ದೀಪಾವಳಿ ಹಬ್ಬದ ವಿಶೇಷ ಖಾದ್ಯಗಳು


Team Udayavani, Oct 25, 2019, 4:20 AM IST

q-68

ದೀಪಾವಳಿ ಹಬ್ಬ ಮತ್ತೆ ಬಂದಿದೆ. ಹೊಸ ಬಟ್ಟೆ ಧರಿಸಿ, ಪಟಾಕಿ ಸುಡುಮದ್ದು ಸಿಡಿಸಿ, ಸಿಹಿ ತಿನ್ನುವ ಸಂಭ್ರಮ. ಹಬ್ಬಕ್ಕೆ ತಯಾರಿಸಬಹುದಾದ ಕೆಲವು ವಿಶೇಷ ಖಾದ್ಯಗಳು ಇಲ್ಲಿವೆ.

ಗೋಧಿ ಹಲ್ವ
ಬೇಕಾಗುವ ಸಾಮಗ್ರಿ: 1 ಕೆಜಿ ಇಡಿ ಗೋಧಿ, 2 ಕೆಜಿ ಸಕ್ಕರೆ, 10-15 ಗೋಡಂಬಿ, 7-8 ಏಲಕ್ಕಿ, 4 ಕಪ್‌ ತುಪ್ಪ, ಸ್ವಲ್ಪ ಕೇಸರಿ ಬಣ್ಣ.

ತಯಾರಿಸುವ ವಿಧಾನ: ಇಡಿ ಗೋಧಿಯನ್ನು ಬೆಳಗ್ಗೆ ನೆನೆಸಿ. ಸಾಯಂಕಾಲ ನುಣ್ಣಗೆ ರುಬ್ಬಿ. ಬಟ್ಟೆಯಲ್ಲಿ ಆರಿಸಿ ಹಾಲು ತೆಗೆದು 4-5 ಸಲ ನೀರು ಹಾಕಿ ಕಿವುಚಿ ಹಾಲು ತೆಗೆಯಿರಿ. ಆ ಮೇಲೆ ಮುಚ್ಚಿಟ್ಟು ಮಾರನೇ ದಿನ ಅಥವಾ 3 ದಿನ ಕಳೆದರೂ ಆಗಬಹುದು. ನೀರು ಮಾತ್ರ ದಿನವೂ ಬದಲಾಯಿಸಬೇಕು. ಹುಳಿ ನೀರು ತೆಗೆದು, 4 ಲೀಟರು ಹಾಕಿ ಚೆನ್ನಾಗಿ ಕದಡಿ. ಸಕ್ಕರೆ ಹಾಕಿ ಚೆನ್ನಾಗಿ ಮಗುಚಿ ಒಲೆಯ ಮೇಲೆ ಇಟ್ಟು ಕೈಯಾಡಿಸುತ್ತಾ ಇದ್ದು ಗಟ್ಟಿಯಾಗಿ ಕಣ್ಣು ಕಣ್ಣು ಆಗುವಾಗ ತಳಬಿಟ್ಟು ತುಪ್ಪ ಬಿಡುತ್ತದೆ. ಈ ಮೊದಲೇ ಬಣ್ಣ, ಗೋಡಂಬಿ, ಏಲಕ್ಕಿ ಪುಡಿ ಹಾಕಿಕೊಳ್ಳಿ. ಆಮೇಲೆ ಒಳ್ಳೆಯ ನಾರು ಆದ ಮೇಲೆ ತಟ್ಟೆಗೆ ಹರಡಿ. ಆರಿದ ಮೇಲೆ ತುಂಡು ಮಾಡಿ. ಈ ಹಲ್ವ ಕಾಯಿಸಲು 3 ಗಂಟೆ ಕಾಲ ಬೇಕಾಗುತ್ತದೆ. .

