ಚಳಿಗಾಲದ ಖಾದ್ಯಗಳು
Team Udayavani, Dec 27, 2019, 4:30 AM IST
ಈಗ ಚಳಿಗಾಲ. ಚಳಿಗಾಲದಲ್ಲಿ ವಿವಿಧ ಗೆಡ್ಡೆಗೆಣಸು ಸೇವಿಸಿದರೆ ನಮ್ಮ ಆರೋಗ್ಯವನ್ನು ಕಾಪಾಡಬಹುದು.
ಪುಟ್ಟ ಬಟಾಟೆ ಮಸಾಲಾ ಕರಿ
ಬೇಕಾಗುವ ಸಾಮಗ್ರಿ: ಚಿಕ್ಕ ಆಲೂಗಡ್ಡೆ 6-7, ಹುರಿದ ಒಣಮೆಣಸಿನಕಾಯಿ 4-5, (ಬ್ಯಾಡಗಿ+ಊರ ಮೆಣಸು), ತೆಂಗಿನತುರಿ- 1 ಕಪ್, ಎಣ್ಣೆ- 4 ಚಮಚ, ಸಾಸಿವೆ- 1 ಚಮಚ, ಒಗ್ಗರಣೆ ಸೊಪ್ಪು- 1 ಗರಿಕೆ, ಉದ್ದಿನಬೇಳೆ- 2 ಚಮಚ, ಕೊತ್ತಂಬರಿ ಬೀಜ- 1 ಚಮಚ, ಉಪ್ಪು ರುಚಿಗೆ, ಹುಣಸೆಹಣ್ಣು ಗೋಲಿಗಾತ್ರ.
ತಯಾರಿಸುವ ವಿಧಾನ: ಆಲೂಗಡ್ಡೆ ಬೇಯಿಸಿ ಸಿಪ್ಪೆ ಸುಲಿದಿಡಿ. ಉದ್ದಿನಬೇಳೆ, ಕೊತ್ತಂಬರಿ ಬೀಜ ಹುರಿದಿಡಿ. ತೆಂಗಿನ ತುರಿ, ಒಣಮೆಣಸಿನಕಾಯಿ, ಹುಣಸೆಹಣ್ಣು ಸೇರಿಸಿ ತರಿ ತರಿಯಾಗಿ ರುಬ್ಬಿ. ಉದ್ದಿನಬೇಳೆ, ಕೊತ್ತಂಬರಿ ಹಾಕಿ ಎರಡು ಸುತ್ತು ತಿರುವಿರಿ. ಬಾಣಲೆಯಲ್ಲಿ ಎಣ್ಣೆ , ಸಾಸಿವೆ, ಕರಿಬೇವು ಒಗ್ಗರಣೆ ಮಾಡಿ ಆಲೂಗಡ್ಡೆ, ರುಬ್ಬಿದ ಮಸಾಲೆ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿರಿ. ಊಟಕ್ಕೆ, ಚಪಾತಿ ದೋಸೆಯೊಂದಿಗೆ ತಿನ್ನಲು ಬಲು ರುಚಿ.
ಕಿತ್ತಳೆ ಸಿಪ್ಪೆ ಚಟ್ನಿ
ಬೇಕಾಗುವ ಸಾಮಗ್ರಿ: ಕಿತ್ತಳೆ ಸಿಪ್ಪೆ- 1 ಕಪ್, ತೆಂಗಿನತುರಿ- 1/2 ಕಪ್, ಹುರಿದ ಒಣಮೆಣಸಿನಕಾಯಿ- 2, ಕೊತ್ತಂಬರಿ ಬೀಜ- 1 ಚಮಚ, ಜೀರಿಗೆ- 1 ಚಮಚ, ಬೆಲ್ಲ – ಗೋಲಿ ಗಾತ್ರ, ಹುಣಸೆಹಣ್ಣು ಸ್ವಲ್ಪ , ಎಣ್ಣೆ-ತುಪ್ಪ 1 ಚಮಚ, ರುಚಿಗೆ ಉಪ್ಪು.
