ಹೊಸವರ್ಷದಲ್ಲಿ ಹೊಸ ಸ್ಟೈಲ್‌


Team Udayavani, Jan 12, 2018, 2:55 PM IST

12-44.jpg

ಹೊಸ ವರ್ಷವನ್ನು ಹಳೆ ಬಟ್ಟೆಗಳಿಂದ ಸ್ವಾಗತಿಸುವಿರೇಕೆ? ಹೊಸ ಬಟ್ಟೆ ಧರಿಸಿ, ಹೊಸ ಸ್ಟೈಲ್‌ ಮೂಲಕವೇ ಈ 2018ಕ್ಕೆ ಹೆಜ್ಜೆ ಇಡಿ. ಅಷ್ಟಕ್ಕೂ ಈ ನ್ಯೂಇಯರ್‌ ವೇಳೆ ನಿಮ್ಮ ಕಪಾಟಿನಲ್ಲಿ ಇರಬೇಕಾದ ವಸ್ತುಗಳು ಯಾವುವು ಗೊತ್ತೇ?

ಹೊಸ ವರ್ಷ ಬಂದಿದೆ. ಹೊಸ ಹರುಷ ತರುತ್ತಿದೆ. ಹಾಗಿದ್ದಾಗ, ಈ ಜನ್ಮದಲ್ಲಿ ಮುಂದೆ ಎಂದೂ ಉಡಲು ಸಾಧ್ಯವಾಗದ ಹಳೇ ಫ್ಯಾಷನ್‌ನ ಉಡುಪುಗಳನ್ನು ಕಪಾಟಿನಲ್ಲಿ ಇನ್ನೂ ಯಾಕೆ ಇಟ್ಟುಕೊಂಡಿದ್ದೀರಾ? ಹಳೇ ಬಟ್ಟೆಗಳನ್ನು ದಾನ ಮಾಡಿ. ಹೊಸ ಬಟ್ಟೆಗಳನ್ನು ಸ್ವಾಗತಿಸಿ. ಇಲ್ಲವೇ ಹಳೇ ಬಟ್ಟೆಯನ್ನು ಎಕ್ಸ್‌ಚೇಂಜ್‌ ಮಾಡಿ, ಹೊಸ ಬಟ್ಟೆ ಕೊಳ್ಳಿ. ಹಾಗೆಂದ ಮಾತ್ರಕ್ಕೆ ವರ್ಷ ಮುಗಿಯುವಷ್ಟರಲ್ಲಿ ದುಡ್ಡನ್ನೆಲ್ಲಾ ಬಟ್ಟೆ ಖರೀದಿಗೆ ಖರ್ಚು ಮಾಡಿ ಕೈ ಖಾಲಿ ಮಾಡಿಕೊಳ್ಳಿ ಎಂದಲ್ಲ! ಹೊಸವರ್ಷಕ್ಕೆ ನಿಮ್ಮ ಕಪಾಟಿನಲ್ಲಿ ಇರಬೇಕಾದ ವಸ್ತುಗಳು ಯಾವುವು ಎಂಬುದರ ಪಟ್ಟಿ ಇಲ್ಲಿದೆ. ಹೊಸ ವರ್ಷವನ್ನು ಹೊಸ ಸ್ಟೈಲ್‌ನೊಂದಿಗೆ ಆರಂಭಿಸಿ.

ಹೊಸವರ್ಷದಲ್ಲಿ ಹೊಸಸ್ಟೈಲ್‌
ಬಿಸಿಲು, ಧೂಳು ಅಥವಾ ಚಳಿಯಿಂದ ಕಣ್ಣುಗಳನ್ನು ರಕ್ಷಿಸಲು ನಮ್ಮ ಮುಖಕ್ಕೆ ಒಪ್ಪುವ ಒಳ್ಳೆಯ ಆಕಾರ ಮತ್ತು ಗಾತ್ರದ ಕನ್ನಡಕ ಇಟ್ಟುಕೊಂಡರೆ ಉತ್ತಮ. ತಂಪು ಕನ್ನಡಕ ಕಪ್ಪು ಬಣ್ಣದ್ದೇ ಆಗಬೇಕೆಂದೇನೂ ಇಲ್ಲ. ಕಂದು, ನೀಲಿ, ಗುಲಾಬಿ, ಸ್ವರ್ಣ, ಹೀಗೆ ಬಗೆ ಬಗೆಯ ಆಯ್ಕೆಗಳಿವೆ. ಫ್ಲಿಪ್‌-ಪ್ಲಾಪ್ಸ್‌, ಸ್ಯಾಂಡಲ್ಸ್‌ , ಓಪನ್‌ ಶೂನಂಥ ಪಾದರಕ್ಷೆಗಳು ಇರಲಿ. ಇವು ಪಾಶ್ಚಾತ್ಯ ಮತ್ತು ಭಾರತೀಯ ಉಡುಗೆಗಳ ಜೊತೆ ಮ್ಯಾಚ್‌ ಆಗುತ್ತವೆ. ಪಾದರಕ್ಷೆಗಳು ನೋಡಲು ಮಾತ್ರವೇ ಅಂದವಿದ್ದು, ತೊಡಲು ಕಷ್ಟ ಎನಿಸಿದರೆ ಅಂಥವನ್ನು ತಿರಸ್ಕರಿಸಿ. ಏಕೆಂದರೆ, ಅಂಥ ಪಾದರಕ್ಷೆಗಳು ಪಾದಗಳಿಗೆ ಗಾಯವನ್ನು ಉಂಟುಮಾಡಬಲ್ಲವು. ಸ್ಟೈಲ್‌ ಜೊತೆ ಕಂಫ‌ರ್ಟ್‌ ಕೂಡ ಮುಖ್ಯ ಎಂಬುದು ನೆನಪಿದ್ದರೆ ಸಾಕು.

