ಅಜ್ಜಿಯಿಂದ ಕಲಿತ ಪಾಠಗಳು


Team Udayavani, May 3, 2019, 6:00 AM IST

MMa

ಸಾಂದರ್ಭಿಕ ಚಿತ್ರ.

ನಾನು ಹುಟ್ಟಿ ಬೆಳೆದದ್ದು ನನ್ನ ಅಜ್ಜಿಮನೆಯಲ್ಲಿ. ನನಗೆ ನನ್ನ ಅಜ್ಜಿ ಎಂದರೆ ಬಲು ಪ್ರೀತಿ. ನನ್ನ ಅಜ್ಜಿಯೊಬ್ಬರು ಧೀರ ಮಹಿಳೆ. ಅವರು ಸತ್ಯ, ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾಗಿದ್ದರು. ನಾವಿಬ್ಬರು ಒಳ್ಳೆಯ ಸ್ನೇಹಿತೆಯರಂತೆ‌ ಇದ್ದವರು. ಅವರು ನನ್ನನ್ನು ನನ್ನ ಅಣ್ಣಂದಿರನ್ನು ಆಡಿ ಬೆಳೆಸಿದ ರೀತಿ ಬಹಳ ಸುಂದರವಾಗಿತ್ತು. ನಾವು ಏನಾದರೂ ತಪ್ಪು ಮಾಡುತ್ತಿದ್ದರೆ ಗದರುತ್ತಿದ್ದರು. ಮತ್ತೆ ಪುನಃ ಬುದ್ಧಿಹೇಳಿ ಸರಿದಾರಿಗೆ ತರುತ್ತಿದ್ದರು. ನನ್ನ ಅಜ್ಜಿ ಅವರಿಗೆ ಬಂದ ಪೆನ್ಶನ್‌ ಹಣದಲ್ಲಿ ತನಗಾಗಿ ಏನನ್ನೂ ಖರ್ಚುಮಾಡದೆ ಆ ಹಣದಲ್ಲಿ ನಮಗೆ ಬೇಕಾದ ಪುಸ್ತಕ, ಬಟ್ಟೆಬರೆ, ತಿಂಡಿಗಳನ್ನು ತೆಗೆದುಕೊಡುತ್ತಿದ್ದರು.

ಅವರು ನಮಗೆ ಹೇಳಿಕೊಟ್ಟ ನಡೆ-ನುಡಿ, ಒಳ್ಳೆಯ ಪಾಠಗಳನ್ನು ನಾನು ಇಂದಿಗೂ ನೆನೆಯುತ್ತೇನೆ ಹಾಗೂ ಇಂದಿಗೂ ಪಾಲಿಸುತ್ತೇನೆ. ಅವರು ಇದ್ದಂತಹ ರೀತಿ, ನಡೆಯುತ್ತಿದ್ದ ಹಾದಿ ನಮಗೆಲ್ಲರಿಗೂ ದಾರಿದೀಪ. ನನಗೆ, ನನ್ನ ಕೆಲಸಕ್ಕೆ ಅವರೇ ಸ್ಫೂರ್ತಿ. ಆದರೆ, ವಿಧಿಯ ನಿಯಮ-ಅವರಿಗೆ ಅನಾರೋಗ್ಯ ಕಾಡಿತ್ತು. ನಾವು ದೊಡ್ಡವರಾದಂತೆ ಅವರಿಗೆ ಅನಾರೋಗ್ಯವು ಹೆಚ್ಚಾಗತೊಡಗಿತ್ತು. ಆದರೂ ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತಿದ್ದರು. ಅವರು ತಮ್ಮ ಕಾಯಕದಲ್ಲಿ ದೇವರನ್ನು ನೆನೆಯುತ್ತಿದ್ದರು. ನನಗೆ ಚಿಕ್ಕಂದಿನಿಂದಲೂ ಅವರೇ ತಲೆಬಾಚಿ ಕೂದಲು ಕಟ್ಟುತ್ತಿದ್ದರು. ಇಂದಿಗೂ ಆ ಎಲ್ಲ ಮಧುರ ಕ್ಷಣಗಳನ್ನು ನಾನು ನೆನೆಯುತ್ತೇನೆ. ಆದರೆ, ಏನು ಮಾಡುವುದು, ಆ ವಿಧಿಯ ಲೀಲೆಗೆ ಅವರ ಅನಾರೋಗ್ಯ ಕಾರಣದಿಂದ ಅವರು ಸ್ವರ್ಗ ಸೇರಿದರು. ಆದರೆ, ನಾನು ಇಂದಿಗೂ ಅವರನ್ನು ನೆನೆಯುತ್ತೇನೆ. ಅವರು ಇಂದಿಗೂ ನಮ್ಮ ಜೊತೆ ಇದ್ದಾರೆ ಅನ್ನುವಂತಹ ಭಾವನೆ ನನ್ನದು. ಅವರು ಮಾಡಿದಂತಹ ಸಾಧನೆ, ಇದ್ದಂತಹ ರೀತಿ ನಮಗೆ ಎಲ್ಲರಿಗೂ ಮಾದರಿ.
ನಾನು ದೇವರಲ್ಲಿ ಏಳೇಳು ಜನ್ಮದಲ್ಲಿ ಅವರೇ ನನ್ನ ಅಜ್ಜಿಯಾಗಲಿ ಎಂದು ಪ್ರಾರ್ಥಿಸುತ್ತೇನೆ. ಇವತ್ತು ನಾನು ಜೀವನದಲ್ಲಿ ಏನಾಗಿದ್ದೇನೋ ಅದು ಅವರಿಂದ, ಅವರು ಕಲಿಸಿದ ಪಾಠಗಳಿಂದಲೇ. ಅವರ ನನ್ನ ಒಡನಾಟ ನನ್ನ ಮನದಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತದೆ.

-ದಿಶಾ
ಎಲ್‌ಎಲ್‌ಬಿ-ಅಂತಿಮ ವರ್ಷ
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.