ಪಾಲಕ್‌ ಸ್ಪೆಷಲ್‌


Team Udayavani, Jan 25, 2019, 12:30 AM IST

w-18.jpg

ಪಾಲಕ್‌ ಸೊಪ್ಪನ್ನು ನಮ್ಮ ಆಹಾರದಲ್ಲಿ  ಬಳಸುವುದರಿಂದ ಕ್ಯಾಲ್ಸಿಯಂನ ಕೊರತೆ ನಿವಾರಣೆ ಆಗುವುದು. ನಮ್ಮ ದೇಹದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಉತ್ಪನ್ನವಾಗುತ್ತದೆ. ರಕ್ತಹೀನತೆಯಿಂದ ಬಾಧೆ ಪಡುವವರಿಗೆ ಈ ಸೊಪ್ಪಿನ ಸೇವನೆಯಿಂದ ಹೆಚ್ಚಿನ ಪ್ರಯೋಜನವಾಗುತ್ತದೆ.

ಪಾಲಕ್‌ ಮೊಸರು ಬಜ್ಜಿ 
ಬೇಕಾಗುವ ಸಾಮಗ್ರಿ:
1 ಕಪ್‌ ಸಣ್ಣಗೆ ಹೆಚ್ಚಿ ಉಗಿಯಲ್ಲಿ ಬೇಯಿಸಿದ ಪಾಲಕ್‌ ಸೊಪ್ಪು , ಒಂದೂವರೆ ಕಪ್‌ ಮೊಸರು, 1/2 ಕಪ್‌ ಬೇಯಿಸಿದ ಸಿಹಿ ಜೋಳ, ರುಚಿಗೆ ತಕ್ಕಷ್ಟು ಉಪ್ಪು , 1/2 ಚಮಚ ಕೆಂಪುಮೆಣಸಿನ ಪುಡಿ.

ತಯಾರಿಸುವ ವಿಧಾನ: ಮೊಸರಿಗೆ ಉಗಿಯಲ್ಲಿ ಬೇಯಿಸಿದ ಪಾಲಕ್‌ ಸೊಪ್ಪಿನ ಚೂರು, ಉಪ್ಪು, ಬೇಯಿಸಿದ ಸಿಹಿ ಜೋಳ, ಕೆಂಪುಮೆಣಸಿನ ಪುಡಿ ಎಲ್ಲ ಸೇರಿಸಿ ಚೆನ್ನಾಗಿ ಕಲಸಿ. ಈಗ ಪೌಷ್ಟಿಕ ಮೊಸರು ಬಜ್ಜಿ , ಅನ್ನ-ರಾಗಿಮುದ್ದೆಯೊಂದಿಗೆ ತಿನ್ನಲು ಸಿದ್ಧ.

ಪಾಲಕ್‌ ತಾಲಿಪಟ್ಟು 
ಬೇಕಾಗುವ ಸಾಮಗ್ರಿ :
1 ಕಪ್‌ ಗೋಧಿಹಿಟ್ಟು , 1/2 ಕಪ್‌ ಕಡಲೆಹಿಟ್ಟು , 1 ಕಟ್ಟು ಪಾಲಕ್‌ ಸೊಪ್ಪು , 1/4 ಕಪ್‌ ಕೊತ್ತಂಬರಿ ಸೊಪ್ಪು, 1/4 ಚಮಚ ಜೀರಿಗೆ, 1/2 ಚಮಚ ಕೆಂಪುಮೆಣಸು ಪುಡಿ, 1/2 ಚಮಚ ರುಬ್ಬಿದ ಹಸಿಮೆಣಸು ಬೆಳ್ಳುಳ್ಳಿ ಪೇಸ್ಟ್‌ , 1/4 ಕಪ್‌ ನೀರುಳ್ಳಿ ಚೂರು, 3-4 ಚಮಚ ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು .  

