ಸ್ನೇಹವೆಂಬ ಭಾಗ್ಯ


Team Udayavani, Sep 13, 2019, 5:00 AM IST

q-18

ಎಲ್ಲೋ ಹುಟ್ಟಿ ಎಲ್ಲೋ ಬೆಳೆದವರ ನಡುವೆ ಎಲ್ಲೋ ಜೊತೆಯಾದ ಸ್ನೇಹವು ಕರುಳ ಬಳ್ಳಿಯಷ್ಟೆ ನಿಕಟವಾಗಿ ಬದುಕಿಗೆ ಬಂದುಬಿಡುತ್ತದೆ. ಬಾಲ್ಯದಲ್ಲಿ ನಾವು ಸ್ನೇಹಿತರೊಂದಿಗೆ ಸೇರಿ ಚಿನ್ನಿದಾಂಡು ಕುಂಟೇಬಿಲ್ಲೆ ಆಡಿದವರು, ತರಗತಿಯಲ್ಲಿ ತಮಾಷೆ ಮಾಡುತ್ತ ಜೊತೆಯಾಗಿದ್ದವರು, ಹಾಸ್ಟೆಲಿನಲ್ಲಿ ರೂಮು ಹಂಚಿಕೊಂಡು ಎಲ್ಲರೂ ನಮ್ಮವರೇ ಎಂದು ಭಾವಿಸಿ ಕಷ್ಟ-ಸುಖವನ್ನು ಹಂಚಿಕೊಂಡವರು, ಕೆಲಸಕ್ಕೆ ತೆರಳಿದಾಗ ಪರಿಚಯವಾದವರು, ಎಲ್ಲೋ ಬಸ್‌ನಲ್ಲಿ ಭೇಟಿ ಆದವರು, ಹಾಗೆ ಮೊಬೈಲ್‌ ಮಾತುಗಳಲ್ಲಿ ನೋಡದೆ ಇದ್ದರೂ ಪರಿಚಯವಾದವರು ಹೀಗೆ ಗುರುತು-ಪರಿಚಯ ಇಲ್ಲದವರನ್ನು ಕೂಡ ತುಂಬ ಹತ್ತಿರದವರಾಗಿ ಮಾಡುವುದೇ ಸ್ನೇಹ. ಜಾತಿ, ನೀತಿ ಏನನ್ನೂ ನೋಡದೆ ನಾವು ಒಂದೇ ಎಂದು ನೋಡುವ ಮತ್ತು ಸೇರಿಸುವ ಸಂಬಂಧವೆಂದರೆ ಅದು ಸ್ನೇಹವೊಂದೆ.

