ರಿಸಾ, ರಿಗ್ನೈ, ರಿಕುಟು

ತ್ರಿಪುರಾ ರಾಜ್ಯದ ಮಹಿಳೆಯರ ಸಾಂಪ್ರದಾಯಿಕ ಉಡುಗೆ

Team Udayavani, Sep 6, 2019, 5:48 AM IST

b-24

ತ್ರಿಪುರಾ ರಾಜ್ಯವು ಪರ್ವತಗಳಿಂದ ಆವೃತವಾದ ಸುಂದರ ರಾಜ್ಯ. ಈ ರಾಜ್ಯದ ಸಾಂಪ್ರದಾಯಿಕ ತೊಡುಗೆಯ ವೈಶಿಷ್ಟ್ಯವೆಂದರೆ ಈ ರಾಜ್ಯದಲ್ಲಿರುವ ಹಲವು ಬುಡಕಟ್ಟು ಜನಾಂಗಗಳ ತಮ್ಮದೇ ಆದ ವೈಶಿಷ್ಟ್ಯಮಯ ವಸ್ತ್ರಾಲಂಕಾರದ ಛಾಪು!

ಖಾಕ್ಲೂ ಮಹಿಳೆಯರ ಉಡುಗೆ
ಪರ್ವತ ರಾಜ್ಯವಾದ ತ್ರಿಪುರಾದಲ್ಲಿ ಆರಾಮದಾಯಿಕವಾಗಿ ತೊಡುವಂತೆ ಖಾಕ್ಲೂ ಜನಾಂಗದ ಮಹಿಳೆಯರ ವಸ್ತ್ರವನ್ನು ವಿನ್ಯಾಸಮಾಡಲಾಗಿದೆ.

ಮುಖ್ಯವಾಗಿ ರಿಸಾ, ರಿಗ್ನೈ ಹಾಗೂ ರಿಕುಟು ಎಂಬ ಸಾಂಪ್ರದಾಯಿಕ ಉಡುಗೆ ತ್ರಿಪುರಾದಲ್ಲಿ ಸಾಂಪ್ರದಾಯಿಕ ಮಹತ್ವ ಪಡೆದಿದೆ.
“ರಿಗ್ನೆ„’ ದಿರಿಸು ಸ್ಕರ್ಟ್‌ನಂತಹ ತೊಡುಗೆ. ಇದನ್ನು ಸೊಂಟದಿಂದ ಪಾದಗಳವರೆಗೆ ಉದ್ದವಾಗಿ ತೊಡಲಾಗುತ್ತದೆ. ವಿವಿಧ ಬುಡಕಟ್ಟು ಜನಾಂಗದ ಶೈಲಿ ಹಾಗೂ ವಿನ್ಯಾಸ ಬಗೆಬಗೆಯಾಗಿದ್ದರೂ ರಿಗ್ನೆ„ ದಿರಿಸು ಮೂಲಭೂತ ಸಾಂಪ್ರದಾಯಿಕ ಉಡುಗೆಯಾಗಿದೆ.

“ರಿಸು’ ಬಗೆಯ ಉಡುಗೆಯು “ರಿಗ್ನೆ„’ ಸ್ಕರ್ಟ್‌ನಂತಹ ತೊಡುಗೆಯ ಮೇಲೆ ಧರಿಸುವ ಮೇಲ್‌ವಸ್ತ್ರವಾಗಿದೆ. ಅಡ್ಡಗೆರೆ ಹಾಗೂ ಉದ್ದದ ಗೆರೆಗಳಿಂದ ಅಂದರೆ (ಸ್ಟ್ರೈಪ್ಸ್‌)ಗಳಿಂದ ವಿನ್ಯಾಸ ಮಾಡಲಾಗುವ ಈ ತೊಡುಗೆ ಮದುವೆ, ಸಭೆ-ಸಮಾರಂಭಗಳಲ್ಲಿಯೂ ಮಹತ್ವ ಪಡೆದಿದೆ. ವಧುವಿಗೆ ಅಲಂಕೃತವಾದ ವೈಭವಯುತ “ರಿಸಾ’ದಿಂದ ಶೃಂಗಾರಗೊಳಿಸಲಾಗುತ್ತದೆ.

