ಮೊಬೈಲ್ ಫೊಟೊಗ್ರಫಿ
Team Udayavani, Jul 5, 2019, 5:00 AM IST
ಬಹಳ ಇತ್ತೀಚೆಗೆ ನನ್ನಲ್ಲಿ ಹವ್ಯಾಸವಾಗಿ ಬೆಳೆದು ಬರುತ್ತಿರುವ ಆಸಕ್ತಿಯ ವಿಚಾರ ನೈಸರ್ಗಿಕ ದೃಶ್ಯಗಳ ಚಿತ್ರವನ್ನು ಮೊಬೈಲ್ ಕೆಮರಾ ಕಣ್ಣಲ್ಲಿ ಸೆರೆಹಿಡಿದು ಆನಂದಿಸುವುದು. ಅದೇನೋ ಗೊತ್ತಿಲ್ಲ, ಮೊದಲಿನಿಂದಲೂ ಪ್ರಕೃತಿಯ ಮಡಿಲಲ್ಲಿ ಸಿಗುವ ಆನಂದ ತಾಯಿಯ ಮಡಿಲಿನಂತೆಯೇ ಭಾಸವಾಗುತ್ತದೆ. ಹಸಿರ ಸಿರಿಯಲ್ಲಿ ಸಿಗುವ ಮಜಾ ನನ್ನೊಂದಿಗೆ ನಾನೇ ಗೆಳತಿಯಾಗಿ, ಒಂಟಿಯಾದರೂ ಜಂಟಿಯಾಗುವ ಅನುಭವ ನನ್ನ ಆತ್ಮವಿಶಾÏಸದೊಡನೆ ನಾನೇ ಚರ್ಚಿಸುವ, ಹೆಜ್ಜೆ ಹಾಕುವ, ಕಾಲ ಹರಣ ಮಾಡುವ, ಕಲ್ಪನಾಲೋಕ ಸೃಷ್ಟಿಸುವ ಸುಂದರ ಸ್ವರ್ಗ.
ಮೊಬೈಲ್ಗಳಲ್ಲಿ ಇತರ ಜಾಲತಾಣಗಳಲ್ಲಿ ಸಿಗುವ ಉತ್ತಮ ಛಾಯಾಚಿತ್ರವನ್ನು ನೋಡುವ ಆಸಕ್ತಿ ಮೊದಲಿನಿಂದಲೂ ಇತ್ತು. ನನ್ನ ಕಾಲೇಜಿನ ಕೆಲವು ಗೆಳೆಯರಿಗೂ ಈ ಕ್ಷೇತ್ರದ ಬಗೆಗಿನ ಜ್ಞಾನ, ಆಸಕ್ತಿ ನನ್ನನ್ನು ಈ ಆಸಕ್ತಿಯೆಡೆಗೆ ಸೆಳೆದಿರಬಹುದೇನೋ ಗೊತ್ತಿಲ್ಲ. ಯಾವುದೇ ಹೊಸ ಸ್ಥಳಗಳಿಗೆ ಭೇಟಿ ನೀಡುವಾಗಲೂ ಮೊಬೈಲ್ ಒಂದು ಕೈಯಲ್ಲಿರುವುದು ಮಾಮೂಲಾಗಿ ಹೋಗಿದ್ದು ಇದು ನನ್ನ ನಿತ್ಯ ದಿನಚರಿಯಾಗಿ ಬಿಟ್ಟಿದೆ. ಬೇರೆ ಬೇರೆ ಸ್ಥಳಗಳಿಗೆ ಹೋದಾಗ ಆ ನೆನಪು ಅಚ್ಚಳಿಯದ ಹಾಗೆ ಉಳಿಯಲಿ ಎಂಬ ಉದ್ದೇಶದಿಂದ ಕಟ್ಟಡಗಳು, ದೇವಾಲಯಗಳ ಚಿತ್ರ ಸೆರೆಹಿಡಿಯಲು ಬಯಸುತ್ತೇನೆ. ಆದರೆ, ಪ್ರಕೃತಿಯನ್ನು ನೈಸರ್ಗಿಕವಾಗಿ, ನೈಜವಾಗಿ ಸೆರೆ ಹಿಡಿಯಲು ಬಹಳ ಆಸೆ. ಮಳೆಗಾಲದಲ್ಲಂತೂ ಈ ನೀಲ ಆಗಸ ಚಿತ್ರಿಸುವ ಬಣ್ಣ ಬಣ್ಣದ ಚಿತ್ತಾರದ ಮೋಡಗಳು, ಕ್ಷಣಕ್ಕೊಂದು ಆಕಾರವನ್ನು ಹೋಲುವುದನ್ನು ಆನಂದಿಸುತ್ತ ಫೋಟೊ ತೆಗೆಯುವುದೇ ಒಂದು ರೂಢಿಯಾಗಿ ಬಿಟ್ಟಿದೆ. ಮಳೆ ಹನಿ ತಂದು ಕೊಡುವ ಕನಸಿನ ಕಡಲಂತೂ ಇನ್ನೂ ಸೋಜಿಗ. ಹಾರಾಡುವ ರಂಗಿನ ಚಿಟ್ಟೆ, ಪಕ್ಷಿ, ಒಂಟಿಮರ, ಕಾಡು, ವಿವಿಧ ಬಗೆಯ ಹೂವುಗಳೆಲ್ಲವೂ ನನ್ನ ಮೊಬೈಲ್ ಕೆಮರಾಕ್ಕೆ ಇದೀಗ ಆಹಾರವಾಗಲು ಆರಂಭವಾಗಿದೆ.ಇದರಿಂದ ಅದೇನೋ ಸಮಾಧಾನ, ಸೋಜಿಗ ಉಂಟಾಗುತ್ತದೆ. “ಗ್ರಹಚಾರ ಕೆಟ್ಟರೆ ಹಗ್ಗವೂ ಹಾವಾಗಿ ಕಾಣುತ್ತದಂತೆ’ ಎನ್ನುವಂತೆ ಈ ಕ್ಷೇತ್ರದಲ್ಲಿ ಮೂಡುತ್ತಿರುವ ಆಸಕ್ತಿಯಿಂದ ಪರಿಸರದಲ್ಲಿ ಕಾಣುವಂಥ ಎಲ್ಲ ವಸ್ತುಗಳು ಕ್ಲಿಕ್ಕಿಸಲು, ಸೆರೆಹಿಡಿಯಲು ಸೂಕ್ತ ವಾದವು ಎಂದು ಅನಿಸಲು ಆರಂಭವಾಯಿತು. ಕವಿಯಾದವರಿಗೆ ಮುಳ್ಳು -ಪೊದೆಗಳಲ್ಲೂ ಜೀವಂತಿಕೆಯನ್ನು ಕಂಡು ಕಾವ್ಯಗಳನ್ನು ಸೃಷ್ಟಿಸುವಷ್ಟು ವಿಭಿನ್ನತೆಯಲ್ಲಿ ಜೀವಂತಿಕೆಯನ್ನು ಕಾಣುತ್ತಾರೆ. ಇದು ಅವರ ನೋಟದ ದೃಷ್ಟಿ ಮತ್ತು ಆಸಕ್ತಿಯ ವಿಚಾರವಾದ ಕಾರಣ ಅದರಲ್ಲೂ ನೈಜತೆಯನ್ನು ಕಾಣುವಂತೆ ನನಗೂ ನೋಡುವ ನೋಟದಲ್ಲೆಲ್ಲಾ ಒಂದೊಂದು ಚಿತ್ತಾರದ ದೃಶ್ಯ ಭಾಸವಾಗುತ್ತದೆ.
