ದೇವರ ಹುಡುಕಾಟದಲ್ಲಿ !


Team Udayavani, Jan 17, 2020, 4:07 AM IST

an-4

ವೀಕೆಂಡ್‌ ಬಂದ್ರೆ ಸಾಕು ಗೆಳೆಯರ ಜೊತೆ ಕ್ರಿಕೆಟ್‌, ಸಿನೆಮಾ, ಬೀಚ್‌… ಹೀಗೆ ಸುತ್ತಾಟ ಇದ್ದದ್ದೇ.ಆದರೆ, ಆವತ್ತು ಯಾಕೋ ಏನೋ ಇಡೀ ಜಗತ್ತಿಗೇ ಸೂರ್ಯೋದಯವಾದರೂ ನನಗ್ಯಾಕೋ ಆಗಿರಲಿಲ್ಲ.ಒಂದು ಘಟನೆ ನನ್ನನ್ನು ಪದೇ ಪದೇ ಕಾಡುತ್ತಿತ್ತು.ಇನ್ನೊಂದೆಡೆ ಗೆಳೆಯರ ಕರೆಗಳು ಚಲಿಸುವ ರೈಲಿನಂತೆ ನಿರಂತರ ಸದ್ದು ಮಾಡತೊಡಗಿದ್ದವು. ವಿಧಿಯಿಲ್ಲದೆ ಇನ್ನೇನು ಗೆಳೆಯರ ಜೊತೆ ಸುತ್ತಾಡಲು ಹೊರಡೋಣ ಅನ್ನುವಷ್ಟರಲ್ಲಿ ಮನೆಯಂಗಳದಲ್ಲಿ ಒಬ್ಬ ಸನ್ಯಾಸಿಯ ದರ್ಶನವಾಯಿತು.

ಅವರನ್ನು ವಿಚಾರಿಸುತ್ತ, “”ಸ್ವಾಮಿಗಳೇ, ನಮ್ಮ ದೇವರು ಹಸಿದವರ ಹಸಿವನ್ನು ತಣಿಸಲಾಗದಷ್ಟು ಬಡವನೆ?” ಎಂದು ಬಿಟ್ಟೆ. ಅದಕ್ಕೆ ಆತ ಮುಗುಳ್ನಗುತ್ತ, “”ಬಡವನಿಗೆ ಹಸಿವು ಹೊಸದಲ್ಲ, ಇದ್ದುದರಲ್ಲಿ ಹಂಚಿ ತಿನ್ನುವ ಗುಣ ಅವನದು” ಅಂದರು ಮಾರ್ಮಿಕವಾಗಿ.

“”ಹಾಗಾದರೆ, ಸದಾ ದೇವರ ಸ್ಮರಣೆ ಮಾಡುತ್ತ ಊರಿಂದೂರಿಗೆ ಅಲೆದಾಡುವ ನಿಮಗೆ ಎಲ್ಲಾದರೂ ದೇವರು ಕಂಡಿ¨ªಾನೆಯೆ?” ಎಂದು ಮರುಪ್ರಶ್ನಿಸಿದೆ.

ಆದರೂ ಒಂದಷ್ಟೂ ಸಂಕೋಚಪಡದೆ, “”ಶ್ರದ್ಧೆ, ಭಕ್ತಿಯಿಂದ ಎಲ್ಲವೂ ಸಾಧ್ಯ. ಭಗವಂತನ ನೆಲೆ ಅರಿತವರು ಯಾರೂ ಇಲ್ಲ. ಯಾವ ಕ್ಷಣದಲ್ಲಿ, ಯಾವ ರೂಪದಲ್ಲೂ ಬರಬಹುದು” ಅಂದುಬಿಟ್ಟರು.

ನನಗ್ಯಾಕೋ ಸಮಾಧಾನವಾಗಲಿಲ್ಲ. ತಲೆಯಲ್ಲಿ ನೂರೆಂಟು ಆಲೋಚನೆಗಳು ಓಡತೊಡಗಿದವು. “”ಹಾಗಾದರೆ, ಜಪ-ತಪ ಮಾಡಿ ತಿಂಗಳಲ್ಲಿ ಒಂದೆರಡು ದಿನ ಉಪವಾಸ ಮಾಡುವ ನಿಮ್ಮ ಹಸಿವನ್ನು ನೀಗಿಸುವ ಭಗವಂತ, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪ್ರತಿದಿನ ಉಪವಾಸವಿರುವ ಬಡವನ ಕೂಗನ್ನು ಆಲಿಸುವುದಿಲ್ಲವೆ?” ಅಂದೆ.

ತಕ್ಷಣ ತರಾತುರಿಯಲ್ಲಿ ತನ್ನ ಜೋಳಿಗೆಯಿಂದ ಪ್ರಸಾದ ಒಂದನ್ನು ಕೊಟ್ಟು ಶ್ರೀಮಂತ ತನ್ನ ದುಡಿಮೆಯಲ್ಲಿ ದೇವರನ್ನು ಕಂಡರೆ… ಬಡವ ತನ್ನ ಯಜಮಾನನಲ್ಲಿ ದೇವರನ್ನು ಕಾಣುತ್ತಾನೆ. ಹಸಿದವರಿಗೆ, ಅಶಕ್ತರಿಗೆ ದಾನ-ಧರ್ಮ ಮಾಡುವುದು ಮಾನವ ಕುಲದ ಕರ್ತವ್ಯ ಅಂದವರೇ ತಮ್ಮ ಪ್ರಯಾಣ ಮುಂದುವರೆಸಿದರು.

ಎರಡು ದಿನಗಳ ಹಿಂದೆ ನಡೆದ ಘಟನೆ ಮತ್ತೆ ನನ್ನನ್ನು ಕಾಡತೊಡಗಿತು. ಪುಟ್ಟ ಮಗುವೊಂದು ಹಸಿವಿನಿಂದ ಕೈಚಾಚಿ ಬಂದಾಗ ತಾತ್ಸಾರ ಮನೋಭಾವದಿಂದ ಬೈದು ಕಳಿಸಿದವರ ಬಗ್ಗೆ ಅಸಹ್ಯ ಭಾವನೆ ಮೂಡತೊಡಗಿತ್ತು. ಆ ಮಗುವಿಗೆ ತಿಂಡಿ ಕೊಟ್ಟಾಗ ಮುಖದಲ್ಲಿ ಮೂಡಿದ ಮಂದಹಾಸ ಮತ್ತೆ ಕಾಡತೊಡಗಿತು.

ದೇವರು ಕೇವಲ ಮಂದಿರದಲ್ಲಿ ಅಲ್ಲ. ನಮ್ಮಲ್ಲಿಯೂ ಇದ್ದಾರೆ.

ರೂಪೇಶ್‌ ಜೆ. ಕೆ., ಕಟಪಾಡಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.