ಹಾವಿನ ಹರಣ


Team Udayavani, May 18, 2018, 6:00 AM IST

k-16.jpg

ಹೊಳೆಯ ಬದಿಯಲ್ಲಿ ಸೇರಿರುವ ಹೆಂಗಳೆಯರೆಲ್ಲ ಹೊಸ ಸುದ್ದಿಯೊಂದಕ್ಕೆ ಕಿವಿಯಾಗಬೇಕೆಂಬ ತಹತಹಿಕೆಯಲ್ಲಿರುವಾಗಲೇ ಕೆಂಪಿಯ ಕಣ್ಣಿಗೆ ದಡದಲ್ಲಿರುವ ಮುಡಿನ ಓಲೆಯ ನಿಬಿಡವಾದ ಹಿಂಡಿನ ಒಳಗೆ ಏನೋ ಸರಸರನೆ ಹರಿದುದು ಕಂಡಿತು. “”ಅಕಾ ಅಲ್ಕಾಣಿ, ದೊಡ್ಡದೊಂದು ಹಾವು!” ಎಂದು ಕಿರುಚಿದಳು. ಹೇಳಬೇಕಾದ ಕಥೆಯೆಲ್ಲ ಅಲ್ಲೇ ಆವಿಯಾಗಿ, ಎಲ್ಲರೂ ಕೆಂಪಿ ತೋರಿಸಿದ ಹಿಂಡಿನೆಡೆಗೆ ನೋಡತೊಡಗಿದರು. ಮಾಮೂಲಿ ಕೇರೆಯೋ, ಒಳ್ಳೆ ಹಾವೋ ಇರಬೇಕೆಂದು ದೃಷ್ಟಿ ಹಾಯಿಸಿದವರಿಗೆ ಕಂಡದ್ದು ಮಾತ್ರ ಅಡಿಕೆ ಮರದಷ್ಟು ಗಾತ್ರದ ಆರಡಿ ಉದ್ದದ ಹೆಬ್ಟಾವು! ಆ ಹಾವು ಹೊಳೆಯ ದಡದ ಹಿಂಡಿನಲ್ಲಿ ಹರಿದು ಕಣ್ಮರೆಯಾಗುವ ಮುನ್ನವೇ ಊರ ಗಂಡಸರನ್ನು ಕರೆದು, “”ಹಾವಿಗೊಂದು ಗತಿ ಕಾಣಿಸದಿದ್ದರೆ ನಮಗೆ ಉಳಿಗಾಲವಿಲ್ಲವೆಂದು” ಎಲ್ಲರೂ ಒಕ್ಕೊರಲಿನಿಂದ ತೀರ್ಮಾನಿಸಿ, ಅವಸರದಲ್ಲಿ ಕೈಗೆ ಸಿಕ್ಕಷ್ಟು ಸರಂಜಾಮುಗಳನ್ನು ಬುಟ್ಟಿಗೆ ತುಂಬಿಸಿಕೊಂಡು ಹೆದರುತ್ತಲೇ ಹೊಳೆಯ ದಂಡೆಯೇರಿದರು. ಅಷ್ಟರವರೆಗೂ ಮೌನವಾಗಿ ಅವರ ಮಾತುಗಳಿಗೆ ಕಿವಿಯಾದ ಹೊಳೆ ಮಾತ್ರ ಹೊಸದೊಂದು ಕಥೆ ಅರ್ಧದಲ್ಲೇ ಕೊನೆಯಾದ ಬೇಸರದಿಂದ ಮತ್ತೆ ಝುಳುಝುಳು ಸದ್ದಿನೊಂದಿಗೆ ಹರಿಯತೊಡಗಿತು.

