ಒಂದು ಟ್ರಿಪ್ಪಿನ ಕತೆ


Team Udayavani, Sep 27, 2019, 5:09 AM IST

k-14

ತುಮಕೂರಲ್ಲಿ ಡಿಗ್ರಿ ಮುಗಿಸಿಕೊಂಡು ಸ್ನಾತಕೋತ್ತರ ಅಧ್ಯಯನಕ್ಕೆಂದು ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಅಡ್ಮಿಶನ್‌ ಆಗಿ ಒಂದು ವಾರವಷ್ಟೇ ಕಳೆದಿತ್ತು. ಆಗಲೇ ತರಗತಿಗಳು ಆರಂಭವಾಗಲಿವೆ ಬನ್ನಿ ಎಂದು ಕಾಲೇಜ್‌ ಕಡೆಯಿಂದ ಒಂದು ಮೆಸೇಜ್‌ ಕೂಡ ಬಂತು. ಊರಲ್ಲಿ ಮಳೆಯಿನ್ನೂ ನಿಂತಿರಲಿಲ್ಲ. ಆದರೆ, ನಾನು ಕಾಲೇಜ್‌ಗೆ ಹೋಗಬೇಕಾದದ್ದು ಅನಿವಾರ್ಯ.

ಮನೆಯಲ್ಲಿ ನನ್ನನ್ನು ಹಾಸ್ಟೆಲ್‌ಗೆ ಬಿಟ್ಟು ಬರುವುದು ಯಾರೆಂಬ ಪ್ರಶ್ನೆ ಮೂಡಿದಾಗ ಒಬ್ಬ ಅಣ್ಣ, “ನಾನೇ ಬರುತ್ತೇನೆ’ ಎಂದ. ಜೊತೆಯಲ್ಲಿ ಇನ್ನೊಬ್ಬ ಅಣ್ಣನೂ, “ನಾನೂ ಬರ್ತೀನಿ’ ಎಂದು ದನಿ ಸೇರಿಸಿದ್ದ. ಹಾಗೆ ಹೋಗುತ್ತ ಜಾಲಿಯಾಗಿ ಈ ಮುಂಗಾರು ಮಳೆಯೊಂದಿಗೆ ಒಂದು ಸಣ್ಣ ಟ್ರಿಪ್‌ ಹೊಗೋಣ ಎಂಬ ಯೋಜನೆಯೂ ರೆಡಿ. ನಮ್ಮ ಜೊತೆ ಇನ್ನೂ ನಾಲ್ಕು ಜನರ ದಂಡು ರೆಡಿಯಾಯಿತು.

ಮೊದಲು ಉಜಿರೆಯಲ್ಲಿ ನನ್ನ ಲಗ್ಗೇಜ್‌ ಬ್ಯಾಗನ್ನು ಹಾಸ್ಟೆಲ್‌ನಲ್ಲಿ ಇಟ್ಟು ನಂತರ ಟ್ರಿಪ್‌ ಹೋಗೋಣ ಎಂದುಕೊಂಡಿದ್ದೆವು. ಆದರೆ, ಆಗಲಿಲ್ಲ. ಪ್ರವಾಸದ ಕೊನೆಯಲ್ಲಿ ನನ್ನನ್ನು ಹಾಸ್ಟೆಲ್‌ಗೆ ಬಿಡುವ ನಿರ್ಧಾರ ಅಂತಿಮವಾಯಿತು. ನಮ್ಮ ಈ ಪ್ರವಾಸದಲ್ಲಿ ಎಲ್ಲರ ಮೆಜಾರಿಟಿಯ ಪ್ರಕಾರ ಮಡಿಕೇರಿಗೆ ಜೈ ಎಂದಾಯಿತು. ಹೋಗುವ ದಾರಿಯಲ್ಲಿ ಮೊದಲು ಶ್ರವಣಬೆಳಗೊಳದ ನೂರಾರು ಮೆಟ್ಟಿಲಿಗೆ ನಮ್ಮ ಓಡುನಡಿಗೆಯ ಪಾದಸ್ಪರ್ಶ. ವಿರಾಟ್‌ ವಿರಾಗಿಗೊಂದು ನಮನ ಸಲ್ಲಿಸಿ ಅಲ್ಲಿನ ನಿಸರ್ಗ ಸೌಂದರ್ಯವನ್ನು ಕಣ್ಮನ ತುಂಬೆಲ್ಲ ಸವಿದೆವು.

ನಂತರ ಶನಿವಾರಸಂತೆಯಲ್ಲಿರುವ ಅಣ್ಣನ ಸ್ನೇಹಿತ ಸಾಗರ್‌ ಎಂಬವನ ಮನೆಗೆ ಹಾಜರ್‌. ಅಲ್ಲಿ ಅತಿಥಿದೇವೋಭವ ಎನ್ನುವ ಮಾತಿನಂತೆ ಚೆನ್ನಾಗಿ ನಮ್ಮನ್ನು ಉಪಚರಿಸಿದರು. ಅಲ್ಲಿ ತಿಂದ ಹೊಸರುಚಿಯ ಅಕ್ಕಿ ರೊಟ್ಟಿ , ಬೇಳೆಸೊಪ್ಪಿನ ಸಾರನ್ನು ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತಿದೆ. ಸಾಗರ್‌ ಸಲಹೆಯ ಮೇರೆಗೆ ಮುಂದೆ ಕುಶಾಲ್‌ನಗರದಲ್ಲಿರುವ ದುಬಾರೆಗೂ ದಾಳಿ ಇಟ್ಟಾಯಿತು. ಅಲ್ಲಿ ರಿವರ್‌ ರ್ಯಾಫ್ಟಿಂಗ್‌ನಲ್ಲಿ 7 ಕಿ. ಮೀ. ಪ್ರಯಾಣ ಬೆಳೆಸಿದೆವು.

ಮಳೆ ಮಾತ್ರ ಇನ್ನೂ ನಿಂತಿರಲಿಲ್ಲ. ­­­ಯೋಗ ರಾಜ ಭಟ್ಟರ ಚಿತ್ರದಲ್ಲಿ ಮಳೆಗೂ ಗಣೇಶ್‌ಗೂ ಇರುವ ನಂಟಿನಂತೆ ನಮಗೆ ಈ ಮುಂಗಾರು ಮಳೆ ಸ್ನೇಹಿತನಂತೆ ಕೊನೆಯವರೆಗೂ ಜೊತೆಯಲ್ಲೇ ಇದ್ದ.

ಭಾರತಿ ಸಜ್ಜನ್‌
ಪ್ರಥಮ ಎಂಸಿಜೆ, ಎಸ್‌ಡಿಎಂ ಕಾಲೇಜ್‌, ಉಜಿರೆ

ಟಾಪ್ ನ್ಯೂಸ್

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.