ಸೀನಿಯಾರಿಟಿ ಎಂಬುದು ಒಂದು ಹೊಣೆಗಾರಿಕೆ


Team Udayavani, Jun 28, 2019, 5:00 AM IST

11

ಸೀನಿಯರ್! ಸೀನಿಯರ್! ಕಾಲೇಜು ಬದುಕಿನಲ್ಲಿ ಪ್ರತಿಯೊಬ್ಬರೂ ಕೇಳ ಬಯಸುವ ಶಬ್ದ ಇದು. “ಈ ಬಾರಿ ನಾವು ಸೀನಿಯರ್’ ಎನ್ನುತ್ತ ರಜೆಯಲ್ಲಿ ವಾಟ್ಸಾಪ್‌ ಸ್ಟೇಟಸ್‌ಗಳಲ್ಲಿ ರಾರಾಜಿಸಿದ್ದೇ ಬಂತು, ಕಾಲೇಜು ಶುರುವಾಗಿದ್ದೇ ತಡ, ಗೊತ್ತಾಯಿತು! ಸೀನಿಯರ್ ಎಂದರೆ ಒಂದು ಸ್ಥಾನ ಎನ್ನುವುದಕ್ಕಿಂತ ಹೆಚ್ಚಾಗಿ, “ಜವಾಬ್ದಾರಿ’. ಕಾಲೇಜಿನಲ್ಲಿ ಒಂದು ಹವಾ ಸೃಷ್ಟಿಸುವ ಕನಸುಗಳೇನೋ ಕಂಡಿದ್ದೆವು, ಆದರೆ, ವಾಸ್ತವದಲ್ಲಿ ನಾವು ನಮ್ಮ ತಂಗಿ-ತಮ್ಮಂದಿರಿಗೆ ಮಾರ್ಗದರ್ಶಕರು ಎನ್ನುವ ಅನ್ನುವ ಆಸನದ ಪಟ್ಟಾಭಿಷೇಕ ಮೊದಲ ದಿನವೇ ಆಯಿತು. ಒಂದೆಡೆ ಕಾಲೇಜಿನಲ್ಲಿ ಎರಡು ವರ್ಷ ಇದ್ದ ಅನುಭವ ತುಂಬಿದ ಕೊಡ, ಇನ್ನೊಂದೆಡೆ ಇನ್ನೂ ಬೆಳವಣಿಗೆ ಕಾಣದ ಹುಚ್ಚು ಮನಸ್ಸು.

ಕಾಲೇಜಿನ ಮೊದಲ ದಿನಕ್ಕೂ ಫೈನಲ್‌ ಇಯರ್‌ನ ಮೊದಲ ದಿನಕ್ಕೂ ವ್ಯತ್ಯಾಸವಿತ್ತು. ಎರಡು ವರುಷ ಕಾಲೇಜು ತುಂಬಾ ಓಡಾಡಿದ ಅವಿಸ್ಮರಣೀಯ ದಿನಗಳು ನಮ್ಮೊಂದಿಗಿದ್ದವು. ನಿಜ. ಆದರೆ, ಹೊಸ ಮುಖಗಳನ್ನು ನೋಡುವ-ಪರಿಚಯವಾಗುವ ತವಕ ನಮ್ಮಲ್ಲಿತ್ತು. ಕಾರಿಡಾರ್‌ನಲ್ಲಿ ನಿಂತು ಜೂನಿಯರ್‌ಗಳನ್ನು ಹುಡುಕುವ ಕಣ್ಣುಗಳು ಇದ್ದವು. ಆದರೆ, ಈ ತಮಾಷೆಗಳ ನಡುವೆ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ. ನಮ್ಮ ವಿಭಾಗದಿಂದ ಯೋಜಿಸುವ ಎಲ್ಲ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ನಡೆಸಿಕೊಡುವ ಹೊಣೆಗಾರಿಕೆ ನಮಗಿದೆ. ಶೈಕ್ಷಣಿಕ ವರ್ಷದಲ್ಲಿ ಮಾಡಿ ಮುಗಿಸುವ ಸೆಮಿನಾರ್‌-ಪ್ರಾಜೆಕ್ಟ್ಗಳ ಸಂಖ್ಯೆ ಹೆಚ್ಚಾಗಿಯೇ ಇತ್ತು. ಎಲ್ಲ ವಿಷಯಗಳಿಗೆ ಎರಡೆರಡು ಪೇಪರ್! ಎಲ್ಲವನ್ನೂ ಕೇಳುತ್ತ ತಲೆ ಗಿರ್‌ ಎನ್ನದೇ ಇರುತ್ತ ! ಇವೆಲ್ಲದರ ನಡುವೆ ಫ್ರೆಂಡ್ಸ್‌ಗಳೊಂದಿಗೆ ಕಾಲಕಳೆಯುವುದು ಯಾವಾಗ ಎನ್ನುವ ಚಿಂತೆ ಬೇರೆ !

