ಮಳೆ ಸುರಿವ ಸಮಯದಲ್ಲಿ ಚರ್ಮದ ಆರೈಕೆ


Team Udayavani, Jun 22, 2018, 6:30 AM IST

ric-face-pack-1.jpg

ಪ್ರಕೃತಿಗೆ “ನವನವೋನ್ಮೆಷಶಾಲಿನಿ’ ಎಂದು ಕರೆಯುತ್ತಾರೆ. ಭುವಿಯ ಚಲನೆಯಿಂದಾಗಿ ವಿವಿಧ ಋತುಗಳು ಉಂಟಾಗುತ್ತವೆ. ವರ್ಷಋತು ಧಾರೆ ಧಾರೆ ಮಳೆಹರಿಸಿ ಇಳೆಯನ್ನು ಸಂತೃಪ್ತಗೊಳಿಸುತ್ತದೆ.

ಮಳೆಹನಿ ! ಮಳೆಹನಿ !
ಜಾನ್‌ ಅಪೆಡೈಕ್‌ ಸುಂದರವಾಗಿ ಹೇಳುತ್ತಾನೆ-
“ಮಳೆಯೊಂದು ವರದಾನ. ಮಳೆಯೆಂದರೆ ಆಗಸವೇ ಧರೆಗಿಳಿದು ಬಂದಂತೆ ಅದ್ಭುತ. ಮಳೆಯಿಲ್ಲದಿದ್ದರೆ ಜೀವವೂ ಇಲ್ಲ, ಜೀವನವೂ ಇಲ್ಲ”ಮಳೆಯಿಂದಲೇ ಇಳೆ, ಬೆಳೆ, ಜೀವಸಂಕುಲಕ್ಕೆ ಕಳೆ.

ಮಳೆಯ ತುಂತುರು ಹನಿ, ಮೊದಲ ಮಳೆಯ ವಿಶಿಷ್ಟ ಮಣ್ಣಿನ ವಾಸನೆ, ಆಗಸದಲ್ಲಿ ಕಪ್ಪು-ಬಿಳಿ ಮೋಡಗಳ ದೃಶ್ಯಕಾವ್ಯ. ಟಿಸಿಲೊಡೆದು ಬೆಳಕಿನ ಕುಡಿ ಕಿಡಿಯಾಗಿ, ಮಿಂಚಾಗಿ ಫ‌ಳಫ‌ಳಿಸಿದರೆ ಅದರ ಜೊತೆಗೆ ಬರುವ ಗುಡುಗಿನ ನಾದಗರ್ಜನೆ. ಕಾಮನಬಿಲ್ಲಿನ ಸೌಂದರ್ಯದ ಕಣ್‌ತಂಪು. 

ಓಹ್‌ ಮಳೆಗಾಲ ಎಷ್ಟು ಅದ್ಭುತ.ಮಳೆಗಾಲಕ್ಕೆ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದರೊಂದಿಗೆ, ಮಳೆಗಾಲದ ವಿಶಿಷ್ಟ ಆರೈಕೆ, ಆರೋಗ್ಯ, ಚರ್ಮದ ಸೌಂದರ್ಯ, ಕೂದಲ ಸೌಂದರ್ಯದ ಜೊತೆಗೆ ಅಡುಗೆ ಮನೆಯ ಆರೈಕೆ, ತೋಟದ ಆರೈಕೆ, ಮಕ್ಕಳ ಆರೈಕೆ ಇತ್ಯಾದಿಗಳನ್ನು ಅಳವಡಿಸಿಕೊಂಡರೆ ಈ ಮಳೆಗಾಲವನ್ನು ಖುಷಿಯಿಂದ ಆಸ್ವಾದಿಸುತ್ತ ಆರೋಗ್ಯಪೂರ್ಣವಾಗಿ ಕಳೆಯಲು ಸುಲಭ ಸಾಧ್ಯ.ಆ ನಿಟ್ಟಿನಲ್ಲಿ ಚಿಂತನೆಯ ಹನಿಗಳು ಇಲ್ಲಿವೆ. 

