ಟೆಂಪಲ್‌ ಜ್ಯುವೆಲ್ಲರಿ


Team Udayavani, Jul 13, 2018, 6:00 AM IST

b-25.jpg

ದೇವಾಲಯಗಳನ್ನು ದೇವಾನುದೇವತೆಗಳನ್ನು ಅಲಂಕರಿಸಲು ಬಳಸುವ ವಿಶಿಷ್ಟ ಆಭರಣಗಳ ಪರಿಕಲ್ಪನೆಯೇ ಟೆಂಪಲ್‌ ಜ್ಯುವೆಲ್ಲರಿ!

ಚೋಳರ ರಾಜ್ಯಭಾರದ ಸಮಯದಲ್ಲಿ ಸರಿಸುಮಾರು ಒಂಬತ್ತನೇ ಶತಮಾನದಿಂದ ಟೆಂಪಲ್‌ ಜ್ಯುವೆಲ್ಲರಿ ಪ್ರಸಿದ್ಧಿಗೆ ಬಂತು. ಕೃಷ್ಣ ದೇವರಾಯನ ಕಾಲದಲ್ಲಿಯೂ ಪ್ರಸಿದ್ಧ ಚಿನ್ನದ ಕುಸುರಿಕಾರರು ದೇವ-ದೇವಿಯರಿಗೆ ಮಾತ್ರವಲ್ಲದೇ ರಾಜ-ರಾಣಿಯರಿಗೆ, ಆಡಳಿತದ ಮತ್ತು ಅರಮನೆಯ ಪ್ರಮುಖ ಮಂದಿಗೆ ಟೆಂಪಲ್‌ ಜ್ಯುವೆಲ್ಲರಿಯನ್ನು ತಯಾರಿಸಿ ನೀಡಿದ್ದಾರೆ. ಮೂರು ಸಾವಿರ ವರ್ಷದ ಸಾಂಪ್ರದಾಯಿಕ ಮಹತ್ವವನ್ನು ಹೊಂದಿರುವ ಟೆಂಪಲ್‌ ಜ್ಯುವೆಲ್ಲರಿ ತಮಿಳುನಾಡಿನ ಮತ್ತು ದಕ್ಷಿಣ ಭಾರತದ ದೇವಾಲಯಗಳಲ್ಲಿ ಮನೆಮನೆಗಳಲ್ಲಿ ಇಂದೂ ಪ್ರಸಿದ್ಧ.

ಕೂಚಿಪುಡಿ, ಭರತನಾಟ್ಯದಲ್ಲಿ ಬಳಸುವ ಆಭರಣಗಳು ಟೆಂಪಲ್‌ ಜ್ಯುವೆಲ್ಲರಿಯ ವಿನ್ಯಾಸ ಮತ್ತು ಕಲಾತ್ಮಕ ಕುಸುರಿಯನ್ನು ಹೊಂದಿರುತ್ತವೆ. ಈಗಿನ “ಇಮಿಟೇಷನ್‌ ಜ್ಯುವೆಲ್ಲರಿ’ಯ ಆಧುನಿಕ ಯುಗದಲ್ಲಿ ಚಿನ್ನದ ಅಥವಾ ಬೆಳ್ಳಿಯ ಲೇಪನದಿಂದ ತಯಾರಿಸಿದ, ಆ್ಯಂಟಿಕ್‌ ವೈಶಿಷ್ಟé ಹೊಂದಿರುವ ಟೆಂಪಲ್‌ ಜ್ಯುವೆಲ್ಲರಿ ಕೈಗೆಟಕುವ ದರದಲ್ಲಿ ತರಹೇವಾರಿ ವಿನ್ಯಾಸದಲ್ಲಿ ಲಭ್ಯವಿದೆ.

ಟೆಂಪಲ್‌ ಜ್ಯುವೆಲ್ಲರಿಯಲ್ಲಿ ಎರಡು ವಿಧ. ಒಂದು ಸಾಂಪ್ರದಾಯಿಕ ಟೆಂಪಲ್‌ ಜ್ಯುವೆಲ್ಲರಿ. ಇದನ್ನು ಮಹಿಳೆಯರು ಮದುವೆ-ಮುಂಜಿ-ಹಬ್ಬ ಸಮಾರಂಭ, ದೇವತಾ ಕಾರ್ಯಕ್ರಮದ ಸಮಯದಲ್ಲಿ ಬಳಸುತ್ತಾರೆ. ಇನ್ನೊಂದು ವಿಧ ವಿಶೇಷ ಸಮಾರಂಭದಲ್ಲಿ ಉದಾಹರಣೆಗೆ ಮದುವೆಯಲ್ಲಿ ಮದುಮಗಳು, ಭರತನಾಟ್ಯದಲ್ಲಿ ನೃತ್ಯಗಾತಿ ಧರಿಸುವ ಕಡಗ, ಬಾಜೂಬಂದಿ, ಸೊಂಟದ ಪಟ್ಟಿ, ಮೂಗುತಿ, ಮುಡಿಯಲ್ಲಿ (ಕೂದಲಿಗೆ) ಧರಿಸುವ ಆಭರಣಗಳು, ಜಡೆಯ ಅಲಂಕಾರದ ಆಭರಣಗಳು ಇತ್ಯಾದಿ.

