ಕಿತ್ತಳೆಹಣ್ಣಿನ ವೈವಿಧ್ಯ


Team Udayavani, Dec 6, 2019, 5:00 AM IST

ws-23

ಕಿತ್ತಳೆಯು ಹಣ್ಣುಗಳಲ್ಲಿ ಸರ್ವಶ್ರೇಷ್ಠ. ಈ ಹಣ್ಣನ್ನು ಸೇವಿಸುವುದರಿಂದ ಆಯಾಸ ಪರಿಹಾರವಾಗುವುದು. ಬಾಯಾರಿಕೆ ನೀಗುವುದು. ಹಸಿವು ಕಾಣಿಸಿಕೊಳ್ಳುವುದು. ರಕ್ತ ವೃದ್ಧಿಯಾಗುವುದು. ಈ ಹಣ್ಣಿನ ರಸವನ್ನು ಎಲ್ಲ ವಯಸ್ಸಿನವರಿಗೂ, ಯಾವುದೇ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೂ ನಿರಾತಂಕವಾಗಿ ಕೊಡಬಹುದು. ಇಲ್ಲಿವೆ ಕೆಲವು ಕಿತ್ತಳೆಯ ರೆಸಿಪಿಗಳು.

ಕಿತ್ತಳೆ ಅಪ್ಪೆಹುಳಿ
ಬೇಕಾಗುವ ಸಾಮಗ್ರಿ: 1-2 ಕಿತ್ತಳೆ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, ಚಿಟಿಕೆ ಇಂಗು, ಸ್ವಲ್ಪ ಕರಿಬೇವು, 1 ಒಣಮೆಣಸು, ರುಚಿಗೆ ತಕ್ಕಷ್ಟು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು , 1 ಚಮಚ ಎಣ್ಣೆ.

ತಯಾರಿಸುವ ವಿಧಾನ: ಕಿತ್ತಳೆ ಸಿಪ್ಪೆ ತೆಗೆದು, ಸೊಳೆಯ ಬೀಜ ತೆಗೆದು ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಜಾಲರಿಯಲ್ಲಿ ಶೋಧಿಸಿ ಸ್ವಲ್ಪ ನೀರು ಸೇರಿಸಿ. ಬೆಲ್ಲ-ಉಪ್ಪು ಸೇರಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಒಣಮೆಣಸು ಸೇರಿಸಿ ಒಗ್ಗರಣೆ ಕೊಟ್ಟು ಸರಿಯಾಗಿ ತೊಳಸಿ. ಈಗ ರುಚಿಯಾದ ಅಪ್ಪೆ ಹುಳಿ ಅನ್ನ, ಗಂಜಿಯೊಂದಿಗೆ ತಿನ್ನಲು ರುಚಿ.

ಕಿತ್ತಳೆ ಸಿಪ್ಪೆ ಗೊಜ್ಜು
ಬೇಕಾಗುವ ಸಾಮಗ್ರಿ: 2 ಕಿತ್ತಳೆ ಹಣ್ಣಿನ ಸಿಪ್ಪೆ , 2-3 ಹಸಿಮೆಣಸು, 1/4 ಚಮಚ ಕೆಂಪುಮೆಣಸಿನ ಪುಡಿ, 1/2 ಚಮಚ ಸಾಂಬಾರುಪುಡಿ, 1/2 ಅಚ್ಚು ಬೆಲ್ಲ, 1/2 ಚಮಚ ಸಾಸಿವೆ, 1 ಕೆಂಪುಮೆಣಸು, 1 ಚಮಚ ಎಣ್ಣೆ, ಸ್ವಲ್ಪ ಕರಿಬೇವು, 1 ಚಮಚ ತುಪ್ಪ , ರುಚಿಗೆ ತಕ್ಕಷ್ಟು ಉಪ್ಪು .

ತಯಾರಿಸುವ ವಿಧಾನ: ಕಿತ್ತಳೆ ಸಿಪ್ಪೆಯನ್ನು ತೊಳೆದು ಸಣ್ಣಗೆ ಹೆಚ್ಚಿ ಬಾಣಲೆಗೆ ಹಾಕಿ ತುಪ್ಪ ಸೇರಿಸಿ ಕೆಂಪಗೆ ಹುರಿಯಿರಿ. ನಂತರ ಹಸಿಮೆಣಸು, ಉಪ್ಪು , ಬೆಲ್ಲ, ಕೆಂಪುಮೆಣಸಿನ ಪುಡಿ, ಸಾಂಬಾರು ಪುಡಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸು, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ.

