ದಿನದರ್ಶಿಕೆ ಬದಲಾಯಿತು!


Team Udayavani, Jan 17, 2020, 5:43 AM IST

an–11

ಕ್ಯಾಲೆಂಡರುಗಳು ಬಂದವು, ಹೋದವು. ವರ್ಷಗಳು, ದಶಕಗಳೇ ಉರುಳಿದವು. ಸಮಯ ಮತ್ತು ತಾರೀಕು ತಿಳಿಯಲು ವಾಚು-ಗಡಿಯಾರದ ಆವಶ್ಯಕತೆ ಇಲ್ಲದ ಮೊಬೈಲ್‌ ಮನೆಗೆ ಬಂತು.

ಮೊಮ್ಮಗ ಸುಧನ್ವ ಮನೆಗೆ ಬಂದ ಕೂಡಲೆ, “”ನಂಗೆ ಬಿಳಿ ಹಾಳೆ ಕೊಡು, ಚಿತ್ರ ಬರೆಯಲು” ಎಂದು ಕೇಳುತ್ತಾನೆ. ಅವನಿಗಾಗಿ ಬಣ್ಣದ ಪೆನ್ಸಿಲು, ಹಾಗೇ ಹಳೇ ಕ್ಯಾಲೆಂಡರಿನ ಹಾಳೆಗಳನ್ನು ನೀಡುತ್ತೇನೆ. ದೊಡ್ಡ ದೊಡ್ಡ ಚಿತ್ರಗಳಿರುವ ಕ್ಯಾಲೆಂಡರಿನ ಹಿಂಬದಿ ಖಾಲಿ ಇರುತ್ತದೆಯಷ್ಟೆ! ಬಣ್ಣ ಬಣ್ಣದ ಪೆನ್ಸಿಲಿನಿಂದ ಗೀಚುವುದರಲ್ಲಿ ಅವನಿಗೆ ಖುಷಿ. ನನ್ನ ಮನಸ್ಸೋ ಕ್ಯಾಲೆಂಡರ್‌ಗಳ ಕತೆಯಲ್ಲಿ ಮುಳುಗುತ್ತದೆ.

ಅರವತ್ತು ವರ್ಷಗಳ ಹಿಂದೆ ಹೂವಳ್ಳಿಯ ಅಜ್ಜನ ಮನೆಯಲ್ಲಿ ಅಥವಾ ಶಿರ್ಸಿ ಪೇಟೆಯ ನಮ್ಮ ಅಪ್ಪನ ಬಾಡಿಗೆ ಗೂಡಿನಲ್ಲಿ ಕ್ಯಾಲೆಂಡರ್‌ಗಳಿರಲಿಲ್ಲ. ಯುಗಾದಿಯ ಮೊದಲ ದಿನ ಅಜ್ಜ-ಅಪ್ಪ ಗೋಕರ್ಣದ “ಬಗ್ಗೊàಣ ಪಂಚಾಂಗ’ ತಂದು ಇಟ್ಟಿರುತ್ತಿದ್ದರು. ಯುಗಾದಿ ಹಬ್ಬದಂದು ಪೂಜೆ ಮಾಡಿ ಮನೆಯ ಹಿರಿಯರು ಪಂಚಾಂಗವನ್ನು ಓದಿ ಹೇಳುತ್ತಿದ್ದರು. ಯುಗಾದಿ ಪುರುಷನ ವರ್ಣನೆ, ವರ್ಷದ ಭವಿಷ್ಯ ಕೇಳಿದ ನಂತರ ಪಂಚಾಂಗವನ್ನು ದೇವರ ಕಪಾಟಿನಲ್ಲಿ ಭದ್ರವಾಗಿ ಇಡುತ್ತಿದ್ದರು.

