ಸಂಧ್ಯಾ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ


Team Udayavani, Mar 23, 2018, 7:30 AM IST

11.jpg

ಕಾಲೇಜು ಲೈಫೆಂದರೆ ಗೋಲ್ಡನ್‌ ಲೈಫ್ ಎಂಬ ಮಾತಿದೆ. ಅಂತಹ ಗೋಲ್ಡನ್‌ ಲೈಫ್ನ ಬಗೆಗಿನ ಕನಸುಗಳನ್ನು ಬಡತನ ಹಾಗೂ ಇನ್ನಿತರ ಕಾರಣಗಳಿಂದ ಕಳೆದುಕೊಂಡವರಿಗೆ ಅದೇ ದಿನಗಳು ಮರಳಿ ಸಿಕ್ಕರೆ ಹೇಗಿರಬಹುದು? ಜೀವನದಲ್ಲೆಂದೂ ಮರೆಯಲಾಗದ ಗಳಿಗೆ ಖಂಡಿತಾ ಆಗುತ್ತದೆಂಬುದು ಅಪ್ಪಟ ಸತ್ಯ. ಅಂತಹ ಒಂದು ಸನ್ನಿವೇಶವೇ ನಮಗೆ ಈಗ ಸಿಕ್ಕಿರುವುದು.

    ಅನಿವಾರ್ಯ ಕಾರಣಗಳಿಂದಾಗಿ ನಮ್ಮ ಉನ್ನತ ಶಿಕ್ಷಣದ ಕನಸುಗಳು ಬಾಡಿ ಹೋಗುತ್ತಿದ್ದ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ, ಮಂಗಳೂರಿನ ಹಳೆಯ ಸರಕಾರಿ ಕಾಲೇಜು, ಪ್ರಸ್ತುತ ವಿಶ್ವ ವಿದ್ಯಾನಿಲಯ ಕಾಲೇಜು ಎಂದು ಕರೆಯಲ್ಪಡುವ ಕಾಲೇಜಿನ ಕ್ಯಾಂಪಸ್‌ನಲ್ಲಿ ಪ್ರಾರಂಭವಾದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ನಮ್ಮ ಕನಸುಗಳಿಗೆ ನೀರೆರೆಯಲು ಪ್ರಾರಂಭವಾಗಿ ಎರಡು ವರ್ಷಗಳಾಗುತ್ತ ಬಂತು. ಹಗಲು ನಮ್ಮವರಿಗಾಗಿ ದುಡಿದು ಸಂಜೆಯ ನಂತರ ನಮ್ಮ ಕನಸುಗಳನ್ನು ನನಸಾಗಿಸುವ ಸಮಯದಲ್ಲಿ ಕೇವಲ ಪಾಠ-ಪ್ರವಚನಗಳಲ್ಲಿ ತೊಡಗಿರದೆ ಇನ್ನಿತರ ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳಲ್ಲೂ ಮುಂದಿದ್ದೇವೆ ಎಂದು ತೋರಲು ಅಂತರ್‌ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದೇವೆ. ನಮ್ಮ ಪ್ರಾಂಶುಪಾಲರು “ಇದೇ ಬರುವ ಮಾ. 11ರಂದು ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ ಹಾಗೂ ಇತರ ಅಂತರ್‌ ತರಗತಿ ಪಂದ್ಯಾಟಗಳು ನಡೆಯಲಿದೆ’ ಎಂದು ಘೋಷಿಸಿದಾಗ ನಮ್ಮೊಳಗೆ ಸುಪ್ತವಾಗಿದ್ದ ಕ್ರೀಡಾಪಟುವೊಬ್ಬ ಜಾಗೃತನಾಗಿಬಿಟ್ಟ ಹಾಗೂ ಮಾರನೆಯ ದಿನದಿಂದಲೇ ನಮ್ಮ ಪ್ರಾಕ್ಟೀಸುಗಳೂ ಪ್ರಾರಂಭವಾಗಿಬಿಟ್ಟಿವೆ. ತಮ್ಮ ತಮ್ಮ ತರಗತಿ ಕಾಲೇಜಿನ ಕ್ರೀಡಾ ಚಾಂಪಿಯನ್‌ ತಂಡವಾಗಿ ಮೂಡಿಬರಬೇಕೆಂದು ಬೇರೆ ತರಗತಿಯವರಿಗೆ ತಿಳಿಯದ ಹಾಗೆ ಗೇಮ್‌ ಪ್ಲಾನ್‌ ಮಾಡುವುದು, ತಂಡದ ಎಲ್ಲರಲ್ಲೂ ಶಿಸ್ತು, ಸಮಾನತೆ ತೋರಿಸಲು ತಮ್ಮ ತಮ್ಮ ತಂಡಕ್ಕೆ ಬೇಕಾದ ಜರ್ಸಿಯನ್ನು ಇನ್ನೊಂದು ತಂಡದವರಿಗೆ ತಿಳಿಯದ ಹಾಗೆ ತಯಾರುಗೊಳಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಬ್ರಹ್ಮಾಂಡ ರಹಸ್ಯವಾಗಿದೆ ! ಒಟ್ಟಾರೆ ಹೇಳಬೇಕೆಂದರೆ ವಿದ್ಯಾರ್ಥಿಗಳು ನಾವೆಲ್ಲರೂ ತಯಾರಾಗಿದ್ದೇವೆ.

