ಬೇಸಗೆಯ ಸಂಜೆಯಿದು ಬೇಕೆನಗೆ ನೀರ ಜೊತೆ


Team Udayavani, Feb 7, 2020, 5:00 AM IST

big-17

ನೀರು ದೇಹವನ್ನು ಕಾಪಾಡುವ ದಿವ್ಯ ಔಷಧ ಎಂದರೆ ತಪ್ಪಲ್ಲ. ಸ್ವತ್ಛವಾದ ನೀರನ್ನು ಮನಸ್ಸು ತೃಪ್ತಿಯಾಗುಷ್ಟು ಕುಡಿದರೆ ಉಂಟಾಗುವ ಆನಂದವೇ ಎಷ್ಟೋ ಕಾಯಿಲೆಗಳನ್ನು ವಾಸಿ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ನೀರಿನ ಲಭ್ಯತೆಯೇ ಒಂದು ಸವಾಲು. ಹಾಗಂತ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಬಿರುಬಿಸಿಲಿಗೆ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ಆದರೆ, ಎಲ್ಲರ ದೇಹಕ್ಕೂ ಇಂತಿಷ್ಟೇ ಪ್ರಮಾಣದ ನೀರಿನ ಅಗತ್ಯವಿದೆ ಎಂದು ಸಾರಾಸಗಟಾಗಿ ಹೇಳುವಂತಿಲ್ಲ. ಏಕೆಂದರೆ, ದೇಹದ ತೂಕಕ್ಕೆ ತಕ್ಕಂತೆ ನೀರಿನ ಅಗತ್ಯವೂ ಬದಲಾಗುತ್ತದೆ. ಆದರೆ, ಸುಮಾರಾಗಿ ಪ್ರೌಢ ವ್ಯಕ್ತಿಗೆ ಎರಡರಿಂದ ನಾಲ್ಕು ಲೀಟರ್‌ ನೀರಿನ ಅಗತ್ಯವಿದೆ. ಬಿಸಿಲಿನಲ್ಲಿ ಕೆಲಸ ಮಾಡುವವರು, ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದ ನೀರು ಕುಡಿಯುವುದು ಅಗತ್ಯ.

ಇನ್ನು ಪ್ರತೀ ದಿನ ವ್ಯಾಯಾಮ ಮಾಡುವವರಿಗೆ, ಜಿಮ್‌ಗೆ ಹೋಗುವ ಅಭ್ಯಾಸ ಇರುವವರಿಗೂ ಹೆಚ್ಚಿನ ಪ್ರಮಾಣದ ನೀರು ಬೇಕು. ಯಾಕೆಂದರೆ, ಸ್ನಾಯುಗಳು ಕ್ರಿಯಾಶೀಲವಾಗುವುದರಿಂದ ಸಾಕಷ್ಟು ದ್ರವಾಂಶ ಅಗತ್ಯ.  ಬಾಯಾರಿಕೆ ಅನಿಸಿದಾಗ ಮಾತ್ರ ನೀರು ಕುಡಿಯುವುದು ಅಷ್ಟೇನೂ ಒಳ್ಳೆಯ ಅಭ್ಯಾಸವಲ್ಲ. ದಿನದಲ್ಲಿ ನಿರ್ದಿಷ್ಟವಾಗಿ ಕೆಲವು ಬಾರಿ ನೀರು ಕುಡಿಯುವ ಅಭ್ಯಾಸವಿದ್ದರೆ ಒಳಿತು. ಉದಾಹರಣೆಗೆ ಬೆಳಿಗ್ಗೆ ಎದ್ದಾಗ, ತಿಂಡಿ ಅಥವಾ ಊಟ ಸೇವನೆಯ ಬಳಿಕ, ರಾತ್ರಿ ಮಲಗುವ ಮುನ್ನ ಮನಸ್ಸು ತೃಪ್ತಿಯಾಗುವಷ್ಟು ನೀರು ಕುಡಿಯುವುದು ಉತ್ತಮ ಹವ್ಯಾಸ.

ದೇಹಕ್ಕೆ ನೀರಿನ ಅಂಶ ಕಡಿಮೆ ಆದಾಗ ಕಣ್ಣಿನಲ್ಲಿ ನೀರಿನ ತೇವ ಕಡಿಮೆಯಾಗುವುದು, ತಲೆಸುತ್ತು ಬಂದಂತೆ ಅನಿಸುವುದು, ತುಟಿ ಒಣಗಿ, ನಾಲಿಗೆ ಒಣಗಿದಂತೆ ಅನಿಸಿದರೆ ನಿರ್ಜಲೀಕರಣ (ಡಿಹೈಡ್ರೇಷನ್‌) ಆಗಿದೆ ಎಂದರ್ಥ. ಆದ್ದರಿಂದ ಬಾಯಾರಿಕೆ ಅನಿಸುವ ಮುನ್ನವೇ ಆಗಾಗ ನೀರು ಕುಡಿಯುತ್ತ ಇರುವುದು ಅತೀ ಅಗತ್ಯ. ವಯಸ್ಸು ಹೆಚ್ಚಾಗುತ್ತಿದ್ದಂತೆಯೇ ದೇಹದಲ್ಲಿ “ದಾಹ’ವನ್ನು ಸೂಚಿಸುವ ವ್ಯವಸ್ಥೆಯು ತುಸು ದುರ್ಬಲವಾಗುತ್ತದೆ. ಆದ್ದರಿಂದ ಉತ್ತಮ ಅಭ್ಯಾಸ ಬಲವೇ ದೇಹವನ್ನು ಕಾಪಾಡುತ್ತದೆ.

ದೇಹವನ್ನು ಕಾಪಾಡಿಕೊಳ್ಳಲು ನೀರು ಸೇವಿಸುವುದು ಮಾತ್ರವಲ್ಲ, ನೀರಿನ ಅಂಶ ಜಾಸ್ತಿ ಇರುವ ಹಣ್ಣು, ಆಹಾರ ಸೇವನೆಯೂ ಉತ್ತಮ. ಉದಾಹರಣೆಗೆ, ಸೌತೆಕಾಯಿ, ಕಲ್ಲಂಗಡಿ ಹಣ್ಣುಗಳ ಸೇವನೆ ದೇಹಕ್ಕೆ ಹೆಚ್ಚಿನ ದ್ರವಾಂಶ ಪೂರೈಸುತ್ತವೆ. ಪನೀರ್‌, ಮಾಂಸಾಹಾರ, ಚೀಸ್‌ ಸೇವಿಸಿದಾಗ ಆಹಾರದ ಪಚನ ಕ್ರಿಯೆಗೆ ಹೆಚ್ಚಿನ ನೀರು ಬೇಕಾಗುತ್ತದೆ. ಗಿಡದಲ್ಲಿ ಬೆಳೆಯುವ ತರಕಾರಿಗಳು ಅಂದರೆ ಗೆಡ್ಡೆ ಗೆಣಸಿಗಿಂತಲೂ, ಬೆಂಡೆ, ಬದನೆ, ಸೋರೆಕಾಯಿ, ಸೌತೆಕಾಯಿ, ಪಡುವಲಕಾಯಿಯಂತಹ ತರಕಾರಿಗಳು ಸರಳವಾಗಿ ಬೇಗನೆ ಜೀರ್ಣವಾಗುತ್ತವೆ.

ಸತ್ಯಭಾಮಾ ಎನ್‌.

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.