ಬುಟ್ಟಿ ಹೊತ್ತು ನಿಂತ ಹೆಂಗಸರೆಲ್ಲ ಇದ್ದಷ್ಟು ಜೋರಾಗಿ “ಕೂ…ಹೂ…’ ಎಂದು ದನಿಯೇರಿಸಿ ಕೂಗು ಹಾಕಿದ್ದು ಅಲ್ಲೇ ದೂರದ ಗದ್ದೆಯಲ್ಲಿ ಬದುಕಟ್ಟುತ್ತಿದ್ದ ಗಂಡಸರ ಕಿವಿಗೆ ತಲುಪಿತು. ಹೆಂಗಸರೊಂದಿಗೆ ಕುಸು ಕುಸು ಮಾಡುತ್ತ ಬಂದ ಯಾವುದೋ ಮಗು ಹೊಳೆಯಲ್ಲಿ ತೇಲಿ ಹೋಗಿರಬಹುದೆಂಬ ಗಾಬರಿಯಲ್ಲವರು ಗದ್ದೆಯ ಬದುವಿನ ಮೇಲೆ ಎದ್ದೆನೊ ಬಿದ್ದೆನೋ ಎಂಬಷ್ಟು ಲಗುಬಗೆಯಿಂದ ಓಡೋಡಿ ಬಂದರು. ಹಾವಿನ ಸುದ್ದಿ ಕೇಳಿದ್ದೇ ಹೆಂಗಸರ ಮಾತನ್ನು ಪೂರ್ತಿಯಾಗಿ ನಂಬಬಾರದೆಂಬ ಅವರ ಗಂಡಸ್ತಿಕೆ ಎಚ್ಚರಗೊಂಡು ಹಾವಿನ ದಪ್ಪ, ಉದ್ದ, ಹೋದ ದಿಕ್ಕು ಇವುಗಳೆಲ್ಲದರ ಬಗ್ಗೆ ವಿವರವಾಗಿ ವಿಚಾರಿಸತೊಡಗಿದರು. “”ಕೊಂದು ತಿಂದವನ ಹತ್ತಿರ ಕಂಡದ್ದೇ ಸುಳ್ಳು ಅನ್ನೋ ಥರಾ ಕೇಳ್ತೀರಲ್ಲೋ ತಮ್ಮಗಳೀರಾ” ಅಂತ ಅಮ್ಮೆಣ್ಣು ಅಬ್ಬರಿಸದಿದ್ದರೆ ಅವರು ತಮ್ಮ ಹೆಂಗಸರ ಮಾತನ್ನು ಉಡಾಫೆ ಮಾಡಿ ಅಲ್ಲಿಂದ ಕಾಲ್ಕಿàಳುತ್ತಿದ್ದರು. ಮುಂದುವರೆದ ಅಮ್ಮೆಣ್ಣು “”ನೋಡುವ, ಗಂಡಸರೆಲ್ಲಾ ಸೇರಿ ಒಂದು ಧೈರ್ಯ ಮಾಡಿ ಕಾಂಬ. ಮಕ್ಕಳು ಮರಿಗಳು ತಿರುಗಾಡೋ ದಾರಿ. ಹಾವು ಏನು ಸಣ್ಣಸಾಮಾನ್ಯದ್ದಲ್ಲ. ಮಕ್ಕಳು ಮರೀನ ಇಡಿಯಾಗಿ ನುಂಗುವಂಥಾದ್ದು” ಎಂದು ಹಾವಿನ ಸಂಹಾರದ ಕೆಲಸವನ್ನು ಗಂಡುಕುಲಕ್ಕೆ ವಹಿಸಿಬಿಟ್ಟಳು.