ಈ ಸಾಂಪ್ರದಾಯಿಕ ತೊಡುಗೆಯ ಚರಿತ್ರೆಯೂ ದಿರಿಸಿನಂತೆ ವರ್ಣರಂಜಿತವಾಗಿದೆ. ತ್ರಿಪುರಾದ ಪ್ರಸಿದ್ಧ ರಾಜಮನೆತನವಾದ “ಸುಬ್ರೈ ರಾಜಾ’ ದೊರೆಯ ಆಡಳಿತ ಕಾಲದಲ್ಲಿ ರಿಸಾ ತೊಡುಗೆಯು ವೈವಿಧ್ಯಮಯ ವಿನ್ಯಾಸಗಳಿಂದ ಶ್ರೀಮಂತ ತೊಡುಗೆಯಾಗಿ ಮಹತ್ವ ಪಡೆಯಿತು. ಆದರೆ ರಾಜ್ಯಾಡಳಿತದ ತದನಂತರದ ಕಾಲದಲ್ಲಿ ವಿನ್ಯಾಸಗಳು ಬದಲಾಗುತ್ತ ಇಂದಿನ ಆಧುನಿಕ ಕಾಲದ ವಿನ್ಯಾಸಗಳೊಂದಿಗೆ ಮಹತ್ವಪೂರ್ಣ ಬದಲಾವಣೆಗಳನ್ನು ಮೇಳೈಸಿಕೊಂಡಿದೆ.

“ರಿಸಾ’ ತೊಡುಗೆಯ ಮೇಲೆ ಅಂದದ ಬುಡಕಟ್ಟು ಜನಾಂಗಕ್ಕೆ ವಿಶಿಷ್ಟವಾಗಿರುವಂತಹ ಆಭರಣಗಳನ್ನು ಧರಿಸಲಾಗುತ್ತದೆ. ಇಂದು ತ್ರಿಪುರಾದ “ರಿಸಾ’ ದಿರಿಸಿಗೆ ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಬೇಡಿಕೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೂ ರಫ್ತಾಗುವ “ರಿಸಾ’ ದಿರಿಸು ತನ್ನ ವಿಶಿಷ್ಟತೆಯಿಂದಲೇ ಜನಪ್ರಿಯವಾಗಿದೆ. ಈ ದಿರಿಸಿನ ಮೇಲೆ ಬೇರೆ ಬೇರೆ ಬಗೆಯ ಕಸೂತಿಯ ವಿನ್ಯಾಸಗಳನ್ನು ಹೆಣೆಯಲಾಗುತ್ತಿದೆ. ಈ ಕಸೂತಿ ವಿನ್ಯಾಸಗಳಿಗೂ ವಿಶೇಷ ಹೆಸರುಗಳಿವೆ. ಉದಾ: ಕ್ವಚಕ್‌ ಪಾಲಿ, ಕೊಸೊಮ್‌ ಪಾಲಿ, ಟಿಕುಮ್‌ಟ್ಟಿ ಹಾಗೂ ಖಮ್‌ಜಂಗ್‌ ಇವೇ ಮೊದಲಾದ ತ್ರಿಪುರಾದ ವಿಶೇಷ ಕಸೂತಿ ವಿನ್ಯಾಸಗಳು ಜನಪ್ರಿಯವಾಗಿವೆ.

ತ್ರಿಪುರಾದಲ್ಲಿ ರಿಗ್ನೆ„ ಹಾಗೂ ರಿಸಾ ಬಟ್ಟೆಯ ನೇಯ್ಗೆಯ ಗೃಹೋದ್ಯಮವು ಖ್ಯಾತಿ ಪಡೆದಿದ್ದು, ತ್ರಿಪುರಾದ ಮಹಿಳೆಯರಿಗೂ ಪುರುಷರಿಗೂ ಈ ವಸ್ತ್ರೋದ್ಯಮವೇ ಉತ್ತಮ ಜೀವನೋಪಾಯದ ಮಾಧ್ಯಮವೂ ಆಗಿದೆ.

