ಬಿಸಿಲಿಗೆ ಪರದೆ ಸನ್‌ಸ್ಕ್ರೀನ್‌


Team Udayavani, Feb 7, 2020, 5:00 AM IST

big-14

ಈ ವರ್ಷ ಯಾಕೋ ಚಳಿಗಾಲ ಬಹಳ ನಿಧಾನವಾಗಿ ಕಾಲಿರಿಸಿದೆ. ಆದ್ದರಿಂದ ಜನವರಿ ಮುಗಿಯುತ್ತಿದ್ದರೂ ಚಳಿಯ ಹೆಜ್ಜೆಗಳು ಇನ್ನೂ ಉಳಿದಿವೆ. ಹಾಗೆಂದು ಸುಮ್ಮನೇ ಇರುವಂತಿಲ್ಲ. ಕರಾವಳಿ ಜಿಲ್ಲೆಗಳ ಚಳಿಯನ್ನಾದರೂ ಹೇಗಾದರೂ ನಿಭಾಯಿಸಬಹುದು. ಆದರೆ ಸೆಕೆಯನ್ನು ನಿಭಾಯಿಸುವುದು ದೊಡ್ಡ ಸವಾಲೇ ಸರಿ.

ಸೂಕ್ಷ್ಮ ಚರ್ಮದವರು ಮನೆಯಿಂದ ಹೊರಡುವಾಗ ಮಾತ್ರವಲ್ಲ, ಬ್ಯಾಗ್‌ನಲ್ಲಿಯೂ ಒಂದು ಚಿಕ್ಕ ಕ್ರೀಮ್‌ ಪ್ಯಾಕೆಟ್‌ ಇಟ್ಟುಕೊಳ್ಳುವುದುಂಟು. ಆದರೆ, ಈ ಸನ್‌ಸ್ಕ್ರೀನ್‌ ಖರೀದಿಸುವ ಮುನ್ನ ಕೆಲವು ವಿಚಾರಗಳನ್ನು ತಿಳಿದಿರಬೇಕು. ಸೂರ್ಯನಿಂದ ಹೊರಟ ಅಲ್ಟ್ರಾ ವಯೋಲೇಟ್‌(ಯುವಿ) ಕಿರಣಗಳನ್ನು ತಡೆಯಲು ಈ ಕ್ರೀಮ್‌ ಬಳಸುವುದು. ಈ ಕಿರಣಗಳಲ್ಲಿ ಎರಡು ವಿಧಗಳಿವೆ. ಯುವಿ “ಎ’ ಕಿರಣಗಳು ಮತ್ತು ಯುವಿ “ಬಿ’ ಕಿರಣಗಳು. ಸಾಮಾನ್ಯವಾಗಿ ಸನ್‌ಸ್ಕ್ರೀನ್‌ಗಳು ಯುವಿ “ಬಿ’ ಕಿರಣಗಳನ್ನು ತಡೆಯುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ, ಕೆಲವು ಪರೀಕ್ಷೆಗಳಲ್ಲಿ ಪಾಸಾದ ಸನ್‌ಸ್ಕ್ರೀನ್‌ಗಳು ಮಾತ್ರ ಯುವಿ “ಎ’ ಕಿರಣಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದ್ದರಿಂದ ಖರೀದಿಸುವಾಗ ಕ್ರೀಮ್‌ ಪ್ಯಾಕೆಟ್‌ನಲ್ಲಿರುವ ಎಸ್‌ಪಿಎಫ್ (sun protection factor) ಅನ್ನು ಗಮನಿಸುವುದು ಮುಖ್ಯ. ಕ್ರೀಮ್‌ ಖರೀದಿಸುವಾಗ ಎಸ್‌ಪಿಎಫ್ 30ಕ್ಕಿಂತ ಹೆಚ್ಚು ಇದ್ದರೆ ಅದು ಚರ್ಮವನ್ನು ಯುವಿ ಕಿರಣಗಳಿಂದ ಶೇ. 93ರಷ್ಟು ರಕ್ಷಿಸುತ್ತದೆ. ಎಸ್‌ಪಿಎಫ್ ಹೆಚ್ಚು ಇದ್ದಷ್ಟು ರಕ್ಷಣೆ ಹೆಚ್ಚು ಎಂದರ್ಥ. ಆದರೆ, ಯಾವುದೇ ಕ್ರೀಮ್‌ಗಳೂ ಶೇ. 100ರಷ್ಟು ರಕ್ಷಣೆ ಕೊಡುವ ಭರವಸೆ ನೀಡುವುದಿಲ್ಲ. ಎಸ್‌ಪಿಎಫ್ 100 ಇದ್ದರೆ ಅದು ಚರ್ಮಕ್ಕೆ ಶೇ. 99ರಷ್ಟು ರಕ್ಷಣೆ ಕೊಡುವುದಾಗಿ ಭರವಸೆ ನೀಡುತ್ತದಷ್ಟೇ. ಆದರೆ, ಎಸ್‌ಪಿಎಫ್ ಶೇ. 15ಕ್ಕೂ ಕಡಿಮೆ ಇದ್ದಾಗ, ಅದರಲ್ಲಿ ಎಚ್ಚರಿಕೆಯ ಸಾಲೊಂದನ್ನು ಬರೆದಿರುವುದು ಅವಶ್ಯಕ ಎಂದು ಆಹಾರ ಮತ್ತು ಔಷಧ ನಿಯಂತ್ರಣ ನಿಯಮಗಳು ಹೇಳುತ್ತವೆ.