ಹೆಬ್ಟಾವೆಂದರೆ ಗಂಡಸರಿಗೂ ಭಯವಿಲ್ಲವೆಂದೇನಲ್ಲ. ಆದರೆ, ಈಗವರ ಗಂಡಸ್ತಿಕೆಯ ಪ್ರಸ್ತಾಪವಾದ್ದರಿಂದ ಅದನ್ನು ತೋರಿಸದೇ ಬೇರೆ ಉಪಾಯವಿರಲಿಲ್ಲ. ಹಾಗಾಗಿ ಅಲ್ಲಿಯೇ ಕುಳಿತು ಹಾವಿನ ಸಂಹಾರಕ್ಕೊಂದು ಸ್ಕೆಚ್‌ ಹಾಕುತ್ತ, ಯಾವುದಕ್ಕೂ ಇರಲಿ ಎಂದು ಊರಿನ ಮಹಾನ್‌ ಧೈರ್ಯಸ್ಥ ರಾಮನಿಗೊಂದು ಕರೆಕಳಿಸಿದರು. ಸದಾ ಸೆರೆಯ ಅಮಲಿನಲ್ಲಿರುವುದೇ ಅವನ ಧೈರ್ಯದ ಗುಟ್ಟೆಂದು ತಿಳಿದಿತ್ತಾದರೂ, ಮುಡಿRನ ಹಿಂಡು ಸವರಿ ಹಾವಿನ ಜಾಡು ಕಂಡುಹಿಡಿಯಲು ಅಂಥದೊಂದು ಹುಂಬು ಧೈರ್ಯವುಳ್ಳ ವ್ಯಕ್ತಿಯ ಆವಶ್ಯಕತೆಯಿತ್ತು. 

ತನಗೆ ಸಿಕ್ಕಿದ ಅಚಾನಕ್‌ ಸಾಹಸ ಕಾರ್ಯಕ್ಕೆ ತೀರ ಖುಶಿಗೊಂಡ ರಾಮ ಬಂದವನೇ ಹಾವು ಸಂಹಾರದ ಉಸ್ತುವಾರಿಯನ್ನು ವಹಿಸಿಕೊಂಡೇಬಿಟ್ಟ. ಕೆಲವರನ್ನು ಹಿಂಡು ಸವರುವ ಕೆಲಸಕ್ಕೂ, ಇನ್ನೂ ಕೆಲವರನ್ನು ಹಾವು ಹೊಡೆಯಲೆಂದು ಅಡಿಕೆ ದಬ್ಬೆಯನ್ನು ತಯಾರುಮಾಡುವುದಕ್ಕೂ ನೇಮಿಸಿದನಲ್ಲದೇ ಹೆಬ್ಟಾವಾದ್ದರಿಂದ ಸರಕ್ಕನೆ ಆಕ್ರಮಣ ಮಾಡದೆಂಬ ಧೈರ್ಯವನ್ನೂ ಅವರೆಲ್ಲರಲ್ಲಿ ತುಂಬಿದ. ಯಾವುದಕ್ಕೂ ಇರಲಿ ಎಂದು ಹತ್ತಿರದ ಮನೆಯಿಂದ ಒಂದಿಷ್ಟು ಒಣಹುಲ್ಲು ಮತ್ತು ಬೆಂಕಿಪೆಟ್ಟಿಗೆಯನ್ನೂ ತರಿಸಿಟ್ಟುಕೊಂಡ. ಆಗಲೇ ಊರಿಗೆಲ್ಲ ಸುದ್ದಿ ಹರಡಿ ಸುತ್ತ ಬೆಳೆದ ಹಸಿರು ಪೈರನ್ನೂ ಲೆಕ್ಕಿಸದೇ ಜನಜಂಗುಳಿ ಸೇರಿ, ಹಸಿರೆಲ್ಲ ಕೆಂಪಾಗುತ್ತಿದ್ದರೆ,  ಬದಿಗೆ ಸರಿಯಿರೋ ಎಂದು ಬೇಡುತ್ತಿದ್ದ ಹೊಲದೊಡೆಯ ಮಂಜುವಿನ ಧ್ವನಿ ಗದ್ದಲದಲ್ಲಿ ಯಾರ ಕಿವಿಗೂ ಬೀಳದೇ ಕರಗಿಹೋಗುತ್ತಿತ್ತು. ಅಂತೂ ಇಂತೂ ಹರಸಾಹಸದ ನಂತರ ಹಾವು ಹಿಂಡಿನಿಂದ ಹೊರಬಂದು ಗದ್ದೆಯ ಮೇಲೆ ಬಿದ್ದು ಹೊರಳಾಡತೊಡಗಿತು. ಊರ ಯುವಕರಿಗೆಲ್ಲಾ ಆಗ ಹೊಸದೊಂದು ಆವೇಶ ಮೈತುಂಬಿ ಬಂದು ಮೊದಲೇ ತಯಾರಿಸಿಟ್ಟ ಅಡಿಗೆ ದಬ್ಬೆಯಿಂದ ಮನಬಂದಂತೆ ಬಾರಿಸಿದರಾದರೂ ಎಲ್ಲ ಹೊಡೆತಗಳೂ ಗೋಡೆಗೆ ಹೊಡೆದ ರಬ್ಬರ್‌ ಚೆಂಡಿನಂತೆ “ಡಬ್‌’ ಎಂದು ಶಬ್ದ ಮಾಡುತ್ತಾ ಹಿಮ್ಮರಳುತ್ತಿದ್ದವು. ಅಂಥದೊಂದು ಭೀಕರವಾದ ದೃಶ್ಯವನ್ನು ನೋಡಲಾಗದೇ ಹೆಂಗಸರೆಲ್ಲಾ ತಮ್ಮ ಮಕ್ಕಳನ್ನು ಬಾರೆವೆಂದು ಚೆಂಡಿ ಹಿಡಿದಿದ್ದರೂ ಕೇಳದೇ ಕುಂಡೆಗೆರಡು ಬಿಟ್ಟು ಎಳಕೊಂಡು ಮನೆಯತ್ತ ಹೊರಟರು.

