ಹೊಸೂರಿನ ಸಣ್ಣಕತೆ ಮತ್ತು ಹಳೆಯೂರಿನ ಕಾದಂಬರಿ


Team Udayavani, Nov 1, 2019, 4:20 AM IST

20

ಈಗಿನ ಮಕ್ಕಳು ಇಂಥ ಆಟಗಳನ್ನು ಆಡುವು ದು ತುಂ ಬ ಕಡಿಮೆ. ಆಡಿದರೆ ಅದು ಹಳ್ಳಿ ಹುಡುಗರೇ ಇರಬೇಕು. ತಂತ್ರಜ್ಞಾನ ಬಂದ ಮೇಲಂತೂ ಮೊಬೈಲ್‌ಗ‌ಳು, ಲ್ಯಾಪ್‌ಟಾ ಪ್‌, ಕಂಪ್ಯೂಟರ್‌ಗಳ  ನಡು ವೆ ಹಳೆಯ ಬಾಲ್ಯದ ಆಟಗಳೂ ನಶಿಸಿ ಹೋಗಿವೆ.

ಕಾಲೇಜಿಗೆ ಹೋಗಬೇಕೆಂದರೆ ಒಂದು ಮುಖ್ಯ ರಸ್ತೆ, ಎರಡು ಅಡ್ಡರಸ್ತೆ, ಮತ್ತೂಂದು ಗಲ್ಲಿರಸ್ತೆ ಹಾದು ಹದಿನೈದು ನಿಮಿಷ ನಡೆದು ತಲುಪುತ್ತಿದ್ದ ನನಗೆ ಇದ್ದಕ್ಕಿದ್ದಂತೆ ಒಂದು ಸಣ್ಣ ರಸ್ತೆ. ಸ್ವಲ್ಪ ಮುಂದಕ್ಕೆ ಸಾಗಿ ಬಲಕ್ಕೆ ತಿರುಗಿದರೆ ಮುಖ್ಯರಸ್ತೆ, ಐದು ನಿಮಿಷ ಹೆಜ್ಜೆ ಹಾಕುವಲ್ಲಿ ಕಾಲೇಜು ಎಂಬಂತಹ ಸ್ಥಿತಿ ಬಂದಿರುವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಗೊಂದಲದಲ್ಲೇ ದಿನವೂ ಕಾಲೇಜು ತಲುಪುತ್ತಿದ್ದೇನೆ.

ಮೈಸೂರೆಂಬ ಅರೆ ಹಳ್ಳಿ-ಅರೆ ನಗರದ ಛಾಯೆಯಿರುವ, ಹೈಬ್ರಿಡ್‌ ಹಳ್ಳಿಯೆಂದು ತಮಾಷೆಯಾಗಿ ಕರೆಯಲ್ಪಡುವ ಊರಿನಿಂದ ಐದು ವರ್ಷದ ಓದನ್ನು ಮುಗಿಸಿ ಗಂಟುಮೂಟೆ ಕಟ್ಟಿಕೊಂಡು ಬಂದ ನನಗೆ ಹೆದ್ದಾರಿಯ ಪಕ್ಕವಿರುವ, ಎತ್ತ ನೋಡಿದರೂ ಕಾಲೇಜಿನ ಕಟ್ಟಡಗಳೇ ಕಾಣುವ, ಹಳ್ಳಿಯ ಪೊರೆಯನ್ನು ನಿಧಾನವಾಗಿ ಕಳಚುವ ಯತ್ನದಲ್ಲಿರುವ ಉಜಿರೆಯೆಂಬ ಊರು ಒಂದು ರೀತಿಯ ಸೋಜಿಗವಾಗಿಯೇ ಕಾಣುತ್ತಿದೆ.

ಎಲ್ಲೂ ನಿಲ್ಲದೆ ನಯವಾಗಿ ಮುಂದುವರೆಯುವ ಟ್ರಾಫಿಕ್‌, ಚಳಿ, ಊರಿಗೊಂದೇ ಬೆಟ್ಟ- ಚಾಮುಂಡಿ ಬೆಟ್ಟ, ಒಂದಷ್ಟು ಕೆರೆಗಳು; ಅಲ್ಲಿರುವ ದೊಡ್ಡ ದೊಡ್ಡ ಜಾತಿಯ ವಲಸೆ ಬಂದಿರುವ ಪಕ್ಷಿಗಳು, ವಿಶಾಲವಾದ ಹೆ¨ªಾರಿಗಳು… ಎಲ್ಲವೂ ಇನ್ನು ನೆನಪು ಮಾತ್ರ.