ಮದುಮಗಳು ಧರಿಸುವ ಟೆಂಪಲ್‌ ಜ್ಯುವೆಲ್ಲರಿ ಇಂತಿದೆ.
ಕುಸುಮಾಲಾ (ಕಸುಲಪೆರು) ಎಂದು ಕರೆಯಲ್ಪಡುವ ಹಾರದಲ್ಲಿ ಉದ್ದ ನೆಕ್ಲೇಸ್‌ನಂತಿದ್ದು, ಎರಡು ಲೇಯರ್‌ಗಳಿದ್ದು ಲಕ್ಷ್ಮಿಯ ಚಿತ್ತಾರವುಳ್ಳ ಕುಸುರಿ ಕಲೆಯ ಪೆಂಡೆಂಟ್‌ನ ಅಂದ ಚಿತ್ತಾಕರ್ಷಕವಾಗಿದೆ. ಇದು ವಜ್ರ, ಚಿನ್ನದ ಹರಳುಗಳಿಂದ ವೈಭವೋಪೇತವಾಗಿರುತ್ತದೆ.

ಮಂಗಮಾಲೈ (ಮಾವಿನ ಚಿತ್ತಾರದ ಹಾರ): ಮಾವಿನ ಹಣ್ಣಿನ ಕುಸುರಿ ಕಲೆಯುಳ್ಳ ಉದ್ದ ಹಾರವೇ ಮಂಗಮಾಲೈ. ಇದು ಅಷ್ಟೊಂದು ವೈಭವದ ಆಭರಣವಲ್ಲ. ಮದುವೆಯ ಬಳಿಕ ಇತರ ಸಮಾರಂಭಗಳಲ್ಲೂ ಬಳಸಲು ಮುಖ್ಯವಾಗಿ ಕಾಂಜೀವರಂ ಸೀರೆಯ ಮೇಲೆ ಅಂದವಾಗಿ ರಾರಾಜಿಸುತ್ತದೆ.

ವಡ್ಡನಂ (ಕಮರ್‌ಬಂದ್‌): ಸೊಂಟಪಟ್ಟಿಯ ಮಧ್ಯದಲ್ಲಿ ಕಮಲದ ಹೂವಿನಲ್ಲಿ ಕುಳಿತ ಲಕ್ಷ್ಮೀ ದೇವಿಯ ಚಿತ್ತಾರವಿದ್ದು ಸುತ್ತಲೂ ವಿವಿಧ ಕುಸುರಿ ಕಲೆಯ ಸೊಬಗಿರುತ್ತದೆ.

ವಂಕಿ ಅಥವಾ ಬಾಜೂಬಂಧ: ಮದುವೆಯ ದಿನ ಸೊಂಟಪಟ್ಟಿಯಂತೆ ರಾರಾಜಿಸುವ ಇನ್ನೊಂದು ಆಭರಣವೆಂದರೆ ವಂಕಿ ಹಾಗೂ ವಿವಿಧ ಹರಳುಗಳಿರುವ ವಂಕಿ. ಇದು ಬಲು ಸುಂದರ.

ಬಳೆ: ಕಾಂಜೀವರಂ ಅಥವಾ ಸಿಲ್ಕ್ ಸೀರೆಯ ಜೊತೆಗೆ ಹೊಂದುವ ಬಣ್ಣದ ಬಳೆಗಳು ಕೈತುಂಬಾ ಝಗಮಗಿಸುತ್ತಿದ್ದರೆ, ಮದುಮಗಳ ಮದರಂಗಿಯುಕ್ತ ಕೈಯ ಸೊಬಗೇ ವಿಶಿಷ್ಟ. ಟೆಂಪಲ್‌ ಬ್ಯಾಂಗಲ್‌ಗ‌ಳು ಭಾರವಾಗಿರುವಂತಹವು!

ಝುಮಕಿ: ವಿವಿಧ ಆಕಾರಗಳ ಝುಮಕಿ ಬಲು ಚಂದ. ಟೆಂಪಲ್‌ ಜ್ಯುವೆಲ್ಲರಿಯ ಝಮಕಿಗಳಲ್ಲಿ ದೇವರ ಚಿತ್ತಾರವಿರುತ್ತದೆ.

ಮಾಂಗಟೀಕಾ (ಬೈತಲೆಯ ಆಭರಣಗಳು) (ನೇತಿ ಚುಟ್ಟಿ):
ಈ ಆಭರಣವಿಲ್ಲದೆ ಮದುಮಗಳ ಸಿಂಗಾರ ಅಪೂರ್ಣ. ದೊಡ್ಡ ದೇವಿಯ ಪೆಂಡೆಂಟ್‌ಗಳ ಜೊತೆಗೆ, ಸಣ್ಣ ಸಣ್ಣ ಪೆಂಡೆಂಟ್‌ಗಳೂ ಹಾರದಲ್ಲಿ ಪೋಣಿಸಿಕೊಂಡು ಬೈತಲೆಯನ್ನು ಅಲಂಕರಿಸುತ್ತವೆ.

ಜಡೆಬಿಲ್ಲಾ: ಜಡೆಯನ್ನು ಅಲಂಕರಿಸಲು ಹೂವಿನ ಜೊತೆ ಬಳಸುವ ಆಭರಣವೇ ಜಡೆಬಿಲ್ಲಾ.

ಟೆಂಪಲ್‌ ಜ್ಯುವೆಲ್ಲರಿ ಈಗಿನ ಹೊಸ ಟ್ರೆಂಟ್‌ ಆಗಿದೆ.

ಡಾ| ಅನುರಾಧಾ ಕಾಮತ್‌

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.