ಇತ್ತ ಗಂಡಸರೆಲ್ಲ ಹಾವಿನ ಹರಣಗೈದು, ಅದರ ಶವಕ್ಕೆ ಬೆಂಕಿಯಿಟ್ಟು, ತಾವು ಪಟ್ಟ ಪರಿಶ್ರಮವನ್ನು ಬಗೆಬಗೆಯಾಗಿ ಬಣ್ಣಿಸುತ್ತಾ ಮನೆಸೇರಿದರು. ಮನೆಗೆ ಬರುವ ದಾರಿಯಲ್ಲೇ ವಿಜಯೋತ್ಸವದ ಅಂಗವಾಗಿ ಬುರುಡೆಗಟ್ಟಲೇ ಸರಾಯಿಯನ್ನು ಹೊಟ್ಟೆಗಿಳಿಸಿದ್ದನ್ನು ಅವರ ನಡಿಗೆಯೇ ಹೇಳುತ್ತಿತ್ತು. ಹೆಂಡತಿಯರು ನೀಡಿದ ಊಟವನ್ನು ತಿಂದ ಶಾಸ್ತ್ರ ಮಾಡಿ ಮಲಗಿದವರಿಗೆ ಆಚೆಯಧ್ದೋ ಎಂಬ ಗಾಢ ನಿದ್ರೆ. ಹೊಲದಂಚಿನಲ್ಲಿ ಕಟ್ಟಿದ್ದ ಎತ್ತನ್ನೂ ಬಿಡಿಸದೇ ಹಾಗೇ ಓಡಿಬಂದ ಗಂಡಸರ ನಿರ್ಲಕ್ಷ್ಯದ ನಡೆಗೆ ಹಿಡಿಶಾಪ ಹಾಕುತ್ತ ಹೆಂಗಸರು ಉಂಡು ಕೈತೊಳೆದವರೇ ತಮ್ಮ ತಮ್ಮ ಜಾನುವಾರುಗಳನ್ನು ಹುಡುಕಿಕೊಂಡು ಹೊಲದತ್ತ ನಡೆದರು. ಹಾವಿಗೆ ಬೆಂಕಿಯಿಟ್ಟ ಜಾಗದಲ್ಲೀಗ ಬೂದಿಯ ರಾಶಿಯೊಂದಿಗೆ ಹಾವಿನ ಬೆನ್ನೆಲುಬಿನ ಅವಶೇಷಗಳು ಮಾತ್ರ ಕಾಣುತ್ತಿದ್ದವು. “”ಹಾವಿನ ಎಲುಬು ಭಾರೀ ವಿಷ ಅಂತಾರಪ್ಪ. ಕಾಲೀಗೇನಾರ ತಾಗಿದ್ರೆ ಕಾಲೇ ಕೊಳಿತದೆ ಕಾಣು. ಅದಕ್ಕೇ ನಾಳೀಕೆ ಬೆಂಕಿ ತಣ್ಣಗಾದ ಕೂಡಲೇ ಗೆರಸಿ ತಂದು ಎಲ್ಲ ಮೂಳೇನೂ ಎತ್ತಿ ಹಾಕಬೇಕು” ಎಂದು ಅಮ್ಮೆಣ್ಣು ಎಲ್ಲ ಹೆಂಗಸರನ್ನು ಎಚ್ಚರಿಸಿದಳು. ಜೊತೆಯಲ್ಲೇ ಓಡಿಬಂದ ಹೈಕಳಿಗೆ ಯಾವುದೇ ಕಾರಣಕ್ಕೂ ಬೆಂಕಿಗೆ ಕಾಲು ಹಾಕಬೇಡಿ ಎಂದು ಎಚ್ಚರಿಸಿದ್ದಲ್ಲದೇ ಇನ್ನು ಓಡಾಡುವಾಗ ಹಾವಿನ ಮೂಳೆ ಇದೆಯೋ ಎಂದು ನೋಡಿ ನಡೆಯುವಂತೆ ತಾಕೀತು ಮಾಡಲಾಯಿತು.