ಈ ಹಿನ್ನೆಲೆಯಲ್ಲಿ ಸಹ್ಯಾದ್ರಿಯ ಶ್ರೇಣಿಯನ್ನಿಟ್ಟುಕೊಂಡು ಸ್ವಲ್ಪ ಅತೀ ಅನಿಸುವಷ್ಟು ಮಳೆ ಸುರಿಸಿಕೊಳ್ಳುವ ಈ ಊರು ಬೇಸಿಗೆಗೂ ಸಮಾನ ನ್ಯಾಯ ಕೊಡುತ್ತದೆಂದು ಕೇಳಿ ಬಲ್ಲೆ. ಭುರ್‌ ಎಂದ ಸಾಗುವ ಪ್ರವಾಸಿ ವಾಹನಗಳು, ಗುಂಪುಗುಂಪಾಗಿ ಸಾಗುವ ವಿದ್ಯಾರ್ಥಿಗಳ ದಂಡು, ಸ್ನೇಹ ಜೀವಿಗಳ ನಡುವೆ ಇನ್ನು ಪಯಣ ಸಾಗಬೇಕು.

ರೂಮಿನ ಕುರ್ಚಿಯೊಂದನ್ನು ಹೊರಗಿಟ್ಟು ಸುಮ್ಮನೆ ಕುಳಿತುಕೊಂಡಾಗ ಹಳೆಯೂರಿನ ನೆನಪುಗಳ ಕಾದಂಬರಿ ಪುಟಪುಟವಾಗಿ ತೆರೆದುಕೊಳ್ಳುತ್ತದೆ. ಹಲವು ಅಧ್ಯಾಯಗಳು. ಕಾದಂಬರಿಯಂತಿದ್ದರೂ ಯಾವ ಅಧ್ಯಾಯದಿಂದಲೂ ತೊಡಗಬಹುದು. ನೆನಪುಗಳ ಕಾದಂಬರಿಯ ಶುರುವಿನ ಸಾಲಿನ ತಾಜಾತನ, ಕೊನೆಯಲ್ಲಿ ಕಾಣುವ ತಾರ್ಕಿಕ ಅಂತ್ಯದ ಭಾವ ಇವೆಲ್ಲವೂ ಕಣ್ಣಂಚಿನಲ್ಲಿ ಹೊಳಪೊಂದನ್ನು ತೀಡಿ ಮರೆಯಾಗುತ್ತವೆ. ಹೀಗೆ ಸುರಿಯುವ ಮಳೆ ಒಮ್ಮೆಯಾದರೂ ಆ ಅರಮನೆಗಳ ನಗರಿಯಲ್ಲಿ ಕಂಡಿದ್ದ ನೆನಪಿಲ್ಲ. ಅಬ್ಬಬ್ಬವೆಂದರೆ ಐದರಿಂದ ಹದಿನೈದು ನಿಮಿಷಗಳೊಳಗೆ ನಿಂತುಹೋಗುವ ಮಳೆಗಳು. ಆದರೆ, ಅದೊಂದು ದಿನ- ತಾತ್ಕಾಲಿಕವಾಗಿಯಾದರೂ ಅಂತಿಮವಾದ ವಿದಾಯವನ್ನು ಹೇಳಿ ಹೊರಡಬೇಕೆಂದು ಕೊಂಡಂಥ‌ ದಿನ. ಎಂಥ ಮಳೆ! ಸಾಲಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲವೂ ಎದ್ದು ನೀರನ್ನು ಹಿಂಬಾಲಿಸಿಕೊಂಡು ಹೋಗುವಂಥ ಮಳೆ. ಇಡೀ ಮೈಸೂರಿನ ವಾಸದಲ್ಲಿ ಕೊನೆಯ ದಿನ ಅಂತಹ ಮಳೆ ನೋಡಿದ್ದು.