ಕೆಲವರು ಹೇಳುತ್ತಾರೆ “ನಮ್ಮ ಅಪ್ಪ-ಅಮ್ಮ ನಮ್ಮನ್ನು ಫ್ರೆಂಡ್‌ ತರಹ ಟ್ರೀಟ್‌ ಮಾಡ್ತಾರೆ. ನಮಗೂ ಅವರು ಫ್ರೆಂಡ್ಸ್‌ ಇದ್ದ ಹಾಗೆ ಅಂತ ಎಷ್ಟೋ ಜನ ಹೇಳುತ್ತಾರೆ. ಆದರೆ, ನಿಜ ಹೇಳಬೇಕೆಂದರೆ ನಾವು ಅವರನ್ನು ಫ್ರೆಂಡ್ಸ್‌ ಎಂದು ಭಾವಿಸಿದರೂ ಕೂಡ ಎಲ್ಲಾ ವಿಷಯವನ್ನು ಅವರೊಂದಿಗೆ ಹಂಚಿಕೊಳ್ಳುವುದಿಲ್ಲ. ನಿಜವಾದ ಮಾತು ಏನೆಂದರೆ ನಾವು ಅಪ್ಪ-ಅಮ್ಮನಿಗೂ ಹೇಳಲಾಗದಂಥ‌ ಕೆಲವು ವಿಷಯಗಳನ್ನು ನಮ್ಮ ಆಪ್ತ ಗೆಳೆಯ-ಗೆಳತಿ ಹತ್ತಿರ ಹೇಳಿಕೊಳ್ಳುತ್ತೇವೆ. “ಫ್ರೆಂಡ್‌ಶಿಪ್‌ ಡೇ’ ಎಂದು ಕೈಗೊಂದು ಬ್ಯಾಂಡ್‌ ಕಟ್ಟಿ ಬೆನ್ನ ಹಿಂದೆಯೇ ಚೂರಿ ಹಾಕುವ ಸ್ನೇಹಿತರೂ ಇದ್ದಾರೆ. ಹಾಗೆಯೇ ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರೂ ಇದ್ದಾರೆ. ನಮ್ಮ ಬದುಕಿನಲ್ಲಿ ಕಷ್ಟದ ಸಮಯದಲ್ಲಿ ಕೈಹಿಡಿದವರು ನಿಜವಾದ ಸ್ನೇಹಿತನಾಗಿರುತ್ತಾರೆ. ವ್ಯಕ್ತಿತ್ವಗಳು ಬೇರೆ ಬೇರೆಯೇ ಇರಬಹುದು. ಆದರೆ, ಸ್ನೇಹ ಯಾವತ್ತಿಗೂ ಒಂದೇ. ಸ್ನೇಹದಲ್ಲಿ ಜಗಳಗಳು ಬರುವುದು ಸಹಜ. ಆದರೆ, ಆ ಜಗಳದಿಂದ ಒಂದು ಉತ್ತಮವಾದ ಸಂಬಂಧ ಕಳೆದುಕೊಳ್ಳಬಾರದು. ಅವರೇ ಬಂದು ಮಾತನಾಡಿಸಬೇಕು ಎಂದು ಸಿಟ್ಟಿನಿಂದ ಇದ್ದರೆ ಸ್ನೇಹ ಕಣ್ಣ ಮುಂದೆಯೇ ಸತ್ತು ಹೋಗುತ್ತದೆ. ಕೆಲವರು ಎಷ್ಟೋ ವರ್ಷಗಳಿಂದ ಸ್ನೇಹಿತರಾಗಿ ನಂತರ ಯಾರೋ ಏನೋ ತಪ್ಪು ತಿಳುವಳಿಕೆ ನೀಡಿ ಅವರನ್ನು ಬೇರೆ ಮಾಡುವ ಪ್ರಯತ್ನ ಮಾಡುತ್ತಾರೆ. ಕೆಲವರು ತುಂಬಾ ಸ್ವಾರ್ಥಿಗಳಾಗಿರುತ್ತಾರೆ.

ಫ್ರೆಂಡ್‌ಶಿಪ್‌ ಡೇ ದಿನ ಫ್ರೆಂಡ್‌ಶಿಪ್‌ ಬ್ಯಾಂಡ್‌ ಕಟ್ಟಿ ಸ್ನೇಹ ಮಾಡಿದರೆ ಅದು ಉತ್ತಮ ಸ್ನೇಹ ಆಗುವುದಿಲ್ಲ. ಅದು ಸ್ನೇಹಕ್ಕೆ ನಿಜವಾಗಿಯೂ ಕೊಡುವ ಬೆಲೆಯಲ್ಲ. ಒಂದು ಉತ್ತಮ ಸ್ನೇಹವನ್ನು ಕೊನೆವರೆಗೆ ಉಳಿಸಿಕೊಳ್ಳಬೇಕುಎನ್ನುವುದೇ ಸ್ನೇಹಕ್ಕೆ ಕೊಡುವ ಬೆಲೆಯಾಗಿರುತ್ತದೆ. ಸ್ನೇಹಿತರೆಂದರೆ ಕೇವಲ ಸಂತೋಷ, ನಲಿವು ಇವುಗಳಿಗೆ ಮಾತ್ರ ಸೀಮಿತವಾಗಿರಬಾರದು. ನಮ್ಮ ದುಃಖ-ನೋವು ಇವುಗಳನ್ನು ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರೇ ನಿಜವಾದ ಸ್ನೇಹಿತರು. ಸ್ನೇಹಿತರಾದ ಮೇಲೆ ತಾನು ಮೊದಲು ನೀನು ಮೊದಲು ಅನ್ನೋ ಮಾತು ಬರಬಾರದು. ಏನೇ ತೊಂದರೆ ಆದರೂ ಒಬ್ಬರನ್ನು ಒಬ್ಬರು ಯಾವತ್ತೂ ಬಿಟ್ಟುಕೊಡಬಾರದು. ಅವರೇ ನಿಜವಾದ ಸ್ನೇಹಿತರಾಗುತ್ತಾರೆ.

ಪೂಜಾ
ಪ್ರಥಮ ಬಿ. ಎ.
ಡಾ. ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ
ಕಾಲೇಜು, ಉಡುಪಿ

ಟಾಪ್ ನ್ಯೂಸ್

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.