ಹ್ಯಾಟ್ರಿಕ್ ಸಾಧನೆ
Team Udayavani, May 18, 2018, 6:00 AM IST
ನಮ್ಮ ಕಾಲೇಜ್ ಮ್ಯಾಗಜಿನ್ “ಶಿಖರ’ ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಸಹ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆ ವರ್ಗ-1ರಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಹ್ಯಾಟ್ರಿಕ್ ಸಾಧಿಸಿದೆ. ಇದು ನಮ್ಮ ಕಾಲೇಜಿನ ಎಲ್ಲರಿಗೂ ಖುಷಿ ಮತ್ತು ಹೆಮ್ಮೆ ತರುವಂತಹ ಸಂಗತಿಯಾಗಿದೆ.
ನಮ್ಮ ಕಾಲೇಜ್ ಮ್ಯಾಗಜಿನ್ ಶಿಖರದ ಸಾಧನೆ ಏನೆಂದು ಕೇಳಿದ್ರೆ ಮೊದಲ ಬಾರಿ ವಿಶ್ವವಿದ್ಯಾನಿಲಯ ನಡೆಸುವ ಅಂತರ್ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ನಂತರ ಸತತ ಮೂರು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆದಿರುವುದು ಎಂದು ಇದನ್ನು ಮಾತ್ರ ಹೇಳಿದರೆ ಖಂಡಿತ ತಪ್ಪಾಗುತ್ತದೆ. ಯಾಕೆಂದರೆ, ನಮ್ಮ ಮ್ಯಾಗಜಿನ್ ಶಿಖರದ ಸಾಧನೆ ಬರಿ ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳಿಂದ ಮೊದಲನೆಯ ಬಹುಮಾನ ಪಡೆಯುತ್ತಿರುವುದು ಮಾತ್ರ ಅಲ್ಲ. ಕಳೆದ ಎಂಟು ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಅದೆಷ್ಟೋ ಯುವ ಬರಹಗಾರರನ್ನು ಸೃಷ್ಟಿಸಿರುವುದು, ಸಾಹಿತ್ಯದ ಗಂಧ-ಗಾಳಿಯ ಪರಿಚಯವೇ ಇಲ್ಲದ ಕೆಲ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಹುಟ್ಟು ಹಾಕಿರುವುದು, ಬರೆಯುವ ಆಸೆಯಿದ್ದರೂ ಸರಿಯಾದ ವೇದಿಕೆ ಸಿಗದೆ ಪರಿತಪಿಸುತ್ತಿದ್ದ ವಿದ್ಯಾರ್ಥಿಗಳಿಗೆ ಅದ್ಭುತವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿರುವುದು, ತೆರೆಮರೆಯಲ್ಲಿದ್ದ ಬರಹಗಾರರನ್ನು ಮುಖ್ಯವಾಹಿನಿಗೆ ಕರೆ ತಂದಿರುವುದು, ಡೆಸ್ಕ್ ಕವಿಗಳನ್ನು (ಬೆಂಚು ಡೆಸ್ಕ್ಗಳ ಮೇಲೆ ಕವಿತೆಗಳನ್ನು ಬರೆಯುವವರು) ಮ್ಯಾಗಜಿನ್ಗೆ ಬರೆಯುವಂತೆ ಮಾಡಿ, ಎಲ್ಲರೂ ಗುರುತಿಸುವಂತೆ ಮಾಡಿರುವುದು, ಸಾಹಿತ್ಯಾಸಕ್ತ ವಿದ್ಯಾರ್ಥಿಗಳ ಬರವಣಿಗೆಯ ಕನಸಿಗೆ ಬಣ್ಣ ಕೊಡುತ್ತಿರುವುದು, ಸಾಹಿತ್ಯ ಪ್ರೇಮಿಯ ಸಂಭ್ರಮಕ್ಕೆ ಕಾರಣವಾಗಿರುವುದು, ಇನ್ನು ಹೇಳುತ್ತಾ ಹೋದರೆ ಅದೆಷ್ಟೋ.
ಇವತ್ತು ನಾನು ಬರೆದ ಈ ಪುಟ್ಟ ಲೇಖನವನ್ನು ನೀವು ಓದುತ್ತ ಇದ್ದೀರಿ ಅಂದ್ರೆ ಅದಕ್ಕೆ ಕಾರಣ ನನ್ನ ಮನಸ್ಸಿನ ಮರೆಯಲ್ಲೆಲ್ಲೋ ಅಡಗಿ ಕೂತಿದ್ದ ಬರವಣಿಗೆಯ ಆಸಕ್ತಿಯನ್ನು ಹೊರತೆಗೆದು, ನನ್ನ ಸಾಹಿತ್ಯಾಸಕ್ತಿಯನ್ನು ಇಮ್ಮಡಿಗೊಳಿಸಿದ ನಮ್ಮ ಕಾಲೇಜ್ ಮ್ಯಾಗಜಿನ್ “ಶಿಖರ’ ಮತ್ತು ನನ್ನ ಪುಟ್ಟ ಪುಟ್ಟ ಬರವಣಿಗೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಆ ಮೂಲಕ ನನ್ನನ್ನು ಪ್ರೋತ್ಸಾಹಿಸುತ್ತಿರುವ ಉದಯವಾಣಿ ದಿನಪತ್ರಿಕೆಯ ಯುವಸಂಪದ.
ನಮ್ಮ ಕಾಲೇಜ್ ಮ್ಯಾಗಜಿನ್ ಶಿಖರ ಮತ್ತು ಉದಯವಾಣಿ ದಿನಪತ್ರಿಕೆಯ ಸಾಧನೆ ಶಿಖರದೆತ್ತರದ್ದು. ಈ ಯಶಸ್ಸು, ಸಾಧನೆಯ ಶಿಖರ ಯಾವಾಗಲೂ ಹೀಗೆ ಬೆಳೆಯುತ್ತಲೇ ಇರಬೇಕು ಎನ್ನುವುದು ನನ್ನ ಬಯಕೆ.
ಸುಶ್ಮಿತಾ ನೇರಳಕಟ್ಟೆ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