ಆ ನಗರಕ್ಕೆ ನಾನು ಕಟ್ಟಿಕೊಂಡು ಹೋಗಿದ್ದ ಕನಸೆಲ್ಲವೂ ಹಾಗೇ ತೊಳೆದುಕೊಂಡು ಹೋದವಾ? ಅಥವಾ ಐದು ವರ್ಷದಲ್ಲಿ ಮತ್ತೇನನ್ನೂ ಉಳಿಸಿ ಕೊಂಡುಹೋಗಲಾಗದೆ ಖಾಲಿ ನೆನಪುಗಳನ್ನಷ್ಟೇ ಹೊತ್ತು ನಿಂತವನ ಅಷ್ಟೂ ನೆನಪುಗಳನ್ನು ಹೊಟ್ಟೆಕಿಚ್ಚಿನಿಂದ ತೊಳೆದುಕೊಂಡೇ ಹೋಗಬೇಕೆಂದು ಕೊಂಡುಹೋದ ಮಳೆಯೇ ಅದು? ಹೌದು. ಅದು ಎಲ್ಲವನ್ನೂ ಕೊಂಡುಹೋಗಿತ್ತು. ಆದರೆ, ಉಜಿರೆಯೆಂಬ ಪುಟ್ಟ ಊರಿನಲ್ಲಿ ಹನಿಹನಿಯಾಗಿ ಆ ಅಮರ ಕ್ಷಣಗಳನ್ನು ಮನದೊಳಗೆ ಇಳಿಸುತ್ತಿದೆ. ಮಳೆ ನೆನಪುಗಳ ಶುದ್ಧ ರೂಪ. ಇಳಿಯುವುದು ನೇರವಾಗಿ ಎದೆಯೊಳಗೆ. ಮೈಸೂರಿನಲ್ಲಿ ಅನುಭವಿಸಿದ್ದೆಲ್ಲವೂ ಇಲ್ಲಿ ಎದೆಗಿಳಿಯಿತು.

ಹಾಗಾದರೆ ಉಜಿರೆ? ಇದೊಂದು ಸಣ್ಣ ಕತೆಯಾ? ಹೌದೇನೋ… ಶುರುವಾಗುವ ಮೊದಲು ಯಾವುದಕ್ಕೂ ವಿವಿಧ ಬಗೆಯ ಆಯಾಮಗಳೇ ಇರುವುದಿಲ್ಲ. ಸಣ್ಣಕತೆಗೆ, ಬೇಗ ಮುಗಿಯುತ್ತದೆಂಬ ಚೌಕಟ್ಟಿನಲ್ಲೇ ಕತೆಗಾರ ತೊಡಗುತ್ತಾನೆ. ಆದರೆ, ಆ ವ್ಯಾಪ್ತಿಯಲ್ಲೇ ಓದುಗನಿಗೆ ಏನೇನನ್ನು ಯಾವ ಪ್ರಮಾಣದಲ್ಲಿ ದಾಟಿಸಬೇಕೋ ಅದನ್ನೂ ದಾಟಿಸಿರುತ್ತಾನೆ. ಉಜಿರೆಯೆಂಬ ಸಣ್ಣ ಕತೆಯ ಮೊದಮೊದಲ ಪುಟಗಳಿವು. ಮುಂದೇನನ್ನು ಕತೆಗಾರ ರಚಿಸಿದ್ದಾನೋ ಗೊತ್ತಿಲ್ಲ. ಇದೇ ಮಳೆ-ಬಿಸಿಲುಗಳ ನಡುವೆ ಮಗುಮ್ಮಾಗಿ ಕೂತು ಕುತೂಹಲದಿಂದ ಸಣ್ಣಕತೆಯ ಪುಟವನ್ನು ದಿನವೂ ತಿರುವುತ್ತೇನೆ. ಬೇಸರವಾದರೆ ಕಾದಂಬರಿ ಇದೆಯಲ್ಲ?!

ಶಿವಪ್ರಸಾದ್‌ ಹಳುವಳ್ಳಿ
ದ್ವಿತೀಯ ಬಿಎ (ಪತ್ರಿಕೋದ್ಯಮ), ಎಸ್‌ಡಿಎಂ ಕಾಲೇಜು, ಉಜಿರೆ.

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

3

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.