ಮೊದಲ ದಿನ ತರಗತಿಗಳು ಮುಗಿದಾಗ ಗ್ರಂಥಾಲಯದತ್ತ ಹೆಜ್ಜೆ ಹಾಕುವ ಅನಿವಾರ್ಯತೆ ಇದೆ ಎನ್ನುವುದು ಸ್ಪಷ್ಟವಾಯಿತು. ಅಂತೂ ಇಂತೂ ಫೈನಲ್‌ ಇಯರ್‌, ಕಾಲೇಜಿನ ಎಲ್ಲ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರಾಗಬೇಕು ಎನ್ನುವುದು ಮೊದಲ ಪ್ರತಿಜ್ಞೆಯಾಗಿತ್ತು. ಕಾಲೇಜಿನಲ್ಲಿರುವ ಪ್ರತಿಕ್ಷಣವನ್ನು ಆಸ್ವಾದಿಸುತ್ತ ನೆನಪಿನ ಪುಟಗಳಿಗೆ ಮತ್ತಷ್ಟು ಘಟನೆಗಳನ್ನು ಸೇರಿಸಬೇಕು ಎನ್ನುವ ಆಸೆ. ಇದೆಲ್ಲದರ ಜೊತೆ ಮುಂದೇನು?ಎನ್ನುವ ಚಿಂತೆ. ಇನ್ನೇನು ಕಣ್ಮುಚ್ಚಿ ತೆಗೆಯುವುದರೊಳಗೆ ಪರೀಕ್ಷೆಗಳು ಬರುತ್ತವೆ, ಅದಾದ ನಂತರ ಪ್ರತಿಯೊಬ್ಬರು ಕೇಳುವ ಪ್ರಶ್ನೆ ಡಿಗ್ರಿ ಆಯಿತು, ಮುಂದೇನು? ನಮಗೂ ಅದು ಗೊಂದಲದಿಂದ ಕೂಡಿದ ಪ್ರಶ್ನೆ. ಡಿಗ್ರಿಗೆ ಬರುವಾಗ ಇದ್ದ ಕನಸುಗಳಲ್ಲಿ ಹೆಚ್ಚು ಕಡಿಮೆ ಅರ್ಧಕ್ಕರ್ಧ ಮರೆತು ಹೋಗಿರುತ್ತವೆ, ಇಲ್ಲವೇ ನಮಗೆ ಆ ದಾರಿ ಸರಿಯಿಲ್ಲ ಎಂದು ಅನ್ನಿಸಿ ಬಿಡುತ್ತದೆ. ಆದರೆ, ಪ್ರತಿಯೊಬ್ಬನಿಗೂ ಇರುವ ಆಸೆ ಸ್ವಂತ ಕಾಲಿನಲ್ಲಿ ನಿಲ್ಲಬೇಕು ಎಂದು.

ಈ ಕೊನೆ ಹಂತದಲ್ಲಿ ಒಂದೆಡೆ ಇನ್ನೇನು ಡಿಗ್ರಿ ಮುಗಿಯುತ್ತದೆ ಎನ್ನುವ ಖುಷಿ, ಇನ್ನೊಂದೆಡೆ ಗೆಳೆಯರನ್ನು ಬಿಟ್ಟು ಅಗಲುವ ಬೇಸರ. ಕಾಲೇಜು-ಉಪನ್ಯಾಸಕರು ಎಲ್ಲರನ್ನೂ ಬಿಟ್ಟು ಹೋಗಬೇಕೆಂಬ ದುಃಖ ಮನಸ್ಸಿನ ಮೂಲೆಯಲ್ಲಿ ಒಡೆಯಲಾರಂಭಿಸಿದೆ ಎಂದರೆ ತಪ್ಪಾಗುವುದಿಲ್ಲ. ಈ ಡಿಗ್ರಿ ಲೈಫ್ನ ಕೊನೆಯ ಹಂತದಲ್ಲಿ ನಿಂತು ಒಂದು ಬಾರಿ ಹಿಂದಕ್ಕೆ ತಿರುಗಿ ಬಂದ ಹಾದಿಯನ್ನು ನೋಡಿದಾಗ ಪ್ರತಿ ಹೆಜ್ಜೆಗೂ ಹೇಳಲು ಒಂದೊಂದು ಕಥೆ ಇದ್ದವು, ಪ್ರತಿ ಹಂತದಲ್ಲೂ ಸಿಕ್ಕ ಆತ್ಮೀಯ ಸ್ನೇಹಿತರಿದ್ದರು. ಜೀವನಕ್ಕೆ ಬೇಕಾಗುವ ಅನುಭವಗಳಿದ್ದವು ಎನ್ನುವುದು ವಾಸ್ತವ.

ಅನಘಾ ಶಿವರಾಮ್‌
ತೃತೀಯ ಪತ್ರಿಕೋದ್ಯಮ ವಿಭಾಗ,  ವಿವೇಕಾನಂದ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.