ಅಮ್ಮನಿಗೇಕೆ ಬೆಳಗ್ಗೆ ಬೇಗ ಏಳುವುದು ಕಷ್ಟವಲ್ಲ !


Team Udayavani, Nov 22, 2019, 4:31 AM IST

pp-24

ಇದು ನಿನ್ನೆ -ಮೊನ್ನೆ ಕಾಡಿರುವ ಪ್ರಶ್ನೆಯಲ್ಲ. ಬಾಲ್ಯದಿಂದ ಇಂದಿನವರೆಗೂ ಯಕ್ಷಪ್ರಶ್ನೆಯಾಗಿ ಕಾಡುತ್ತಿರುವ ಪ್ರಶ್ನೆ. ಸರಿಯಾಗಿ ಉತ್ತರ ಸಿಗದೆ ಮತ್ತಷ್ಟು ಕಗ್ಗಂಟಾಗಿ ಉಳಿದಿರುವ ಪ್ರಶ್ನೆ. ಎಲ್ಲರೂ ಬೆಳಗ್ಗೆ ಬೇಗ ಏಳಬೇಕು ಅಂದರೆ ಮೂಗು ಮುರಿಯುವವರೇ. ಆದರೆ, ಅಮ್ಮನಿಗೇಕೆ ಬೆಳಗ್ಗೆ ಬೇಗ ಏಳುವುದು ಕಷ್ಟವಾಗುವುದಿಲ್ಲ !

ಚಿಕ್ಕಂದಿನಿಂದಲೂ ಅಮ್ಮ ಒಂದು ಮುಂಜಾನೆ ಏಳುವಳು ಎಂದು ಗೊತ್ತು. ಸೂರ್ಯ ಮೇಲೆ ಬರೋ ಮುನ್ನವೇ ಅಡುಗೆಕೋಣೆಯ ಮಬ್ಬು ಕತ್ತಲಲ್ಲಿ ಚಿಮಿಣಿ ದೀಪ ಬೆಳಗುತ್ತಿತ್ತು. ಪಾತ್ರೆಗಳ ಸದ್ದು ಕೇಳುತ್ತಿತ್ತು. ಬೆಳಗ್ಗೆಯೇ ಎದ್ದು ಹೊರಡುವ ಅಪ್ಪನಿಗೆ ಬಿಸಿಬಿಸಿ ದೋಸೆ ರೆಡಿಯಾಗುತ್ತಿತ್ತು. ಎಲ್ಲರೂ ಗಾಢ ನಿದ್ದೆಯಲ್ಲಿ ಮುಳುಗಿದ್ದರೆ ಅವಳು ಗಾಢ ಕೆಲಸದಲ್ಲಿ ಮುಳುಗಿರುತ್ತಿದ್ದಳು. ಅವಳು ಎದ್ದು ಮನೆಯ ಅರ್ಧ ಕೆಲಸ ಮುಗಿಸಿದ ಮೇಲೆಯೇ ಮನೆಯಲ್ಲಿರುವ ಉಳಿದ ಮಂದಿಗೆ ಬೆಳಗಾಗೋದು.

ಬೇಸಗೆ ಕಾಲವಿರಲಿ, ಮಳೆಗಾಲವಿರಲಿ ಚಳಿಗಾಲವಿರಲಿ ಅವಳ ದಿನಚರಿಯಲ್ಲಂತೂ ಯಾವುದೇ ಬದಲಾವಣೆ ಆಗುವುದಿಲ್ಲ. ವೀಕ್‌ ಡೇಸ್‌, ವೀಕೆಂಡ್‌ ಆದರೂ ಅವಳು ಏಳುವ ಹೊತ್ತು ಅದೇ. ಸಂಡೇ ಆಗಲಿ ಮಂಡೇ ಆಗಲಿ ಅವಳು ಒಂದು ಬೆಳಗ್ಗೆ ಎದ್ದು ಪಟಪಟ ತನ್ನ ಕೆಲಸವನ್ನು ಮಾಡಿ ಮುಗಿಸೋದನ್ನು ನಿಲ್ಲಿಸೋದಿಲ್ಲ. ಹಬ್ಬ ಹರಿದಿನವಿರಲಿ, ಇಲ್ಲದೇ ಇರಲಿ, ಮನೆಗೆ ನೆಂಟರು ಬರಲಿ ಬರದೇ ಇರಲಿ ಅವಳಂತೂ ಬೆಳಗಾಗೋ ಮುನ್ನವೇ ಅಡುಗೆ ಮನೆಯಲ್ಲಿರುತ್ತಾಳೆ.

