ಅಪರಿಚಿತರ ನೆರವು


Team Udayavani, Jul 19, 2019, 5:35 AM IST

help

ಈಗಿನ ಕಾಲದಲ್ಲಿ ಯಾರೂ ಒಬ್ಬರಿಗೊಬ್ಬರು ಸಹಾಯ ಮಾಡಲು ಮುಂದಾಗುವುದಿಲ್ಲ. ಕೆಲವೊಮ್ಮೆ ಕುಟುಂಬದವರೇ ನಮಗೆ ಸಹಾಯ ಮಾಡಲು ಹಿಂದುಮುಂದು ನೋಡುತ್ತಾರೆ. ಅಂದ ಹಾಗೆ, ನಾವು ಅಪರಿಚಿತರಿಂದ ಸಹಾಯದ ನಿರೀಕ್ಷೆ ಇಡುವುದು ವ್ಯರ್ಥ. ನಾನು ತಿಳಿದುಕೊಂಡ ಪ್ರಕಾರ ಅಪರಿಚಿತರು ಇನ್ನೊಬ್ಬರಿಗೆ ಸಹಾಯ ಮಾಡಲು ಹಿಂಜರಿಯುತ್ತಾರೆ. ಆದರೆ, ಕೆಲವು ಅಪರಿಚಿತರು ಇನ್ನೊಬ್ಬರಿಗೆ ಪರಿಚಿತರಂತೆಯೇ ಸಹಾಯ ಮಾಡುತ್ತಾರೆ ಎಂದು ನಾನು ತಿಳಿದಿರಲಿಲ್ಲ.

ಆ ಒಂದು ದಿನ ಜೋರಾಗಿ ಮಳೆ ಸುರಿಯುತ್ತಿತ್ತು. ನಾನು ತಡವಾಗಿ ಬಸ್‌ನಿಲ್ದಾಣಕ್ಕೆ ಬಂದ ಕಾರಣ ಬಸ್‌ ಮಿಸ್‌ ಆಗಿತ್ತು. ನನಗೆ ಕಾಲೇಜಿಗೆ ಹೋಗಲು ತಡವಾಗುತ್ತಿತ್ತು. ಇನ್ನೊಂದು ಬಸ್‌ಗೆ ಹದಿನೈದು ನಿಮಿಷ ಕಾಯಬೇಕಿತ್ತು. ಆದರೆ ನನಗೆ ಅಷ್ಟು ನಿಮಿಷ ಕಾಯುವ ತಾಳ್ಮೆ ಇರಲಿಲ್ಲ. ಇವತ್ತು ಕಾಲೇಜಿಗೆ ತಡವಾಗಿ ಹೋಗುತ್ತೇನೇನೋ ಅಂತ ಭಯವಾಗುತ್ತಿತ್ತು. ಅಷ್ಟೊತ್ತಿಗೆ ಅಪರಿಚಿತ ಮಹಿಳೆಯೊಬ್ಬರು ಬಂದು, “ನೀನು ರಿಕ್ಷಾದಲ್ಲಿ ಹೋಗ್ತಿಯಾ. ನಾನು ರಿಕ್ಷಾ ತರಿಸಲೆ?’ ಎಂದು ಕೇಳಿದರು.

ನಾನು ಒಪ್ಪಿಗೆಯನ್ನು ಸೂಚಿಸುವ ಮೊದಲು ನನ್ನ ಬ್ಯಾಗ್‌ನಲ್ಲಿ ಹಣವಿದೆಯೇ ಎಂದು ಪರಿಶೀಲಿಸಿದಾಗ ನನ್ನ ಬ್ಯಾಗ್‌ನಲ್ಲಿ ಒಂದು ರೂಪಾಯಿಯೂ ಇರಲಿಲ್ಲ. ನಾನು ಲಗುಬಗೆಯಿಂದ ಮನೆಯಿಂದ ಹೊರಟಾಗ ಹಣ ತೆಗೆದುಕೊಂಡು ಬರಲು ಮರೆತುಬಿಟ್ಟಿದ್ದೆ. ನನಗೆ ಅಳು ಬಂದುಬಿಟ್ಟಿತು. ಆಗ ಆ ಮಹಿಳೆ ಬಂದು ನನ್ನ ಕೈಯಲ್ಲಿ ನೂರು ರೂಪಾಯಿಯ ನೋಟನ್ನು ಕೈಗಿಟ್ಟು ನನ್ನ ಕಣ್ಣೀರನ್ನು ಒರೆಸಿದರು ಮತ್ತು ರಿಕ್ಷಾವನ್ನು ತರಿಸಿ ನನ್ನನ್ನು ಕಾಲೇಜಿಗೆ ಬಿಡುವಂತೆ ಚಾಲಕನಿಗೆ ತಿಳಿಸಿದರು.

ನಾನು ಅವರ ಪಾಲಿಗೆ ಅಪರಿಚಿತಳಾಗಿದ್ದೆ. ಅವರೂ ನನ್ನ ಪಾಲಿಗೆ ಅಪರಿಚಿತರಾಗಿದ್ದರು. ಆದರೂ ಆ ಅಪರಿಚಿತ ಮಹಿಳೆ ನನ್ನ ಪಾಲಿಗೆ ದೇವರಾಗಿದ್ದರು. ಅವರ ಪ್ರೀತಿ ಪರಿಚಿತದವರಿಗಿಂತಲೂ ಅದ್ಭುತವಾಗಿತ್ತು. ಮರುದಿನದಿಂದ ನಾನು ಅವರಿಗೆ ಆ ಹಣವನ್ನು ಹಿಂತಿರುಗಿಸಲು ಬಸ್‌ನಿಲ್ದಾಣದಲ್ಲಿ ನನ್ನ ಬಸ್‌ ಬರುವ ತನಕ ಕಾಯುತ್ತಿದ್ದೆ. ಆದರೆ, ಅವರು ಸಿಗಲೇ ಇಲ್ಲ. ಆದರೆ, ಅವರ ಪ್ರೀತಿ, ಸಹಾಯ ಮತ್ತು ನೆನಪು ನನ್ನ ಹೃದಯದಲ್ಲಿ ಶಾಶ್ವತವಾಗಿದೆ.

– ಶಿವಾನಿ
ದ್ವಿತೀಯ ಪಿಯುಸಿ ಸರಕಾರಿ ಪದವಿಪೂರ್ವ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.