ತುಳಸೀ ವನದೊಳು ಪದ್ಮಶ್ರೀ


Team Udayavani, Feb 21, 2020, 5:27 AM IST

chitra-13

ತುಳಸೀ ಗೌಡರ ಬದುಕಿನಲ್ಲಿ ತೀವ್ರ ನೋವಿನ ಹಾದಿ ಎದುರಾದಾಗ ಅವರಿಗೆ ನೆರಳಾದುದು ಹಸಿರು ಗಿಡಗಳು. ನಿಸ್ವಾರ್ಥವಾಗಿ ಹಸಿರು ಸಿರಿಯನ್ನು ಪ್ರೀತಿಸಿದ ಅವರು ನಿಜಕ್ಕೂ ವನಸುಮ. ಈ ವನಸುಮದ ಕಂಪನ್ನು ಆರಿಸಿಕೊಂಡು ಪ್ರಶಸ್ತಿ ಅವರ ಮನೆಬಾಗಿಲಿಗೆ ಬಂದಿದೆ. ಅವರ ಸ್ಫೂರ್ತಿದಾಯಕ ಬದುಕಿನತ್ತ ಒಂದು ನೋಟ…

ನವಿಲಿಗೆ ಹೇಗೆ ತನ್ನ ಬೆನ್ನಿನ ಹಿಂದಿನ ಬಣ್ಣ, ಬಣ್ಣದ ಗರಿ ಕಾಣಿಸುವುದಿಲ್ಲವೋ ಅದೇ ರೀತಿ ಈ ಅಜ್ಜಮ್ಮಂಗೂ ತಾನು ಮಾಡುತ್ತಿರುವ ಹಸಿರು ಸೇವೆ ಬಹಳ ದೊಡ್ಡದು ಎಂದು ಕಾಣಿಸುತ್ತಲೇ ಇರಲಿಲ್ಲ. ಮೊನ್ನೆ ಪದ್ಮಶ್ರೀ ಪ್ರಶಸ್ತಿ ಪಡೆದ ಅಂಕೋಲಾ ಹೊನ್ನಳ್ಳಿಯ ತುಳಸಿ ಗೌಡರು ಈವರೆಗೆ ನೆಟ್ಟ ಗಿಡಗಳ ಸಂಖ್ಯೆ ಎಷ್ಟು ಲಕ್ಷ ಎಂದು ಅವರಿಗೆ ಗೊತ್ತಿರಲಿಲ್ಲ. ತನ್ನ ಕಾಯಕ ಎಂಬಂತೆ ಅವರು ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಪ್ರಶಸ್ತಿ ಬಂದಾಗ ತಮ್ಮ ಬಗ್ಗೆ ತಾವೇ ಅಚ್ಚರಿ ಪಡುವಂತಾಯಿತು.

“”ನೆಟ್ಟ ಗಿಡಗಳ ಸಂಖ್ಯೆ ಎಷ್ಟು ಲಕ್ಷ ದಾಟಿದೆ ಎಂಬುದು ಮುಖ್ಯವಲ್ಲ. ನೆಟ್ಟ ಗಿಡಗಳ ಲಾಲನೆ, ಪೋಷಣೆಯ ಲಕ್ಷ್ಯ ಎಷ್ಟು ವಹಿಸಿದ್ದೇನೆ ಎನ್ನುವುದು ಮುಖ್ಯ” ಎಂದು ಅವರು ತಮ್ಮವರೊಡನೆ ಹೇಳುತ್ತಿರುತ್ತಾರೆ. ಈ ಮಾತು ಎಷ್ಟೊಂದು ಮುಖ್ಯ ಎನಿಸುತ್ತದೆ. ವಿಶ್ವ ಪರಿಸರ ದಿನಾಚರಣೆಯಂದು “ಕೋಟಿ ವೃಕ್ಷ ಆಂದೋಲನ’ ಎಂಬ ಸುದ್ದಿ ಜೋರಾಗಿ ಕೇಳುತ್ತೇವೆ. ಆದರೆ, ನಿಜಕ್ಕೂ ಕೋಟಿ ವೃಕ್ಷಗಳು ಬೆಳೆದವೆ? ಫ್ಯಾಷನ್‌ ಪರಿಸರವಾದಿಗಳಿಗೆ ತುಳಸಿ ಗೌಡರ ಈ ಮಾತು ಸಂದೇಶವೂ ಹೌದು, ಎಚ್ಚರಿಕೆಯೂ ಹೌದು.

