ಹೀಗೂ ಒಮ್ಮೆ ನ‌ಡೆಯಿತು!


Team Udayavani, Sep 20, 2019, 5:00 AM IST

t-22

ದೇವರೇ, ನಾಳೆ ಸ್ವಲ್ಪ ಲೇಟಾಗಿ ಬೆಳಗಾಗುವ ಹಾಗೆ ಮಾಡಪ್ಪ’ ಎಂದು ಬೇಡಿ 3-4 ಗಂಟೆ ಕಳೆಯಿತೇನೊ. ಒಮ್ಮೆಲೇ ದಢಾರ್‌ ಎಂದು ಸದ್ದಾಯಿತು. ಯಾರೋ ನಾಲ್ಕೈದು ಜನ ದಾಂಡಿಗರು ಕೈಯಲ್ಲಿ ಚಾಕು-ಚೂರಿ, ದೊಣ್ಣೆ- ಮಚ್ಚು ಹಿಡಿದು ಬಂದಿದ್ದರು. ಅವರೆಲ್ಲ ನನ್ನತ್ತ ಧಾವಿಸಿ ಬರುತ್ತಿರುವುದನ್ನು ಕಂಡು ಹೆದರಿ, ದಿಕ್ಕುತೋಚದೆ ಕಾಲ್ಕಿತ್ತಿದ್ದೆ.

ಓಡಿ ಸುಸ್ತಾಯಿತೇ ಹೊರತು ಮುಂದೇನು ಮಾಡಲಿ ಎಂದು ದಾರಿ ತೋಚಲಿಲ್ಲ. ಪ್ರಾಣ ಭಯದಲ್ಲಿ ಕಣ್ತುಂಬಿ ಬಂತು. ನಾನೇನು ತಪ್ಪು ಮಾಡಿದೆ ಎಂದು ಇವರೆಲ್ಲ ಅಟ್ಟಾಡಿಸಿಕೊಂಡು ಬರುತ್ತಿದ್ದಾರೆ? ಎಂದು ಅರಿಯದೆ ಗೋಳ್ಳೋ ಎಂದು ಅಳುತ್ತಲೇ ಓಡಿದೆ. ಅವರೆಲ್ಲ ನನ್ನ ಹೆಜ್ಜೆ ಗುರುತನ್ನು ಹಿಂಬಾಲಿಸಿ ಬರುವಂತಿತ್ತು. ಎಷ್ಟು ವೇಗವಾಗಿ ಓಡಿದರೂ ಬೆನ್ನು ಬಿಡುತ್ತಿರಲಿಲ್ಲ. ಭಯಭೀತಳಾಗಿದ್ದ ನನಗೆ ಎದುರುಗಡೆ ಹಳ್ಳವೊಂದು ಕಾಣಿಸಿತು. ಈ ಹಳ್ಳವನ್ನು ದಾಟಿದರೆ ಅವರು ನನ್ನ ಹೆಜ್ಜೆಗುರುತು ಹಿಡಿಯಲಾರರು ಎಂದು ಹಳ್ಳ ದಾಟಿ ಓಡಿದೆ. ಇನ್ನು ಎಲ್ಲಾದರೂ ಅಡಗಿ ಕೂತರೆ ಮಾತ್ರ ಉಳಿಗಾಲವೆಂದು ಅಲ್ಲೇ ಇದ್ದ ಪೊದೆಯ ಹಿಂಬದಿಯಲ್ಲಿ ಅವಿತುಕೂತೆ. ಧಾವಿಸಿ ಬರುತ್ತಿದ್ದ ಏದುಸಿರನ್ನು ನಿಯಂತ್ರಿಸಲು ಯತ್ನಿಸಿದೆ. ಆ ಕ್ಷಣವೇ ತಿರುಗಿನೋಡಿದರೆ, “ಏಯ…!’ ಎಂದು ಯಾರೋ ನನ್ನ ಮೇಲೆ ದೊಣ್ಣೆ ಎತ್ತಿದರು ಅನ್ನುವಷ್ಟರಲ್ಲಿ “ಅಮ್ಮಾ’ ಎಂದು ಕಿರುಚಿಕೊಂಡೆ.