ತಯಾರಿ ಸುವ ವಿಧಾನ: ಕಿತ್ತಳೆ ಸಿಪ್ಪೆಯನ್ನು ಎಣ್ಣೆ ಅಥವಾ ತುಪ್ಪದಲ್ಲಿ ಹುರಿದು ಒಣಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಹುಣಸೆಹಣ್ಣು , ಸ್ವಲ್ಪ ಕೆಂಪಗೆ ಮಾಡಿದ ತೆಂಗಿನತುರಿ, ಬೆಲ್ಲ, ಉಪ್ಪು ಹಾಕಿ ನಯವಾಗಿ ರುಬ್ಬಿ ಪಾತ್ರೆಗೆ ಹಾಕಿ. ಗಂಜಿಯೂಟಕ್ಕೆ, ದೋಸೆ ಚಪಾತಿಗೆ ಆರೋಗ್ಯಕರ ಚಟ್ನಿ ಸವಿಯಿರಿ.
ಆಲೂಗಡ್ಡೆ ಮೊಸರು ಗೊಜ್ಜು
ಬೇಕಾಗುವ ಸಾಮಗ್ರಿ: ಆಲೂಗಡ್ಡೆ- 2, ಮೊಸರು- 1 ಬಟ್ಟಲು, ಮೆಣಸಿನಕಾಯಿ- 1, ರುಚಿಗೆ ಉಪ್ಪು , ಒಗ್ಗರಣೆಗೆ ಸಾಸಿವೆ, ಕರಿಬೇವಿನ ಸೊಪ್ಪು , ಜೀರಿಗೆ, ಎಣ್ಣೆ- 1 ಚಮಚ.
ತಯಾರಿಸುವ ವಿಧಾನ: ಆಲೂಗಡ್ಡೆ ಬೇಯಿಸಿ ಸಿಪ್ಪೆ ಸುಲಿದು ಮಿಕ್ಸಿಜಾರಿಗೆ ಹಾಕಿ ಮೆಣಸಿನಕಾಯಿ, ಉಪ್ಪು ಹಾಕಿ ನಯವಾಗಿ ರುಬ್ಬಿ. (ತರಿ ತರಿಯಾಗಿಯೂ ರುಬ್ಬಬಹುದು) ಮೊಸರು ಬೆರೆಸಿ ಸಾಸಿವೆ, ಕರಿಬೇವು, ಜೀರಿಗೆ ಒಗ್ಗರಣೆ ಕೊಡಿ.
ಕೆಸುವಿನ ಗೆಡ್ಡೆ ಹುಮ್ಮಣ
ಬೇಕಾಗುವ ಸಾಮಗ್ರಿ: ಕೆಸುವಿನ ಗೆಡ್ಡೆ 2-3, ಹುರಿದ ಒಣಮೆಣಸಿನಕಾಯಿ 3-4, ಹುಣಸೆಹಣ್ಣು- ಗೋಲಿ ಗಾತ್ರ, ರುಚಿಗೆ ಉಪ್ಪು , ಇಂಗಿನ ನೀರು- 1 ಚಮಚ, ತೆಂಗಿನತುರಿ- 1 ಕಪ್.
ತಯಾರಿಸುವ ವಿಧಾನ: ಕೆಸುವಿನ ಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಎರಡು ಇಂಚಿನ ಚೌಕ ತುಂಡು ಮಾಡಿಡಿ. ತೆಂಗಿನ ತುರಿ, ಒಣಮೆಣಸಿನ ಕಾಯಿ, ಹುಣಸೆಹಣ್ಣು ಹಾಕಿ ನಯವಾಗಿ ರುಬ್ಬಿ ಕೆಸುವಿನ ಗಡ್ಡೆಗೆ ಹಾಕಿ ಉಪ್ಪು, ಸ್ವಲ್ಪ ನೀರು, ಇಂಗಿನ ನೀರು ಹಾಕಿ ಕುದಿಸಿ ಮುಚ್ಚಿಡಿ. ಚಳಿಗಾಲಕ್ಕೆ ಆರೋಗ್ಯದಾಯಕ ಹುಮ್ಮಣ ಸವಿಯಿರಿ.
ಎಸ್. ಜಯಶ್ರೀ ಶೆಣೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