ಕಿತ್ತಳೆ ಲಸ್ಸಿ
ಬೇಕಾಗುವ ಸಾಮಗ್ರಿ: 1 ಕಪ್‌ ಗಟ್ಟಿ ಮೊಸರು, 1 ಕಪ್‌ ಕಿತ್ತಳೆ ರಸ, 2 ಚಮಚ ಜೇನುತುಪ್ಪ , 1/2 ಚಮಚ ಹುರಿದ ಜೀರಿಗೆ ಪುಡಿ, 2 ಚಮಚ ಸಕ್ಕರೆ.

ತಯಾರಿಸುವ ವಿಧಾನ: ಮೊಸರು ಮತ್ತು ಕಿತ್ತಳೆ ರಸ ಒಟ್ಟಿಗೆ ಮಿಶ್ರಣ ಮಾಡಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಸಕ್ಕರೆ, ಜೇನುತುಪ್ಪ ಹಾಕಿ ಕರಗಿಸಿ. ಜೀರಿಗೆ ಪುಡಿ ಹಾಕಿ. ಐಸ್‌ ತುಂಡು ಹಾಕಿ ತಣ್ಣಗೆ ಮಾಡಿ. ನಂತರ ಗಾಜಿನ ಲೋಟಗಳಿಗೆ ಹಾಕಿ ಕುಡಿಯಿರಿ.

ಕಿತ್ತಳೆ ಖೀರು
ಬೇಕಾಗುವ ಸಾಮಗ್ರಿ: 1 ಕಪ್‌ ದಪ್ಪ ಹಾಲು, 1 ಕಪ್‌ ಸಕ್ಕರೆ, 100 ಗ್ರಾಂ ಸಪ್ಪೆ ಕೋವಾ, 1 ಸುಲಿದ ಕಿತ್ತಳೆಹಣ್ಣು , 7-8 ಗೋಡಂಬಿ, 9-10 ಒಣದ್ರಾಕ್ಷೆ , ಸ್ವಲ್ಪ ಕೇಸರಿದಳ, 2 ಚಮಚ ತುಪ್ಪ.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು 1 ಕಪ್‌ ದಪ್ಪ ಹಾಲು ಹಾಕಿ ಬಿಸಿ ಮಾಡಿ. ನಂತರ ಸಕ್ಕರೆ ಹಾಕಿ ತೊಳಸಿ. ಸಪ್ಪೆ ಕೋವಾ ಹಾಕಿ ಕರಗಿಸಿ. ನಂತರ ಸಿಪ್ಪೆ-ಬೀಜ ತೆಗೆದ ಕಿತ್ತಳೆ ಹಣ್ಣು ಹಾಕಿ ಸಣ್ಣ ಉರಿಯಲ್ಲಿ ತೊಳಸಿ. ಸ್ವಲ್ಪ ಕುದಿಯಲಿ. ನಂತರ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷೆ ಹುರಿದು ಮಿಶ್ರಣಕ್ಕೆ ಹಾಕಿ, ಕೆಳಗಿಳಿಸಿ. ಮೇಲಿನಿಂದ ಕೇಸರಿ ದಳ ಹಾಕಿ ಅಲಂಕರಿಸಿ.

ಕಿತ್ತಳೆ ಮುರಬ್ಬ
ಬೇಕಾಗುವ ಸಾಮಗ್ರಿ: 2 ಕಪ್‌ ಬೀಜ, ಸಿಪ್ಪೆ ತೆಗೆದು ತುಂಡು ಮಾಡಿದ ಕಿತ್ತಳೆ ತುಂಡುಗಳು, 1/2 ಕೆಜಿ ಸಕ್ಕರೆ, 1 ಚಮಚ ಏಲಕ್ಕಿ ಪುಡಿ, 1/2 ಚಮಚ ಸಿಟ್ರಿಕ್‌ ಆಮ್ಲ, 1/2 ಚಮಚ ಕೇಸರಿ ಎಸೆನ್ಸ್‌ .

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಕಾಲು ಲೀಟರ್‌ ನೀರು ಹಾಕಿ. ನಂತರ ಸಕ್ಕರೆ ಹಾಕಿ. ಸಕ್ಕರೆ ಕರಗಿ ನೂಲು ಪಾಕವಾದಾಗ ಸಣ್ಣಗೆ ತುಂಡು ಮಾಡಿದ ಕಿತ್ತಳೆ ಚೂರು ಹಾಕಿ. ಪಾಕ ಗಟ್ಟಿಯಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ಕೇಸರಿ ಎಸೆನ್ಸ್‌ ಮತ್ತು ಏಲಕ್ಕಿ ಪುಡಿ ಹಾಕಿ ಬೆರೆಸಿ. ಮಿಶ್ರಣ ತಣಿದ ಮೇಲೆ ಬಾಟಲಿಯಲ್ಲಿ ಹಾಕಿಡಿ. ಚಪಾತಿ, ರೊಟ್ಟಿ ಜೊತೆ ಸವಿಯಲು ಚೆನ್ನಾಗಿರುತ್ತದೆ.

ಗೀತಸದಾ

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.