ಹುಡುಗ ಹೇಗಿರಬೇಕು…


Team Udayavani, Jan 20, 2017, 3:45 AM IST

Cuppls-00.jpg

ಹದಿನೈದು-ಇಪ್ಪತ್ತು ವರ್ಷದ ಹಿಂದೆ ನೀನು ಮದುವೆಯಾಗೋ ಹುಡುಗ ಹೇಗಿರಬೇಕೆಂದು ಕೇಳಿದ್ದರೆ, ಒಳ್ಳೆಯವನಾಗಿರಬೇಕು, ಒಳ್ಳೆ ಕೆಲಸದಲ್ಲಿರಬೇಕು, ಕುಡಿಯಬಾರದು, ಸಿಗರೇಟ್‌ ಸೇದಬಾರದು, ನನ್ನನ್ನು ಚೆನ್ನಾಗಿ ನೋಡ್ಕೊàಬೇಕು, ತುಂಬ ಪ್ರೀತಿಸಬೇಕು ಅಂತಿದ್ದರೇನೋ.

ಹಾಗೆ ನೋಡಿದರೆ ನಾವು ಹುಡುಗಿಯರು, ವಿ ಹ್ಯಾವ್‌ ಕಮ್‌ ಎ ಲಾಂಗ್‌ ವೇ. ನಮ್ಮ ಅಜ್ಜಿಯ ಕಾಲದಲ್ಲಿ ಅವರಿಗೆ ಹುಡುಗ ಹೇಗಿರಬೇಕು ಎಂದು ಕೇಳುವ ಪರಿಪಾಠವೇ ಇರಲಿಲ್ಲ. 13, 14ಕ್ಕೆಲ್ಲ  ಮದುವೆಯಾಗಿ 15, 16ಕ್ಕೆ  ಮಗು ಕೈಯ್ಯಲ್ಲಿರೋದು. ಆ ಕಾಲದ ಬಹಳಷ್ಟು ಜನ ಹೆಂಗಸರು ತಮ್ಮ ಗಂಡನನ್ನು ನೋಡಿದ್ದು ಮದುವೆ ಮನೆಯಲ್ಲೇ. ಕಾಲ ಬದಲಾಯಿತು. ಸಮಾಜವನ್ನ ಎದುರಿಸಿ ಬಹಳಷ್ಟು ಜನ ಪ್ರೀತಿಸಿ ಮದುವೆಯಾಗುವ ಧೈರ್ಯ ಮಾಡಿದರು. ಕೆಲವರು ಗೆದ್ದರು, ಕೆಲವರ ಬದುಕು ದಿಕ್ಕಾಪಾಲಾಯಿತು. ಆದರೂ ಮೆಜಾರಿಟಿ ತಂದೆತಾಯಿ ತೋರಿಸಿದವರನ್ನೇ ಮದುವೆಯಾದರು. ಅಷ್ಟರಲ್ಲಿ ಹುಡುಗಿಗೆ ಹುಡುಗ ಇಷ್ಟ ಆದನೋ ಇಲ್ಲವೋ ಎಂದು ಕೇಳುವಷ್ಟಾದರೂ ಬದಲಾಗಿತ್ತು.ಈಗ ಸಂಬಂಧಗಳ definitions change ಆಗಿದೆ. ಮದುವೆ ಮನೆಯಲ್ಲಿ ಹುಡುಗನನ್ನು ನೋಡಿದೆ ಅನ್ನೋ ಕಾಲದಿಂದ I am dating a guy its just been six months lets see where does it go  ಅನ್ನುವವರೆಗೆ ಬಂದಿದ್ದೇವೆ.

