ಸ್ಕೂಟರ್‌ ತಂದಿತು ಸ್ವಾತಂತ್ರ್ಯ


Team Udayavani, Aug 16, 2019, 5:07 AM IST

q-23

ಪ್ಲೀಸ್, ಶಾಪಿಂಗ್‌ಗೆ ಹೋಗ್ಬೇಕು. ಒಮ್ಮೆ ಕರೆದುಕೊಂಡು ಹೋಗಿ, ಲೇಟಾಯ್ತು, ಬಸ್‌ಸ್ಟಾಪ್‌ ತನಕ ಬಿಟ್ಟು ಬನ್ನಿ ಮಗಳನ್ನು , ಡ್ಯಾನ್ಸ್ ಕ್ಲಾಸಿಗೆ ಬಿಟ್ಟು ಬನ್ನಿ…” ಹೆಂಡತಿಯ ಈ ತರದ ಕೋರಿಕೆಗಳನ್ನು ಈಡೇರಿಸಲು ಗಂಡನಿಗೆ ಸಮಯಾಭಾವ. ತನ್ನ ಕೆಲಸಗಳನ್ನು ಬದಿಗಿಟ್ಟು ಹೆಂಡತಿ ಹೇಳಿದ ಕಡೆಗೆಲ್ಲ ಸುತ್ತಾಡಲು ಆತನಿಗೆ ಇಷ್ಟವೂ ಇಲ್ಲ. ಅದರಲ್ಲೂ ಹೆಂಡತಿಯನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗುವಷ್ಟು ದೊಡ್ಡ ಶಿಕ್ಷೆ ಇನ್ನೊಂದಿಲ್ಲ ಎಂಬ ಭಾವನೆ ಅವನಿಗೆ. ಅವಳ ಅಗತ್ಯ ಕೆಲಸಗಳಿಗೆ ಹೊರಗೆ ಹೋಗಲು ತನ್ನನ್ನು ಅವಲಂಬಿಸದಿರಲಿ ಎಂದು ಹೆಂಡತಿಗೊಂದು ಸ್ಕೂಟರ್‌ನ ಉಡು ಗೊರೆ ಕೊಟ್ಟು ಬಿಡುತ್ತಾನೆ. ಗಂಡನ ಬೈಕಿನ ಹಿಂದೆ ಅವಳಿಗೆ ಅಂಟಿ ಕುಳಿತು ಹೋಗುವ ಅವಕಾಶ ನಷ್ಟವಾಯಿತು ಎಂದು ಮರುಗುತ್ತಲೇ ಮನಸ್ಸಿಲ್ಲದ ಮನಸ್ಸಿಂದ ಆಕೆ ಸ್ಕೂಟರ್‌ ಪ್ರಯಾಣ ಆರಂಭಿಸುತ್ತಾಳೆ. ಆದರೆ, ದಿನಗಳೆದಂತೆ ಸ್ಕೂಟರ್‌ ಅವಳ ಅಚ್ಚುಮೆಚ್ಚಿನ ಸಂಗಾತಿಯಾಗಿ ಬಿಡುತ್ತದೆ.