ವಾಟರ್‌ಪ್ರೂಫ್ ಸನ್‌ಸ್ಕ್ರೀನ್‌ ಎಂದು ಹೇಳಿಕೊಳ್ಳುವ ಯಾವ ಉತ್ಪನ್ನವೂ ನೀರು ಚರ್ಮವನ್ನು ತಟ್ಟದಂತೆ ತಡೆಯುವುದು ಸಾಧ್ಯವಿಲ್ಲ. ಅಲ್ಲದೆ ಸ್ವೆಟ್‌ ಪ್ರೂಫ್ ಎಂದು ಹೇಳುವ ಕ್ರೀಮ್‌ಗಳೂ ಮನುಷ್ಯನ ಚರ್ಮ ಬೆವರದಂತೆ ತಡೆಯುವ ಸಾಮರ್ಥ್ಯ ಹೊಂದಿಲ್ಲ. ಕ್ರೀಮ್‌ ಹಾಕಿಕೊಂಡು ಎಷ್ಟು ನಿಮಿಷಗಳ ಕಾಲ ಮಳೆಯಲ್ಲಿ ನಿಲ್ಲಬಹುದು, ಈಜಬಹುದು ಎಂಬುದನ್ನಷ್ಟೇ ಅವು ಹೇಳು¤ವೆ. ಬೆವರಿದಾಗ, ಕ್ರೀಮ್‌ ಮುಖದ ಮೇಲೆ ಕಲೆಸಿ ಹೋಗುವುದಿಲ್ಲವಷ್ಟೇ ವಿನಃ, ಬೆವರನ್ನು ತಡೆಹಿಡಿಯುವುದು ಸಾಧ್ಯವಿಲ್ಲ. ಬೆವರುವುದು ಆರೋಗ್ಯದ ಲಕ್ಷಣ.

ಇನ್ನು ಬಿಸಿಲಿನ ತಾಪದಿಂದ ಬಚಾವ್‌ ಆಗಲು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲಿಗೆ ಮೈ ಒಡ್ಡಿಕೊಳ್ಳದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಒಂದುವೇಳೆ ಬಿಸಿಲಿಗೆ ಹೋಗುವುದು ಅನಿವಾರ್ಯವಾದರೆ ಕೊಡೆ ಹಿಡಿದುಕೊಂಡು, ಅಥವಾ ಅಗಲವಾದ ಟೋಪಿ ಧರಿಸಿಕೊಂಡು ಹೋಗಬಹುದು. ಗ್ಲಿಸರಿನ್‌ಯುಕ್ತ ನೀರಿನಲ್ಲಿ ಮುಖ ತೊಳೆಯುವುದರಿಂದಲೂ ಚರ್ಮದ ತೇವವನ್ನು ಕಾಪಾಡಿಕೊಳ್ಳಬಹುದು. ಫೇಸ್‌ವಾಶ್‌ ಬಳಸಿಯೇ ಮುಖತೊಳೆಯುವುದರಿಂದ ಚರ್ಮದಲ್ಲಿ ಕೊಳೆ, ಧೂಳು ಶೇಖರಣೆ ಆಗುವುದಿಲ್ಲ.

ಪ್ರತಿಮಾ ರಾವ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.