ಅಲಾರಮ್‌ ಇಟ್ಟು ಬೆಳಗ್ಗೆ ಏಳುವುದೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಪಥ್ಯವಾಗುವ ವಿಷಯ. ಈ ರೀತಿ ಒಂದು ಮುಂಜಾನೆ ಅಲಾರಮ್‌ ಇಟ್ಟು ಏಳುವವರು, ಉಳಿದ ದಿನಗಳಲ್ಲಿ ಅಲಾರಮ್‌ ಮ್ಯೂಸಿಕ್‌ ಕೇಳಿದರೇನೆ ಬೆಚ್ಚಿ ಬೀಳುತ್ತಾರೆ. ಆ ಸದ್ದೇ ಬೆಳಗ್ಗೆ ಬೇಗ ಏಳುವ ನೆನಪನ್ನು ತಂದು ಬೇಸರ ಹುಟ್ಟಿಸಿಬಿಡುತ್ತದೆ. ಆದರೆ, ಸ್ಕೂಲ್‌, ಕಾಲೇಜು, ಕೆಲಸದ ನಿಮಿತ್ತ ತೆರಳುವವರು ಅನಿವಾರ್ಯವಾಗಿ ಬೆಳಗ್ಗೆ ಬೇಗ ಏಳಬೇಕಾದ ಪರಿಸ್ಥಿತಿ.

ನಗರವಾಸಿಗಳಂತೂ ಶಿಫ್ಟ್ ವೈಸ್‌ ಕೆಲಸ ಮಾಡುವ ಸಲುವಾಗಿ ಮಾರ್ನಿಂಗ್‌ ಶಿಫ್ಟ್ ಎಂದು ನಾಲ್ಕು ಗಂಟೆಗೂ ಏಳುವವರಿದ್ದಾರೆ. ಅಂಥವರ ಪಾಲಿಗೆ ಶನಿವಾರ, ಭಾನುವಾರ ಎಂದರೆ ವಾರದ ನಿದ್ದೆಯೆನ್ನೆಲ್ಲ ಮುಗಿಸಿಬಿಡುವ ದಿನ. ಸಂಡೇ ಈಸ್‌ ಹಾಲಿಡೇ ಅಂತ ಹೊತ್ತು ಮೀರುವವರೆಗೂ ನಿದ್ದೆ ಮಾಡುತ್ತಾರೆ. ಆಗೊಮ್ಮೆ ಈಗೊಮ್ಮೆ ವೀಕೆಂಡ್‌ನ‌ಲ್ಲಿ ಅರ್ಲಿ ಮಾರ್ನಿಂಗ್‌ ಟ್ರಿಪ್‌ ಹೋಗುವ ಎಂದು ಪ್ಲಾನ್‌ ಮಾಡಿದರೆ, ಬೆಳಗ್ಗೆ ಬೇಗ ಏಳುವ ಸೋಮಾರಿತನದಿಂದ “ಹುಷಾರಿಲ್ಲ’ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುವವರೇ ಹೆಚ್ಚು.

ಇನ್ನು ಸಂಬಂಧಿಕರು, ಸ್ನೇಹಿತರ ಮದುವೆಗೆ ಹೋದಾಗಲ್ಲೆಲ್ಲ ಬೆಳಗ್ಗೆ ಬೇಗ ಎದ್ದು ರೆಡಿಯಾಗುವ ಪಾಡು ಇದ್ದಿದ್ದೇ. ಪೂಜೆ, ಭಜನೆ ಕಾರ್ಯಕ್ರಮಗಳಲ್ಲೂ ಬೆಳಗ್ಗೆ ಬೇಗ ಏಳಬೇಕಾದ ಅನಿವಾರ್ಯತೆ. ಈ ಎಲ್ಲ ಸಂದರ್ಭಗಳು ಹಲವರ ಪಾಲಿಗೆ ತುಂಬಾ ಕಷ್ಟಕರ. ಆದರೆ, ಅಮ್ಮ, ಆಕೆ ಪ್ರತಿನಿತ್ಯ ಬೆಳಗ್ಗೆ ಬೇಗ ಏಳುತ್ತಾಳೆ. ವರ್ಷಪೂರ್ತಿ ಮುಂಜಾನೆಯೇ ಏಳುವ ಅವಳಿಗೆ ಆ ಬಗ್ಗೆ ಯಾವ ಬೇಸರವೂ ಇಲ್ಲ.