ಕಕ್ಲೂ ಬುಡಕಟ್ಟು ಜನಾಂಗದ ಮಹಿಳೆಯರು ತೊಡುವ ರಿಗ್ನೆ„ ದಿರಿಸಿನ ಉದ್ದ ಕಡಿಮೆ ಇದ್ದು, ಜಾನುಸಂಧಿಯ ಭಾಗದವರೆಗೆ ಅಲಂಕೃತವಾಗಿ ಉಡಲ್ಪಡುತ್ತದೆ. ರಿಸಾ ಮೇಲ್‌ವಸ್ತ್ರಕ್ಕೆ ಅದರದೇ ಶೈಲಿಯ ಕಸೂತಿಯ ಅಲಂಕಾರವಿದ್ದು, ಈ ಮಹಿಳೆಯರು ಕೆಲಸದ ಸಮಯದಲ್ಲಿ ತಲೆಯ ಭಾಗವನ್ನು ಗಾಳಿಚಳಿಯಿಂದ ರಕ್ಷಿಸಲು ಅಲಂಕೃತ ಬಟ್ಟೆಯಿಂದ ಸುತ್ತಿಕೊಳ್ಳುತ್ತಾರೆ.

ಲುಶೈ ಬುಡಕಟ್ಟು ಜನಾಂಗದ ರಿಗ್ನೆ„ ತೊಡುಗೆಯು ಸರ್ವೇಸಾಮಾನ್ಯ ಗಾಢರಂಗಿನಿಂದ ಕೂಡಿರುತ್ತದೆ. ಗಾಢ ನೀಲಿ ಬಣ್ಣದ ದಿರಿಸು ಸಾಂಪ್ರದಾಯಿಕವಾಗಿ ಇಂದಿಗೂ ಮಹತ್ವಪೂರ್ಣವೆನಿಸುತ್ತದೆ. ಈ ಬಟ್ಟೆಯನ್ನು ಸೊಂಟದ ಸುತ್ತ ಸುತ್ತಲು ದಾರದಂತೆ ಬಳಸಲು ಹಿತ್ತಾಳೆಯ ತೆಳುವಾದ ಸರಿಗೆಗಳನ್ನು ಬಳಸುವುದು ವಿಶೇಷ.

ಬುಡಕಟ್ಟು ಜನಾಂಗದಲ್ಲಿಯೂ ಸಿರಿವಂತ ಮಹಿಳೆಯರು ಈ ದಿರಿಸುಗಳಲ್ಲಿಯೇ ಆಕರ್ಷಕ ಶೈಲಿಯನ್ನು ಹೊಂದಿರುವ ಥನ್‌ಗಂಗ್‌, ಖಮ್‌ಟಂಗ್‌, ಸೈಪಿಕುಪ್‌ ಎಂಬ ವಿಶೇಷ ತೊಡುಗೆಗಳನ್ನು ಧರಿಸುತ್ತಾರೆ.

ಆಧುನಿಕ ಕಾಲದಲ್ಲಿ ರಿಗ್ನೆ„ ಜೊತೆಗೆ ಮೇಲ್‌ವಸ್ತ್ರವಾಗಿ “ರಿಸಾ’ ತೊಡುಗೆ ಧರಿಸುವ ಬದಲಾಗಿ ಟೀಶರ್ಟ್‌ ಅಥವಾ ಕುಪ್ಪಸ ಹಾಗೂ ಸೀರೆಯ ವಿನ್ಯಾಸದ ಶಾಲಿನಂತಹ ಹೊದಿಕೆ ತೊಡುವುದೂ ಜನಪ್ರಿಯವಾಗುತ್ತಿದೆ.

ಇಂದು ತ್ರಿಪುರಾ ಸರಕಾರವು ಈ ಸಾಂಪ್ರದಾಯಿಕ ಉಡುಗೆಯ ಪುರಾತನ ವಿನ್ಯಾಸಗಳನ್ನು ಉಳಿಸಿ ಬೆಳೆಸಲು ಬಹುಮುಖಿ ಪ್ರಯತ್ನವನ್ನು ಮಾಡುತ್ತಿದೆ. ತ್ರಿಪುರಾದ ಸಾಂಪ್ರದಾಯಿಕ ಉಡುಗೆಯ ಸಾಂಸ್ಕೃತಿಕ ಮಹತ್ವದೊಂದಿಗೆ, ಈ ದಿರಿಸುಗಳ ಉದ್ಯಮವು, ಹಣಕಾಸು ಹಾಗೂ ವಾಣಿಜ್ಯ ಕ್ಷೇತ್ರದ ಮೇಲೆ ತನ್ನದೇ ಆದ ಛಾಪು ಹೊಂದಿರುವುದು ಈ ಪುಟ್ಟ ನಾಡಿನ ಮಹೋನ್ನತೆಯೇ ಎನ್ನಬಹುದು!

ಅನುರಾಧಾ ಕಾಮತ್‌

ಟಾಪ್ ನ್ಯೂಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.