ಅಂಜೂರದ ಒಬ್ಬಟ್ಟು
ಬೇಕಾಗುವ ಸಾಮಗ್ರಿ: 100 ಗ್ರಾಂ ಮೈದಾಹಿಟ್ಟು , 50 ಗ್ರಾಂ ಚಿರೋಟಿ ರವೆ, 200 ಗ್ರಾಂ ಅಂಜೂರ, 200 ಗ್ರಾಂ ಬೆಲ್ಲ, 100 ಗ್ರಾಂ ಏಲಕ್ಕಿ ಪುಡಿ, ಸ್ವಲ್ಪ ಎಣ್ಣೆ.

ತಯಾರಿಸುವ ವಿಧಾನ: ಮೈದಾಹಿಟ್ಟು, ರವೆ, ಸ್ವಲ್ಪ ಎಣ್ಣೆ, ಅರಸಿನ ಹಾಕಿ ಕಣಕ ಕಲಸಿ ಮುಚ್ಚಿಡಿ. ಒಂದು ಗಂಟೆ ನೆನೆಸಿ. ಬಾಣಲೆಗೆ ನೀರು ಹಾಕಿ ಅಂಜೂರವನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಬೆಲ್ಲವನ್ನು ಸೇರಿಸಿ. ಬೆಲ್ಲದ ಜೊತೆ ಬೆಂದ ಅಂಜೂರ ಹಾಕಿ ಮಿಕ್ಸಿಗೆ ಹಾಕಿ ರುಬ್ಬಿ. ನೀರು ಹಾಕಬಾರದು. ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ತೊಳಸಿ. ಹೂರಣ ಆದ ಮೇಲೆ ಏಲಕ್ಕಿ ಪುಡಿ ಹಾಕಿ ಕೆಳಗಿಡಿ. ನಂತರ ಉಂಡೆ ಮಾಡಿ ಕಣಕದೊಳಗೆ ಹೂರಣ ಇಟ್ಟು ಮಡಚಿ ತೆಳ್ಳಗೆ ಲಟ್ಟಿಸಿ. ಕಾದ ತವಾದ ಮೇಲೆ ಸಣ್ಣ ಉರಿಯಲ್ಲಿ 2 ಕಡೆ ಬೇಯಿಸಿ. ಈಗ ಬಿಸಿ ಬಿಸಿ ಒಬ್ಬಟ್ಟನ್ನು ಸವಿಯಲು ಬಲು ರುಚಿ.

ಚಾಕಲೇಟ್‌ ಲಾಡು
ಬೇಕಾಗುವ ಸಾಮಗ್ರಿ: 1 ಕಪ್‌ ಸ್ವಲ್ಪ ತರಿಯಾಗಿ ಪುಡಿ ಮಾಡಿದ ಬಿಸ್ಕೆಟ್‌ ಪುಡಿ, 1/2 ಕಪ್‌ ಚಾಕಲೇಟ್‌ ಪುಡಿ, 1/2 ಕಪ್‌ ಸಕ್ಕರೆಪುಡಿ, 2 ಚಮಚ ಪುಡಿಮಾಡಿದ ಕೊಬ್ಬರಿ ತುರಿ, 2 ಚಮಚ ತುಪ್ಪ , 1 ಚಮಚ, ಹಾಲು, ತುಪ್ಪದಲ್ಲಿ ಹುರಿದ ಗೋಡಂಬಿ 6-7.

ತಯಾರಿಸುವ ವಿಧಾನ: ಕೊಬ್ಬರಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ತರಿಯಾಗಿ ಪುಡಿ ಮಾಡಿ. ಒಂದು ಪಾತ್ರೆಗೆ ಬಿಸ್ಕೆಟ್‌ ಪುಡಿ, ಕೊಬ್ಬರಿ ಪುಡಿ, ಚಾಕಲೇಟ್‌ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಚೂರು, ತುಪ್ಪ , ಸಕ್ಕರೆ ಪುಡಿ, ಹಾಲು ಹಾಕಿ ಸರಿಯಾಗಿ ಬೆರೆಸಿ ಉಂಡೆ ಕಟ್ಟಿ. ಈಗ ರುಚಿಯಾದ ಚಾಕಲೇಟ್‌ ಲಾಡು ಸವಿಯಲು ಬಲು ರುಚಿ.

