ನೆನಪುಗಳ ಕಹಾನಿ 


Team Udayavani, Mar 9, 2018, 7:30 AM IST

s-2.jpg

ಅದು ಸರಿಸುಮಾರು ವರ್ಷಗಳ ಹಿಂದಿನ ಸವಿನೆನಪುಗಳ ಕಹಾನಿ. ಆಗತಾನೆ ದ್ವಿತೀಯ ಪಿಯುಸಿಯ ಅಂತಿಮ ವರ್ಷದ ಫ‌ಲಿತಾಂಶ ಹೊರಬಿದ್ದ ಸಮಯ. ಮುಂದಿನ ಶಿಕ್ಷಣಕ್ಕಾಗಿ ಬಂದು ಸೇರಿದ್ದು ಕಡಲ ತೀರದ ಭಾರ್ಗವನ ಜನ್ಮಭೂಮಿಯಾದ ಕೋಟದ ಕಡಲ ತೀರದ ವಿದ್ಯಾ ದೇಗುಲಕ್ಕೆ. ಅಲ್ಲಿಂದ ಸರಿಸುಮಾರು ಮೂರು ವರ್ಷಗಳ ಕಾಲ ನನ್ನ ಮತ್ತು ನನ್ನ ಪ್ರೀತಿಯ ಸ್ನೆಹಿತರ ತರ್ಲೆ, ತಮಾಷೆ, ಶೈಕ್ಷಣಿಕ ಚಟುವಟಿಕೆಗಳಿಗೆ ಆಸರೆಯಾಗಿದ್ದು ಅದೇ ಕಡಲ ತೀರದ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೆರೆ. ಬದಲಾವಣೆ ಪ್ರಕೃತಿ ನಿಯಮ ಎಂಬಂತೆ ನಮ್ಮ ಹೆಮ್ಮೆಯ ವಿದ್ಯಾದೇಗುಲ ಈಗ ಸಾಕಷ್ಟು ಬದಲಾವಣೆ ಮತ್ತು ಪ್ರಗತಿಯನ್ನು ಕಂಡು ಕೊಂಡಿದೆ. ಅಷ್ಟೇ ಅಲ್ಲದೆ ಸರಕಾರಿ ವಿದ್ಯಾಸಂಸ್ಥೆಯೊಂದು ಹೀಗೂ ಬೆಳೆಯಬಲ್ಲದು ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆ ಈ ಸಂಸ್ಥೆ ಎಂದರೆ ತಪ್ಪಿಲ್ಲ. ಒಂದು ಸಂಸ್ಥೆ  ತಳಮಟ್ಟದಿಂದ ಪ್ರಗತಿಯ ಹಾದಿಯತ್ತ ದಾಪುಗಾಲು ಹಾಕುತ್ತಾ ಅಭಿವೃದ್ಧಿ ಆಗುತ್ತಿರುವುದು ಅದು ಸುಲಭದ ಮಾತಲ್ಲ. ಜೊತೆಗೆ ದಿನ ಬೆಳಗಾಗುವುದರೊಳಗೆ ಸಂಭವಿಸುವ ಪವಾಡವಂತೂ ಅಲ್ಲವೇ ಅಲ್ಲ. ಅದು ಸತತ ಪರಿಶ್ರಮ, ಸಂಸ್ಥೆಯಲ್ಲಿನ ಗುರುವೃಂದ, ಸಿಬಂದ್ದಿಗಳು ಅಷ್ಟೇ ಅಲ್ಲದೆ ಊರ ಮಹನೀಯರ ತುಂಬು ಮನಸಿನ ಸಹಕಾರದ ಫ‌ಲಿತಂಶವೇ ಈ ವಿದ್ಯಾ ಸಂಸ್ಥೆ ಇಂದು ಇತರ ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿದ್ದು ! ಶಿಕ್ಷಣ ಎಂದರೆ ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿಹಾಕಿ ಗಂಟೆಗಳ ಕಾಲ ಪುಸ್ತಕದ ವಿಚಾರಗಳನ್ನು ತಲೆಗೆ ತುಂಬುವ ವಿದ್ಯಾರ್ಥಿಗಳನ್ನ ಅಂಕದ ಹಿಂದೆ ಕುರುಡರಂತೆ ಹಿಂಬಾಲಿಸಲು ಪ್ರೋತ್ಸಾಹಿಸುವ ಪ್ರಕ್ರಿಯೆಯಲ್ಲ . ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಕೇವಲ ಪುಸ್ತಕದ ಹುಳುವಾಗಿರದೆ ಅದರ ಹೊರತಾಗಿ ಚಿಂತಿಸುವ ಮತ್ತು ಮಾನವೀಯ ನಡತೆಗಳನ್ನ ಕಟ್ಟಿಕೊಳ್ಳುವ ಕಲೆಯನ್ನ ವಿದ್ಯಾರ್ಥಿಗಳಲ್ಲಿ ತುಂಬಬೇಕು. ಇಂತಹ ಶಿಕ್ಷಣ ನೀಡುವ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಈ ವಿದ್ಯಾಕೇಂದ್ರ ಒಂದು ಎನ್ನುವುದು ಹೆಮ್ಮೆಯ ವಿಚಾರ.