ಮನೆಯೊಡೆಯನನ್ನು ಕಾದು, ಕಾದು ಸೋತುಹೋದ ಎತ್ತುಗಳೆಲ್ಲ ಕಟ್ಟಿದಲ್ಲಿಯೇ ಮಲಗಿ ದಣಿವಾರಿಸಿಕೊಳ್ಳುತ್ತಿದ್ದವು. ಅವುಗಳ ಹಗ್ಗ ಬಿಚ್ಚಿ, ಹೊಳೆಗೆ ತಂದು ಕೊಂಚ ನೀರು ಕುಡಿಸಿದ ಹೆಂಗಸರು ಬೆಳಗಿನಿಂದ ಉಪವಾಸವಿರುವ ಎತ್ತುಗಳು ನಾಲ್ಕು ಬಾಚು ಮೇಯಲೆಂದು ಅಲ್ಲೇ ಬದುವಿನ ಹತ್ತಿರಕ್ಕೆ ಕುಳಿತು ಯಾವ ಕಥೆಯನ್ನೂ ಹೇಳಲಾಗದೇ ಮೌನವಾದರು. “ಕರ ಕರ’ವೆಂಬ ಎತ್ತಿನ ಮೇಯುವ ದನಿಯು, ಸಳಸಳವೆಂದು ಹರಿವ ಹೊಳೆಯ ನೀರಿನೊಂದಿಗೆ ಸೇರಿ ಹೊಸದೊಂದು ಸಂಗೀತವನ್ನು ಹಾಡಿದಂತೆ ಭಾಸವಾಗುತ್ತಿತ್ತು. ಮರಳಿ ಬರುವ ದಾರಿಯಲ್ಲಿ ಹುಲಿಗಿರಿ¤ಯೆದುರು ನಿಂತ ಮಾದ ಜೋರುದನಿಯಲ್ಲಿ ಏನೋ ಹೇಳುತ್ತಿರುವುದು ಅವರ ಕಿವಿಗೆ ಬಿತ್ತು.

ಸುಧಾ ಆಡುಕಳ

ಟಾಪ್ ನ್ಯೂಸ್

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.