ಆಷಾಢದ ಕಹಿ ಪಂಚಮಿಯ ಸಿಹಿ!


Team Udayavani, Aug 2, 2019, 5:00 AM IST

k-17

ಸಾಂದರ್ಭಿಕ ಚಿತ್ರ

ಮಳೆಗಾಲ ಪ್ರಾರಂಭವಾಗುತ್ತಿರುವಂತೆಯೇ ಆಷಾಢ ಮಾಸ ಬಂದೇ ಬಿಟ್ಟಿತು. “ಆಷಾಢ’ ಎನ್ನುವ ಪದ ಕಿವಿಗೆ ಬಿದ್ದಾಗಲೆ ಹಿರಿ ಜೀವಗಳಲ್ಲಿ ಏನೋ ತಳಮಳ, ಕಳೆದು ಹೋದ ಕಾಲದ ಅವಿಸ್ಮರಣೀಯ ಅನುಭವಗಳ ಪುಟಗಳೇ ಮನದಲ್ಲಿ ತೆರೆದುಕೊಳ್ಳುತ್ತವೆ. ಅಂದಿನ ಹುಲ್ಲಿನ ಮಾಡಿನ ಮನೆಯಲ್ಲಿ ಹೊರಗಡೆ ಸುರಿಯುತ್ತಿರುವ ಜಟಪಟಿ ಮಳೆಯಿಂದಾಗಿ ಹೊರಬರಲಾಗದೆ ಹುಲ್ಲಿನ ಮನೆಯ ಬೆಚ್ಚಗಿನ ವಾತಾವರಣದಲ್ಲಿ ಮುದುಡಿಕೊಳ್ಳುತ್ತಿದ್ದ ನನ್ನ ಅಜ್ಜಿ , ತಾತನ ಸವಿನೆನಪುಗಳನ್ನು ಕೇಳಲು ಏನೋ ಖುಷಿ. ಅದನ್ನೆಲ್ಲ ನಿಮ್ಮಲ್ಲಿ ಹಂಚಿಕೊಂಡು ಸಂಭ್ರಮಿಸಲು ಈ ನನ್ನ ಬರವಣಿಗೆ.

ಅಂದಿನ ಬಡ ಕುಟುಂಬಗಳು ಕೃಷಿಯನ್ನೇ ಅವಂಲಬಿಸಿಕೊಂಡು ಬದುಕುತ್ತಿದ್ದವು. ಇದ್ದ ಹಣವನ್ನೆಲ್ಲ ಒಟ್ಟುಗೂಡಿಸಿ ಹೊಲದಲ್ಲಿ ಬಿತ್ತನೆ ಮಾಡಿದ ಬಳಿಕ ಬರುವ ತಿಂಗಳೇ “ಆಷಾಢ’. ಕೈಯಲ್ಲಿ ಹಣವಿಲ್ಲದೆ, ಕೂಡುಕುಟುಂಬಗಳು ಹಲಸಿನ ಹಣ್ಣಿನ ಸವಿರುಚಿಯಲ್ಲೇ ದಿನದೂಡಿ ಬದುಕಬೇಕಾದ ಕಷ್ಟದ ದಿನಗಳವು. ಇಂದಿನ ಹಾಗೆ ಕೋರ್ಟು-ಕಚೇರಿ ಅಂದಿರಲಿಲ್ಲ. ವಿಜ್ಞಾನದ ಬೆಳವಣಿಗೆ ಇರಲಿಲ್ಲ. ಅವಿಭಾಜ್ಯ ಕುಟುಂಬವು ಪೂರ್ತಿಯಾಗಿ ಕೃಷಿಯನ್ನೇ ಅವಲಂಬಿಸಿದ್ದರಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಆಷಾಢ ಮಾಸದಲ್ಲಿತ್ತು. ಆಷಾಢ ಮಾಸದಲ್ಲಿ ಕೆಸುವಿನ ಪಲ್ಯ, ಚಗತೆ ಸೊಪ್ಪು ಮತ್ತು ಹಲಸಿನ ಬೀಜದ ಪಲ್ಯವೇ ಆಷಾಢದ ಸ್ವಾದಿಷ್ಟ ಹಾಗೂ ಆರೋಗ್ಯಯುತ ತಿನಿಸುಗಳಾಗಿದ್ದವು. ಆಷಾಢದ ಅಮಾವಾಸ್ಯೆಯಂದು ತಯಾರಿಸುವ ಹಾಳೆ ಮರದ ಕಷಾಯದ ಕಹಿ ಹಾಗೂ ಮೆಂತೆ ಗಂಜಿಯ ಸಿಹಿ ಒಂದಕ್ಕೊಂದು ಪೂರಕವಾಗಿ ಸಂಯೋಜಿಸಿದಂತಿರುತ್ತದೆ. ಅಂದಿನ ಕುಟುಂಬಗಳಲ್ಲಿನ ಸದಸ್ಯರಿಗೆ ಆಷಾಢದಲ್ಲಿ ಉಪ್ಪಿನ ಸೊಳೆಯನ್ನು ವಿಂಗಡಿಸಿ ಉಪ್ಪಿಗೆ ಹಾಕುವುದೇ ಅವರ ಆಷಾಢದ ಕಸುಬಾಗಿತ್ತು.