ತುಳಸೀಗೌಡರು ಎರಡು ವರ್ಷದ ಪುಟಾಣಿ ಆಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಹೆಣ್ಣಿನ ಜವಾಬ್ದಾರಿ ಎಂದರೆ ಹಿಂದಿನ ಕಾಲದಲಿ ಕಷ್ಟವೆಂದೇ ನಂಬಿಕೆ ಅಲ್ಲವೆ. ಆದ್ದರಿಂದ ತುಳಸೀ ಅವರದ್ದು ಬಾಲ್ಯವಿವಾಹ ನಡೆಯಿತು. ಆದರೆ ಗಂಡ ಗೋವಿಂದ ಗೌಡರು ಬಹುಬೇಗನೇ ತೀರಿಕೊಂಡಾಗ ತುಳಸೀ ಮಗ ಸುಬ್ರಾಯ ಗೌಡನನ್ನು ಸಾಕುವ ಜವಾಬ್ದಾರಿಯನ್ನೂ ಹೊರಬೇಕಾಯಿತು. ಆಗ ತಮ್ಮ ಬದುಕಿನ ನೋವು, ವೇದನೆ ಕಳೆಯಲು ಸ್ನೇಹಸಂಕಲೆ ಆದದ್ದು ಕಾಡಿನ ಸಹವಾಸ. ತಾಯಿಯೊಂದಿಗೆ ಬಾಲ್ಯದಲ್ಲೇ ಕಾಡು ಹತ್ತಿ, ಬೆಟ್ಟ ಸುತ್ತಿದ ಅನುಭವ ಇದ್ದ ಕಾರಣ ಕಾಡಿನ ನಿಗೂಢ ಕತ್ತಲೆಯಲ್ಲಿ ಬೆಳಕು ಕಾಣಿಸಿತು, ಮತ್ತು ಆ ಬೆಳಕು ಒಂದು ನೆಮ್ಮದಿಯ ಹಾದಿಯನ್ನೇ ತೋರಿಸಿತು. ಪಶ್ಚಿಮಘಟ್ಟದ ಮಾಸ್ತಿಕಟ್ಟ ಅರಣ್ಯ ವಲಯದ ಅಗಸೂರು ಸಸ್ಯಪಾಲನಾ ಕ್ಷೇತ್ರದಲ್ಲಿ ಆಗಿನ ಅರಣ್ಯ ಸಂರಕ್ಷಣಾಧಿಕಾರಿ ಎಲ್ಲಪ್ಪ ರೆಡ್ಡಿಯವರ ಮೂಲಕ ಕೂಲಿ ಕೆಲಸ ಲಭಿಸಿತ್ತು. ಒಂದು ರೂಪಾಯಿ 25 ಪೈಸೆ ದಿನ ಕೂಲಿ ಸಂಬಳದಲ್ಲಿ ಬೀಜಗಳನ್ನು ಸಂಗ್ರಹ ಮಾಡಿ ಗಿಡ ಮಾಡುವ ಇವರ ಅಂದಿನ ಸೇವೆ ಯಾವ ರೀತಿ ಬೆಳೆದು ಬಂತು ಎಂದರೆ ಇಂದು ಅರಣ್ಯ ಅಧಿಕಾರಿಗಳು, ವಿಶ್ವವಿದ್ಯಾನಿಲಯದ ಡಾಕ್ಟರೇಟ್‌ ಪಡೆದವರು ಕೂಡ ಇವರಿಂದ ಮಾಹಿತಿ, ಅರಿವು, ಜ್ಞಾನ ಪಡೆಯುವಷ್ಟು ! ಗಿಡ ಬೆಳೆಸುವುದು ಅಂದರೆ ದೇವರು ನನಗೆ ನೀಡಿರುವ ವಿಶೇಷ ಜವಾಬ್ದಾರಿ ಎಂದು ಸಂಕಲ್ಪ ಮಾಡಿರುವ ತುಳಸಿಯವರ ಕಾರ್ಯತತ್ಪರತೆ, ಪ್ರಾಮಾಣಿಕತೆ, ಪ್ರಬುದ್ಧತೆ, ಕರ್ತವ್ಯ ಪರಾಯಣತೆಯಿಂದಾಗಿ ಇಂದು ಅರಣ್ಯ ವಿಶ್ವಕೋಶ ಆಗಿದ್ದಾರೆ.