ಎಲ್ಲರೂ ಹಾಗಿಲ್ಲದಿರಬಹುದು. ಆದರೂ ಬಹಳಷ್ಟು ಬದಲಾಗಿದ್ದೇವೆ. ಒಂದು ಹದಿನೈದು- ಇಪ್ಪತ್ತು ವರ್ಷದ ಹಿಂದೆ ನೀನು ಮದುವೆಯಾಗೋ ಹುಡುಗ ಹೇಗಿರಬೇಕೆಂದು ಕೇಳಿದ್ದರೆ, ಒಳ್ಳೆಯವನಾಗಿರಬೇಕು, ಒಳ್ಳೆ ಕೆಲಸದಲ್ಲಿರಬೇಕು, ಕುಡಿಯಬಾರದು, ಸಿಗರೇಟ್‌ ಸೇದಬಾರದು, ನನ್ನ ಚೆನ್ನಾಗಿ ನೋಡ್ಕೊàಬೇಕು. ತುಂಬ ಪ್ರೀತಿಸಬೇಕು ಅಂತಿದ್ದರೇನೋ.ನಾನು ಡಿಗ್ರಿ ಮಾಡುತ್ತಿದ್ದಾಗ ನಮ್ಮ ಸೈಕಾಲಜಿ ಲೆಕ್ಚರರ್‌ ಸಂಬಂಧ, ಮದುವೆಗಳ ಬಗ್ಗೆ ಮಾತನಾಡುತ್ತ ಹುಡುಗಿ ಮದುವೆಯಾಗುವಾಗ ಸಾಮಾಜಿಕವಾಗಿ, ಆರ್ಥಿಕವಾಗಿ, ಬುದ್ಧಿವಂತಿಕೆಯಲ್ಲಿ ತನಗಿಂತ ಮೇಲಿನ ಸ್ತರದಲ್ಲಿರುವವರನ್ನು ಮದುವೆಯಾದರೆ ಅಂಥ ಮದುವೆ ಅಂಥವರ ಜೊತೆ ಜೀವನ ಸುಸೂತ್ರವಾಗಿರುತ್ತೆ ಅಂತ ಸ್ಟಡೀಸ್‌ ಹೇಳುತ್ತೆ ಅಂದಿದ್ದರು. ಇನ್ನೂ ಮದುವೆಯಾಗದ ಒಂದಷ್ಟು ಸ್ನೇಹಿತೆಯರನ್ನು ನಿಮ್ಮ ಹುಡುಗ ಹೇಗಿರಬೇಕು ಅಂತ ಕೇಳಿದರೆ ನಿಜಕ್ಕೂ ಆಶ್ಚರ್ಯಕರವಾದ ಉತ್ತರಗಳು ಸಿಗುತ್ತವೆ. 

ಒಂದಷ್ಟು ಹುಡುಗಿಯರು ಅವನಿಗೆ ಫ್ಯಾಷನ್‌ ಸೆನ್ಸ್‌ ಇಲ್ಲದಿದ್ದರೆ ವೇಸ್ಟು. ನಾನ್‌ ಪೇಟ್ರಿಯಾರ್ಕಲ್‌ ಸೊಸೈಟಿಯಲ್ಲಿ ನಂಬಿಕೆಯಿರಬೇಕು, ನನಗೆ “ಹೀಗೇ ಇರು’ ಅಂತ ಆರ್ಡರ್‌ ಮಾಡೋಕೆ ಬಂದ್ರೆ ಅವತ್ತೇ ಬ್ರೇಕಪ್‌. ಅಲ್ಲದೆ ತುಂಬ ಮುಖ್ಯವಾದದ್ದು he should listen to meeeeeee…  ಎಂದು ರಾಗವಾಗಿ ಬಿಯಾನ್ಸನ If I were a boy’ ಹಾಡಲು ಶುರು ಮಾಡಿದಳು ಒಬ್ಬಳು. ಇದಲ್ಲದೆ ಅವನಿಗೆ ಯಾವುದಾದರೂ ಕಲೆಯಲ್ಲಿ ಆಸಕ್ತಿ ಇರಬೇಕು, ನನ್ನ ಆಸಕ್ತಿಗಳನ್ನು ಪ್ರೋತ್ಸಾಹಿಸಬೇಕು. ಪೈಂಟಿಂಗು, ಕುಕ್ಕಿಂಗ್‌, ಆ್ಯಕ್ಟಿಂಗ್‌ ಅಥವಾ ಯಾವುದಾದರೂ ಒಂದು ಇನ್ಸುಟ್ರಾಮೆಂಟ್‌ ನುಡಿಸಲು ಬರಬೇಕು ಅಂದಳು ಮುದ್ದು ಮುಖದ ಚೆಲುವೆ. ಶ್ರೀಮಂತನಲ್ಲದಿದ್ದರೂ ಸುಖವಾಗಿ ಇರುವುದಕ್ಕೆ ಸಾಕಾಗುವಷ್ಟಾದರೂ ದುಡಿಯಬೇಕೆಂದು ಕೆಲವರು ಹೇಳಿದರೆ, “ಇಲ್ಲಪ್ಪತುಂಬಾ ಶ್ರೀಮಂತನೇ ಆಗಿರಬೇಕು’ ಎಂದರು ಒಂದಷ್ಟು ಜನ. ಮತ್ತೂಬ್ಬಳಂತೂ “ನನಗೆ ಕ್ಯಾಲಿಫೋರ್ನಿಯಾದ ಹುಡುಗನೇ ಬೇಕು’ ಎಂದಳು.