ಆ ದುಃಸ್ವಪ್ನಕ್ಕೆ ಹೆದರಿ ಎದೆತಾಳ ತಪ್ಪಿಹೋಗಿತ್ತು. ಎದ್ದು ಕೂತವಳೇ ಜೋರಾಗಿ ಅಳಲಾರಂಭಿಸಿದೆ. ಭಯದಲ್ಲಿ ಮೈಯೆಲ್ಲ ಬೆವತು ಹೋಗಿತ್ತು. ಕಣ್ಣುಮುಚ್ಚಿದರೆ ಅವರು ನನ್ನನ್ನು ಕೊಂದೇ ಬಿಡುತ್ತಾರೆ ಎಂದೆನ್ನಿಸಿಬಿಟ್ಟಿತ್ತು. ಸಮಯ ಬೇರೆ ಇನ್ನೂ 2 ಗಂಟೆ ಆಗಿತ್ತಷ್ಟೆ. ಒಮ್ಮೆ ಬೆಳಕಾದರೆ ಸಾಕಪ್ಪ, ನಿದ್ದೇನೂ ಬೇಡ ಏನೂ ಬೇಡವೆಂದು ಪ್ರಾರ್ಥಿಸಿದೆ. ಹಿಂದೆಂದೂ ನೆನಪಿಗೆ ಬಾರದ ದೇವರನಾಮಗಳೆಲ್ಲ ನಾಲಗೆಯಲ್ಲಿ ತುದಿಯಲ್ಲಿ ಹರಿದಾಡಲಾರಂಭಿದವು. ಪಕ್ಕದಲ್ಲಿ ಮಲಗಿದ್ದ ಅಕ್ಕನನ್ನು ತಬ್ಬಿ ಮಲಗುತ್ತೇನೆ ಅಂದರೆ ಆಕೆ ನಿಜವಾಗಿಯೂ ನನ್ನ ಸಹೋದರಿಯೆ? ಅಥವಾ ಆ ಗುಂಪಿನವರಲ್ಲಿ ಒಬ್ಬರಾಗಿದ್ದರೆ ಎಂದು ಹೆದರಿ ಆಕೆಯ ಹತ್ತಿರಕ್ಕೂ ಸುಳಿಯದೆ ಗೋಡೆಯ ಮೂಲೆಯಲ್ಲಿ ಮುದುಡಿದೆ.

ಪ್ರತಿಯೊಂದು ಕ್ಷಣವು ಗಂಟೆಯಂತೆ ಭಾಸವಾಯಿತು. “ಭಗವಂತ, ಇನ್ನು ಯಾವತ್ತಿಗೂ ಲೇಟಾಗಿ ಬೆಳಗಾಗಲಿ ಎಂದು ಬೇಡಲ್ಲ. ಈಗ ಒಮ್ಮೆ ಬೆಳಕು ಹರಿಯುವಂತೆ ಮಾಡಪ್ಪ’ ಎಂದು ಸ್ಮರಿಸಿದೆ. ಯಾವಾಗ ನಿದ್ದೆ ಹತ್ತಿತೋ ಗೊತ್ತಿಲ್ಲ. ಅಮ್ಮ ಬಂದು, “ಇನ್ನೂ ಮಲಗಿದ್ದೀಯಲ್ಲ, ಎದ್ದೇಳೆ’ ಎಂದು ಗೊಣಗಿದಾಗ ಎಚ್ಚರವಾಯಿತು. ನಿದ್ದೆ ಇನ್ನೂ ಇಳಿದಿರಲಿಲ್ಲ. ಹೊರಳಾಡಿಕೊಂಡು ಎದ್ದವಳು ರಾತ್ರಿ ನಡೆದ ಘಟನೆಗಳ ಗುಂಗಿನಲ್ಲಿದ್ದೆ. ಯಾರಿಗಾದರೂ ಹೇಳಿದರೆ ಆಡಿಕೊಂಡು ನಗುತ್ತಾರೆ ಎಂದು ಸುಮ್ಮನಾದೆ.

ದೀಕ್ಷಾ ಕುಮಾರಿ
ತೃತೀಯ ಪತ್ರಿಕೋದ್ಯಮ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.