ನಾವು ಕೇವಲ ಪುಸ್ತಕ್ಕೆ ಅಂಟಿಕೊಳ್ಳದೆ ಅದರ ಹೊರತಾಗಿ ಹಲವು ಸಮಾಜಮುಖಿ ಮತ್ತು ಮನರಂಜನಾತ್ಮಕ ಕಾರ್ಯಕ್ರಮಗಳ ಮೂಲಕ ಶಿಕ್ಷಣ ಕೇವಲ ಅಂಕಗಳಿಕೆ ಅಲ್ಲ ಅಂತ ಸಾರಿ ಹೇಳಿದವರು. ಅದಕ್ಕೆ ಉತ್ತಮ ಉದಾಹರಣೆಗಳೆಂದರೆ, ಆರೋಹದಂಥ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಸವಿಪಾಕ ಉಣ ಬಡಿಸಿದ್ದು, ಮಹಿಳಾ ಶೋಷಣೆ ವಿರುದ್ಧದ ಸಮಾಜಮುಖೀ ಕಾರ್ಯಕ್ರಮವಾದ ಸ್ಪಂದನ ಕಲಿಸಿದ ಗುರುಗಳನ್ನು ಮತ್ತೆ ಹಳೆಯ ಸವಿನೆನಪುಗಳನ್ನ ಮೆಲುಕು ಹಾಕಿದ ಪುರ್ನಮಿಲನ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳಿಗೆ ಹೊನ್ನಿನ ಕೈಗನ್ನಡಿಯಾದ ವಾರ್ಷಿಕ ಸಂಚಿಕೆ ಕಡಲು. ಅಂತರ್‌ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ಕಾಲೇಜು ಪಡೆದ ಬಹುಮಾನಗಳ ರಾಶಿ ಅಷ್ಟೇ ಯಾಕೆ ನಮ್ಮ ಸಂಸ್ಥೆಗೆ ದೊರೆತ “ನ್ಯಾಕ್‌ ಶ್ರೇಣಿ ಬಿ’ ನನ್ನ ಕಾಲೇಜಿಗೆ ಕಳಶಪ್ರಾಯ. ಹಲವು ಕಷ್ಟಗಳ ಸರಮಾಲೆಗಳನ್ನ ಮೀರಿನಿಂತು ಒಂದು ದಶಕ ಕಳೆದು ಇದೀಗ ಸಂಭ್ರಮದ ಕ್ಷಣಗಳಿಗೆ ಕಾತರಿಸುತಿದೆ. ಈ ಶೈಕ್ಷಣಿಕ ಸಂಸ್ಥೆಯ ಸರ್ವ ಯಶಸ್ವಿನ ಗುಟ್ಟು ಊರ ಮಹನೀಯರ ಸಹಕಾರ, ಪ್ರೀತಿ ತುಂಬಿದ ಗುರುಗಳು, ಕಾರ್ಯನಿರ್ವಹಿಸಿದ ಮತ್ತು ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರುಗಳ ಉತ್ತಮ ಅಡಳಿತ, ಉತ್ತಮ ಸಿಬಂದ್ದಿ ವರ್ಗ ಮತ್ತು ವಿದ್ಯಾರ್ಥಿಗಳು. ಇಂಥ ವಿದ್ಯಾಸಂಸ್ಥೆಯಲ್ಲಿ  ನನ್ನ ಯಶಸ್ವಿ ಶೈಕ್ಷಣಿಕ ಜೀವನಕ್ಕೆ ಸಹಕರಿಸಿದ ಪ್ರೀತಿಯ ಗುರುಗಳು ಮತ್ತು ಪ್ರೀತಿಯ ಸ್ನೇಹಿತರು ಮತ್ತು ನನ್ನ ಪ್ರೀತಿಯ ವಿದ್ಯಾಸಂಸ್ಥೆಗೊಂದು ಈ ಮೂಲಕ ಪುಟ್ಟದೊಂದು ಅಕ್ಷರ ನಮನ.

ಶರತ್‌ ಕುಮಾರ್‌ ಶೆಟ್ಟಿ ಮಂಗಳೂರು ವಿ.ವಿ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.