ಭಾಷೆ ಮೀರಿದ ಭಾವ
Team Udayavani, May 24, 2019, 6:00 AM IST
ಮೊದಲಿನಿಂದಲೂ ವಾಚಾಳಿಯಲ್ಲದ ನನಗೆ ಎಲ್ಲಿ ನಾನು ಕೂಪಮಂಡೂಕದಂತಾಗಿ ಬಿಡುತ್ತೇನೋ ಎಂಬ ಭಯವಿತ್ತು. ಹೊಸದೇನನ್ನಾದರೂ ಕಲಿಯಬೇಕೆನ್ನುವ ಬಯಕೆ ಇತ್ತಾದರೂ ಏನು ಕಲಿಯಬೇಕು ಎನ್ನುವುದು ತಿಳಿದಿರಲಿಲ್ಲ. ಹೀಗೊಂದು ದಿನ ರಾಹುಲ್ ಎಂಬಾತನ ಪರಿಚಯವಾಯಿತು. ಅವನಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ, ಅವನು ಮೂಲತಃ ಕೇರಳದ ಮಲಯಾಳಿಯಾಗಿದ್ದ. ಆತನ ಭಾಷೆ ಕೇಳಿದ ನನಗೆ ನಾನೇಕೆ ಮಲಯಾಳ ಕಲಿಯಬಾರದು? ಎಂದೆನಿಸಿತು. ಧೈರ್ಯಮಾಡಿ ಅವನಲ್ಲಿ, “”ಅಣ್ಣಾ, ನನಗೂ ನಿಮ್ಮ ಭಾಷೆ ಕಲಿಸುವಿರಾ?” ಎಂದು ಕೇಳಿದೆ. ಅಷ್ಟು ಕೇಳಿದ್ದೇ ತಡ ಆತ ನನ್ನ ಒಡಹುಟ್ಟಿದವನಂತೇ ಆಗಿಬಿಟ್ಟ.
ಅವನು ನನ್ನ ಮೊದಲ ಮಲಯಾಳಂ ಗುರು. ಹೊಸ ಭಾಷೆಯಲ್ಲಿ ಕುಶಲೋಪರಿ ವಿಚಾರಿಸುವುದನ್ನು ಕಲಿತ ನನಗೆ ಎಲ್ಲೇ ಮಲಯಾಳಿಗಳು ಸಿಕ್ಕರೂ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. “ನೀವು ಮಲಯಾಳಿಗಳಾ?’ ಎಂದು ಪ್ರಾರಂಭವಾಗುತ್ತಿದ್ದ ಮಾತು ಮುಗಿಯುತ್ತಲೇ ಇರಲಿಲ್ಲ. ಈಗಲೂ ನನ್ನ ಭಾಷಾ ಕಲಿಕೆ ನಡೆಯುತ್ತಲೇ ಇದೆ. ಕಾಲೇಜು ಹಾಗೂ ಹಾಸ್ಟೆಲ್ನಲ್ಲಿರುವ ಬಹುತೇಕ ಮಲಯಾಳಿಗಳು ನನ್ನ ಸ್ನೇಹಿತರು. ಕಾಲೇಜು, ಪರೀಕ್ಷೆ, ಓದು, ಹಾಸ್ಟೆಲ್ನಲ್ಲಿ ಇರುವ ನನಗೆ ಮನೆಯ ನೆನಪು ಇವೆಲ್ಲದರ ನಡುವೆ ಹೊಸಬರೊಬ್ಬರ ಪರಿಚಯವಾದಾಗ ಏನೋ ಸಂತೋಷ, ಮನಸ್ಸಿಗೆ ನೆಮ್ಮದಿ. ನನ್ನ ಹಾಗೂ ಮಲಯಾಳಿಗಳ ನಂಟು ಕೇವಲ ಹರಟೆ, ಅಥವಾ ವಾಟ್ಸಾಪ್ ಗ್ರೂಪಿಗೆ ಸೀಮಿತವಾಗಿಲ್ಲ. ಹೊಸ ವಿಷಯಗಳ ಕುರಿತು ಚರ್ಚೆ, ಕೇರಳ ಹಾಗೂ ಕರ್ನಾಟಕದ ನಡುವಿನ ವ್ಯತ್ಯಾಸಗಳ ವಿಮರ್ಶೆ, ಅಲ್ಲಿನ ಸಂಸ್ಕೃತಿ, ರಾಜಕೀಯ ಬೆಳವಣಿಗೆ, ಸಿನಿಮಾ ರಂಗದಲ್ಲಾಗುವ ಬೆಳವಣಿಗೆ ಹೀಗೆ ಹಲವಾರು ವಿಷಯಗಳ ವಿನಿಮಯವೂ ನಡೆಯುತ್ತದೆ. ದಿನದಲ್ಲಿ ಕನಿಷ್ಟ ಮೂವತ್ತು ನಿಮಿಷವನ್ನು ಭಾಷಾ ಕಲಿಕೆಗಾಗಿ ಮೀಸಲಿಟ್ಟಿರುವ ನನಗೆ ಆಗಿರುವ ಲಾಭಗಳು ಹಲವು. ಈಗ ಮಲಯಾಳಿಗಳಿಗೆ ಕನ್ನಡ ಕಲಿಸುತ್ತ ಅವರಿಂದ ದಿನವೂ ಹೊಸ ಶಬ್ದಗಳನ್ನು ಕಲಿಯುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದಾಗಿದೆ. ಪರಿಚಿತರೂ ನಮ್ಮನ್ನು ಸರಿಯಾಗಿ ಮಾತನಾಡಿಸದ ಈ ಕಾಲದಲ್ಲಿ ಭಾಷೆಯಿಂದಾಗಿ ಅಪರಿಚಿತರೂ ನನ್ನವರಾಗಿದ್ದಾರೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.
ಸಿಂಧೂ ಹೆಗಡೆ
ಪ್ರಥಮ ಬಿ. ಎ.ಎಸ್ಡಿಎಮ್ ಕಾಲೇಜು, ಉಜಿರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