ಕ್ಲಾಸ್‌ ರೂಮ್‌ ಎಂಬ ಭಾರತ


Team Udayavani, Sep 28, 2018, 6:00 AM IST

d-8.jpg

ಭಾರತ ಎಂದರೆ ತತ್‌ಕ್ಷಣ ನಮ್ಮ ಮನಸ್ಸಿಗೆ ಬರುವುದು ವೈವಿಧ್ಯಮಯ ಭಾಷೆ, ಆಚಾರ-ವಿಚಾರ ಮತ್ತು ಸಂಸ್ಕೃತಿ. ವಿವಿಧತೆಯಲ್ಲಿ ಏಕತೆ ಎಂಬ ಧ್ಯೇಯ ವಾಕ್ಯದಂತೆ ನಮ್ಮ ನಡುವೆ ಹಲವಾರು ಜಾತಿ-ಧರ್ಮ, ಪಂತ-ಪಂಗಡ ಮತ್ತು ಸಂಸ್ಕೃತಿ, ಆಚಾರ-ವಿಚಾರಗಳಿದ್ದರೂ ಭಾರತೀಯರೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಅನ್ಯೋನ್ಯತೆಯಿಂದ ಬದುಕುವುದೇ ಭಾರತ ಮಣ್ಣಿನ ವಿಶಿಷ್ಟತೆ. ಇದರಿಂದಲೇ ಭಾರತ ಇಂದು ಜಗತ್ತಿನ ಇತರ ಎಲ್ಲ ರಾಷ್ಟ್ರಗಳಿಗಿಂತ ವಿಭಿನ್ನವಾಗಿರುವುದು.

ಆದರೆ, ನಿಜವಾದ ಸೌಹಾರ್ದ ಭಾರತದ ಕಲ್ಪನೆ ಸಾಕಾರಗೊಳ್ಳುವುದು ದೇಶದ ಪ್ರತಿಯೊಂದು ಶಾಲಾ-ಕಾಲೇಜುಗಳ ತರಗತಿ ಕೊಠಡಿಯಲ್ಲಾಗಿದೆ. ಕಾರಣ ಕ್ಲಾಸ್‌ರೂಮ್‌ ಎಂಬ ಭಾರತದಲ್ಲಿ ಹಲವು ಧರ್ಮ, ಜಾತಿ, ಆಚಾರ ವಿಚಾರಗಳ ವಿದ್ಯಾರ್ಥಿಗಳಿರುತ್ತಾರೆ. ಅವರೆಲ್ಲರ ಹಿನ್ನಲೆ ಬೇರೆ ಬೇರೆಯಾಗಿರಬಹುದು. ಆದರೆ, ತರಗತಿಯಲ್ಲಿ ಅವರೆಲ್ಲ ವಿದ್ಯಾರ್ಥಿಗಳು ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಾರೆಯೇ ಹೊರತು ಜಾತಿ-ಧರ್ಮಗಳ ಆಧಾರದಲ್ಲಿ ಅಲ್ಲ.  

ನಮ್ಮ ತರಗತಿಯ ಉದಾಹರಣೆಯನ್ನೇ ತೆಗೆದುಕೊಂಡರೆ ರಾಜ್ಯದ ಹಲವಾರು ಜಿಲ್ಲೆಗಳ ವಿವಿಧ ಭಾಷೆ-ಸಂಸ್ಕೃತಿಯ ವಿದ್ಯಾರ್ಥಿಗಳು ಒಟ್ಟಾಗಿ ವ್ಯಾಸಂಗ ಮಾಡುತ್ತಿದ್ದೇವೆ. ದೂರದೂರುಗಳಿಂದ ಬಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನಮ್ಮೊಳಗೆ ಯಾವುದೇ ಭಿನ್ನತೆಗಳಿಲ್ಲ. ವೈವಿಧ್ಯಮಯ ಸಂಸ್ಕೃತಿಗಳು ನಮ್ಮ ನಡುವೆ ಬಿರುಕು ಹುಟ್ಟಿಸುವ ಬದಲು ನಮ್ಮ ಗೆಳೆಯರ ಆಚಾರ-ವಿಚಾರಗಳು ನಾವು ಮತ್ತು ನಮ್ಮ ಆಚಾರ-ವಿಚಾರಗಳನ್ನು ಅವರು ತಿಳಿದುಕೊಳ್ಳಲು ನಮ್ಮ ಕ್ಲಾಸ್‌ರೂಮ್‌ ಸಹಕಾರಿಯಾಗಿದೆ. ನಮ್ಮ ಗೆಳೆಯರು ಅವರ ಊರಿಗೆ ಹೋದರೆ ಅಲ್ಲಿನ ವಿಶಿಷ್ಟವಾದ ತಿಂಡಿ-ತಿನಿಸುಗಳನ್ನು ನಮಗೆ ತಂದು ಕೊಡುತ್ತಾರೆ. ನಾವು ಮನೆಯಲ್ಲಿ ಏನಾದರು ವಿಶೇಷ ತಿಂಡಿತಿನಿಸುಗಳನ್ನು ಮಾಡಿದರೆ ಅವರಿಗೆ ಕೊಂಡು ಹೋಗಿ ಕೊಡುತ್ತೇವೆ. ಹಬ್ಬಗಳಿಗೆ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಆದ್ದರಿಂದಲೇ ಕ್ಲಾಸ್‌ರೂಮ್‌ ಎಂಬ ಭಾರತದಲ್ಲಿ ಇರಲು ನಮಗಿಷ್ಟ.

ತರಗತಿ ಕೋಣೆಯ ಕಲ್ಪನೆಯೇ ಅದ್ಭುತ‌ವಾದದ್ದು. ಅದೊಂದು ಸುಂದರವಾದ ಹೂದೋಟ. ಬೆಳೆದು ದೊಡ್ಡವರಾಗಿ ಮುಂದೆ ದೇಶದ ಭವಿಷ್ಯವನ್ನು ಬೆಳಗಬೇಕಾದ ಮಕ್ಕಳನ್ನು ಜಾತಿ-ಧರ್ಮಗಳ ಮಿತಿಯನ್ನು ಮೀರಿದ ಮಾನವೀಯ ಸಹೋದರ ಸರಪಳಿಯಲ್ಲಿ ಒಂದೇ ಮುತ್ತುಗಳಂತೆ ಪೋಣಿಸುವ ಸುಂದರ ಪವಿತ್ರ ಸ್ಥಳ ಕ್ಲಾಸ್‌ರೂಮ್‌. ಆದ್ದರಿಂದಲೇ ನಿಜವಾದ ಭಾರತ ಕಲ್ಪನೆ ತರಗತಿ ಕೋಣೆಗಳಲ್ಲಿ ಸಹಕಾರಗೊಳ್ಳುವುದು.

ನಿಜವಾಗಿಯೂ ಪ್ರತಿಯೊಂದು ತರಗತಿ ಕೋಣೆಯು ದೇಶದ ಭವಿಷ್ಯವನ್ನು ಬರೆಯುವ ತಾಣ. ಅಲ್ಲಿ ಮೇಲು-ಕೀಳು, ಬಡವ-ಬಲ್ಲಿದ, ಜಾತಿ-ಧರ್ಮಗಳ ಯಾವ ವಿಷಯವೂ ಬರುವುದಿಲ್ಲ. 

ಹಾರಿಸ್‌ ಕೋಕಿಲ
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.