ತಯಾರಿಸುವ ವಿಧಾನ: ಸ್ವಚ್ಛಗೊಳಿಸಿ ಸಣ್ಣಗೆ ತುಂಡು ಮಾಡಿದ ಪಾಲಕ್‌ ಸೊಪ್ಪು , ಗೋಧಿಹಿಟ್ಟು-ಕಡಲೆಹಿಟ್ಟು , ಕೊತ್ತಂಬರಿಸೊಪ್ಪಿನ ಚೂರು, ನೀರುಳ್ಳಿ ಚೂರು, ಜೀರಿಗೆ, ಹಸಿಮೆಣಸು-ಬೆಳ್ಳುಳ್ಳಿ ಪೇಸ್ಟ್‌, ಉಪ್ಪು , ಸ್ವಲ್ಪ ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಎಣ್ಣೆ ಪಸೆ ಮಾಡಿದ ಬಾಳೆಲೆಯಲ್ಲಿ ರೊಟ್ಟಿ ತಟ್ಟಿ , ತವಾ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ರೊಟ್ಟಿ ಎರಡೂ ಬದಿ ಕೆಂಪಗೆ ಬೇಯಿಸಿ ತೆಗೆಯಿರಿ. ಈಗ ರೊಟ್ಟಿಯನ್ನು ಚಟ್ನಿಯ ಜೊತೆ ಸವಿಯಿರಿ.

ಪಾಲಕ್‌ ವಡೆ 
ಬೇಕಾಗುವ ಸಾಮಗ್ರಿ:
1 ಕಪ್‌ ಕಡಲೆಬೇಳೆ, 2-3 ಹಸಿಮೆಣಸು, ಸಣ್ಣಗೆ ತುಂಡು ಮಾಡಿದ 2 ಕಪ್‌ ಪಾಲಕ್‌ ಸೊಪ್ಪು , ಸಣ್ಣಗೆ ತುಂಡು ಮಾಡಿದ 1/4 ಕಪ್‌ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು , 1/2 ಚಮಚ ಅಮೂcರ್‌ ಪುಡಿ ಯಾ ನಿಂಬೆರಸ, ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಕಡಲೆಬೇಳೆಯನ್ನು 2 ಗಂಟೆ ನೆನೆಸಿ. ನಂತರ ತೊಳೆದು ಗಟ್ಟಿಗೆ ತರಿ ತರಿಯಾಗಿ ರುಬ್ಬಿ  ಪಾತ್ರೆಗೆ ಹಾಕಿ. ನಂತರ ಪಾಲಕ್‌ ಸೊಪ್ಪಿನ ಚೂರು, ಹಸಿಮೆಣಸು ಚೂರು, ಉಪ್ಪು , ಈರುಳ್ಳಿ ಚೂರು, ಅಮೂcರ್‌ ಪುಡಿ ಸೇರಿಸಿ ಗಟ್ಟಿಗೆ ಬೆರೆಸಿ. ನಂತರ ಸಣ್ಣ ಸಣ್ಣ ಉಂಡೆ ಮಾಡಿ ವಡೆ ತಟ್ಟಿ ಕಾದ ಎಣ್ಣೆಗೆ ಹಾಕಿ ಕೆಂಪಗೆ ಕರಿದು ತೆಗೆಯಿರಿ. ಈಗ ಸ್ವಾದಿಷ್ಟ ವಡೆ ಸಂಜೆಯ ಕಾಫಿಯೊಂದಿಗೆ ಸವಿಯಲು ಚೆನ್ನ.

ಪಾಲಕ್‌ ದಾಲ್‌ 
ಬೇಕಾಗುವ ಸಾಮಗ್ರಿ:
1 ಕಟ್ಟು ಪಾಲಕ್‌ ಸೊಪ್ಪು , 1/2 ಕಪ್‌ ತೊಗರಿಬೇಳೆ, 3-4 ಒಣಮೆಣಸು, 1 ಚಮಚ ಕೊತ್ತಂಬರಿ, 1/2 ಚಮಚ ಜೀರಿಗೆ, ಚಿಟಿಕೆ ಅರಸಿನ, 2 ಚಮಚ ಹುಳಿರಸ, ಉಪ್ಪು ರುಚಿಗೆ ತಕ್ಕಷ್ಟು , ಚಿಟಿಕೆ ಇಂಗು, 1 ಚಮಚ ಎಣ್ಣೆ .