ನನಗೂ ಅನಿವಾರ್ಯವಾಗಿ ಸ್ಕೂಟರ್‌ ಕಲಿಯಲೇಬೇಕಾಯಿತು. ನಾನು ಹೆರಿಗೆ ರಜೆಯಲ್ಲಿರುವ ಸಂದರ್ಭದಲ್ಲಿ ನನಗೆ ಹೆಚ್ಚುವರಿ ಶಿಕ್ಷಕಿ ಎಂಬ ನೆಲೆಯಲ್ಲಿ ಬೇರೆ ಶಾಲೆಗೆ ವರ್ಗಾವಣೆಯಾಯ್ತು. ಮೊದಲಿದ್ದ ಶಾಲೆಯ ಕಡೆಗೆ ಐದು ನಿಮಿಷಕ್ಕೊಂದರಂತೆ ಬಸ್ಸುಗಳಿದ್ದವು. ಸ್ಕೂಟರಿನ ಬಗ್ಗೆ ಚಿಂತಿಸುವ ಅಗತ್ಯವೂ ನನಗಿರಲಿಲ್ಲ. ಹೊಸ ಶಾಲೆಯ ಕಡೆಗೆ ಅರ್ಧ ಗಂಟೆಗೊಂದು ಬಸ್ಸು. ಸಣ್ಣ ಮಗುವನ್ನು ಸಂಭಾಳಿಸಿ, ಮನೆಕೆಲಸ ಮುಗಿಸಿ ಹೊರಡುವಾಗ ಬಸ್ಸು ತಪ್ಪುತ್ತಿತ್ತು. ಮುಖ್ಯ ಶಿಕ್ಷಕರು, ‘ಸ್ವಲ್ಪ ಬೇಗ ಬರಲು ಪ್ರಯತ್ನಿಸಿ’ ಎಂದು ಆಗಾಗ ಹೇಳುತ್ತಿದ್ದರು. ತಡವಾಗಿ ಹೋಗುವುದು ನನಗೂ ಕಿರಿಕಿರಿಯೆನಿಸುತ್ತಿತ್ತು. ಬಸ್ಸು ತಪ್ಪಿದ ಮೇಲೆ ಮುಂದಿನ ಬಸ್ಸಿಗಾಗಿ ಕಾಯುವ ಸಮಯ ನನಗೆ ಮುಳ್ಳು ಚುಚ್ಚಿದಂತಾಗುತ್ತಿತ್ತು. ಒಮ್ಮೊಮ್ಮೆ ಟ್ಯಾಕ್ಸಿ ಸರ್ವಿಸ್‌ ಕಾರು ಸಿಗುತ್ತಿತ್ತು. ನನ್ನ ಶಾಲೆಯಿರುವ ಊರು ಕೊನೆಯ ಸ್ಟಾಪ್‌ ಆದ ಕಾರಣ ನಾನು ಅಥವಾ ಅಲ್ಲಿ ಇಳಿಯುವ ಯಾರನ್ನೇ ಆಗಲಿ ಡ್ರೈವರಿನ ಪಕ್ಕ ಕುಳಿತುಕೊಳ್ಳಿಸುತ್ತಿದ್ದರು. ಅವರು ಗೇರ್‌ ಬದಲಿಸುವಾಗ ನಮಗೆ ಇರಿಸುಮುರಿಸಾಗುತ್ತಿತ್ತು. ಇನ್ನು ಕೆಲವೊಮ್ಮೆ ಹಿಂದಿನ ಸೀಟೇನೋ ಸಿಗುತ್ತಿತ್ತು. ಆದರೆ, ಹೆಚ್ಚು ಜನರಿರುವ ಕಾರಣ ನಮ್ಮ ತೊಡೆಯ ಮೇಲೆ ಇನ್ನೊಬ್ಬ ಮಹಿಳೆಯನ್ನು ಕುಳಿತುಕೊಳ್ಳಿಸಬೇಕಿತ್ತು ಅಥವಾ ನಾನು ಅವರ ತೊಡೆಯಲ್ಲಿ ಕುಳಿತಿರಬೇಕಿತ್ತು. ಹೇಗಿದ್ದರೂ ಇಳಿಯುವಾಗ ಕಾಲು ಮರಗಟ್ಟಿದಂತಾಗಿ ನಡೆಯಲು ಕಷ್ಟವಾಗುತ್ತಿತ್ತು. ಇನ್ನು ಮನೆಯಿಂದ

ಅಗತ್ಯ ಕೆಲಸಗಳಿಗೆಂದು ಪೇಟೆಗೆ ಹೋಗಬೇಕಾದರೆ ಆಟೋವೇ ಗತಿ

ಯಾಗಿತ್ತು. ಕಾಯುವಿಕೆಯೆಂಬ ಅನಿವಾರ್ಯ ಕಾಯಕದಿಂದ ಮನಸ್ಸು ರೋಸಿ ಹೋಗಿತ್ತು. ಹೀಗಿರಲು ನಾನು ಸ್ಕೂಟರ್‌ ಕಲಿಕೆಯ ಪ್ರಸ್ತಾಪ ಎತ್ತಿದೆ. ಗಂಡನ ಕಡೆಯಿಂದ ಗ್ರೀನ್‌ ಸಿಗ್ನಲ್ ದೊರೆತದ್ದೇ ಸ್ಕೂಟರ್‌ ರೈಡಿಂಗ್‌ ಕಲಿಸುವ ಶಿಕ್ಷಕಿಯೊಬ್ಬರನ್ನು ಭೇಟಿಯಾದೆ. ಸ್ಕೂಟರ್‌ ಖರೀದಿ