ಫೋಟೋ ಸೆರೆಹಿಡಿಯುವ ಹವ್ಯಾಸದಿಂದ ಮನಸ್ಸಿನ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ವಿಷಯ ಜ್ಞಾನ, ಕುತೂಹಲ, ಆಸಕ್ತಿ ಹೆಚ್ಚುತ್ತದೆ. ಆಧುನಿಕ ಯುಗದಲ್ಲಿ ಎಲ್ಲವೂ ಯಂತ್ರಮಯವಾಗಿ ಯಾಂತ್ರಿಕ ಬದುಕಿನಲ್ಲಿ ಬಾಳುತ್ತಿರುವ ನಮಗೆ ಕಾಲ ಕಳೆಯಲು, ಮನೋರಂಜನೆಯ ಮಾಧ್ಯಮವಾಗಿ ದೃಶ್ಯ ಮಾಧ್ಯಮ, ಮೊಬೈಲ್ಗಳನ್ನು ಬಳಸುತ್ತ ಅದನ್ನೇ ಪ್ರಪಂಚವಾಗಿಸಿಕೊಂಡಿರುತ್ತೇವೆ. ಇದರ ಹೊರತಾದ ಜಗತ್ತನ್ನು ನಾವೆಂದೂ ಕಂಡಿರುವುದಿಲ್ಲ. ಅದರ ಅನುಭವವೂ ಇರುವುದಿಲ್ಲ. ಇದರ ಹೊರತಾಗಿ ಹೊಸದಾದ ಪ್ರಪಂಚವನ್ನು ಈ ನನ್ನ ಹೊಸ ಹವ್ಯಾಸ ಸೃಷ್ಟಿಸಿ ಕೊಟ್ಟಿದೆ. ಕಪ್ಪು -ಬಿಳುಪಿನ ಹಾಳೆಗಳ ಪುಸ್ತಕಗಳನ್ನು ಓದುವ ಹವ್ಯಾಸವಿದ್ದ ನನಗೆ ಬಣ್ಣದ ರಂಗಿನ ಚಿತ್ರಗಳೆಡೆಗೆ ಮನ ಸೆಳೆಯುತ್ತಿರುವ ಹೊಸ ಪ್ರಪಂಚದೊಂದಿಗೆ ನನ್ನನ್ನು ಲೀನವಾಗಿಸುವಂತೆ ಮಾಡಿ ನನ್ನ ಹವ್ಯಾಸಗಳ ಪಟ್ಟಿಗೆ ಹೊಸತಾಗಿ ಸೇರ್ಪಡೆಯಾಗಿದೆ.
ಒತ್ತಡದಿಂದ ಮುಕ್ತವಾಗಿ ಕಾಲ ಕಳೆಯಲು ಜೊತೆಗೆ ಮನಸ್ಸುಗಳಿಗೆ ನಿರಾಳತೆಯನ್ನು ಒದಗಿಸಿಕೊಡಲು ಒತ್ತಡ ನಿಯಂತ್ರಕವಾಗಿ ಈ ಹವ್ಯಾಸ ಕೊಟ್ಟ ಅನುಭವ ನಿಜಕ್ಕೂ ಅದ್ಭುತವೇ ಆಗಿದೆ. ಇದು ನನಗೆ ಭಾವನೆಯನ್ನು ಹಿಡಿದಿಟ್ಟು , ಉತ್ಸಾಹದ ಜೊತೆಗೆ ನೈಜತೆಯೊಡನೆ ಆಡುವ ಕಲೆಯೂ ಆಗಿ ಹೋಗಿದೆ. ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಿ ಏಕಾಗ್ರತೆಯನ್ನು ವೃದ್ಧಿಸುತ್ತಿ¤ದೆ.
ಪ್ರತಿಮಾ ಭಟ್
ತೃತೀಯ ಬಿ. ಎ.
ವಿವೇಕಾನಂದ ಪದವಿ ಕಾಲೇಜು, ಪುತ್ತೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