ ಲಗೂನ್‌’ ಎಂದು ಕರೆಯುತ್ತಾರೆ. ಇದಕ್ಕೆ ಮೇಲ್‌ವಸ್ತ್ರ ಅಥವಾ ದಾವಣಿಯಂತೆ “ಜೋಖಾಚಿಬಾ’ ಎಂಬ ದಿರಿಸು ಧರಿಸಿ, ಹೆಗಲ ಮೇಲೆ “ರಿಹಾ’ ಎಂಬ ಪಾರಂಪರಿಕ ವಿನ್ಯಾಸದ ಶಾಲು ಹಾಕಿಕೊಳ್ಳುತ್ತಾರೆ. ಹೀಗೆ ಅಸ್ಸಾಂನ ವಿವಿಧ ಜನಾಂಗದ ಮಹಿಳೆಯರು ಧರಿಸುವ ದಿರಿಸಿನಲ್ಲಿ ಪ್ರಾದೇಶಿಕತೆ, ಜಾನಪದೀಯ ಮಹತ್ವದ ಜೊತೆಗೆ ಆಯಾ ಪ್ರದೇಶದ ವಾತಾವರಣ, ಹವಾಮಾನಕ್ಕೆ ಹೊಂದುವಂತಹ ಜೊತೆಗೆ ಸಾತ್ವಿಕ ಸೌಂದರ್ಯ ವರ್ಧಕದ ಪ್ರಭೆ ಕಾಣಸಿಗುತ್ತದೆ.

-ಅನುರಾಧಾ ಕಾಮತ್‌

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.