ಮಳೆಗಾಲದಲ್ಲಿ ಹೊರಗಡೆ ಜೋರು ಮಳೆ ಸುರಿಯುತ್ತಿದ್ದರೆ, ಮತ್ತಷ್ಟು ಹೊದಿಕೆಯನ್ನು ಎಳೆದು ಮಲಗುವ ಆಸೆ ನಮಗೆ. ಆದರೆ, ಯಾವಾಗ ಕರೆಂಟ್‌ ಹೋಗುತ್ತೋ ಅನ್ನೋ ಭಯದಲ್ಲಿ ಅವಳಾಗಲೇ ಎದ್ದು, ಗ್ರೈಂಡರ್‌ಗೆ ಅಕ್ಕಿ ಹಾಕಿ ರುಬ್ಬಲು ಶುರು ಮಾಡಿರುತ್ತಾಳೆ. ಚಳಿಗಾಲದಲ್ಲಿ , “ಅಯ್ಯೋ ಚಳಿ’ ಎಂದು ನಾವು ಮಲಗಿದರೆ, ಅವಳಾಗಲೇ ಚಳಿಯಲ್ಲೇ ಚುರುಕಾಗಿ ಓಡಾಡಿಕೊಂಡು ಅರ್ಧ ಕೆಲಸ ಮುಗಿಸಿರುತ್ತಾಳೆ. ಜಗವೆಲ್ಲ ನಿದ್ದೆಯೆಂದು ಮಲಗಿದರೆ ಅವಳೊಬ್ಬಳು ಎದ್ದಿರುತ್ತಾಳೆ.

ಅಪರೂಪಕ್ಕೊಮ್ಮೆ ಅಮ್ಮ ಹುಷಾರಿಲ್ಲವೆಂದರೆ ಮುಗಿಯಿತು, ಮನೆಯಲ್ಲೆಲ್ಲ ಅಲ್ಲೋಲಕಲ್ಲೋಲ. ಒಂದೆರಡು ದಿನ ಬೆಳಗ್ಗೆ ಬೇಗ ಎದ್ದು ತಿಂಡಿ ರೆಡಿ ಮಾಡಲು ಉಳಿದವರು ಒದ್ದಾಡುತ್ತಾರೆ. ಯಾರು ಬೇಕಾದರೂ ಮಾಡಿಕೊಳ್ಳಲಿ, ಅನ್ನೋ ನಿಲುವಿಗೂ ಬಂದು ಬಿಡುತ್ತಾರೆ. ಅಮ್ಮ ಅದ್ಹೇಗೆ ಯಾವುದೇ ಕಷ್ಟವಿಲ್ಲದೆ, ಯಾರನ್ನೂ ದೂರದೆ ಪ್ರತಿನಿತ್ಯ ಬೆಳಗ್ಗೆ ಅಲಾರಂ ಇಲ್ಲದೆಯೂ ಎದ್ದು ಬಿಡುತ್ತಾಳೆ ಅನ್ನೋದು ಇವತ್ತಿಗೂ ಅಚ್ಚರಿ.

ಅವಳು ವರ್ಷಪೂರ್ತಿ ಒಂದು ಮುಂಜಾನೆ ಏಳುತ್ತಾಳೆ. ಅವಳಿಗಾಗಿ ಅಲ್ಲ, ಬೆಳಗ್ಗೆ ಬೇಗ ಆಫೀಸಿಗೆ ಹೊರಡುವ ಗಂಡನಿಗಾಗಿ, ಸ್ಕೂಲಿಗೆ ರೆಡಿಯಾಗುವ ಮಕ್ಕಳಿಗಾಗಿ, ಅಪರೂಪಕ್ಕೆ ಮನೆಗೆ ಬರುವ ಅತಿಥಿಗಳನ್ನು ಆದರಿಸುವುದಕ್ಕಾಗಿ. ಆದರೆ, ಅದಕ್ಕಾಗಿ ಅವಳು ಯಾರ ಬಗ್ಗೆಯೂ ಬೇಸರಪಡುವುದಿಲ್ಲ. ತನ್ನ ನಿತ್ಯ ಕಾಯಕವೆಂಬಂತೆ ಮಾಡುತ್ತಲೇ ಇರುತ್ತಾಳೆ.

ಅದಕ್ಕಾಗಿಯೇ ಅಮ್ಮ ಎಂದರೆ ಅಕ್ಕರೆ, ಅಮ್ಮ ಎಂದರೆ ಆದರ, ಅಮ್ಮ ಅಂದರೆ ಅಗಾಧ, ಅಮ್ಮ ಎಂದರೆ ಆಸರೆ, ಅಮ್ಮ ಎಂದರೆ ಅನೂಹ್ಯ ಸಂಬಂಧ. ಅಮ್ಮ ಎಂದರೆ ಯಾವತ್ತೂ ಅರಿಯಲಾಗದ ಅದ್ಭುತ.

ವಿನುತಾ ಪೆರ್ಲ

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.