ಬೇಸಿಗೆಯುದ್ದಕ್ಕೂ ಬೆವರು, ಶಾಖ, ಬಿಸಿಲಿನ ತೀವ್ರತೆಯಿಂದ ಬಸವಳಿದ, ಬೆವರಿಳಿದ ಚರ್ಮಕ್ಕೆ ಮಳೆಗಾಲದ ತಂಪು ಹಾಗೂ ಶೀತಲತೆ ಆಪ್ಯಾಯಮಾನ. ಆದರೆ, ಮಳೆಗಾಲದಲ್ಲಿ ಇರುವ ಅಧಿಕ ತೇವಾಂಶದಿಂದಾಗಿ ಚರ್ಮಕ್ಕೆ ವಿಶಿಷ್ಟ ಆರೈಕೆ ಅವಶ್ಯ.

ಮಹಿಳೆಯರು ವಿವಿಧ “ಬ್ಲೀಚ್‌’ ಬಳಸುವುದು ಸಾಮಾನ್ಯ. ಆದರೆ, ಮಳೆಗಾಲದಲ್ಲಿ “ಬ್ಲೀಚ್‌’ ಬಳಸಿದರೆ ಮೊಗದ ಸ್ನಿಗ್ಧತೆ ಮಾಯವಾಗಿ ಬಿರುಸುತನ ಉಂಟಾಗುವುದರಿಂದ ಮಳೆಗಾಲವಿಡೀ “ಬ್ಲೀಚ್‌’ ಬಳಸದಿದ್ದರೆ ಹಿತಕರ.

ಓಟ್‌ಮೀಲ್‌ ಸðಬ್‌ 
ಮಳೆಗಾಲದಲ್ಲಿ ಮೊಗದಲ್ಲಿ ಒಸರುವ ಅಧಿಕ ತೈಲಾಂಶವನ್ನು ನಿವಾರಣೆ ಮಾಡಲು ಹಾಗೂ ಅಧಿಕ ತೈಲಾಂಶವಿರುವ ಮಹಿಳೆಯರಿಗೆ ಈ ಸðಬ್‌ ಉತ್ತಮ.
ವಿಧಾನ: 3 ಚಮಚ ಓಟ್‌ಮೀಲ್‌ ಪುಡಿಗೆ 1 ಚಮಚ ಜೇನುತುಪ್ಪ , ಸ್ವಲ್ಪ ನೀರು ಬೆರೆಸಿ ಪೇಸ್ಟ್‌ ತಯಾರಿಸಿ. ಇದನ್ನು ವರ್ತುಲಾಕಾರದಲ್ಲಿ ಮಾಲೀಶು ಮಾಡುತ್ತ ಲೇಪಿಸಬೇಕು. ಈ ಸðಬ್‌ ವಿಧಾನದಿಂದಾಗಿ ಮೊಗದಲ್ಲಿನ ಅಧಿಕ ಎಣ್ಣೆಯ ಪಸೆ ನಿವಾರಣೆಯಾಗಿ ಮೊಗದ ಕಾಂತಿವರ್ಧಿಸುತ್ತದೆ.

ಶುಷ್ಕ ಚರ್ಮದವರಿಗೆ ಬಾದಾಮಿ ಹಾಗೂ ಜೇನಿನ  ಫೇಸ್‌ಪ್ಯಾಕ್‌ 8-10 ಬಾದಾಮಿಗಳನ್ನು ರಾತ್ರಿ ನೆನೆಸಿ ಮರುದಿನ ಬೆಳಿಗ್ಗೆ ಸಿಪ್ಪೆ ತೆಗೆದು ಅರೆಯಬೇಕು. ತದನಂತರ ಇದಕ್ಕೆ ಶುದ್ಧ ಜೇನು ಹಾಗೂ ಗುಲಾಬಿಜಲ ಬೆರೆಸಿ ಪೇಸ್ಟ್‌ ತಯಾರಿಸಿ ಮುಖಕ್ಕೆ ಲೇಪಿಸಬೇಕು. ಶುಷ್ಕ, ಒಣಚರ್ಮ ಉಳ್ಳವರಿಗೆ ಮಳೆಗಾಲದಲ್ಲಿ ಈ ಫೇಸ್‌ಪ್ಯಾಕ್‌ ಉತ್ತಮ. ಲೇಪಿಸಿ 15 ನಿಮಿಷದ ಬಳಿಕ ತೊಳೆಯಬೇಕು.