ಆಷಾಢದ ದಿನಗಳು ಕೊನೆಗೊಳ್ಳುತ್ತಿದ್ದಂತೆಯೇ ಹಬ್ಬಗಳ ಸಾಲೇ ಪ್ರಾರಂಭಗೊಳ್ಳುತ್ತದೆ. ಆಷಾಢದ ಕಷ್ಟದ ದಿನಗಳಿಗೆ ನಾಗರ ಪಂಚಮಿಯ ಸಿಹಿ ಒಂದಷ್ಟು ಮನಸ್ಸಿಗೆ ಮುದ ನೀಡುತ್ತದೆ. ನಾಗರ ಪಂಚಮಿಯಂದು ತನು ಎರೆಯುವ ಸಡಗರವನ್ನು ಅಜ್ಜಿ-ತಾತನ ಬಾಯಲ್ಲಿ ಕೇಳುವುದೇ ಒಂದು ಸಂಭ್ರಮ. ಆದರೆ, ಇಂದಿನ ಆಧುನಿಕ ಕಾಲಘಟ್ಟದಲ್ಲಿ ನಾಗಬನಗಳೆಲ್ಲ ಮಾಯವಾಗಿ ಕಾಂಕ್ರೀಟ್‌ ಬನಗಳಷ್ಟೇ ತುಂಬಿಕೊಂಡಿವೆ. ಆದರೂ ಖುಷಿಯೇನೆಂದರೆ ತನು ಎರೆಯುವ ಸಂಪ್ರದಾಯ ಇನ್ನೂ ಮುಂದುವರಿದಿರುವುದು. ಪಂಚಮಿಯಂದು ತಯಾರಿಸುವ ಅರಸಿನ ಎಲೆಯಿಂದ ಮಾಡಿದ ಖಾದ್ಯದ ಸಿಹಿ ಸವಿದವರಿಗಷ್ಟೇ ಗೊತ್ತು ಅದರ ರುಚಿ!