ಸಿಯೂ ಆಯ್ತು. ಕಲಿತೂ ಆಯ್ತು. ಕೆಲವು ದಿನ ನಮ್ಮ ಮನೆ ಸಮೀಪದ ಮೈದಾನದಲ್ಲಿ ಸ್ಕೂಟರ್‌ ಬಿಡಲು ಅಭ್ಯಾಸ ಮಾಡುತ್ತಿದ್ದೆ. ಕಲಿಕೆ ಮುಗಿಯಿತೆಂಬ ಗತ್ತಿನಲ್ಲಿ ಒಂದು ದಿನ ಮುಖ್ಯರಸ್ತೆಯಲ್ಲಿ ಯು ಟರ್ನ್ ತೆಗೆದು ಆಚೆ ಬದಿಗೆ ಹೋದೆ. ಅಲ್ಲಿ ಸ್ವಲ್ಪ ಇಳಿಜಾರಿತ್ತು. ನನಗರಿವಿಲ್ಲದೇ ವೇಗ ಜಾಸ್ತಿಯಾಗಿತ್ತು. ಭಯದಿಂದ ಒಮ್ಮೆಲೇ ಬ್ರೇಕ್‌ ಹಿಡಿದೆ. ಬ್ಯಾಲೆನ್ಸ್ ತಪ್ಪಿದಂತಾಗಿ ಸ್ಕೂಟರ್‌ ಅತ್ತಿತ್ತ ಓಲಾಡುತ್ತ ಮುಂದೆ ಚಲಿಸಿ ಪಲ್ಟಿ ಹೊಡೆಯಿತು. ನನ್ನ ಕೈಗೆ ಸ್ಕೂಟರ್‌ ಕೊಟ್ಟು ಸರ್ಕಲ್ ಕಡೆ ನಡೆದು ಹೋಗಿದ್ದ ಯಜಮಾನರಿಗೆ ಯಾರೋ ಫೋನ್‌ ಮಾಡಿ ವಿಷಯ ತಿಳಿಸಿದರು. ನನಗೆ ಕೈಕಾಲುಗಳಲ್ಲಿ ಅಲ್ಲಲ್ಲಿ ಚರ್ಮ ಕಿತ್ತು ಹೋಗಿತ್ತು. ಅದು ಗುಣವಾದ ಬಳಿಕ ಸ್ಕೂಟರಲ್ಲಿ ಶಾಲೆಗೆ ಹೋಗತೊಡಗಿದೆ.