ಸೇಬು ಹಣ್ಣಿನ ಕೊಬ್ಬರಿ ಮಿಠಾಯಿ
ಬೇಕಾಗುವ ಸಾಮಗ್ರಿ: 4 ಕಪ್‌ ತೆಂಗಿನತುರಿ, ಸಿಪ್ಪೆ ತೆಗೆದು ರುಬ್ಬಿದ 2 ಸೇಬುಹಣ್ಣು , 2 ಕಪ್‌ ಸಕ್ಕರೆ, 1 ಚಮಚ ಏಲಕ್ಕಿ ಪುಡಿ, 4 ಚಮಚ ತುಪ್ಪ.

ತಯಾರಿಸುವ ವಿಧಾನ: ಒಂದು ದಪ್ಪ ತಳದ ಬಾಣಲೆಗೆ ಸೇಬುಹಣ್ಣಿನ ರಸ, ಸಕ್ಕರೆ, ತುಪ್ಪ ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಕೈಯಾಡಿಸುತ್ತಾ ಇರಬೇಕು. ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಪುಡಿ ಮಾಡಬಹುದು. ಮಿಶ್ರಣ ಗಟ್ಟಿಯಾಗುತ್ತಾ ಬರುವಾಗ ಏಲಕ್ಕಿ ಪುಡಿಯನ್ನು ಹಾಕಿ. ಬಾಣಲೆಯಿಂದ ತಳ ಬಿಡುತ್ತಾ ಬರುವಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ಮಾಡಿ. 5 ನಿಮಿಷಗಳ ನಂತರ ಚೌಕಾಕಾರವಾಗಿ ತುಂಡು ಮಾಡಿ. ರುಚಿಯಾದ ಸೇಬುಹಣ್ಣಿನ ಕೊಬ್ಬರಿ ಮಿಠಾಯಿ ಸವಿಯಲು ಸಿದ್ಧ.

ಖರ್ಜೂರ ಬರ್ಫಿ
ಬೇಕಾಗುವ ಸಾಮಗ್ರಿ: ಬೀಜ ತೆಗೆದ ಖರ್ಜೂರ ಹಣ್ಣು- 1/2 ಕೆಜಿ, ಸಕ್ಕರೆ- 2 ಚಮಚ, 1 ಹಿಡಿ ಗೋಡಂಬಿ, 7-8 ಮಾರಿ ಬಿಸ್ಕತ್‌.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು 1 ಚಮಚ ತುಪ್ಪ ಹಾಕಿ ಖರ್ಜೂರವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ 1 ಚಮಚ ಸಕ್ಕರೆ ಸೇರಿಸಿ. ಮೆತ್ತಗಾದ ಖರ್ಜೂರವನ್ನು ಕಡುಗೋಲಿನಿಂದ ಜಜ್ಜಿ ಮುದ್ದೆ ಮಾಡಿ. ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಸಣ್ಣಗೆ ತುಂಡು ಮಾಡಿದ ಮಾರಿ ಬಿಸ್ಕತ್‌ನ್ನು ಖರ್ಜೂರದ ಮುದ್ದೆಗೆ ಸೇರಿಸಿ ಕಲಸಿ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಕಲಸಿದ ಮಿಶ್ರಣವನ್ನು ರೋಲ್‌ ಮಾಡಿ ಬಟರ್‌ ಪೇಪರಿನಲ್ಲಿ ಸುತ್ತಿ 15 ನಿಮಿಷ ಫ್ರಿಜ್‌ನಲ್ಲಿಡಿ. ನಂತರ ಈ ರೋಲ್‌ಗ‌ಳನ್ನು ವೃತ್ತಾಕಾರಕ್ಕೆ ತುಂಡು ಮಾಡಿ. ಪೌಷ್ಟಿಕವಾದ ರುಚಿಯಾದ ಖರ್ಜೂರ ಬರ್ಫಿ ಸವಿಯಲು ಸಿದ್ಧ.

ಸರಸ್ವತಿ ಎಸ್‌. ಭಟ್‌

ಟಾಪ್ ನ್ಯೂಸ್

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.