ಬೀಜಗಳಿಂದ ಖಾದ್ಯ ವೈವಿಧ್ಯ


Team Udayavani, Apr 19, 2019, 6:00 AM IST

17

ಕಾಂಡ, ಬೇರು, ತೊಗಟೆ, ಹೂ, ಕಾಯಿ, ಹಣ್ಣು , ಎಲೆ, ಸಿಪ್ಪೆ ಎಲ್ಲವನ್ನೂ ಬಳಸಿ ಅಡುಗೆ ಮಾಡುವುದು ನಮ್ಮ ಭಾರತೀಯ ಅಡುಗೆ ಪರಂಪರೆಯ ವಿಶೇಷತೆ. ಊಹೆಗೂ ನಿಲುಕದ ವೈವಿಧ್ಯತೆಯನ್ನು ಇಂದಿಗೂ ಕಾಣಬಹುದಾಗಿದೆ. ಇಲ್ಲಿ ಬೀಜಗಳಿಂದ ಕೆಲವು ಅಡುಗೆ ತಯಾರಿ ಬಗ್ಗೆ ತಿಳಿಸಲಾಗಿದೆ.

ಹಲಸಿನ ಬೀಜದ ಚಟ್ನಿ
ಬೇಕಾಗುವ ಸಾಮಗ್ರಿ: ಹಲಸಿನ ಬೀಜ- 1 ಕಪ್‌, ಒಣಮೆಣಸು 5, ಹುಳಿ, ಉಪ್ಪು , ಜೀರಿಗೆ 1 ಚಮಚ, ಮೆಂತೆ 1/2 ಚಮಚ, ಒಗ್ಗರಣೆಗೆ ಬೆಳ್ಳುಳ್ಳಿ , ಸಾಸಿವೆ, ಮೆಣಸು, ಎಣ್ಣೆ, ಕರಿಬೇವು.
ತಯಾರಿಸುವ ವಿಧಾನ: ಹಲಸಿನ ಬೀಜದ ಸಿಪ್ಪೆ ತೆಗೆದು ಒಣ ಮೆಣಸು, ಉಪ್ಪು , ಹುಳಿ ಹಾಕಿ ಬೇಯಿಸಿ (ಕುಕ್ಕರಲ್ಲೂ ನೀರು ಹಾಕಿ ಬೇಯಿಸಬಹುದು). ಮೆಂತೆ, ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದು ಬೇಯಿಸಿದ ನೀರಿನೊಂದಿಗೆ ತರಿ ತರಿಯಾಗಿ ರುಬ್ಬಿ. ಕೊನೆ ಹಂತದಲ್ಲಿ ಬೇಯಿಸಿದ ಬೀಜ ಸೇರಿಸಿ ರುಬ್ಬಿ ಬೆಳ್ಳುಳ್ಳಿ ಹಾಗೂ ಇಂಗಿನಿಂದ ಕರಿಬೇವು ಹಾಕಿ ಒಗ್ಗರಣೆ ಕೊಡಿ. ತುಪ್ಪ , ಅನ್ನದೊಂದಿಗೆ ಕಲಸಲು, ತಿಂಡಿಯೊಡನೆಯೂ ಸವಿಯಬಹುದು.

ಹಲಸಿನ ಬೀಜದ ಸಿಹಿಉಂಡೆ
ಬೇಕಾಗುವ ಸಾಮಗ್ರಿ: ಹಲಸಿನ ಬೀಜ- 2 ಕಪ್‌, 1/2 ಚಮಚ ಉಪ್ಪು , 2 ಕಪ್‌ ಬೆಲ್ಲ, ಒಂದು ಕಪ್‌ ತೆಂಗಿನ ತುರಿ.

ತಯಾರಿಸುವ ವಿಧಾನ: ಹಲಸಿನ ಬೀಜವನ್ನು ನೀರು ಹಾಕಿ ಚೆನ್ನಾಗಿ ಬೇಯಿಸಿ. ಅನಂತರ ನೀರು ಸೋಸಿ ಬೀಜ, ತೆಂಗಿನತುರಿ, ಉಪ್ಪು , ಬೆಲ್ಲ ಹಾಕಿ ನುಣ್ಣಗೆ ರುಬ್ಬಿ. ರುಬ್ಬುವಾಗ ಹಲಸಿನ ಬೀಜ ಬಿಸಿಯಾಗಿದ್ದರೆ ಬೇಗ ನುಣ್ಣಗಾಗುವುದು. ರುಬ್ಬಿದ ಹಿಟ್ಟನ್ನು ಉಂಡೆ ಮಾಡಿ ಹಾಗೇ ತಿನ್ನಬಹುದು. ವಡೆಯಂತೆ ತಟ್ಟಿ (ಇದಕ್ಕೆ ತೆಂಗಿನ ತುರಿ ಸೇರಿಸುವುದು ಬೇಡ). ನೀರುದೋಸೆ ಹಿಟ್ಟಲ್ಲಿ ಮುಳುಗಿಸಿ ಕಾವಲಿಗೆಯಲ್ಲಿ ಹಾಕಿ ಎರಡೂ ಬದಿ ಕೆಂಬಣ್ಣ ಬರುವ ತನಕ ಬೇಯಿಸಿದರೆ ತುಪ್ಪದೊಂದಿಗೆ ರುಚಿಯಾಗಿ ಸವಿಯಬಹುದು. ಮಳೆಗಾಲದಲ್ಲಿ ತಿನ್ನಲು ಹೇಳಿಮಾಡಿಸಿದ ತಿಂಡಿ. ಹಲಸಿನ ಬೀಜದ ಕೆಂಪು ಸಿಪ್ಪೆಯನ್ನು ಬಟ್ಟೆ ಒಗೆಯುವ ದೊರಗು ಜಾಗದಲ್ಲಿ ತಿಕ್ಕಿ ಬಿಳಿಮಾಡಿ ಬೇಯಿಸಿದರೆ ಇನ್ನೂ ರುಚಿ ಜಾಸ್ತಿ.