ನನಗೆ ಮೂವರು ಮಕ್ಕಳು. ಸರ್ವಿಸ್‌ ಆಟೋಕ್ಕೆ ಕೈ ತೋರಿಸಿದರೆ ಕೆಲವರು ನಿಲ್ಲಿಸದೇ ಹೋಗುತ್ತಿದ್ದರು. ಮಕ್ಕಳು ಕುಳಿತರೆ ಅವರಿಗೆ ಸೀಟು ವೇಸ್ಟ್ ಆಗತ್ತದೆಂಬುದೇ ಕಾರಣ. ತಡವಾಗಿ ಹೊರಟಾಗ ಸುಲಭವಾಗಿ ದೊರೆಯದ ಆಟೋದಿಂದಾಗಿ ಮತ್ತಷ್ಟು ತಡವಾಗುತ್ತಿತ್ತು. ಆದರೆ, ಯಾವಾಗ ಸ್ಕೂಟರ್‌ ಬಂತೋ ನನಗೆ ರೆಕ್ಕೆ ಬಂದಂತಾಯಿತು. ನಾನು ವಾಹನಕ್ಕಾಗಿ ಕಾಯಬೇಕಿಲ್ಲ. ಇಕ್ಕಟ್ಟಿನಲ್ಲಿ ಕುಳಿತು ಪ್ರಯಾಣಿಸಬೇಕಾಗಿಲ್ಲ. ಅಸಭ್ಯ ವರ್ತನೆ ತೋರುವ ಸಹಪ್ರಯಾಣಿಕರ ಬಗ್ಗೆ ಭಯವಿಲ್ಲ. ನನ್ನದೇ ಸ್ವಾತಂತ್ರ್ಯದ ಸ್ವರ್ಗದಲ್ಲಿ ವಿಹರಿಸುವ ಖುಷಿ ನನ್ನದಾಯಿತು. ಒಂದು ನಿಮಿಷ ಅಥವಾ ಸೆಕೆಂಡಿನ ವ್ಯತ್ಯಾಸದಲ್ಲಿ ಬಸ್ಸು ತಪ್ಪುವಾಗ ಆಗುವ ಯಾತನೆಯನ್ನೂ ಅನುಭವಿಸಬೇಕಿಲ್ಲ. ಚಿಲ್ಲರೆ ಹಣವನ್ನು ಪರ್ಸ್‌ ಲ್ಲಿಟ್ಟುಕೊಳ್ಳಬೇಕಾಗಿಲ್ಲ. ನಾನು ಹೊರಗೆ ಹೊರಡುವ ಸಮಯವನ್ನು ಸಾರ್ವಜನಿಕ ವಾಹನ ನಿರ್ಧರಿಸದೇ ನಾನೇ ನಿರ್ಧರಿಸುವ ಸುಖವೇನು ಸಾಮಾನ್ಯದ್ದೆ? ಮಕ್ಕಳನ್ನು ಡ್ರಾಯಿಂಗ್‌, ಸಂಗೀತ, ನೃತ್ಯ ಮುಂತಾದ ತರಗತಿಗಳಿಗೆ ಸೇರಿಸಲು ನನ್ನ ವಾಹನದ ಸಹಕಾರದಿಂದಲೇ ಸಾಧ್ಯವಾಯಿತೆನ್ನಬಹುದು. ಸುತ್ತಮುತ್ತಲಿನ ಸುಂದರ ಪರಿಸರ ವೀಕ್ಷಿಸುತ್ತ್ತ, ಸ್ವಚ್ಛ ಗಾಳಿ ಸೇವಿಸುತ್ತ ಗ್ರಾಮೀಣ ಭಾಗದಲ್ಲಿರುವ ನನ್ನ ಶಾಲೆಯತ್ತ ಪ್ರಯಾಣಿಸುವಾಗ ಆಕಾಶವೊಂದೇ ನನ್ನ ಸ್ವಾತಂತ್ರ್ಯಕ್ಕೂ ಸಂತೋಷಕ್ಕೂ ಎಲ್ಲೆ ಎಂದೆನಿಸುತ್ತದೆ.