ಸಮಯ ನೋಡಲೊಂದು ಗೋಡೆ ಗಡಿಯಾರ, ತಿಥಿ-ಮಿತಿ ತಿಳಿಯಲು ಪಂಚಾಂಗ- ಅದರಲ್ಲೇ ದಿನಾಂಕವೂ ಇರುತ್ತಿತ್ತಲ್ಲವೇ? ಹಾಗಾಗಿ, ಕ್ಯಾಲೆಂಡರ್‌ ಮನೆಗೆ ಬಂದದ್ದು ತುಂಬಾ ತಡವಾಗಿ. ಅಪ್ಪ ಮೊದಲ ಬಾರಿ ಕ್ಯಾಲೆಂಡರ್‌ ತಂದು ಗೋಡೆಗೆ ನೇತು ಹಾಕಿದಾಗ ಎಂಥ ಸಂಭ್ರಮ. ಹನ್ನೆರಡು ಹಾಳೆಗಳ ಆ ಕ್ಯಾಲೆಂಡರ್‌ನಲ್ಲಿ ದೊಡ್ಡದಾಗಿ ತಿಂಗಳು-ದಿನಾಂಕಗಳು. ಭಾನುವಾರ ಮತ್ತು ರಜಾ ದಿನಗಳು ಕೆಂಪು ಬಣ್ಣದಲ್ಲಿ , ಉಳಿದದ್ದು ಕಪ್ಪು ಬಣ್ಣದಲ್ಲಿ. ಪ್ರತಿ ದಿನಾಂಕದ ಮೇಲೆ ರಾಹುಕಾಲ-ಗುಳಿಕಕಾಲ… ಮುಂತಾಗಿ. ಹುಣ್ಣಿಮೆ-ಅಮಾವಾಸ್ಯೆ ಹಬ್ಬಗಳನ್ನು ಈಗ ನಾವೇ ಮಕ್ಕಳು ತಿಳಿಯಬಹುದಾಗಿತ್ತು. ಸೋಮವಾರದಿಂದ ಶಾಲೆ ಶುರುವಾಗಿ ಐದು ದಿನ ಕಳೆದು ಶನಿವಾರ ಬಂದ ಕೂಡಲೇ ಕೆಂಪು ಬಣ್ಣದ ಭಾನುವಾರ ನೋಡುತ್ತ ಖುಶಿ ತಡೆಯಲಾಗುತ್ತಿರಲಿಲ್ಲ. ಒಂದು ತಿಂಗಳು ಮುಗಿದೊಡನೆ ಆ ತಿಂಗಳ ಹಾಳೆ ಹರಿಯುವುದು ಅಥವಾ ತಿರುಗಿಸಿ ಹಾಕುವುದರೊಂದಿಗೆ ಎಷ್ಟು ಬೇಗ ಒಂದು ತಿಂಗಳು ಕಳೆಯಿತು ಎಂಬ ಬೆರಗು. ಹಾಲು ಖರೀದಿಸಿದ ಲೆಕ್ಕವನ್ನು ಅಮ್ಮ ಅದರ ಮೇಲೆ ಬರೆಯುತ್ತಿದ್ದರು. ಅಪ್ಪ ತನ್ನ ನೆನಪಿಗೆ ಗುರುತು ಮಾಡಿದ ತಾರೀಕುಗಳು. ಅದನ್ನು ಗಮನಿಸಿಯೇ ತಿಂಗಳ ಹಾಳೆ ಹರಿಯಬೇಕಾಗುತ್ತಿತ್ತು. ಹಾಗೆ ತಿರುಗಿಸುತ್ತ ವರ್ಷವೇ ಕಳೆದು ಹೋಗುತ್ತಿತ್ತು. ನಮ್ಮ ಮನೆಯಲ್ಲಿ ಮೂರು ಬಾರಿ ಹೊಸ ವರ್ಷ ಆಚರಣೆ ಇರುತ್ತಿತ್ತು. ಜನವರಿ 1, ಯುಗಾದಿ ಮತ್ತು ನಮ್ಮ ಶಾಲೆಗಳ ಹೊಸವರ್ಷ ಜೂನ್‌ 1.

