ಮೊಬೈಲ್‌ ಎಂಬ ಮಾಯಾಲೋಕ 


Team Udayavani, Jan 11, 2019, 12:30 AM IST

q-13.jpg

ಮೊಬೈಲ್‌ನ ಒಳಗೊಂದು “ಮಾಯಾಲೋಕ’ ಖಂಡಿತ ಇದೆ. ಬಹುಶಃ ಹೆಚ್ಚಿನ ಎಲ್ಲರೂ ಇದನ್ನು ಕಂಡಿರುತ್ತಾರೆ. ಇದಕ್ಕೆ ಪ್ರವೇಶಿಸುವವರ ಸಂಖ್ಯೆಯೂ ಈಗ ತುಂಬಾನೇ ಏರಿಕೆಯಾಗಿದೆ. ಯಾಕೆಂದರೆ, ಇದಕ್ಕೆ ವಯಸ್ಸಿನ ಮಿತಿ ಇಲ್ಲ. ನಾನು ಮೊಬೈಲ್‌ನ ಮಾಯಾಲೋಕ ಎಂದು ಯಾಕೆ ಅಂದೆ ಅಂದ್ರೆ, ಇದರೊಳಗೆ ಒಮ್ಮೆ ಹೊಕ್ಕರೆ ಮತ್ತಷ್ಟು ತೂರಿಕೊಳ್ಳೋ ಬಯಕೆ ಎಲ್ಲರಲ್ಲೂ ಮೂಡುತ್ತದೆ. ಒಮ್ಮೆ ತೂರಿಕೊಂಡ ಮೇಲೆ ಇದರಿಂದ ಹೊರಬರಲು ತುಂಬಾ ಕಷ್ಟ . ಬಂದರೂ ಬದುಕು ತುಂಬಾ ಬೋರ್‌ ಅನಿಸುತ್ತದೆ, ಅಲ್ವಾ ? ಹೌದು. ಹಾಗೆಂದು ಇದನ್ನು ಬಳಸದೇ ಇರಲೂ ಆಗದು. ಈಗ ಮೊಬೈಲ್‌ ಹೊಂದುವುದು ಅಂದರೆ ಅದೊಂದು ಪ್ರಸ್ಟೀಜ್‌ನ ಪ್ರಶ್ನೆಯಾಗಿದೆ. ಎಲ್ಲರ ಕೈಯಲ್ಲೂ  ದೊಡ್ಡ ದೊಡ್ಡ ಮೊಬೈಲ್‌ಗ‌ಳು ರಾರಾಜಿಸುತ್ತಿವೆ. ಇಂದಿನ ಯುವಜನತೆ ಈ ಮೊಬೈಲ್‌ ಲೋಕದಲ್ಲಿ ಎಷ್ಟು ಮುಳುಗಿಹೋಗಿದೆ ಅಂದ್ರೆ, ಅಬ್ಟಾ…! ಮೊಬೈಲ್‌ಗ‌ಳಿಲ್ಲದ ಬದುಕು ಅವರಿಂದ ಊಹಿಸಲೂ ಕಷ್ಟಸಾಧ್ಯ. 

ಮೊಬೈಲ್‌ಗ‌ಳು ನಮ್ಮ ಸುತ್ತಲಿನ ಸ್ನೇಹ-ಸಂಬಂಧ ಗಳನ್ನು ಮರೆಯುವಷ್ಟು ನಮ್ಮನ್ನು ಆಕರ್ಷಿಸಿದರೆ ನಿಜವಾಗಿಯೂ ನಾವು ಯಾಂತ್ರಿಕರಾಗಿ ಸಂಬಂಧಗಳ ಅರ್ಥವನ್ನು, ಪ್ರೀತಿಯನ್ನೂ ಕಳೆದುಕೊಳ್ಳುವುದಂತೂ ಸತ್ಯ. ನಾವು ಮೊಬೈಲ್‌ ಬಳಸದೆ ಇರಲು ಸಾಧ್ಯವಿಲ್ಲ ನಿಜ. ಆದರೆ, ಅದನ್ನೇ ಪ್ರಪಂಚವಾಗಿಸಿ ಹೊರಗಿನ ಪ್ರಪಂಚವನ್ನು ಮರೆಯದಿರೋಣ. ಅದು ಜೀವವಿಲ್ಲದ ವಸ್ತು. ಅದರಿಂದ ಹೊರಗಿನ ಜೀವಂತ ಜೀವಗಳನ್ನು ಕಡೆಗಣಿಸದಿರೋಣ. ಅವರೇ ನಮಗೆ ಮುಖ್ಯ ಮತ್ತು ಆವಶ್ಯಕ. ಮೊಬೈಲ್‌ ಅನ್ನು ಎಷ್ಟು ಬೇಕೋ ಅಷ್ಟೇ ಬಳಸಿ ಆ ಮಾಯೆಯೆಂಬ ಲೋಕದಿಂದ ಹೊರಬರುವುದೂ ನಮಗೆ ತಿಳಿದಿದ್ದರೆ ಚೆನ್ನ.

ಮೊಬೈಲ್‌ ಹೊರತಾದ ಹೊರ ಪ್ರಪಂಚದಲ್ಲಿ ತುಂಬಾ ಸುಂದರವಾದ ಪರಿಸರ ಯಾವಾಗಲೂ ನಮಗಾಗಿ ತೆರೆದಿರುತ್ತದೆ. ಅದನ್ನು ನಾವು ನಮ್ಮ ಕಣ್ಣು ತೆರೆದು ನೋಡಬೇಕು. ಮೊಬೈಲ್‌ನಲ್ಲಿ ಗೆಳೆಯರೊಂದಿಗೆ, ಸಂಬಂಧಿಕರೊಂದಿಗೆ ಭೇಟಿಯಾಗುವುದು, ಮಾತನಾಡುವುದರಿಂದ ಏನೂ ಲಾಭವಿಲ್ಲ. ಬದಲಾಗಿ ಮೊಬೈಲ್‌ಗೆ ಅಂಟಿಕೊಳ್ಳದೆ ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಬೆರೆಯಬೇಕು. ಅಪ್ಪ, ಅಮ್ಮ, ಹಿರಿಯ ಜೀವಗಳಾದ ಅಜ್ಜ-ಅಜ್ಜಿಯೊಂದಿಗೆ ಮಾತನಾಡಿ ಸಮಯ ಕಳೆಯಬೇಕು. ಹೀಗೆ ಮಾಡುವುದರಿಂದ ನಮ್ಮ ಸಂಬಂಧಗಳನ್ನು ಗಟ್ಟಿಗೊಳ್ಳುತ್ತವೆ. ಮೊಬೈಲನ್ನು ಮಿತವಾಗಿ ಬಳಸುವುದರಿಂದ ಯಾವ ತೊಂದರೆಯೂ ಇಲ್ಲ; ತಪ್ಪೂ ಇಲ್ಲ. ಮೊಬೈಲ್‌ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ ಹೌದಾದರೂ ಹೊರ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು ಅದು ಮಾಯಗೊಳಿಸದಿರಲಿ.

ಅಮೃತಾ ಕೆ. ಜಿ.
ತೃತೀಯ ವಿಜ್ಞಾನ ವಿಭಾಗ
ನೆಹರೂ ಮೆಮೋರಿಯಲ್‌ ಕಾಲೇಜು, ಸುಳ್ಯ                                                    

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.