ಹೊಸ ವರ್ಷಕ್ಕೆ ಹೊಸ ಸ್ಟೈಲ್‌
ಇನ್ನು ಹೊಸ ವರ್ಷದಾರಂಭ ಪಾರ್ಟಿ, ಪಿಕ್‌ನಿಕ್‌, ಸಮಾರಂಭಗಳು, ಕ್ಯಾಶುವಲ್‌ ಔಟಿಂಗ್‌ ಎಲ್ಲವಕ್ಕೂ ಸೇರಿದಂತೆ ಒಂದು ದಿರಿಸನ್ನು ಮೀಸಲಿಡಿ. ಫ್ಲೋರಲ್‌ (ಹೂವಿನ ಮುದ್ರೆಯುಳ್ಳ) ಫ್ರಿಂಟ್‌ ಇರುವ ಅಥವಾ ಸಾಲಿಡ್‌ ಕಲರ್‌x (ಒಂದೇ ಬಣ್ಣದ) ದಿರಿಸು ಇಟ್ಟುಕೊಳ್ಳಿ. ಫ್ಲೋರಲ್‌, ಅನಿಮಲ್‌ ಪ್ರಿಂಟ್‌ ಮತ್ತು ಸಾಂಪ್ರದಾಯಿಕ ವಿನ್ಯಾಸದ, 3, 4 ಸ್ಕಾಫ್ìಗಳು ಬೋರಿಂಗ್‌ ಬಟ್ಟೆ ತೊಟ್ಟರೂ ನೀವು ಇಂಟೆರೆಸ್ಟಿಂಗ್‌ ಆಗಿ ಕಾಣುವಂತೆ ಮಾಡುತ್ತವೆ!

ಬಿಳಿ ಟಾಪ್‌ ನೀಲಿ ಪ್ಯಾಂಟ್‌
ಬಿಳಿ ಶರ್ಟ್‌ ಅಥವಾ ಟಾಪ್‌ಗೆ ನೀಲಿ ಬಣ್ಣದ ಪ್ಯಾಂಟ್‌ ಒಳ್ಳೆ ಕಾಂಬಿನೇಷನ್‌. ಆದ್ದರಿಂದ ಉತ್ತಮ ಫಿಟ್‌ ಮತ್ತು ಕಂಫ‌ರ್ಟ್‌ ಇರುವ ಜೀನ್ಸ್‌ ಪ್ಯಾಂಟ್‌ ಕೊಳ್ಳಬಹುದು. ಖಾದಿ ಕುರ್ತಾ, ಚಳಿಗಾಲ, ಬೇಸಿಗೆ, ಎಲ್ಲದರಲ್ಲೂ ಉಪಯುಕ್ತ. ಕುರ್ತಾವನ್ನು ಡೆನಿಮ್‌, ಲೆಗ್ಗಿಂಗ್‌Y, ಪಟಿಯಾಲ ಪ್ಯಾಂಟ್‌, ಪಲಾಝೋ ಅಥವಾ ಲಂಗದ ಮೇಲೂ ಧರಿಸಬಹುದು. ತುಂಬಾ ಬಿಗಿಯಾಗಿರದ, ಸಡಿಲ ಕುರ್ತಾ ತೊಟ್ಟರೆ, ಆರಾಮದಾಯಕವಾಗಿಯೂ ಇರುತ್ತದೆ. ಕಪ್ಪು ಬಣ್ಣದ ಪ್ಯಾಂಟ್‌ ಬಹುತೇಕ ಎಲ್ಲ ಟಾಪ್‌ಗ್ಳ ಜೊತೆ ಹೊಂದುತ್ತದೆ. ಆದ್ದರಿಂದ ಕಪ್ಪು ಬಣ್ಣದ ಲೆಗ್ಗಿಂಗ್ಸ್‌, ಹಾರೆಮ್‌ ಅಥವಾ ಚೂಡಿದಾರ್‌ ಪ್ಯಾಂಟ್‌ ಇಟ್ಟುಕೊಳ್ಳಿ. ಗಡಿಬಿಡಿಯಲ್ಲಿ ಹೊರಗಡೆ ಹೋಗುವ ಸಂದರ್ಭದಲ್ಲಿ ದಿರಿಸುಗಳನ್ನು ಮಿಕ್ಸ್‌ಮ್ಯಾಚ್‌ ಮಾಡಲು ಪುರುಸೊತ್ತು ಇಲ್ಲದಿರುವಾಗ, ಕೊನೆ ಕ್ಷಣದಲ್ಲಿ ಟೈಲರ್‌ ಅಂಗಡಿ ಹುಡುಕಿಕೊಂಡು ಹೋಗಲು ಆಗುವುದಿಲ್ಲ. ಅಂಥ ಸಮಯದಲ್ಲಿ ಇವಿಷ್ಟೂ ಉಪಯೋಗಕ್ಕೆ ಬರುತ್ತವೆ.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.