ವರ್ಷಗಳು ಉರುಳಿದಂತೆ ಮನೆಗೆ ಹೊಸ ಹೊಸ ರೀತಿಯ ಕ್ಯಾಲೆಂಡರ್‌ ಬರತೊಡಗಿತು. ಈಗ ಮನೆ ಗೋಡೆ ಮೇಲೆ ನಾಲ್ಕಾರು ಕ್ಯಾಲೆಂಡರ್‌ಗಳು ನೇತಾಡತೊಡಗಿದವು. ದಿನಸಿ ಅಂಗಡಿಯವರು, ಔಷಧಿ ಅಂಗಡಿಯವರು, ಸೈಕಲ್‌ ಶಾಪ್‌ನವರು ಕ್ಯಾಲೆಂಡರ್‌ ಕಾಣಿಕೆ ನೀಡತೊಡಗಿದ್ದರು. ಚಿತ್ರವುಳ್ಳ ಬಣ್ಣ ಬಣ್ಣದ ಕ್ಯಾಲೆಂಡರ್‌. ಹೆಚ್ಚಾಗಿ ಮಹಾಗಣಪತಿಯ ಚಿತ್ರವಿರುವ ಕ್ಯಾಲೆಂಡರ್‌. ಕೆಳಗೆ ದಿನಾಂಕಗಳು ಸಣ್ಣದಾಗಿ ಇರುತ್ತಿದ್ದವು. ಮೇಲೆ ದೊಡ್ಡ ಚಿತ್ರ, ಹನ್ನೆರಡು ತಿಂಗಳ ವಿವರ ಸಣ್ಣದಾಗಿ ಹಾಕಿರುತ್ತಿದ್ದರು. ಲಕ್ಷ್ಮಿ, ಸರಸ್ವತಿ, ಪಾರ್ವತಿ, ಗಣಪತಿ, ಬಾಲಕೃಷ್ಣ, ಹನುಮಂತ ಮುಂತಾದ ಜನಪ್ರಿಯ ದೇವರ ಚಿತ್ರಗಳಿರುವ ಕ್ಯಾಲೆಂಡರ್‌ಗಳು. ಅಪ್ಪನಿಗೆ ಈಗ ಹೊಸ ಹುಚ್ಚು. ಹಳೆ ಕ್ಯಾಲೆಂಡರ್‌ನ ದೇವರುಗಳಿಗೆ ಕಟ್ಟು ಹಾಕಿಸಿ ದೇವರ ಮನೆ ಗೋಡೆಗಳಿಗೆ ಅಲಂಕರಿಸಲು ಆಸೆ. ನಾಲ್ಕಾರು ವರ್ಷಗಳಲ್ಲಿ ದೇವರ ಕೋಣೆ ಪೂರ್ತಿ ನಾನಾ ದೇವರುಗಳ, ನಾನಾ ಭಂಗಿಗಳ ಫೋಟೋಗಳಿಂದ ತುಂಬಿ ತುಳುಕುತ್ತಿತ್ತು.

ಬಳಿಕ ಬಂತು ದೇಶಭಕ್ತರ ಚಿತ್ರಗಳಿರುವ ಕ್ಯಾಲೆಂಡರ್‌. ಹೆಚ್ಚು ಜನಪ್ರಿಯವಾದದ್ದು ಬಾಪೂರವರದ್ದು. ನಂತರ ನೆಹರೂ, ತಿಲಕ… ಮುಂತಾದವರು ಕ್ಯಾಲೆಂಡರ್‌ಗಳಲ್ಲಿ ಬರತೊಡಗಿದರು. ಅದರಲ್ಲೇ ಮಾಯಾ ಚಿತ್ರಗಳ ಕ್ಯಾಲೆಂಡರು ಬಂದು ಮಕ್ಕಳಾದ ನಮಗೆ ಅದನ್ನು ನೋಡುವುದೇ ಒಂದು ಮೋಜು. ಥಟ್ಟನೆ ನೋಡಿದರೆ ಎರಡು ಮರ, ಸೂಕ್ಷ್ಮವಾಗಿ ನೋಡಿದರೆ ಮಧ್ಯದಲ್ಲಿ ಗಾಂಧೀಜಿ ಅಥವಾ ಬುದ್ಧ, ಕೆಲವೊಮ್ಮೆ ಇಬ್ಬರೂ ಮರದ ರೇಖೆಗಳಲ್ಲಿ ಅಡಗಿರುತ್ತಿದ್ದರು.