ಹಾಗಲ ಬೀಜದ ಚಟ್ನಿಪುಡಿ
ಬೇಕಾಗುವ ಸಾಮಗ್ರಿ: ನಾಲ್ಕು ಚಮಚ ಒಣಗಿಸಿದ ಹಾಗಲ ಬೀಜ, ಕೆಂಪುಮೆಣಸು 6, 1/2 ಕಪ್‌ ಕಡ್ಲೆಬೇಳೆ, 1/2 ಕಪ್‌ ಉದ್ದಿನಬೇಳೆ, 1/2 ಕಪ್‌ ಒಣ ಕೊಬ್ಬರಿ ಪುಡಿ, 1 ಹಿಡಿ ಕರಿಬೇವು, ಬೆಳ್ಳುಳ್ಳಿ ಬೀಜ 10ರಿಂದ 15 ಎಸಳು, ಉಪ್ಪು , ಹುಳಿ, ಬೆಲ್ಲ, ಎಣ್ಣೆ.

ತಯಾರಿಸುವ ವಿಧಾನ: ಹಾಗಲ ಬೀಜ ಹೊರತುಪಡಿಸಿ, ಎಲ್ಲವನ್ನೂ ಎಣ್ಣೆ ಹಾಕಿ ಹುರಿಯಿರಿ. ಹುರಿದ ಎಲ್ಲಾ ಸಾಮಾನು ಸೇರಿಸಿ ಹಾಗಲಬೀಜ, ಉಪ್ಪು , ಹುಳಿ, ಬೆಲ್ಲದೊಂದಿಗೆ ಪುಡಿಮಾಡಿ ಸವಿಯಬಹುದು. ಮಧುಮೇಹಿಗಳಿಗೆ ಹೇಳಿಮಾಡಿಸಿದ ವ್ಯಂಜನ.

ಕಾಟುಮಾವಿನ ಗೊರಟಿನ ತಂಬುಳಿ
ಬೇಕಾಗುವ ಸಾಮಗ್ರಿ: ಕಾಟುಮಾವಿನ ಗೊರಟು 1, ತೆಂಗಿನ ತುರಿ- 1 ಕಪ್‌, ಜೀರಿಗೆ- 1 ಚಮಚ, ಉಪ್ಪು , ಮಜ್ಜಿಗೆ- 1 ಕಪ್‌, ಒಗ್ಗರಣೆಗೆ ಸಾಸಿವೆ, ಕರಿಬೇವು, ಒಣಮೆಣಸು, ಎಣ್ಣೆ.

ತಯಾರಿಸುವ ವಿಧಾನ: ಮಾವಿನ ಗೊರಟನ್ನು ಸುಟ್ಟು ಬೊಂಡು ತೆಗೆದು, ತೆಂಗಿನತುರಿ, ಜೀರಿಗೆ, ಉಪ್ಪಿನೊಂದಿಗೆ ನುಣ್ಣಗೆ ರುಬ್ಬಿ ಮಜ್ಜಿಗೆ ಸೇರಿಸಿ ಒಗ್ಗರಣೆ ಕೊಟ್ಟರೆ ತುಂಬುಳಿ ರೆಡಿ. ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿ ಗೊರಟೂ ಆಗುತ್ತದೆ.

ಸೌತೆಬೀಜದ ಸಾರು
ಬೇಕಾಗುವ ಸಾಮಗ್ರಿ: ಸೌತೆಬೀಜ- 1 ಕಪ್‌, ಮಜ್ಜಿಗೆ- 1 ಕಪ್‌, ಜೀರಿಗೆ- 1 ಚಮಚ, ತುಪ್ಪ- 2 ಚಮಚ, ಕರಿಬೇವು, ಕರಿಮೆಣಸು- 4.

ತಯಾರಿಸುವ ವಿಧಾನ: ಸೌತೆ ಬೀಜವನ್ನು ನುಣ್ಣಗೆ ರುಬ್ಬಿ ಸೋಸಿ ಹಾಲು ತೆಗೆಯಿರಿ. ಬೀಜದ ಹಾಲಿಗೆ ಮಜ್ಜಿಗೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಂದು ಕುದಿ ಕುದಿಸಿ. ಕುದಿಯುತ್ತಿರುವಾಗ ಕರಿಮೆಣಸು ಜಜ್ಜಿ ಸೇರಿಸಿ. ಇಳಿಸಿದ ನಂತರ ತುಪ್ಪದಲ್ಲಿ ಕರಿಬೇವು, ಜೀರಿಗೆ ಒಗ್ಗರಣೆ ಕೊಟ್ಟರೆ ತಂಬುಳಿ ರೆಡಿ. ಸೌತೆಕಾಯಿ ಬೀಜ ಒಣಗಿಸಿಟ್ಟರೆ ಬೇಕೆಂದಾಗ ದಿಢೀರ್‌ ಆಗಿ ತಯಾರಿಸಬಹುದು.

ಪಿ. ಪಾರ್ವತಿ ಐ. ಭಟ್‌

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.