ತಯಾರಿಸುವ ವಿಧಾನ: ತೊಗರಿಬೇಳೆಯನ್ನು ಸ್ವಲ್ಪ ನೀರು ಸೇರಿಸಿ ಬೇಯಿಸಿ. ಪಾಲಕ್‌ ಸೊಪ್ಪಿನ ಸ್ವಲ್ಪ ಭಾಗವನ್ನು ಬೇಯಿಸಿಡಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದಾಗ ಕೊತ್ತಂಬರಿ, ಜೀರಿಗೆ, ಕೆಂಪುಮೆಣಸು ಹಾಕಿ ಹುರಿದು ಬೇಯಿಸಿದ ಪಾಲಕ್‌ ಸೊಪ್ಪು ಸೇರಿಸಿ ರುಬ್ಬಿ. ನಂತರ ಬೇಯಿಸಿದ ತೊಗರಿಬೇಳೆ, ರುಬ್ಬಿದ ಮಿಶ್ರಣ, ತುಂಡು ಮಾಡಿದ ಪಾಲಕ್‌  ಹಸಿ ಸೊಪ್ಪು ಸೇರಿಸಿ ಬೇಯಿಸಿ. ನಂತರ ಉಪ್ಪು , ಹುಳಿರಸ, ಅರಸಿನ ಪುಡಿ ಸೇರಿಸಿ ಕುದಿಸಿ. ನಂತರ ಎಣ್ಣೆಯಲ್ಲಿ ಇಂಗು, ಸಣ್ಣ ತುಂಡು ಕೆಂಪು ಮೆಣಸು ಹಾಕಿ ಒಗ್ಗರಣೆ ಕೊಡಿ. ಈಗ ಪೌಷ್ಟಿಕ ದಾಲ್‌ ಅನ್ನ, ಚಪಾತಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.

ಪಾಲಕ್‌ ಕಟ್ಲೆಟ್‌ 
ಬೇಕಾಗುವ ಸಾಮಗ್ರಿ:
1 ಕಪ್‌ ಪಾಲಕ್‌ ಸೊಪ್ಪು , 2 ಹಸಿಮೆಣಸು, ಬೆಂದ ಆಲೂ 2, 1/2 ಚಮಚ ಜೀರಿಗೆ ಪುಡಿ, 1/2 ಚಮಚ ಖಾರದ ಪುಡಿ, 1/4 ಕಪ್‌ ಕೊತ್ತಂಬರಿ ಸೊಪ್ಪು , 3 ಚಮಚ ಬ್ರೆಡ್‌ ಪುಡಿ, ಉಪ್ಪು ರುಚಿಗೆ ತಕ್ಕಷ್ಟು , 4 ಚಮಚ ಎಣ್ಣೆ.

ತಯಾರಿಸುವ ವಿಧಾನ: ಪಾಲಕ್‌ ಸೊಪ್ಪು , ಕೊತ್ತಂಬರಿ ಸೊಪ್ಪು ಚೆನ್ನಾಗಿ ತೊಳೆದು ಸಣ್ಣಗೆ ತುಂಡು ಮಾಡಿ. ನಂತರ ಹಸಿಮೆಣಸು ಚೂರು, ಬೇಯಿಸಿ ಮಸೆದ ಆಲೂ, ಉಪ್ಪು , ಜೀರಿಗೆ ಪುಡಿ, ಖಾರದ ಪುಡಿ, ಬ್ರೆಡ್‌ ಪುಡಿ ಹಾಕಿ ಸರಿಯಾಗಿ ಕಲಸಿ. ನಂತರ ಉಂಡೆ ಮಾಡಿ ಕಟ್ಲೆàಟು ಆಕಾರ ಕೊಟ್ಟು ತವಾದಲ್ಲಿ ಎಣ್ಣೆ ಹಾಕಿ ಎರಡೂ ಬದಿ ಕೆಂಪಗೆ ಬೇಯಿಸಿ ತೆಗೆಯಿರಿ. ಈಗ ರುಚಿಯಾದ ಕಟ್ಲೆàಟು ಸವಿಯಲು ಸಿದ್ಧ.

ಸರಸ್ವತಿ ಎಸ್‌. ಭಟ್‌

ಟಾಪ್ ನ್ಯೂಸ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.