ಆಮೇಲೆ ಮನೆಗೆ ಸಿನೆಮಾ ನಟಿಯರ ಹಾವಳಿ ಪ್ರಾರಂಭವಾಯಿತು. ಅದರಲ್ಲೂ ಹಿಂದಿ ತಾರಾಲೋಕದ ವೈಜಯಂತಿ ಮಾಲಾ, ನರ್ಗಿàಸ್‌, ಮಧುಬಾಲಾ, ಬೀನಾರಾಯ್‌ ಮುಂತಾದವರ ಕ್ಯಾಲೆಂಡರ್‌. ಅದನ್ನು ಸಂಗ್ರಹಿಸಿ ಗೆಳತಿಯವರಿಗೆ ತೋರಿಸುವ ಸಂಭ್ರಮ ಒಂದಿಷ್ಟು ತಿಂಗಳು. “”ಹೀಗೆ ಸಿನೆಮಾ ನಟಿಯರ ಕ್ಯಾಲೆಂಡರ್‌ ನೋಡುತ್ತಿದ್ದರೆ ನೀವು ವಿದ್ಯಾ ಭ್ಯಾಸ ಮಾಡಿದ ಹಾಗೆ!” ಎಂದು ಮನೆಗೆ ಬಂದ ಹಿರಿಯರು ಬೈದದ್ದು ಇತ್ತು. ಆದರೆ, ಈ ನಟಿಯರ ಚಿತ್ರದ ಕ್ಯಾಲೆಂಡರ್‌ ಹಳೆಯದಾದ ಮೇಲೆ ನಮ್ಮ ಶಾಲೆಯ ಪಠ್ಯಪುಸ್ತಕ, ಪಟ್ಟಿ (ಅಂದರೆ ನೋಟ್ಸ್‌ ಬುಕ್‌!) ಗೆ ಬ್ಯಾಂಡ್‌ ಹಾಕಲು ಉಪಯೋಗಿಸತೊಡಗಿದೆವು. ಆದರೆ, ಅದಕ್ಕೆ ತತ್ತರಿ ಬಿತ್ತು. ತರಗತಿಯಲ್ಲಿ ಆ ನಟಿಯರ ಅರ್ಧ ಮುಖವನ್ನೇ ನೋಡುತ್ತ ನಮ್ಮ ಏಕಾಗ್ರತೆ ಹಾಳಾಗುತ್ತದೆ ಎಂದು ಗುರುಗಳು ಗದರಿಸತೊಡಗಿದರು. ಆಮೇಲೆ ಕೆಲವು ಕಾಲ ಅದನ್ನು ತಿರುಗಿಸಿ, ಖಾಲಿ ಹಾಳೆ ಮೇಲೆ ಬರುವಂತೆ ಬ್ಯಾಂಡ್‌ ಹಾಕತೊಡಗಿದೆವು. ಅದು ನಿಂತಿತು- ಎಲ್ಲರೂ ಒಂದೇ ರೀತಿ ಕಂದು ಬಣ್ಣದ ಪೇಪರ್‌ ಬ್ಯಾಂಡ್‌ ಹಾಕಬೇಕೆಂಬ ಕಾನ್ವೆಂಟ್‌ ಶಿಸ್ತು ರೂಢಿಗೆ ಬಂತು!

ಕ್ಯಾಲೆಂಡರುಗಳು ಬಂದವು, ಹೋದವು. ವರ್ಷಗಳು, ದಶಕಗಳೇ ಉರುಳಿದವು. ಸಮಯ ಮತ್ತು ತಾರೀಕು ತಿಳಿಯಲು ವಾಚು-ಗಡಿಯಾರದ ಆವಶ್ಯಕತೆ ಇಲ್ಲದ ಮೊಬೈಲ್‌ ಮನೆಗೆ ಬಂತು. ಆದರೂ ಕ್ಯಾಲೆಂಡರ್‌ಗಳು ಉಳಿದುಕೊಂಡಿವೆ. ಬೇರೆ ಬೇರೆ ದೇಶಗಳ ಪ್ರೇಕ್ಷಣೀಯ ಸ್ಥಳದ ಮಾಹಿತಿ ಇರುವ ದೊಡ್ಡ ದೊಡ್ಡ ಕ್ಯಾಲೆಂಡರ್‌ ಬರುತ್ತಿವೆ. ಟೇಬಲ್‌ ಮೇಲೆ ಇಡುವ ಪುಟ್ಟ ಕ್ಯಾಲೆಂಡರ್‌ ಡೆಸ್ಕ್ ಕ್ಯಾಲೆಂಡರ್‌ ಬಂದಿವೆ. ಕ್ಯಾಲೆಂಡರ್‌ ರೂಪದರ್ಶಿಗಳಿಗಾಗಿ ತಮ್ಮ ಹಣದ ಸಾಮ್ರಾಜ್ಯವನ್ನು ಕಳೆದುಕೊಂಡ ಹೆಂಡದ ದೊರೆಗಳ ಕತೆ ಎಲ್ಲರಿಗೂ ಗೊತ್ತೇ ಇದೆ.

ಪ್ರತಿವರ್ಷ ಮೊದಲ ದಿನ ಹಳೆ ಕ್ಯಾಲೆಂಡರ್‌ ತೆಗೆದು ಹಾಕುವಾಗ ಏನೋ ವಿಷಾದ, ಮತ್ತೇನೋ ಸಂಭ್ರಮ, ಬದುಕೇ ಹೀಗೆ!

ವಿಜಯಾ ಶ್ರೀಧರ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.