ನನಗನ್ನಿಸುವುದು ಇಷ್ಟು , ನನ್ನ ಹತ್ರ ಒಂದು ಹಳೇ ಕಂಪ್ಯೂಟರ್‌ ಇತ್ತು. ಅದರಲ್ಲಿ ಒಂದು ಸ್ಲೆ„ಡ್‌ ಶೋ. ಒಬ್ಬಳು ಚಂದದ ಹುಡುಗಿ ಪಫೆìಕ್ಟ್ ಮ್ಯಾನ್‌ಗೆ ಕಾಯ್ತಾ ಒಂದು ಪಾರ್ಕಿನ ಬೆಂಚಿನ ಮೇಲೆ ಕೂತಿರ್ತಾಳೆ. ಮಧ್ಯದಲ್ಲಿ ಹುಡುಗ ಹೇಗಿರಬೇಕು ಎಂದು ಹೇಳುವ ಒಂದಷ್ಟು ಸ್ಲೆ„ಡ್‌. ಕೊನೆ ಸ್ಲೆ„ಡಲ್ಲಿ ಹಾಗೇ ಅವಳ ಸ್ಕೆಲಿಟನ್‌ ಇರುತ್ತೆ. ಏಕೆಂದರೆ, ನಾವಂದುಕೊಂಡ ಎಲ್ಲಾ ಗುಣಗಳೂ ಇರುವ ಹುಡುಗ ಸಿಗುವುದು ಕಷ್ಟ. ಹುಡುಗರೂ ಮನುಷ್ಯರೇ ತಾನೇ. ನಮಗಿಷ್ಟವಾಗುವವರಲ್ಲಿ ನೀವಂದುಕೊಂಡ ಒಂದೆರೆಡು ಕ್ವಾಲಿಟಿಗಳು ಇಲ್ಲದಿದ್ದರೂ, ಅದನ್ನೂ ಮೀರಿಸುವಷ್ಟು ಪ್ರೀತಿ ಇದ್ದರೆ ಸಾಕೇನೋ.

ಒಟ್ಟಿನಲ್ಲಿ ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು
ದುಃಖ ಹಗುರವೆನುತಿರೆ
ಪ್ರೇಮವೆನಲು ಹಾಸ್ಯವೇ
ಎಂದು ಕೆ. ಎಸ್‌. ನರಸಿಂಹಸ್ವಾಮಿ ಹಾಡಿದಷ್ಟು ಸುಲಭವಾಗಿಲ್ಲ ಈಗ. ಈಗಿನ ಹುಡುಗಿ ಬುದ್ಧಿವಂತೆಯಾಗಿದ್ದಾಳೆ. ಸ್ವಾವಲಂಬಿಯಾಗಿದ್ದಾಳೆ. ಹೇಗೋ ಯಾರನ್ನೋ ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವವಳಲ್ಲ. ಅವಳ ಲಿಸ್ಟು ದೊಡ್ಡದಿದೆ. ಆದರೆ, ಅವಳು ಹುಡುಕುವುದು ನಿಜವಾದ ಪ್ರೀತಿಗೆ. ಸುಲಭವಲ್ಲದ, ಒಬ್ಬರನ್ನೊಬ್ಬರು ಬಿಟ್ಟಿರಲಾರದ ಆವರಿಸಿಕೊಳ್ಳುವ ಪ್ರೀತಿಗೆ. ಹುಡುಗ ನಿಜವಾಗಿ ಪ್ರೀತಿಸಿ ಅವಳನ್ನು ಅರ್ಥಮಾಡಿಕೊಂಡರೆ ಆ ಲಿಸ್ಟಲ್ಲಿ  ಬೇಡದ್ದನ್ನು ಅಳಿಸಿಹಾಕುತ್ತಾಳೆ.

– ಸಿರಿ

ಟಾಪ್ ನ್ಯೂಸ್

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.