ಬಾಳಿಗೊಂದು ಭರವಸೆ
Team Udayavani, Feb 7, 2020, 4:02 AM IST
ಬರಗಾಲದ ದಿನಗಳು, ಅಂದು ನೀರಿನ ಕೊರತೆಯ ಕಾರಣ ಜನರು ತುಂಬಾ ದುಃಖೀತರಾಗಿದ್ದರು. ಟೋನ್ ಎಂಬ ಹುಡುಗನಿಗೆ ಒಣಗಿದ ಒಂದು ಹಣ್ಣು ಸಿಕ್ಕಿತ್ತು. ಆ ಹಣ್ಣನ್ನು ಕಂಡು ದುಃಖಪಡುತ್ತಿದ್ದ ಸಮಯದಲ್ಲಿ ಅಪರಿಚಿತ ವ್ಯಕ್ತಿಯು ಅಲ್ಲಿಗೆ ಬಂದ. ಆ ಊರಿನ ಜನರ ಪರಿಸ್ಥಿತಿಯನ್ನು ಕಂಡು ತುಂಬಾ ದುಃಖೀತನಾದ. ಟೋನ್ನ ಕೈಯಲ್ಲಿದ್ದ ಒಣಗಿದ ಹಣ್ಣನ್ನು ಕಂಡು,”ನಿಮ್ಮ ಈ ಊರಿನ ಪರಿಸ್ಥಿತಿಯು ಬೇಗನೇ ನಿವಾರಣೆಯಾಗಲಿದೆ. ಇನ್ನು ಒಂದು ವಾರದಲ್ಲಿ ಈ ಊರಿಗೆ ಮಳೆ ಬರಲಿದೆ. ಆ ಮಳೆಯ ನೀರನ್ನು ಹಾಳುಮಾಡದೇ ಸಂಗ್ರಹಿಸಿಡಿ. ಇದರಿಂದಾಗಿ ಎಂದೂ ಈ ಊರಿಗೆ ಬರಗಾಲದ ಸಮಸ್ಯೆ ಕಾಡದು’ ಎಂದನು. ಆ ಅಪರಿಚಿತ ವ್ಯಕ್ತಿಯ ಮಾತು ಕೇಳಿ ಜನರ ಭರವಸೆಯ ಕಿರಣ ಮನದಲ್ಲಿ ಮೂಡಿತ್ತು. “ಇವತ್ತಿನವರೆಗೆ ನಿಮ್ಮನ್ನು ಈ ಊರಿನಲ್ಲಿ ಕಂಡಿಲ್ಲ, ನೀವು ಯಾವ ಊರಿನವರು’ ಎಂದು ಟೋನ್ ಪ್ರಶ್ನಿಸಿದನು. ಆಗ ಅಪರಿಚಿತ ವ್ಯಕ್ತಿಯು ಮುಗುಳು ನಗುತ್ತ, “ನಾನು ನಿನ್ನ ಹಿತೈಷಿ ಎಂದು ತಿಳಿಯಪ್ಪಾ’ ಎಂದನು. ಆಗ ಟೋನ್ ತನ್ನ ದುಃಖವನ್ನು ಆ ಅಪರಿಚಿತ ವ್ಯಕ್ತಿಯ ಬಳಿ ಹೇಳಿದನು. “ನೋಡಿ ಹಲವಾರು ವರ್ಷಗಳಾದರೂ ಮಳೆಬರುವ ಒಂದು ಕುರುಹೂ ಇಲ್ಲ. ಈ ಊರಿನ ಅನೇಕ ಜನರು ನೀರಿನ ಕೊರತೆಯಿಂದ ಬಳಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು’ ಎಂದನು. ಅಪರಿಚಿತ ವ್ಯಕ್ತಿಯು ಆಕಾಶದತ್ತ ತೋರಿಸುತ್ತ, “ಮೋಡ ಕಾಣಿಸುತ್ತಿದೆಯೇ, ಇದೇ ಮೋಡ ನಿಮ್ಮ ಭರವಸೆಯ ಪ್ರತೀಕ’ ಎಂದು ಸಂತೈಸಿದ. ಕೆಲ ಕ್ಷಣದಲ್ಲಿಯೇ ವ್ಯಕ್ತಿಯು ಮಾಯವಾಗಿದ್ದನು.
ಅಂತೆಯೇ ಕೊನೆಗೂ ಆ ಊರಿಗೆ ಮಳೆಬಂದು ಜನರು ಕುಣಿದು ಕುಪ್ಪಳಿಸಿದರು.
ಟೋನ್ ಆ ಅಪರಿಚಿತ ವ್ಯಕ್ತಿಯ ಸಂದೇಶ ಜನರಲ್ಲಿ ಪಸರಿಸಿ ನೀರಿನ ಸಂಗ್ರಹಣೆಯ ವ್ಯವಸ್ಥೆಯ ಮಾಡಿದನು. ಇದರಿಂದ ಯಾವತ್ತೂ ಆ ಊರಿಗೆ ಬರಗಾಲದ ಸಮಸ್ಯೆ ಕಾಡಲಿಲ್ಲ. ಟೋನ್ಗೆ ನಿಧಾನಕ್ಕೆ ಅರಿವಾಯಿತು, ಆ ಅಪರಿಚಿತ ವ್ಯಕ್ತಿ ಮತ್ಯಾರೂ ಅಲ್ಲ. ಪ್ರತಿಯೊಬ್ಬರ ಮನಸ್ಸಿನೊಳಗೆ ಇರುವ “ಬದುಕಿನ ಭರವಸೆ’.
ಪ್ರಜ್ಞಾ ಶೆಣೈ
ತೃತೀಯ ಬಿ.ಎ. ಶ್ರೀ ವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?