ಮಳೆಗಾಲದಲ್ಲಿ ಚರ್ಮಕ್ಕೆ ಟಾನಿಕ್‌
ಗುಲಾಬಿದಳ-ಹಾಲಿನ ಫೇಸ್‌ಪ್ಯಾಕ್‌: ತಾಜಾ ಗುಲಾಬಿ ದಳಗಳನ್ನು 15 ನಿಮಿಷ ಕುದಿಸಿ ತಣಿಸಿದ ಹಾಲಿನಲ್ಲಿ ನೆನೆಸಿಡಬೇಕು. ತದನಂತರ ಅರೆದು ಪೇಸ್ಟ್‌ ತಯಾರಿಸಿ ಮುಖಕ್ಕೆ ಲೇಪಿಸಬೇಕು. 20 ನಿಮಿಷದ ಬಳಿಕ ಮೊಗ ತೊಳೆದರೆ ಶುಭ್ರ ಹಾಗೂ ಕಾಂತಿಯುತವಾಗಿ ಹೊಳೆಯುತ್ತದೆ.ಮಳೆಗಾಲದಲ್ಲಿ ಚರ್ಮಕ್ಕೆ ಉತ್ತಮ ಮೂಲಿಕೆಯಿಂದ ತಯಾರಿಸಿದ ಮಾಯಿಶ್ಚರೈಸರ್‌ ನಿತ್ಯ ಲೇಪಿಸಬೇಕು. ಇದು ಮುಖವನ್ನು ಸ್ನಿಗ್ಧವಾಗಿಡುತ್ತದೆ.

ಮುಖವನ್ನು ಮಾಯಿಶ್ಚರೈಸ್‌ಗೊಳಿಸಲು (ಮೊಗದ ತೇವಾಂಶ ವರ್ಧಕವಾಗಿ ಗುಲಾಬಿಜಲ ಮತ್ತು ಗ್ಲಿಸರಿನ್‌ ಲೇಪ ಹಚ್ಚಿದರೆ ಹಿತಕರ.

ಯಾವುದೇ ತೀಕ್ಷ್ಣ ಕ್ಲೆನ್ಸರ್‌ ಬಳಸುವುದು ಉತ್ತಮವಲ್ಲ. ಕೆಮಿಕಲ್ಸ್‌ (ರಾಸಾಯನಿಕ)ಯುಕ್ತ ಕ್ಲೆನ್ಸರ್‌ ಬದಲಾಗಿ, ಮಳೆಗಾಲದಲ್ಲಿ ಮನೆಯಲ್ಲೇ ತಯಾರಿಸಿ ಬಳಸಬಹುದಾದ ಕ್ಲೆನ್ಸರ್‌ ಇಂತಿದೆ.

.ಕಡಲೆಹಿಟ್ಟು 1 ಚಮಚ, ಹೆಸರುಹಿಟ್ಟು 1 ಚಮಚ- ಇವೆರಡನ್ನೂ ಸ್ವಲ್ಪ ನೀರಿನಲ್ಲಿ ಕರಗಿಸಬೇಕು. ಈ ಪೇಸ್ಟ್‌ಗೆ ಹಾಲು, ಜೇನು ಹಾಗೂ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ, ಮೃದುವಾಗಿ ತಿಕ್ಕಿ ತೊಳೆದರೆ, ಮೊಗದ ಚರ್ಮಕ್ಕೆ ಮೃದುತ್ವ, ಮಾರ್ದವತೆ ಉಂಟಾಗುತ್ತದೆ. ಇದು ಉತ್ತಮ ಕ್ಲೆನ್ಸರ್‌.

.ಮಕ್ಕಳ ಮೃದು ಚರ್ಮಕ್ಕೆ ರಾತ್ರಿ ಮಲಗುವಾಗ ಮುಖ, ಅಂಗೈ, ಅಂಗಾಲುಗಳಿಗೆ ಕೊಬ್ಬರಿ ಎಣ್ಣೆ ಹಾಗೂ ಬಾದಾಮಿ ತೈಲ ಬೆರೆಸಿ ಲೇಪಿಸಿದರೆ ಹಿತಕರ.

ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ, 3 ಲೀಟರ್‌ನಷ್ಟು ನೀರು ಸೇವನೆ ಮಳೆಗಾಲದಲ್ಲಿ ಹಿತಕರ.

– ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.