ಯಾವ ಮರದ ಬೀಜ ಯಾವಾಗ ಎಲ್ಲಿ ಬೆಳೆಯಬೇಕು? ಯಾವ ಬೀಜ ಯಾವಾಗ ನಾಟಿಗೆ ಸೂಕ್ತ? ಯಾವ ಸಮಯದಲ್ಲಿ ಎಲ್ಲಿ ಬಿತ್ತಬೇಕು ಎಂಬುದನ್ನು ಕಲಿಯುತ್ತ ವರ್ಷಕ್ಕೆ 30 ಸಾವಿರಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಈ ಭೂಮಂಡಲದ ಹಸಿರು ಹೊದಿಕೆಯನ್ನು ವಿಸ್ತಾರಗೊಳಿಸುತ್ತ ಬರುತ್ತಿ¨ªಾರೆ. ಹೊನ್ನೆ, ತಾರಿ, ನಂದಿ ಮತ್ತಿ, ಕಿಂಡಲ, ಭರಣಿ, ಸೀಮೆ ಬಿದಿರು, ಗೇರು, ಮುರುಗಲು, ಕೋಕರಿ, ಸಾಗುವಾನಿ, ಬಿಲಕಂಬಿ, ಹೆದ್ದಿ, ತಾರೆ, ನೇರಳೆ… ಹೇಗೆ ಕೈಬೆರಳು ಮಡಚುತ್ತ ಮರಗಳ ಹೆಸರು ಹೇಳುವ ಇವರು 300ಕ್ಕೂ ಹೆಚ್ಚು ಅಡವಿ ಮರಗಳ ಮಾಹಿತಿ ಹೇಳುತ್ತಾ ಹೋಗುತ್ತಾರೆ. ಮರ, ಗಿಡಗಳಲ್ಲಿ ಮಕ್ಕಳ ಪ್ರೀತಿಯನ್ನು ಕಾಣುತ್ತಾ, ಮಕ್ಕಳಲ್ಲಿ ಮರಗಿಡಗಳ ಪ್ರೀತಿಯನ್ನು ಕಾಣುತ್ತಾ ಮುಗ್ಧರಾಗುತ್ತಾರೆ. ಮರ, ಗಿಡಗಳು ಮತ್ತು ಮಕ್ಕಳನ್ನು ನಾವು ಹೇಗೆ ಪೋಷಿಸುತ್ತೇವೋ ಅದೇ ರೀತಿ ಅವುಗಳು ಬೆಳೆಯುತ್ತವೆ ಎಂಬ ಇವರ ಪ್ರಾಯೋಗಿಕ ಮಾತು ಕಟುಸತ್ಯ. ಬಡತನವಾಗಲಿ, ಹಸಿವೆಯಾಗಲಿ, ಅವಮಾನವಾಗಲಿ ತುಳಸಿಯವರನ್ನು ಇದು ಕುಗ್ಗಿಸಲಿಲ್ಲ. ನೆಟ್ಟಂತಹ ಒಂದೊಂದು ಗಿಡವೂ ಮೆಟ್ಟಿಲೇರಿಸಿ ಪಟ್ಟಕ್ಕೆ ಕೂರಿಸಿ ಬೆಟ್ಟಕ್ಕೆ ಹೊದಿಕೆಯಾಗುತ್ತಿದ್ದಂತೆಯೇ ಇವರ ಸ್ವರ-ಕರಗಳು ಅಗೋಚರವಾಗಿ ಭೂಮಾತೆಯ ಕಕ್ಷೆಗೆ ರಕ್ಷೆಗಳಾದವು. ಮನೆಮಕ್ಕಳಂತೆಯೇ ತಾನು ನೆಟ್ಟ ಗಿಡಗಳು ಬೃಹತ್‌ ಮರಗಳಾಗಿ ಬೆಳೆದುನಿಂತ ತುಳಸೀವನದಲ್ಲಿ ಹಳಸಿಹೋದುದನ್ನು ಮರೆತು ಉಳಿಸಿಕೊಂಡದ್ದನ್ನು ಮೊರೆತು ತನ್ನ ಕಾಯವೇ ಮರಗಳ ಪಾಯವೆಂದು ನಿಸ್ವಾರ್ಥ ಸೇವೆ ಮಾಡುತ್ತ ಬಂದವರು. ಗಿಡನೆಟ್ಟು ಪಾಲನೆ, ಪೋಷಣೆಯ ಸಮಯದಲ್ಲಿ ಕೆಲವೊಮ್ಮೆ ಇವರಿಗೆ ಆಗಿರುವ ಮಾನಸಿಕ ಹಿಂಸೆಗಳ ಬಗ್ಗೆ ಇವರ ಮಗ ಸುಬ್ರಾಯ ಗೌಡರು ಸತ್ಯ ವಿಚಾರಗಳನ್ನು ಹೇಳಲು ಮರೆಯಲಿಲ್ಲ. ಯಾರಾದರೂ ಗಿಡಗಳಿಗೆ ನೋವು ಉಂಟುಮಾಡಿದ್ದು ಗೊತ್ತಾದರೆ ತತ್‌ಕ್ಷಣ ಅಲ್ಲಿಗೆ ಹೋಗಿ ಅಯ್ಯೋ, ಎಷ್ಟು ನೋವಾಯಿತು ಎಷ್ಟು ವೇದನೆ ಅನುಭವಿಸಿತೋ ಎಂದು ಗಿಡಗಳ ವೇದನೆಗೆ ಕಿವಿಯಾಗಿ ನೊಂದ, ಬೆಂದ ಗಿಡಗಳನ್ನು ಎತ್ತಿ ತಬ್ಬಿ ಬದುಕುವಂತೆ ಕಾರ್ಯನಿರ್ವಹಿಸುವ ಈ ತುಳಸೀ ವನದೇವತೆಯ ಹಸಿರು ಪ್ರೀತಿ ಆಕಾಶದಷ್ಟು ಎತ್ತರ.