ಅಜ್ಜಿ-ತಾತನ ಆ ಕಾಲದ ಆ ಮಳೆ ಇಂದೆಲ್ಲಿ ಕಾಣಸಿಗುತ್ತದೆ? ಅಂಗಡಿಗಳಲ್ಲಿ ಸಿಗುವ ಮಸಾಲೆಭರಿತ ಕುರ್‌ಕುರೆ ತಿಂಡಿಗಳೆದುರು ಹಲಸಿನ ಹಣ್ಣು ಯಾರಿಗೆ ಬೇಕು? ನಾಗಬನಗಳ ಹೆಸರಿನಲ್ಲಾದರೂ ಒಂದಷ್ಟು ಕಾಡುಗಳು ಅಂದು ಉಳಿದುಕೊಂಡಿದ್ದವು. ಇಂದು ಎಲ್ಲವೂ ಕಣ್ಮರೆಯಾಗಿದೆ. ಆಷಾಢದ ಸೊಗಸು ಉಳಿಯಬೇಕೆಂದರೆ ಹಿಂದಿನ ಮಳೆಯ ಸೊಬಗು ಮರುಕಳಿಸಬೇಕು. ಮಳೆಗಾಲ ಇಂದು ನಮ್ಮೆಲ್ಲರ ಚಿತ್ತ ಆಕಾಶದತ್ತ ನೆಟ್ಟಿದೆ. ಆಷಾಢದ ವರ್ಷಧಾರೆ ಕಣ್ಮರೆಯಾಗಿ ಎಲ್ಲೆಡೆ ಶೂನ್ಯವೇ ಭಾಸವಾಗುತ್ತಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಹಬ್ಬ-ಹರಿದಿನಗಳ ಸಂಭ್ರಮ ಚಿಗುರೊಡೆಯಬೇಕೆಂದರೆ, ಆಷಾಢದ ಮಳೆ ಮತ್ತೆ ಧರೆಗಪ್ಪಳಿಸಬೇಕೆಂದರೆ ಪ್ರಕೃತಿಯೊಡನೆ ನಮ್ಮ ಒಡನಾಟ ಮತ್ತೆ ಮುಂದುವರಿಯಬೇಕು.

ನಮ್ಮ ಇಂದಿನ ಜನಾಂಗವು ಬಾಯಿಮಾತಿನಿಂದ ಮಾತ್ರ ಪ್ರಕೃತಿಯನ್ನು ಉಳಿಸಿ-ಬೆಳೆಸಿ ಎಂದು ಭಾಷಣ ಬಿಗಿಯುತ್ತಾರೆ. ಕಾರ್ಯರೂಪಕ್ಕೆ ತರಲು ನಮ್ಮ ಯುವಜನಾಂಗವು ಕಟಿಬದ್ಧರಾಗಬೇಕು. ಪ್ರಕೃತಿಯನ್ನು ಉಳಿಸಲು ಹೋರಾಡಬೇಕು. ಆಗ ಮಾತ್ರ ಆಷಾಢದ ಧಾರಾಕಾರವಾಗಿ “ಧೋ’ ಎಂದು ಸುರಿಯುವ ಮಳೆ ಮತ್ತೆ ಮರುಕಳಿಸಲು ಸಾಧ್ಯ.

ಅಜ್ಜಿ-ತಾತನ ಅನುಭವದ ಸಾರವೇ ಈ ನನ್ನ ಬರವಣಿಗೆಗೆ ಪ್ರೇರಣೆ. ಕೃಷಿ ಚಟುವಟಿಕೆಗಳು ಮತ್ತೆ ಹಸನಾಗಲಿ. ಎಲ್ಲೆಡೆ ಹಸಿರು ನಳನಳಿಸುವಂತಾಗಲಿ ಎನ್ನುವ ಹಿರಿ ಜೀವಗಳ ಕನಸು ನನಸಾಗಲಿ. ಇದಕ್ಕಾಗಿ ನಾವೆಲ್ಲರೂ ಪ್ರಕೃತಿಯೊಡನೆ ಕೈಜೋಡಿಸಿ, ಮರ-ಗಿಡಗಳನ್ನು ಉಳಿಸಬೇಕು.

ಶ್ರಾವ್ಯಾ ದೇವಾಡಿಗ
10ನೆಯ ತರಗತಿ,
ಸಂತ ಲಾರೆನ್ಸ್‌ ಆಂಗ್ಲ ಮಾಧ್ಯಮ ಶಾಲೆ, ಮಂಗಳೂರು

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.