ಯಾರ ಮಕ್ಕಳು ಸಹಪಠ್ಯ ವಿಷಯಗಳ ತರಬೇತಿ ಪಡೆಯುತ್ತಾರೋ ಅವರೆಲ್ಲರ ಅಮ್ಮಂದಿರಲ್ಲೂ ಸ್ಕೂಟರ್‌ ಇದ್ದೇ ಇರುತ್ತದೆ. ನೃತ್ಯ, ಸಂಗೀತ ಮುಂತಾದ ತರಗತಿಗಳು ನಡೆಯುವಲ್ಲಿ ಮಕ್ಕಳನ್ನು ಕರೆತರುವವರು ಅಮ್ಮಂದಿರೇ. ಅದೂ ಸ್ಕೂಟರಿನಲ್ಲಿ. ವಾಹನ ಸೌಕರ್ಯದ ಕೊರತೆಯಿರುವ ಕಡೆಗಳಲ್ಲಂತೂ ದ್ವಿಚಕ್ರ ವಾಹನ ಚಾಲನೆ ಮಹಿಳೆಯರಿಗೆ ಅನಿವಾರ್ಯ ಎನಿಸಿಬಿಟ್ಟಿದೆ. ಆದರೆ, ಕೆಲವು ಮಹಿಳೆಯರು ದ್ವಿಚಕ್ರವಾಹನ ಚಾಲನೆ ಮಾಡುವಾಗ ಹೆಚ್ಚು ವೇಗವಾಗಿ ಹೋಗುವುದಿದೆ. ಕೆಲವರು ಗಂಡಸರಿಗಿಂತ ತಾವೇನೂ ಕಡಿಮೆಯಿಲ್ಲ ಎಂಬಂತೆ ಮೊಬೈಲಲ್ಲಿ ಮಾತನಾಡುತ್ತ ಚಾಲನೆ ಮಾಡುತ್ತಾರೆ. ಹೆಲ್ಮೆಟ್ ಧರಿಸದೇ ಹೋಗುತ್ತಾರೆ. ಇದರಿಂದ ಆಪತ್ತನ್ನು ಆಹ್ವಾನಿಸಿದಂತಾಗುತ್ತದೆ. ಸುರಕ್ಷತೆಯ ನಿಯಮಗಳನ್ನು ಕಡೆಗಣಿಸಿ ಚಾಲನೆ ಮಾಡುವುದು ಸಾಹಸವಲ್ಲ, ಅಪರಾಧ. ಹಿತಮಿತವಾದ ವೇಗದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಚಾಲನೆ ಮಾಡುವುದು ಅತ್ಯಗತ್ಯ. ಹಲವು ಮಹಿಳೆಯರು ಸೀರೆ ಅಥವಾ ಚೂಡಿದಾರ್‌ ಧರಿಸಿ ಚಾಲನೆ ಮಾಡುತ್ತಾರೆ. ಅಂಥ ಸಂದರ್ಭ ಗಳಲ್ಲಿ ಸೀರೆಯ ಸೆರಗು ಅಥವಾ ಚೂಡಿದಾರದ ಶಾಲನ್ನು ಗಾಳಿಯಲ್ಲಿ ಹಾರದಂತೆ ಕಟ್ಟಿಕೊಳ್ಳುವುದು ಅಗತ್ಯ. ಹಾಗೆಯೇ ಸೀರೆ ಕಾಲಿಗೆ ತೊಡರಿ ತೊಂದರೆಯಾಗದಂತೆ ಎತ್ತಿಕಟ್ಟುವುದೂ ಅಗತ್ಯ. ಇಲ್ಲದಿದ್ದರೆ ಗಾಡಿಯ ಚಕ್ರಕ್ಕೆ ಬಟ್ಟೆ ಸಿಲುಕಿ ಚಾಲನೆ ಮಾಡುವವರು ನೆಲಕ್ಕೆಸೆಯಲ್ಪಡುವ ಅಥವಾ ಶಾಲು ಕುತ್ತಿಗೆಗೆ ಬಿಗಿಯಲ್ಪಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ವಾಹನ ಚಾಲನೆಯಲ್ಲಿ ಮಹಿಳೆಯರು ಅಗತ್ಯ ಸುರಕ್ಷಾ ಕ್ರಮಗಳನ್ನು ವಹಿಸಬೇಕು. ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಜಾಕೆಟ್ ಧರಿಸುವುದೂ ಉತ್ತಮ.

ಎಲ್ಲಿಗಾದರೂ ಹೋಗಬೇಕಾದರೆ ಗಂಡನ ಬಳಿ ಗೋಗರೆಯುವ ಕಷ್ಟವಾಗಲೀ, ಜನರು ತುಂಬಿ ತುಳುಕುವ ವಾಹನದಲ್ಲಿ ಉಸಿರುಗಟ್ಟಿ ಪ್ರಯಾಣಿಸುವ ಕಷ್ಟವಾಗಲೀ ಇಲ್ಲದಂತೆ ನನ್ನಂತಹ ಮಹಿಳೆಯರನ್ನು ಕಾಪಾಡುವ ಸ್ಕೂಟರ್‌ ನಮಗೆ ಕೊಟ್ಟದ್ದು ನಿಜಕ್ಕೂ ಸ್ವಾತಂತ್ರ್ಯವಲ್ಲವೆ?

ಜೆಸ್ಸಿ ಪಿ. ವಿ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.