ಗಿಡ, ಮರಗಳೊಂದಿಗೆ ಸದಾ ಮಾತಾಡುವ, ಅವುಗಳ ರೋದನ, ವೇದನೆಗೆ ಸ್ಪಂದಿಸುವ ಇವರು ಬಡತನದಲ್ಲಿ ಇದ್ದರೂ ತಾನು ನೆಟ್ಟ ಲಕ್ಷಾಂತರ ಗಿಡ, ಮರಗಳ ನೆಮ್ಮದಿಯನ್ನು ಕಾಣುತ್ತಾ ಹಸಿರು-ಹಸನಿನ ಸಿರಿತನದ ಚೌಕಟ್ಟು ಕಟ್ಟಿಕೊಂಡಿದ್ದಾರೆ. ನಿರೀಕ್ಷೆಯೇ ಮಾಡಿರದ ಪದ್ಮಶ್ರೀ ಪ್ರಶಸ್ತಿ ಬಂದಿರುವುದರ ಬಗ್ಗೆ ಇವರಲ್ಲಿ ಕೇಳಿದಾಗ “ಏನೋ ಒಂದಿಷ್ಟು ಮಾಡಿದ್ದೇನೆ. ಇನ್ನೂ ಒಂದಷ್ಟು ಮಾಡಲು ಇದೆ, ಪ್ರಕೃತಿ ಸೇವೆಗೆ ಅಂತ್ಯವಿಲ್ಲ ಅದು ನಿರಂತರ. ಪದ್ಮಶ್ರೀ ಪ್ರಶಸ್ತಿಯ ಸಂಭ್ರಮಕ್ಕಿಂತ ನಾಡಿನ ಎಲ್ಲರೂ ಸ್ವಇಚ್ಚೆಯಿಂದ ಯಾರ ಒತ್ತಾಯಕ್ಕೂ ಕಾಯದೇ, ನಮ್ಮ ಭವಿಷ್ಯದ ಭದ್ರತೆಯ ಉದ್ದೇಶ ಇಟ್ಟುಕೊಂಡು ಗಿಡನೆಟ್ಟು ಪೋಷಿಸಿದರೆ ಅದಕ್ಕಿಂತ ದೊಡ್ಡ ಸಂಭ್ರಮ ಬೇರೆ ಇಲ್ಲ’ ಎನ್ನುತ್ತಾರೆ.

ದಿನೇಶ ಹೊಳ್ಳ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.