    ವಿದ್ಯಾರ್ಥಿಗಳು ಇಷ್ಟೆಲ್ಲ ಉತ್ಸಾಹದಲ್ಲಿರುವಾಗ ಉಪನ್ಯಾಸಕರೂ ಕೂಡ ತಾವೇ ಸ್ಪರ್ಧಿಸುತ್ತಿದ್ದೇವೆಯೋ ಎಂಬಂತೆ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತ ನಮ್ಮನ್ನು ಹುರಿದುಂಬಿಸುವುದು ಇದ್ದೇ ಇದೆ. ಒಳಾಂಗಣ ಕ್ರೀಡೆಗಳ ಜೊತೆಗೆ ವಾಲಿಬಾಲ್‌, ಕ್ರಿಕೆಟ್‌, ಕಬಡ್ಡಿ, ಅತ್ಲೆಟಿಕ್ಸ್‌ ನಂಥ‌ ಹೊರಾಂಗಣ ಕ್ರೀಡೆಗಳೂ ನಡೆಯಲಿವೆ. ಪ್ರತೀ ಆಟಗಳಿಗೂ ಒಬ್ಬೊಬ್ಬ ಉಪನ್ಯಾಸಕರ ಮೇಲ್ವಿಚಾರಣೆಯ ಜೊತೆಗೆ ಒಂದೊಂದು ಆಟಗಳನ್ನು ನಡೆಸಿಕೊಡುವಂತೆ ವಿದ್ಯಾರ್ಥಿಗಳಿಗೂ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಈಗಾಗಲೆ ತಮ್ಮ ಕೆಲಸಗಳನ್ನೂ ಪ್ರಾರಂಭಿಸಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಕಾಲೇಜಿನ ಪ್ರಾಂಶುಪಾಲರು ಕೂಡ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾಗಿ ನಮ್ಮೊಂದಿಗೆ ಬೆರೆಯುವುದು ನಮ್ಮ ಉತ್ಸಾಹಕ್ಕೆ ಹೆಚ್ಚಿನ ಮೆರುಗು ನೀಡಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಪ್ರಾಂಶುಪಾಲರಾದಿಯಾಗಿ ಹೆಚ್ಚಿನ ನಮ್ಮ ಎಲ್ಲಾ ಉಪನ್ಯಾಸಕರು ಬೆಳಗ್ಗಿನ ಸಮಯದಲ್ಲಿ ಇತರ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ಸಂಜೆಯ ಅವರ ವಿಶ್ರಾಂತಿಯ ಸಮಯವನ್ನು ನಮ್ಮ ಕನಸುಗಳಿಗೆ ನೀರೆರೆದು ಪೋಷಿಸಿ ನನಸಾಗಲು ವ್ಯಯಿಸುತ್ತಿದ್ದಾರೆ. ಅವರ ಈ ತ್ಯಾಗಕ್ಕೆ ಬಿಗ್‌ ಸೆಲ್ಯೂಟ್‌.

    ಅದೇನೆ ಇರಲಿ, ಮುಂದಿನ ಹನ್ನೊಂದನೇ ತಾರೀಕಿನಂದು ನಮ್ಮ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಕ್ರೀಡಾ ದಿನವಿದೆ. ಕಳೆದು ಹೋಗಬಹುದಾಗಿದ್ದ ಜೀವನದ ಅತ್ಯಂತ ಸುಂದರ, ಮರೆಯಲಾಗದ ಕ್ಷಣಗಳನ್ನು ಸಂಧ್ಯಾ ಕಾಲೇಜಿನ ಮೂಲಕ ಅನುಭವಿಸಲು ಹೊರಟಿದ್ದೇವೆ. ಕ್ರೀಡಾ ದಿನ ಯಶಸ್ವಿಯಾಗುವಂತೆ ನಿಮ್ಮ ಹಾರೈಕೆಯಿರಲಿ.

ಮಹಮ್ಮದ್‌ ನಾಝೀರ್‌ ಹುಸೈನ್‌ ದ್ವಿತೀಯ ಬಿ. ಎ.  ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.